ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ

Mud Bath : ನೀ ಮಹಾ ಧೈರ್ಯವಂತ ಮಾರಾಯಾ ತಪ್ಪಿಸಿಕೊಂಡು ಬಂದು ಕೆಲ ಕ್ಷಣವಾದರೂ ನಿನ್ನ ಆಸೆಯಂತೆ ಬದುಕಲು ಪ್ರಯತ್ನಿಸಿದೆ. ಕಪ್ಪು ನಾಯಿಯೊಂದು ಹತ್ತಿರ ಬಂದು ಹೀಗೆ ಪಿಸುಗುಟ್ಟಿ ಹೋದಂತೆ ಕಾಣುವುದಿಲ್ಲವೆ ಈ ವಿಡಿಯೋದಲ್ಲಿ?

ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ
ಮಣ್ಣಸ್ನಾನ ಆಹಾ
Follow us
| Updated By: ಶ್ರೀದೇವಿ ಕಳಸದ

Updated on:Jan 03, 2023 | 4:07 PM

Viral Video : ಸ್ವಚ್ಛ, ಸ್ವಚ್ಛ, ಸ್ವಚ್ಛ! ಕೇಳಿ ಕೇಳಿ ಸಾಕಾಗಿದೆ. ಅರೆಕ್ಷಣವಾದರೂ ನಮ್ಮ ಮನಸಿಚ್ಛೆಯಂತೆ ಇರಲು ಬಿಡುತ್ತೀರಾ ನೀವು? ಸಾಕಿದ್ದೀರಿ ಎಂದ ಮಾತ್ರಕ್ಕೆ ನಿಮ್ಮಂತೆಯೇ ಹೇಗೆ ನಡೆಯಲಾದೀತು? ನಮ್ಮಗಳ ಆಸೆಯೇನು? ನಮಗೆ ಖುಷಿ ಕೊಡುವುದೇನು? ನಮಗೆ ನೆಮ್ಮದಿ ತರುವುದು ಏನು? ನಮಗೆ ಆಹ್ಲಾದವನ್ನುಂಟು ಮಾಡುವುದು ಏನು? ಕಣ್ಣಲ್ಲಿ ಕಣ್ಣಿಟ್ಟು ಹೇಳಿ ನೋಡೋಣ, ಒಮ್ಮೆಯಾದರೂ ಈ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದೀರಾ? ಅದಕ್ಕೇ ನಾವು ಬೆಲ್ಟ್​ ಕಿತ್ತುಕೊಂಡಾದರೂ ಸರಿ ಸ್ವರ್ಗವನ್ನು ಅನುಭವಿಸಲು ಹೀಗೆಲ್ಲ ಧುಮುಕಿಯೇ ಬಿಡುತ್ತೇವೆ!

ಆನಂದಿಸುವ ಈ ನಾಯಿಯ ಪರಿಯನ್ನು ಕಣ್ತುಂಬಿಕೊಳ್ಳಿ. ಮನಬಂದಂತೆ ಕೆಸರಿನಲ್ಲಿ ಹೊರಳಾಡಿ ಮನಸ್ಸನ್ನು ದೇಹವನ್ನು ತಣಿಸಿಕೊಳ್ಳುತ್ತಿದೆ. ನೆಟ್ಟಿಗರು ಈ ವಿಡಿಯೋ ನೋಡಿ ನೀನು ಮಾಡುತ್ತಿರುವುದು ಸರಿಯಾಗಿದೆ ಎಂದು ಹುರಿದುಂಬಿಸುತ್ತಿದ್ದಾರೆ. ನಮಗಾದರೂ ಈ ಅವಕಾಶ ಸಿಗಬಾರದೆ ಎಂದು ಕೊರಗುತ್ತಿದ್ದಾರೆ.

ಇದನ್ನೂ ಓದಿ : ಧಾರವಾಡದ ಮಣ್ಣಲ್ಲಿಯೇ ಸಿದ್ಧೇಶ್ವರ ಸ್ವಾಮೀಜಿಯವರನ್ನು ಕಣ್ತುಂಬಿಕೊಂಡಾಗ

ನೀ ಮಹಾ ಧೈರ್ಯವಂತ ಮಾರಾಯಾ ತಪ್ಪಿಸಿಕೊಂಡು ಬಂದು ಕೆಲ ಕ್ಷಣವಾದರೂ ನಿನ್ನ ಆಸೆಯಂತೆ ಬದುಕಲು ಪ್ರಯತ್ನಿಸಿದೆ. ಆದರೆ ನನಗೆ ನಿನ್ನಷ್ಟು ಧೈರ್ಯ ಇಲ್ಲ ಬಿಡು ಎಂದು ಕಪ್ಪು ನಾಯಿಯೊಂದು ಹತ್ತಿರ ಬಂದು ಪಿಸುಗುಟ್ಟಿ ಹೋದಂತೆ ಕಾಣುವುದಿಲ್ಲವೆ?

ಈ ವಿಡಿಯೋ ಅನ್ನು ಈತನಕ ಸುಮಾರು 6,000 ಜನರು ನೋಡಿದ್ದಾರೆ. ನಾಯಿಯ ನಿಜವಾದ ಬಣ್ಣ ಯಾವುದು? ಬಿಳಿಯೋ, ಕಂದೋ ಎಂದು ಕೇಳಿದ್ದಾರೆ.

ನೀವೇನನ್ನುತ್ತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:04 pm, Tue, 3 January 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ