AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಿಗ್ಗಿ, ಝೊಮ್ಯಾಟೋ ಡೆಲಿವರಿ ಏಜೆಂಟರುಗಳು ಈ ಹೌಸಿಂಗ್​ ಸೊಸೈಟಿಯ ಲಿಫ್ಟ್​ ಉಪಯೋಗಿಸುವಂತಿಲ್ಲ!

Delivery Agents : ಈ ನೋಟೀಸ್​ನೊಂದಿಗೆ ಇನ್ನೊಂದು ನೋಟೀಸ್​ ಅಂಟಿಸಬೇಕು; ಸ್ವಿಗ್ಗಿ ಝೊಮ್ಯಾಟೋನಿಂದ ಆರ್ಡರ್​ ತರಿಸಿಕೊಳ್ಳುವವರು ಸೊಸೈಟಿಯ ನೆಲಮಹಡಿಗೆ ಹೋಗಿ ತಮ್ಮ ಆರ್ಡರ್​​ ಪಡೆದುಕೊಳ್ಳಬೇಕು ಎಂದು.

ಸ್ವಿಗ್ಗಿ, ಝೊಮ್ಯಾಟೋ ಡೆಲಿವರಿ ಏಜೆಂಟರುಗಳು ಈ ಹೌಸಿಂಗ್​ ಸೊಸೈಟಿಯ ಲಿಫ್ಟ್​ ಉಪಯೋಗಿಸುವಂತಿಲ್ಲ!
ನೋಟೀಸ್​ : ಡೆಲಿವರಿ ಏಜೆಂಟರುಗಳು ಲಿಫ್ಟ್​ ಉಪಯೋಗಿಸುವ ಹಾಗಿಲ್ಲ.
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 25, 2022 | 1:26 PM

Viral Video : ಎಂಥ ಮಳೆಯಲ್ಲಿ, ಎಂಥ ಚಳಿಯಲ್ಲಿ, ಎಂಥ ಬಿಸಿಲಲ್ಲಿ ಮತ್ತು ಕಿಕ್ಕಿರಿದ ಟ್ರಾಫಿಕ್ಕಿನಲ್ಲಿಯೂ ಸರಿಯಾದ ಸಮಯಕ್ಕೆ ಬಿಸಿಬಿಸಿಯಾದ ಆಹಾರವನ್ನು ಮತ್ತು ಸಾಮಾನುಗಳನ್ನು ಗ್ರಾಹಕರಿಗೆ ತಲುಪಿಸುವ ಡೆಲಿವರಿ ಏಜೆಂಟರುಗಳ ಬಗ್ಗೆ ಹೀಗೆ ಈ ಹೌಸಿಂಗ್​ ಸೊಸೈಟಿಯವರು ಕಟ್ಟಳೆ ಹೇರಿರುವುದು ಯಾಕೆ? ಐಎಎಸ್​ ಅಧಿಕಾರಿ ಅವನೀಶ ಶರಣ ಹೌಸಿಂಗ್​ ಬೋರ್ಡ್​ನ ಗೋಡೆಗೆ ಅಂಟಿಸಿರುವ ಈ ನೋಟೀಸಿನ ಕುರಿತು ಪ್ರಶ್ನಿಸಿದ್ದಾರೆ. ನೆಟ್ಟಿಗರು ಈ ಸೊಸೈಟಿಯ ನಡೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಸುತ್ತಿದ್ದಾರೆ.

ಸೊಸೈಟಿಯಲ್ಲಿ ವಾಸಿಸುವವರಿಗೆ ಮಾತ್ರ ಈ ಲಿಫ್ಟ್ ಬಳಕೆ. ಉಳಿದಂತೆ ಸ್ವಿಗ್ಗಿ, ಝೊಮ್ಯಾಟೋ ಮತ್ತು ಇನ್ನುಳಿದ ಯಾವುದೇ ಡೆಲಿವರಿ ಏಜೆಂಟರುಗಳು ಈ ಲಿಫ್ಟ್​ ಉಪಯೋಗಿಸುವಂತಿಲ್ಲ ಎಂದು ಗೋಡೆಯ ಮೇಲೆ ನೊಟೀಸ್ ಅಂಟಿಸಿದ್ದಾರೆ ಈ ಹೌಸಿಂಗ್​ ಸೊಸೈಟಿಯವರು. ಈ ತನಕ ಈ ಟ್ವೀಟ್​ ಅನ್ನು17,400ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 1,200 ಜನರು ಲೈಕ್ ಮಾಡಿದ್ದಾರೆ. 1,500 ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Trending : ಮಗನನ್ನು ಸಂಪರ್ಕಿಸಲು ವೃದ್ಧದಂಪತಿಗೆ ಸಹಾಯ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್

ಹೀಗೆ ಬರೆದು ಅಂಟಿಸುವ ಬದಲು ಡೆಲಿವರಿ ಏಜೆಂಟರುಗಳ ಸಲುವಾಗಿಯೇ ಪ್ರತ್ಯೇಕ ಲಿಫ್ಟ್​ ಅಳವಡಿಸಬೇಕು. ಇದು ಸಾಕಷ್ಟು ಅಪಾರ್ಟ್​ಮೆಂಟ್​ಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ ಎಂದಿದ್ದಾರೆ ಒಬ್ಬರು. ಶುಚಿತ್ವ ಮತ್ತು ಸುರಕ್ಷತೆ ಸಲುವಾಗಿ ಹೀಗೆ ಹೇಳಿರುವ ಸಾಧ್ಯತೆ ಇದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ವಿದ್ಯುತ್​ ವೆಚ್ಚ ಹೆಚ್ಚುವ ಬಗ್ಗೆ ಕಟ್ಟಡ ಮಾಲೀಕರಿಗೆ ವ್ಯಥೆಯಾಗಿ ಹೀಗೆ ಹೇಳಿರಲು ಸಾಧ್ಯ ಎಂದು ಮಗದೊಬ್ಬರು ಹೇಳಿದ್ದಾರೆ.

ಈ ನೋಟೀಸ್​ನೊಂದಿಗೆ ಇನ್ನೊಂದು ನೋಟೀಸ್​ ಅಂಟಿಸಬೇಕು; ಸ್ವಿಗ್ಗಿ ಝೊಮ್ಯಾಟೋನಿಂದ ಆರ್ಡರ್​ ತರಿಸಿಕೊಳ್ಳುವವರು ಸೊಸೈಟಿಯ ನೆಲಮಹಡಿಗೆ ಹೋಗಿ ತಮ್ಮ ಆರ್ಡರ್​​ ಪಡೆದುಕೊಳ್ಳಬೇಕು ಎಂದು ಒಬ್ಬರು ಹೇಳಿದ್ದಾರೆ. ಹೌದು, ಇವರು ಹೀಗೆ ನೋಟೀಸ್​ ಅಂಟಿಸಿರುವುದು ಅನ್ಯಾಯ. ಅದಕ್ಕೆ ಪರ್ಯಾಯವನ್ನೂ ಅವರು ಸೂಚಿಸಬೇಕಿತ್ತು ಎಂದಿದ್ದಾರೆ ಇನ್ನೂ ಒಬ್ಬರು. ಈ ತಾರತಮ್ಯ ಸರಿಯಲ್ಲ, ಕನಿಷ್ಟ ಪ್ರಜ್ಞೆ ಇರಬೇಕಿತ್ತು, ಡೆಲಿವರಿ ಏಜೆಂಟರುಗಳು ಯಾರಿಗೆ ಸಹಾಯ ಮಾಡಲು ಬರುತ್ತಾರೆ ಎನ್ನುವುದನ್ನು ಯೋಚಿಸಬೇಕಿತ್ತು ಎಂದಿದ್ದಾರೆ ಹಲವರು.

ಇದನ್ನು ಓದಿದ ನೀವು ಏನು ಅಭಿಪ್ರಾಯ ಕೊಡುತ್ತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:17 pm, Fri, 25 November 22

ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್​ ಸಿಎಂ ಆಗ್ತಾರೆ: ಇಕ್ಬಾಲ್ ಹುಸೇನ್
ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್​ ಸಿಎಂ ಆಗ್ತಾರೆ: ಇಕ್ಬಾಲ್ ಹುಸೇನ್
ಏರು ಧ್ವನಿಯಲ್ಲಿ ಮಾತನಾಡಿದ್ರೆಂದು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
ಏರು ಧ್ವನಿಯಲ್ಲಿ ಮಾತನಾಡಿದ್ರೆಂದು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ