AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಮದುವೆಯಲ್ಲಿ ಚಂಡೆವಾದ್ಯ ನುಡಿಸಿ ನೆಟ್ಟಿಗರ ಗಮನ ಸೆಳೆದ ಕೇರಳದ ವಧು

Kerala : ಉತ್ಸಾಹದಿಂದ ಸಹಕಲಾವಿದರೊಂದಿಗೆ ಈ ವಧು ಚಂಡೆ ನುಡಿಸುವುದನ್ನು ನೋಡುತ್ತಿದ್ದರೆ ಎಂಥವರಿಗೂ ಉಮೇದು ಬರುತ್ತದೆ. ನಿನ್ನೆಯಷ್ಟೇ ಈ ವಿವಾಹ ಕೇರಳದಲ್ಲಿ ನೆರವೇರಿದೆ. ನೋಡಿ ವೈರಲ್ ಆದ ಈ ವಿಡಿಯೋ.

ತನ್ನ ಮದುವೆಯಲ್ಲಿ ಚಂಡೆವಾದ್ಯ ನುಡಿಸಿ ನೆಟ್ಟಿಗರ ಗಮನ ಸೆಳೆದ ಕೇರಳದ ವಧು
ತನ್ನ ಮದುವೆಯಲ್ಲಿ ಚಂಡೆವಾದನ ನುಡಿಸಿದ ವಧು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Dec 27, 2022 | 5:57 PM

Viral Video : ವಧುವೆಂದರೆ ನಾಚಿ ನೀರಾಗಿ ನೆಲ ನೋಡುತ್ತ ಕುಳಿತುಕೊಳ್ಳುವ ಕಾಲ ಇದಲ್ಲ ಎನ್ನುವುದಕ್ಕೆ ಈ ತಾಣದಲ್ಲಿಯೇ ಅನೇಕ ವಿಡಿಯೋಗಳನ್ನು ನೋಡಿದ್ದೀರಿ. ಅನೇಕ ಬಗೆಯಲ್ಲಿ ವಧುವರರು ಮದುವೆ ಮಂಟಪಕ್ಕೆ ಪ್ರವೇಶ ನೀಡುವುದನ್ನು ನೋಡಿ ಅಚ್ಚರಿಗೆ ಒಳಗಾಗಿದ್ದೀರಿ. ಕೇರಳದ ಗುರುವಾಯೂರ್ ದೇವಾಲಯದಲ್ಲಿ ನಡೆದ ಈ ಮದುವೆಯ ವಿಶೇಷ ಏನೆಂದು ನೀವೇ ನೋಡಿ. ಈ ವಿಡಿಯೋ ನೋಡುತ್ತಿದ್ದಂತೆ ನಿಮ್ಮ ಮನಸ್ಸು ಗರಿಗೆದರಿದ ನವಿಲಿನಂತಾಗದಿದ್ದರೆ ಹೇಳಿ!

ವಧು ಚಂಡೆ ವಾದನದಲ್ಲಿ ಪರಿಣಿತೆ. ತನ್ನ ಮದುವೆ ಸಂದರ್ಭದಲ್ಲಿ ಪುಟ್ಟದೊಂದು ಕಛೇರಿಯನ್ನೇ ಕೊಟ್ಟಿದ್ದಾಳೆ. ಈ ವಿಡಿಯೋದ ನೋಟ್ ಹೀಗಿದೆ, ‘ಇಂದು ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ. ವಧುವಿನ ತಂದೆ ಚಂಡೆ ಪರಿಣತರು. ಮಗಳೂ ಕೂಡ ಚಂಡೆ ಕಲಾವಿದೆ. ವಧು ವರರ ಮುಖದಲ್ಲಿರುವ ಸಂತೋಷ ಯಾರನ್ನೂ ಸಮ್ಮೋಹನಗೊಳಿಸುವಂತಿದೆ.’

ಇದನ್ನೂ ಓದಿ : ತಾಯಿಯ ಕೊನೆಯ ಆಸೆ ಪೂರೈಸಲು ಐಸಿಯುನಲ್ಲಿಯೇ ಮಗಳ ಮದುವೆ

ನೆಟ್ಟಿಗರು ಈ ವಿಡಿಯೋ ನೋಡಿ ಮಹಾ ಅಚ್ಚರಿಗೆ ಒಳಗಾಗಿದ್ದಾರೆ. ಸಾಕಷ್ಟು ಉಲ್ಲಸಿತರಾಗಿದ್ದಾರೆ. ಆಹಾ ಇಂತ ಚಂಡೆವಾದನವನ್ನು ನೋಡಿಯೇ ಇರಲಿಲ್ಲ, ಅದರಲ್ಲೂ ವಧು ಹೀಗೆ ಉತ್ಸಾಹದಿಂದ ನುಡಿಸುತ್ತಿರುವುದನ್ನು ನೋಡಲು ಬಹಳ ಸಂತೋಷವೆನ್ನಿಸುತ್ತಿದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ವಧುವರರು ಬಹಳ ಸುಂದರವಾಗಿ ಬದುಕನ್ನು ಕಟ್ಟಿಕೊಳ್ಳುತ್ತಾರೆ ಎನ್ನುವುದು ನನಗೆ ಖಾತ್ರಿ ಇದೆ ಎಂದಿದ್ದಾರೆ ಮತ್ತೊಬ್ಬರು. ಕಲೆಯ ಬೇರುಗಳು ಇಲ್ಲಿ ಒಂದಾಗಿವೆ ಇವರಿಗೆ ಒಳ್ಳೆಯದಾಗಲಿ ಎಂದು ಅನೇಕರು ಹಾರೈಸಿದ್ದಾರೆ. ವಧು ಈ ವಿಡಿಯೋದ ಶೈನಿಂಗ್ ಸ್ಟಾರ್ ಎಂದಿದ್ದಾರೆ ಕೆಲವರು.

ಅಂದಹಾಗೆ ಈ ವಧು ಚೆಂಡೆವಾದನದಲ್ಲಿ ಪರಿಣತಿ ಪಡೆದ ಕಲಾವಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:56 pm, Tue, 27 December 22

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ