AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಿಗ್ಗಿ, ಝೊಮ್ಯಾಟೋ ಡೆಲಿವರಿ ಏಜೆಂಟರುಗಳು ಈ ಹೌಸಿಂಗ್​ ಸೊಸೈಟಿಯ ಲಿಫ್ಟ್​ ಉಪಯೋಗಿಸುವಂತಿಲ್ಲ!

Delivery Agents : ಈ ನೋಟೀಸ್​ನೊಂದಿಗೆ ಇನ್ನೊಂದು ನೋಟೀಸ್​ ಅಂಟಿಸಬೇಕು; ಸ್ವಿಗ್ಗಿ ಝೊಮ್ಯಾಟೋನಿಂದ ಆರ್ಡರ್​ ತರಿಸಿಕೊಳ್ಳುವವರು ಸೊಸೈಟಿಯ ನೆಲಮಹಡಿಗೆ ಹೋಗಿ ತಮ್ಮ ಆರ್ಡರ್​​ ಪಡೆದುಕೊಳ್ಳಬೇಕು ಎಂದು.

ಸ್ವಿಗ್ಗಿ, ಝೊಮ್ಯಾಟೋ ಡೆಲಿವರಿ ಏಜೆಂಟರುಗಳು ಈ ಹೌಸಿಂಗ್​ ಸೊಸೈಟಿಯ ಲಿಫ್ಟ್​ ಉಪಯೋಗಿಸುವಂತಿಲ್ಲ!
ನೋಟೀಸ್​ : ಡೆಲಿವರಿ ಏಜೆಂಟರುಗಳು ಲಿಫ್ಟ್​ ಉಪಯೋಗಿಸುವ ಹಾಗಿಲ್ಲ.
TV9 Web
| Edited By: ಶ್ರೀದೇವಿ ಕಳಸದ|

Updated on:Nov 25, 2022 | 1:26 PM

Share

Viral Video : ಎಂಥ ಮಳೆಯಲ್ಲಿ, ಎಂಥ ಚಳಿಯಲ್ಲಿ, ಎಂಥ ಬಿಸಿಲಲ್ಲಿ ಮತ್ತು ಕಿಕ್ಕಿರಿದ ಟ್ರಾಫಿಕ್ಕಿನಲ್ಲಿಯೂ ಸರಿಯಾದ ಸಮಯಕ್ಕೆ ಬಿಸಿಬಿಸಿಯಾದ ಆಹಾರವನ್ನು ಮತ್ತು ಸಾಮಾನುಗಳನ್ನು ಗ್ರಾಹಕರಿಗೆ ತಲುಪಿಸುವ ಡೆಲಿವರಿ ಏಜೆಂಟರುಗಳ ಬಗ್ಗೆ ಹೀಗೆ ಈ ಹೌಸಿಂಗ್​ ಸೊಸೈಟಿಯವರು ಕಟ್ಟಳೆ ಹೇರಿರುವುದು ಯಾಕೆ? ಐಎಎಸ್​ ಅಧಿಕಾರಿ ಅವನೀಶ ಶರಣ ಹೌಸಿಂಗ್​ ಬೋರ್ಡ್​ನ ಗೋಡೆಗೆ ಅಂಟಿಸಿರುವ ಈ ನೋಟೀಸಿನ ಕುರಿತು ಪ್ರಶ್ನಿಸಿದ್ದಾರೆ. ನೆಟ್ಟಿಗರು ಈ ಸೊಸೈಟಿಯ ನಡೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಸುತ್ತಿದ್ದಾರೆ.

ಸೊಸೈಟಿಯಲ್ಲಿ ವಾಸಿಸುವವರಿಗೆ ಮಾತ್ರ ಈ ಲಿಫ್ಟ್ ಬಳಕೆ. ಉಳಿದಂತೆ ಸ್ವಿಗ್ಗಿ, ಝೊಮ್ಯಾಟೋ ಮತ್ತು ಇನ್ನುಳಿದ ಯಾವುದೇ ಡೆಲಿವರಿ ಏಜೆಂಟರುಗಳು ಈ ಲಿಫ್ಟ್​ ಉಪಯೋಗಿಸುವಂತಿಲ್ಲ ಎಂದು ಗೋಡೆಯ ಮೇಲೆ ನೊಟೀಸ್ ಅಂಟಿಸಿದ್ದಾರೆ ಈ ಹೌಸಿಂಗ್​ ಸೊಸೈಟಿಯವರು. ಈ ತನಕ ಈ ಟ್ವೀಟ್​ ಅನ್ನು17,400ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 1,200 ಜನರು ಲೈಕ್ ಮಾಡಿದ್ದಾರೆ. 1,500 ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Trending : ಮಗನನ್ನು ಸಂಪರ್ಕಿಸಲು ವೃದ್ಧದಂಪತಿಗೆ ಸಹಾಯ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್

ಹೀಗೆ ಬರೆದು ಅಂಟಿಸುವ ಬದಲು ಡೆಲಿವರಿ ಏಜೆಂಟರುಗಳ ಸಲುವಾಗಿಯೇ ಪ್ರತ್ಯೇಕ ಲಿಫ್ಟ್​ ಅಳವಡಿಸಬೇಕು. ಇದು ಸಾಕಷ್ಟು ಅಪಾರ್ಟ್​ಮೆಂಟ್​ಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ ಎಂದಿದ್ದಾರೆ ಒಬ್ಬರು. ಶುಚಿತ್ವ ಮತ್ತು ಸುರಕ್ಷತೆ ಸಲುವಾಗಿ ಹೀಗೆ ಹೇಳಿರುವ ಸಾಧ್ಯತೆ ಇದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ವಿದ್ಯುತ್​ ವೆಚ್ಚ ಹೆಚ್ಚುವ ಬಗ್ಗೆ ಕಟ್ಟಡ ಮಾಲೀಕರಿಗೆ ವ್ಯಥೆಯಾಗಿ ಹೀಗೆ ಹೇಳಿರಲು ಸಾಧ್ಯ ಎಂದು ಮಗದೊಬ್ಬರು ಹೇಳಿದ್ದಾರೆ.

ಈ ನೋಟೀಸ್​ನೊಂದಿಗೆ ಇನ್ನೊಂದು ನೋಟೀಸ್​ ಅಂಟಿಸಬೇಕು; ಸ್ವಿಗ್ಗಿ ಝೊಮ್ಯಾಟೋನಿಂದ ಆರ್ಡರ್​ ತರಿಸಿಕೊಳ್ಳುವವರು ಸೊಸೈಟಿಯ ನೆಲಮಹಡಿಗೆ ಹೋಗಿ ತಮ್ಮ ಆರ್ಡರ್​​ ಪಡೆದುಕೊಳ್ಳಬೇಕು ಎಂದು ಒಬ್ಬರು ಹೇಳಿದ್ದಾರೆ. ಹೌದು, ಇವರು ಹೀಗೆ ನೋಟೀಸ್​ ಅಂಟಿಸಿರುವುದು ಅನ್ಯಾಯ. ಅದಕ್ಕೆ ಪರ್ಯಾಯವನ್ನೂ ಅವರು ಸೂಚಿಸಬೇಕಿತ್ತು ಎಂದಿದ್ದಾರೆ ಇನ್ನೂ ಒಬ್ಬರು. ಈ ತಾರತಮ್ಯ ಸರಿಯಲ್ಲ, ಕನಿಷ್ಟ ಪ್ರಜ್ಞೆ ಇರಬೇಕಿತ್ತು, ಡೆಲಿವರಿ ಏಜೆಂಟರುಗಳು ಯಾರಿಗೆ ಸಹಾಯ ಮಾಡಲು ಬರುತ್ತಾರೆ ಎನ್ನುವುದನ್ನು ಯೋಚಿಸಬೇಕಿತ್ತು ಎಂದಿದ್ದಾರೆ ಹಲವರು.

ಇದನ್ನು ಓದಿದ ನೀವು ಏನು ಅಭಿಪ್ರಾಯ ಕೊಡುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:17 pm, Fri, 25 November 22

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್