‘ಟಿಪ್​ ಟಿಪ್​ ಬರ್ಸಾ ಪಾನಿ’ ಹಾಡಿಗೆ ನೃತ್ಯ ಮಾಡಿದ್ದಾರಾ ಪಾಕಿಸ್ತಾನ ಸಂಸತ್ತಿನ ಸದಸ್ಯ: ವಿಡಿಯೋದ ಅಸಲಿಯತ್ತೇನು?

ಬಾಲಿವುಡ್​ನ ಹಿಟ್​ ಸಾಂಗ್​ ಟಿಪ್​ ಟಿಪ್​  ಬರ್ಸಾ ಪಾನಿ ಹಾಡಿಗೆ ವ್ಯಕ್ತಿಯೊಬ್ಬ ಮೈಮರೆತು ಹೆಜ್ಜೆ ಹಾಕಿದ್ದಾನೆ. ಈ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಪಾಕಿಸ್ತಾನ ಅಸೆಂಬ್ಲಿಯ ಸಚಿವ ಅಮೀರ್ ಲಿಯಾಕತ್​​ ಹುಸೇನ್​ ಎನ್ನಲಾಗಿದೆ. 

'ಟಿಪ್​ ಟಿಪ್​ ಬರ್ಸಾ ಪಾನಿ' ಹಾಡಿಗೆ ನೃತ್ಯ ಮಾಡಿದ್ದಾರಾ ಪಾಕಿಸ್ತಾನ ಸಂಸತ್ತಿನ ಸದಸ್ಯ: ವಿಡಿಯೋದ ಅಸಲಿಯತ್ತೇನು?
Follow us
| Updated By: Pavitra Bhat Jigalemane

Updated on: Jan 07, 2022 | 10:32 AM

ಬಾಲಿವುಡ್​ನ  ಹಾಡಿಗೆ ವ್ಯಕ್ತಿಯೊಬ್ಬ ನೃತ್ಯ ಮಾಡುತ್ತಿರುವ ವೀಡಿಯೋ ಸಾಮಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.  ಬಾಲಿವುಡ್​ನ ಮೊಹ್ರಾ ಚಿತ್ರದ ಹಿಟ್​ ಸಾಂಗ್​ ಟಿಪ್​ ಟಿಪ್​  ಬರ್ಸಾ ಪಾನಿ ಹಾಡಿಗೆ ವ್ಯಕ್ತಿಯೊಬ್ಬ ಮೈಮರೆತು ಹೆಜ್ಜೆ ಹಾಕಿದ್ದಾನೆ. ಈ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಪಾಕಿಸ್ತಾನ ಅಸೆಂಬ್ಲಿಯ ಸದಸ್ಯ ಅಮೀರ್ ಲಿಯಾಕತ್​​ ಹುಸೇನ್​ ಎನ್ನಲಾಗಿದೆ.  ಅಮೀರ್​ ಲಿಯಾಕತ್​  ಇಮ್ರಾನ್ ಖಾನ್​ ನೇತೃತ್ವದ  ಪಾಕಿಸ್ತಾನ್​ ತೆಹ್ರಿಕ್​ ಇ ಇನ್ಸಾಫ್​ ಪಕ್ಷದ ಸದಸ್ಯರಾಗಿದ್ದಾರೆ.  ಹಿಂದಿ ಹಾಡಿಗೆ ಡ್ಯಾನ್ಸ್​ ಮಾಡುತ್ತಿದ್ದ ವ್ಯಕ್ತಿಯನ್ನು ಅಮೀರ್​ ಎಂದುಕೊಂಡು ಪತ್ರಕರ್ತರೊಬ್ಬರು ವಿಡಿಯೋ ಶೇರ್​ ಮಾಡಿದ್ದರು. ಅವರ ಬಳಿಕ ವಿಡಿಯೋವನ್ನು ಸಾವಿರಾರು ಮಂದಿ ರೀ ಶೇರ್​ ಮಾಡಿದ್ದರು. ಹೀಗಾಗಿ ವಿಡಿಯೋ ಸಖತ್​ ವೈರಲ್​ ಆಗಿತ್ತು.

ಆದರೆ ವಿಡಿಯೋವನ್ನು ಪರಿಶೀಲಿಸಿದಾಗ ವಿಡಿಯೋದಲ್ಲಿರುವ ವ್ಯಕ್ತಿ ಡ್ಯಾನ್ಸ್ ಕೊರಿಯೋಗ್ರಾಫರ್​ ಶೊಯೆಬ್​ ಶಕೂರ್​ ಎಂದು ಗುರುತಿಸಲಾಗಿದೆ. ವಿಡಿಯೋವನ್ನು ಪಾಕಿಸ್ತಾನದ ಫೋಟೋಗ್ರಫಿ ಸ್ಟುಡಿಯೋವೊಂದು ಫೇಸ್ಬುಕ್​ನಲ್ಲಿ ಹಂಚಿಕೊಂಡಿತ್ತು. ಬಳಿಕ ಸ್ವತಃ ಶೊಯೆಬ್​ ಶಕೂರ್ ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಆದರೆ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಶೊಯೆಬ್​ ಶಕೂರ್ ಎಂದು ಪತ್ರಕರ್ತರೊಬ್ಬರು ಬರೆದು ಟ್ವೀಟ್​ ಮಾಡಿದ್ದರು.  ವಿಡಿಯೋವನ್ನು ಮೊದಲು ಅಮೀರ್​ ಲಿಯಾಕತ್​ ಹೆಸರಿನಲ್ಲಿ ಹಂಚಿಕೊಂಡ ಪತ್ರಕರ್ತ ಅಮನ್​ ಮಲ್ಲಿಕ್​ ತಪ್ಪಾದ ಮಾಹಿತಿಯನ್ನು ಶೇರ್​ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ.

ಪಾಕಿಸ್ತಾನಿ ಸಚಿವರೆನ್ನುವ  ನಕಲಿ ವಿಡಿಯೋ ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ  ಫವಾದ್​ ಚೌದರಿ ಅವರು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬೆಲೆ ಇಳಿಕೆಯಾಗಿದೆ ಎನ್ನುವಾಗ ಗೊಂದಲವಾಗಿ ಊಪ್ಸ್​ ಎಂದಿದ್ದಾರೆ ಎನ್ನುವ ವಿಡಿಯೋ ವೈರಲ್​ ಆಗಿತ್ತು. ಇದೀಗ ಅಮೀರ್​ ಲಿಯಾಕತ್ ಹಿಂದಿ ಹಾಡಿಗೆ​ ನೃತ್ಯ ಮಾಡುತ್ತಿದ್ದಾರೆ ಎನ್ನುವ ನಕಲಿ ವೀಡಿಯೋ ವೈರಲ್​ ಆಗಿದೆ. ಟ್ವಿಟರ್​ನಲ್ಲಿ ವಿಡಿಯೋ 8 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

ಇದನ್ನೂ ಓದಿ:

ವ್ಯಾಕ್ಸಿನೇಷನ್​ ಉತ್ತೇಜಿಸಲು 700 ಕುರಿಗಳನ್ನು ಸಿರಿಂಜ್​ ಆಕಾರದಲ್ಲಿ ನಿಲ್ಲಿಸಿ ಸಂದೇಶ ಸಾರಿದ ವ್ಯಕ್ತಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು