AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ

Mud Bath : ನೀ ಮಹಾ ಧೈರ್ಯವಂತ ಮಾರಾಯಾ ತಪ್ಪಿಸಿಕೊಂಡು ಬಂದು ಕೆಲ ಕ್ಷಣವಾದರೂ ನಿನ್ನ ಆಸೆಯಂತೆ ಬದುಕಲು ಪ್ರಯತ್ನಿಸಿದೆ. ಕಪ್ಪು ನಾಯಿಯೊಂದು ಹತ್ತಿರ ಬಂದು ಹೀಗೆ ಪಿಸುಗುಟ್ಟಿ ಹೋದಂತೆ ಕಾಣುವುದಿಲ್ಲವೆ ಈ ವಿಡಿಯೋದಲ್ಲಿ?

ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ
ಮಣ್ಣಸ್ನಾನ ಆಹಾ
TV9 Web
| Edited By: ಶ್ರೀದೇವಿ ಕಳಸದ|

Updated on:Jan 03, 2023 | 4:07 PM

Share

Viral Video : ಸ್ವಚ್ಛ, ಸ್ವಚ್ಛ, ಸ್ವಚ್ಛ! ಕೇಳಿ ಕೇಳಿ ಸಾಕಾಗಿದೆ. ಅರೆಕ್ಷಣವಾದರೂ ನಮ್ಮ ಮನಸಿಚ್ಛೆಯಂತೆ ಇರಲು ಬಿಡುತ್ತೀರಾ ನೀವು? ಸಾಕಿದ್ದೀರಿ ಎಂದ ಮಾತ್ರಕ್ಕೆ ನಿಮ್ಮಂತೆಯೇ ಹೇಗೆ ನಡೆಯಲಾದೀತು? ನಮ್ಮಗಳ ಆಸೆಯೇನು? ನಮಗೆ ಖುಷಿ ಕೊಡುವುದೇನು? ನಮಗೆ ನೆಮ್ಮದಿ ತರುವುದು ಏನು? ನಮಗೆ ಆಹ್ಲಾದವನ್ನುಂಟು ಮಾಡುವುದು ಏನು? ಕಣ್ಣಲ್ಲಿ ಕಣ್ಣಿಟ್ಟು ಹೇಳಿ ನೋಡೋಣ, ಒಮ್ಮೆಯಾದರೂ ಈ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದೀರಾ? ಅದಕ್ಕೇ ನಾವು ಬೆಲ್ಟ್​ ಕಿತ್ತುಕೊಂಡಾದರೂ ಸರಿ ಸ್ವರ್ಗವನ್ನು ಅನುಭವಿಸಲು ಹೀಗೆಲ್ಲ ಧುಮುಕಿಯೇ ಬಿಡುತ್ತೇವೆ!

ಆನಂದಿಸುವ ಈ ನಾಯಿಯ ಪರಿಯನ್ನು ಕಣ್ತುಂಬಿಕೊಳ್ಳಿ. ಮನಬಂದಂತೆ ಕೆಸರಿನಲ್ಲಿ ಹೊರಳಾಡಿ ಮನಸ್ಸನ್ನು ದೇಹವನ್ನು ತಣಿಸಿಕೊಳ್ಳುತ್ತಿದೆ. ನೆಟ್ಟಿಗರು ಈ ವಿಡಿಯೋ ನೋಡಿ ನೀನು ಮಾಡುತ್ತಿರುವುದು ಸರಿಯಾಗಿದೆ ಎಂದು ಹುರಿದುಂಬಿಸುತ್ತಿದ್ದಾರೆ. ನಮಗಾದರೂ ಈ ಅವಕಾಶ ಸಿಗಬಾರದೆ ಎಂದು ಕೊರಗುತ್ತಿದ್ದಾರೆ.

ಇದನ್ನೂ ಓದಿ : ಧಾರವಾಡದ ಮಣ್ಣಲ್ಲಿಯೇ ಸಿದ್ಧೇಶ್ವರ ಸ್ವಾಮೀಜಿಯವರನ್ನು ಕಣ್ತುಂಬಿಕೊಂಡಾಗ

ನೀ ಮಹಾ ಧೈರ್ಯವಂತ ಮಾರಾಯಾ ತಪ್ಪಿಸಿಕೊಂಡು ಬಂದು ಕೆಲ ಕ್ಷಣವಾದರೂ ನಿನ್ನ ಆಸೆಯಂತೆ ಬದುಕಲು ಪ್ರಯತ್ನಿಸಿದೆ. ಆದರೆ ನನಗೆ ನಿನ್ನಷ್ಟು ಧೈರ್ಯ ಇಲ್ಲ ಬಿಡು ಎಂದು ಕಪ್ಪು ನಾಯಿಯೊಂದು ಹತ್ತಿರ ಬಂದು ಪಿಸುಗುಟ್ಟಿ ಹೋದಂತೆ ಕಾಣುವುದಿಲ್ಲವೆ?

ಈ ವಿಡಿಯೋ ಅನ್ನು ಈತನಕ ಸುಮಾರು 6,000 ಜನರು ನೋಡಿದ್ದಾರೆ. ನಾಯಿಯ ನಿಜವಾದ ಬಣ್ಣ ಯಾವುದು? ಬಿಳಿಯೋ, ಕಂದೋ ಎಂದು ಕೇಳಿದ್ದಾರೆ.

ನೀವೇನನ್ನುತ್ತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:04 pm, Tue, 3 January 23

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ