AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಲೇ ಬಾಹುಬಲಿ​: ತಲೆಯ ಮೇಲೆ ಬೈಕ್​ ಹೊತ್ತು ಸಾಗಿಸುತ್ತಿರುವ ಈ ವ್ಯಕ್ತಿಯ ವಿಡಿಯೋ ವೈರಲ್

Superman : ಈ ಮನುಷ್ಯನನ್ನು ನೆಟ್ಟಿಗರು ಇವನೇ ನಿಜವಾದ ಬಾಹುಬಲಿ, ಸೂಪರ್​ಮ್ಯಾನ್​ ಎಂದು ಹೇಳುತ್ತಿದ್ಧಾರೆ. ಎಲ್ಲರೂ ಸ್ಟಂಟ್​ಗಾಗಿ, ರೀಲ್​ಗಾಗಿ ಸಾಹಸ ಮಾಡುತ್ತಾರೆ. ಆದರೆ ಈತ ಮಾಡುವುದು ಗೇಣುಹೊಟ್ಟೆಗಾಗಿ, ಮನೆಯವರಿಗಾಗಿ.

ಭಲೇ ಬಾಹುಬಲಿ​: ತಲೆಯ ಮೇಲೆ ಬೈಕ್​ ಹೊತ್ತು ಸಾಗಿಸುತ್ತಿರುವ ಈ ವ್ಯಕ್ತಿಯ ವಿಡಿಯೋ ವೈರಲ್
Superman : Coolie Climbing a bus ladder with a Bike on his head.
TV9 Web
| Edited By: ಶ್ರೀದೇವಿ ಕಳಸದ|

Updated on:Nov 26, 2022 | 1:05 PM

Share

Viral Video : ಇಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಹೊಂದಲು ಏನೆಲ್ಲ ಸ್ಟಂಟ್​ಗಳನ್ನು ಮಾಡುತ್ತಿದ್ದಾರೆ ಜನರು. ಸ್ಟಂಟ್ ಮಾಡಲು ಹೋಗಿ ಅವಘಡಕ್ಕೂ ಈಡಾಗುತ್ತಿದ್ದಾರೆ. ಆದರೆ ನಿಜ ಜೀವನದಲ್ಲಿ ಹೊಟ್ಟೆಪಾಡಿಗಾಗಿ ಹೀಗೆ ಬದುಕುವವರು ಕಣ್ಣಿಗೆ ಬೀಳುವುದು ಅಪರೂಪ. ಗುಲ್ಜಾರ್ ಸಹಾಬ್​ ಎಂಬ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ ವೈರಲ್ ಆಗಿದೆ. 88,800 ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. 5,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ. ನೆಟ್ಟಿಗರಂತೂ ಇವನೇ ನಿಜವಾದ ಬಾಹುಬಲಿ ಎಂದು ಕೊಂಡಾಡುತ್ತಿದ್ದಾರೆ.

ಬೈಕ್​ ಓಡಿಸುವುದನ್ನ ಕಲಿಯುವುದು ಒಂದು ಸಾಹಸವಾದರೆ ಹೀಗೆ ಇಷ್ಟು ಭಾರದ ಬೈಕ್​ ಅನ್ನು ತಲೆಯಮೇಲೆ ಹೊತ್ತು ಏಣಿ ಏರುವ ಸಾಹಸ ಇದೆಯಲ್ಲ ಇದು ಸಾಮಾನ್ಯರಿಗೆ ಒದಗುವಂಥದ್ದಲ್ಲ. ಏಣಿಗೆ ಕೈಮುಗಿದು ಒಂದೊಂದು ಮೆಟ್ಟಿಲುಗಳನ್ನು ಅವ ಏರುವ ಕ್ರಮ ಅಪರೂಪದಲ್ಲಿ ಅಪರೂಪ.

ನೆಟ್ಟಿಗರನ್ನಂತೂ ಈ ವಿಡಿಯೋ ಕಣ್ಣುಕಣ್ಣು ಬಿಟ್ಟು ನೋಡುವಂತೆ ಮಾಡುತ್ತಿದೆ. ಅವನ ಕುತ್ತಿಗೆಯಲ್ಲಿರುವ ತ್ರಾಣ ನನಗೆ ಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ನಿಜವಾದ ಬಾಹುಬಲಿಯಪ್ಪಾ ನೀನು ಎನ್ನುತ್ತಿದ್ದಾರೆ ಹಲವರು. ಇವನು ಯಾವ ಸಾಹಸ ಪ್ರದರ್ಶನಕ್ಕಾಗಿ ಮಾಡುತ್ತಿಲ್ಲ. ತನ್ನ ಕುಟುಂಬದ ಹೊಟ್ಟೆಬಟ್ಟೆನೆತ್ತಿ ಕಾಯಲು ಅನಿವಾರ್ಯವಾಗಿ ಈ ಕೆಲಸ ಮಾಡುತ್ತಿದ್ದಾನೆ ಎಂದಿದ್ದಾರೆ ಮತ್ತೂ ಕೆಲವರು. ಆದರೆ ಈ ವಿಡಿಯೋ ಎಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿಲ್ಲ.

ಇವನ ಆತ್ಮವಿಶ್ವಾಸವನ್ನು ಯಾರೂ ಮೆಚ್ಚತಕ್ಕಂಥದ್ದು. ಅಪಾಯಕ್ಕೆ ತೆರೆದುಕೊಂಡು ನಿತ್ಯವೂ ಹೀಗೆ ಹೊಟ್ಟೆ ಹೊರೆಯುವವರ ಬಗ್ಗೆ ಸಹಾನುಭೂತಿ ಇರಲಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:03 pm, Sat, 26 November 22

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು