AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಗುಸಿ ನೋಡಿತು ಕರಿನಾಗರವ, ಕಾಳಗ ನಡೆಯಿತು ರೋಷದಲಿ

Fight Between Cobra and Mongoose : ‘ರಾಮ ಲಕ್ಷ್ಮಣ’ ಸಿನೆಮಾದಲ್ಲಿ ಗಂಗೆ ತೊಟ್ಟಿಲಲ್ಲಿ ತನ್ನ ಮಗುವನ್ನು ಮಲಗಿಸಿ ನೀರು ತರಲು ಹೊಳೆಗೆ ಹೋದಾಗ ಏನಾಗುತ್ತದೆ ಎಂಬುದು ನಿಮಗೆ ಗೊತ್ತಿದೆ. ಆ ದೃಶ್ಯವನ್ನೇ ಈ ವಿಡಿಯೋ ನೆನಪಿಸುವಂತಿದೆ.

ಮುಂಗುಸಿ ನೋಡಿತು ಕರಿನಾಗರವ, ಕಾಳಗ ನಡೆಯಿತು ರೋಷದಲಿ
ಯಾರು ಗೆಲ್ಲುತ್ತಾರೆ?
TV9 Web
| Edited By: |

Updated on:Nov 26, 2022 | 3:06 PM

Share

Viral Video : ನಾಗರಹಾವು ಪ್ರಾಣಿ, ಮನುಷ್ಯರ ಮೇಲೆ ತನ್ನ ಅಟ್ಟಹಾಸ ತೋರಿಸಿದರೂ ಅದು ಹೆದರುವುದು ಮುಂಗುಸಿಗೆ ಮಾತ್ರ. ಶತಮಾನಗಳ ವೈರತ್ವ ಎಂಬಂತೆ ಮುಂಗುಸಿ ಕೂಡ ಎಲ್ಲೇ ನಾಗರಹಾವನ್ನು ಕಂಡರೂ ಎಗರಿ ಕಾದಾಟಕ್ಕಿಳಿದುಬಿಡುತ್ತದೆ. ಕರಿನಾಗರ ಮತ್ತು ಮುಂಗುಸಿಯ ಕಾಳಗದ ಈ ಬಿರುಸನ್ನು ನೇರವಾಗಿ ನೋಡಿದಲ್ಲಿ ಎದೆನಡುಗುವುದೇ, ಅಷ್ಟು ಆವೇಶ! ಈಗ ಈ ವಿಡಿಯೋದಲ್ಲಿ ಮುಂಗುಸಿ ಮತ್ತು ಕರಿನಾಗರ ಕಾದಾಟಕ್ಕಿಳಿದಿವೆ. ಮೈಮುರಿಗೆ ಹೊಡೆದು ತಪ್ಪಿಸಿಕೊಳ್ಳಲು ಹಾವು ನೋಡುತ್ತಿದೆ. ನಿನ್ನ ಬಿಡೆನು ಎಂದು ರೋಷಾವೇಷದಲ್ಲಿ ಹಾರಿಹಾರಿ ಮುಂಗುಸಿ ಹಾವನ್ನು ಸೆದೆಬಡೆಯಲು ನೋಡುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ತನ್ನ ಪುಟ್ಟದೇಹದೊಳಗೆ ಅಷ್ಟೊಂದು ದೈತ್ಯಶಕ್ತಿಯನ್ನು ಅದು ಹೇಗೆ ತಂದುಕೊಳ್ಳುತ್ತದೆಯೋ ಎಂಬ ಆಶ್ಚರ್ಯ ನೋಡಿದ ಯಾರಿಗೂ ಆಗುವುದು ಸಹಜ. ಮುಂಗುಸಿಗೆ ಹಾವು ಕಚ್ಚಿದರೂ ಅದು ಬದುಕುಳಿಯಬಲ್ಲುದು. ಇದೇ ಪ್ರಕೃತಿಯ ವೈಚಿತ್ರ್ಯ. ಸಾಮಾನ್ಯವಾಗಿ ಶೇ. 80 ರಷ್ಟು ಮುಂಗುಸಿ ಮತ್ತು ನಾಗರಹಾವಿನ ಕಾಳಗದಲ್ಲಿ ಮುಂಗುಸಿಯೇ ಗೆಲ್ಲುತ್ತವೆ. ಭಾರತದ ಮುಂಗುಸಿಗಳು ಸಾಮಾನ್ಯವಾಗಿ ಬೂದುಬಣ್ಣದಿಂದ ಕೂಡಿರುತ್ತವೆ. ಯೂಟ್ಯೂಬ್​ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ 2.7 ಲಕ್ಷ ಜನರನ್ನು ಸೆಳೆದಿದೆ.

ಮುಂಗುಸಿಗಳು ಸಾಮಾನ್ಯವಾಗಿ ನೆಲದಲ್ಲಿ ಬಿಲತೋಡಿ ವಾಸಿಸುತ್ತವೆ. ಅವುಗಳು ತೋಡುವ ಬಿಲದ ಪ್ರಮಾಣ ಎಷ್ಟಿರುತ್ತದೆ ಎಂದರೆ, ಕೆಲವೊಮ್ಮೆ ಚಕ್ಕಡಿಗಟ್ಟಲೆ ಮಣ್ಣನ್ನು ಎಳೆದು ಹಾಕಬಲ್ಲವು. ನೋಡಲು ಸಣ್ಣ ದೇಹವಾದರೂ ಅಗಾಧ ಶಕ್ತಿ ಅವುಗಳದ್ದು.

ಮತ್ತಷ್ಟೂ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 3:04 pm, Sat, 26 November 22

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ