AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಮದುವೆಯಲ್ಲಿ ಚಂಡೆವಾದ್ಯ ನುಡಿಸಿ ನೆಟ್ಟಿಗರ ಗಮನ ಸೆಳೆದ ಕೇರಳದ ವಧು

Kerala : ಉತ್ಸಾಹದಿಂದ ಸಹಕಲಾವಿದರೊಂದಿಗೆ ಈ ವಧು ಚಂಡೆ ನುಡಿಸುವುದನ್ನು ನೋಡುತ್ತಿದ್ದರೆ ಎಂಥವರಿಗೂ ಉಮೇದು ಬರುತ್ತದೆ. ನಿನ್ನೆಯಷ್ಟೇ ಈ ವಿವಾಹ ಕೇರಳದಲ್ಲಿ ನೆರವೇರಿದೆ. ನೋಡಿ ವೈರಲ್ ಆದ ಈ ವಿಡಿಯೋ.

ತನ್ನ ಮದುವೆಯಲ್ಲಿ ಚಂಡೆವಾದ್ಯ ನುಡಿಸಿ ನೆಟ್ಟಿಗರ ಗಮನ ಸೆಳೆದ ಕೇರಳದ ವಧು
ತನ್ನ ಮದುವೆಯಲ್ಲಿ ಚಂಡೆವಾದನ ನುಡಿಸಿದ ವಧು
TV9 Web
| Edited By: |

Updated on:Dec 27, 2022 | 5:57 PM

Share

Viral Video : ವಧುವೆಂದರೆ ನಾಚಿ ನೀರಾಗಿ ನೆಲ ನೋಡುತ್ತ ಕುಳಿತುಕೊಳ್ಳುವ ಕಾಲ ಇದಲ್ಲ ಎನ್ನುವುದಕ್ಕೆ ಈ ತಾಣದಲ್ಲಿಯೇ ಅನೇಕ ವಿಡಿಯೋಗಳನ್ನು ನೋಡಿದ್ದೀರಿ. ಅನೇಕ ಬಗೆಯಲ್ಲಿ ವಧುವರರು ಮದುವೆ ಮಂಟಪಕ್ಕೆ ಪ್ರವೇಶ ನೀಡುವುದನ್ನು ನೋಡಿ ಅಚ್ಚರಿಗೆ ಒಳಗಾಗಿದ್ದೀರಿ. ಕೇರಳದ ಗುರುವಾಯೂರ್ ದೇವಾಲಯದಲ್ಲಿ ನಡೆದ ಈ ಮದುವೆಯ ವಿಶೇಷ ಏನೆಂದು ನೀವೇ ನೋಡಿ. ಈ ವಿಡಿಯೋ ನೋಡುತ್ತಿದ್ದಂತೆ ನಿಮ್ಮ ಮನಸ್ಸು ಗರಿಗೆದರಿದ ನವಿಲಿನಂತಾಗದಿದ್ದರೆ ಹೇಳಿ!

ವಧು ಚಂಡೆ ವಾದನದಲ್ಲಿ ಪರಿಣಿತೆ. ತನ್ನ ಮದುವೆ ಸಂದರ್ಭದಲ್ಲಿ ಪುಟ್ಟದೊಂದು ಕಛೇರಿಯನ್ನೇ ಕೊಟ್ಟಿದ್ದಾಳೆ. ಈ ವಿಡಿಯೋದ ನೋಟ್ ಹೀಗಿದೆ, ‘ಇಂದು ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ. ವಧುವಿನ ತಂದೆ ಚಂಡೆ ಪರಿಣತರು. ಮಗಳೂ ಕೂಡ ಚಂಡೆ ಕಲಾವಿದೆ. ವಧು ವರರ ಮುಖದಲ್ಲಿರುವ ಸಂತೋಷ ಯಾರನ್ನೂ ಸಮ್ಮೋಹನಗೊಳಿಸುವಂತಿದೆ.’

ಇದನ್ನೂ ಓದಿ : ತಾಯಿಯ ಕೊನೆಯ ಆಸೆ ಪೂರೈಸಲು ಐಸಿಯುನಲ್ಲಿಯೇ ಮಗಳ ಮದುವೆ

ನೆಟ್ಟಿಗರು ಈ ವಿಡಿಯೋ ನೋಡಿ ಮಹಾ ಅಚ್ಚರಿಗೆ ಒಳಗಾಗಿದ್ದಾರೆ. ಸಾಕಷ್ಟು ಉಲ್ಲಸಿತರಾಗಿದ್ದಾರೆ. ಆಹಾ ಇಂತ ಚಂಡೆವಾದನವನ್ನು ನೋಡಿಯೇ ಇರಲಿಲ್ಲ, ಅದರಲ್ಲೂ ವಧು ಹೀಗೆ ಉತ್ಸಾಹದಿಂದ ನುಡಿಸುತ್ತಿರುವುದನ್ನು ನೋಡಲು ಬಹಳ ಸಂತೋಷವೆನ್ನಿಸುತ್ತಿದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ವಧುವರರು ಬಹಳ ಸುಂದರವಾಗಿ ಬದುಕನ್ನು ಕಟ್ಟಿಕೊಳ್ಳುತ್ತಾರೆ ಎನ್ನುವುದು ನನಗೆ ಖಾತ್ರಿ ಇದೆ ಎಂದಿದ್ದಾರೆ ಮತ್ತೊಬ್ಬರು. ಕಲೆಯ ಬೇರುಗಳು ಇಲ್ಲಿ ಒಂದಾಗಿವೆ ಇವರಿಗೆ ಒಳ್ಳೆಯದಾಗಲಿ ಎಂದು ಅನೇಕರು ಹಾರೈಸಿದ್ದಾರೆ. ವಧು ಈ ವಿಡಿಯೋದ ಶೈನಿಂಗ್ ಸ್ಟಾರ್ ಎಂದಿದ್ದಾರೆ ಕೆಲವರು.

ಅಂದಹಾಗೆ ಈ ವಧು ಚೆಂಡೆವಾದನದಲ್ಲಿ ಪರಿಣತಿ ಪಡೆದ ಕಲಾವಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:56 pm, Tue, 27 December 22

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ