AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ

Mud Bath : ನೀ ಮಹಾ ಧೈರ್ಯವಂತ ಮಾರಾಯಾ ತಪ್ಪಿಸಿಕೊಂಡು ಬಂದು ಕೆಲ ಕ್ಷಣವಾದರೂ ನಿನ್ನ ಆಸೆಯಂತೆ ಬದುಕಲು ಪ್ರಯತ್ನಿಸಿದೆ. ಕಪ್ಪು ನಾಯಿಯೊಂದು ಹತ್ತಿರ ಬಂದು ಹೀಗೆ ಪಿಸುಗುಟ್ಟಿ ಹೋದಂತೆ ಕಾಣುವುದಿಲ್ಲವೆ ಈ ವಿಡಿಯೋದಲ್ಲಿ?

ಕೆಸರೆಂಬ ಸ್ವರ್ಗಸುಖ ನಿಮಗೇನು ಗೊತ್ತು ಹುಲುಮಾನವರೇ; ನಾಯಿಯ ವೈರಲ್ ವಿಡಿಯೋ
ಮಣ್ಣಸ್ನಾನ ಆಹಾ
TV9 Web
| Updated By: ಶ್ರೀದೇವಿ ಕಳಸದ|

Updated on:Jan 03, 2023 | 4:07 PM

Share

Viral Video : ಸ್ವಚ್ಛ, ಸ್ವಚ್ಛ, ಸ್ವಚ್ಛ! ಕೇಳಿ ಕೇಳಿ ಸಾಕಾಗಿದೆ. ಅರೆಕ್ಷಣವಾದರೂ ನಮ್ಮ ಮನಸಿಚ್ಛೆಯಂತೆ ಇರಲು ಬಿಡುತ್ತೀರಾ ನೀವು? ಸಾಕಿದ್ದೀರಿ ಎಂದ ಮಾತ್ರಕ್ಕೆ ನಿಮ್ಮಂತೆಯೇ ಹೇಗೆ ನಡೆಯಲಾದೀತು? ನಮ್ಮಗಳ ಆಸೆಯೇನು? ನಮಗೆ ಖುಷಿ ಕೊಡುವುದೇನು? ನಮಗೆ ನೆಮ್ಮದಿ ತರುವುದು ಏನು? ನಮಗೆ ಆಹ್ಲಾದವನ್ನುಂಟು ಮಾಡುವುದು ಏನು? ಕಣ್ಣಲ್ಲಿ ಕಣ್ಣಿಟ್ಟು ಹೇಳಿ ನೋಡೋಣ, ಒಮ್ಮೆಯಾದರೂ ಈ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದೀರಾ? ಅದಕ್ಕೇ ನಾವು ಬೆಲ್ಟ್​ ಕಿತ್ತುಕೊಂಡಾದರೂ ಸರಿ ಸ್ವರ್ಗವನ್ನು ಅನುಭವಿಸಲು ಹೀಗೆಲ್ಲ ಧುಮುಕಿಯೇ ಬಿಡುತ್ತೇವೆ!

ಆನಂದಿಸುವ ಈ ನಾಯಿಯ ಪರಿಯನ್ನು ಕಣ್ತುಂಬಿಕೊಳ್ಳಿ. ಮನಬಂದಂತೆ ಕೆಸರಿನಲ್ಲಿ ಹೊರಳಾಡಿ ಮನಸ್ಸನ್ನು ದೇಹವನ್ನು ತಣಿಸಿಕೊಳ್ಳುತ್ತಿದೆ. ನೆಟ್ಟಿಗರು ಈ ವಿಡಿಯೋ ನೋಡಿ ನೀನು ಮಾಡುತ್ತಿರುವುದು ಸರಿಯಾಗಿದೆ ಎಂದು ಹುರಿದುಂಬಿಸುತ್ತಿದ್ದಾರೆ. ನಮಗಾದರೂ ಈ ಅವಕಾಶ ಸಿಗಬಾರದೆ ಎಂದು ಕೊರಗುತ್ತಿದ್ದಾರೆ.

ಇದನ್ನೂ ಓದಿ : ಧಾರವಾಡದ ಮಣ್ಣಲ್ಲಿಯೇ ಸಿದ್ಧೇಶ್ವರ ಸ್ವಾಮೀಜಿಯವರನ್ನು ಕಣ್ತುಂಬಿಕೊಂಡಾಗ

ನೀ ಮಹಾ ಧೈರ್ಯವಂತ ಮಾರಾಯಾ ತಪ್ಪಿಸಿಕೊಂಡು ಬಂದು ಕೆಲ ಕ್ಷಣವಾದರೂ ನಿನ್ನ ಆಸೆಯಂತೆ ಬದುಕಲು ಪ್ರಯತ್ನಿಸಿದೆ. ಆದರೆ ನನಗೆ ನಿನ್ನಷ್ಟು ಧೈರ್ಯ ಇಲ್ಲ ಬಿಡು ಎಂದು ಕಪ್ಪು ನಾಯಿಯೊಂದು ಹತ್ತಿರ ಬಂದು ಪಿಸುಗುಟ್ಟಿ ಹೋದಂತೆ ಕಾಣುವುದಿಲ್ಲವೆ?

ಈ ವಿಡಿಯೋ ಅನ್ನು ಈತನಕ ಸುಮಾರು 6,000 ಜನರು ನೋಡಿದ್ದಾರೆ. ನಾಯಿಯ ನಿಜವಾದ ಬಣ್ಣ ಯಾವುದು? ಬಿಳಿಯೋ, ಕಂದೋ ಎಂದು ಕೇಳಿದ್ದಾರೆ.

ನೀವೇನನ್ನುತ್ತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:04 pm, Tue, 3 January 23

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?