Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನೀ ಸನಿಹಕೆ ಬಂದರೆ; ಆಕ್ಟೋಪಸ್ ಈಕೆಯನ್ನು ಸ್ವೀಕರಿಸಿದ ರೀತಿ ನೋಡಿ

Sea: ಸಮುದ್ರದಾಳದ ಜೀವಿಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಅತ್ಯಂತ ಕಷ್ಟ. ಎಷ್ಟೋ ಸಲ ಮನುಷ್ಯನನ್ನು ನೋಡಿ ಅವು ಗಾಬರಿಯಿಂದ ದೂರ ಓಡುತ್ತವೆ. ಇಲ್ಲವೇ ದಾಳಿ ಮಾಡಲು ನೋಡುತ್ತವೆ. ಆದರೆ ಇಲ್ಲಿರುವ ಆಕ್ಟೋಪಸ್ ಬ್ಲಾಗರ್​ ಒಬ್ಬರಿಗೆ ಹೇಗೆ ಸಹಕರಿಸಿದೆ ನೋಡಿ. ಅತ್ಯಂತ ಶಾಂತವಾಗಿ ಅವಳ ಬಳಿ ಓಡಾಡಿ, ತನ್ನನ್ನು ಸೆರೆಹಿಡಿಯಲು ಅನುಕೂಲ ಮಾಡಿಕೊಟ್ಟಿದೆ!

Viral Video: ನೀ ಸನಿಹಕೆ ಬಂದರೆ; ಆಕ್ಟೋಪಸ್ ಈಕೆಯನ್ನು ಸ್ವೀಕರಿಸಿದ ರೀತಿ ನೋಡಿ
ಸಮುದ್ರದಾಳದಲ್ಲಿ ಆಕ್ಟೋಪಸ್​ ಸೆರೆಹಿಡಿಯುತ್ತಿರುವ ಮಹಿಳೆ
Follow us
ಶ್ರೀದೇವಿ ಕಳಸದ
|

Updated on:Nov 18, 2023 | 12:44 PM

Octopus : ಸಮುದ್ರಜೀವಿಗಳ ಬಗ್ಗೆ ಯಾರಿಗೆ ಕುತೂಹಲವಿಲ್ಲ? ಸಮುದ್ರದಾಳಕ್ಕಿಳಿದು ಆ ಜೀವಿಗಳನ್ನು ಸೆರೆಹಿಡಿಯುವುದರಲ್ಲಿ ಅನೇಕರಿಗೆ ಆಸಕ್ತಿ ಇರುತ್ತದೆ. ಅವುಗಳನ್ನು ಹತ್ತಿರದಿಂದ ನೋಡುವ, ಸ್ಪರ್ಶಿಸುವ ಆಸೆ ಇದ್ದೇ ಇರುತ್ತದೆ. ಆದರೆ ಆ ಜೀವಿಗಳು ತಾವಾಗಿಯೇ ಅವರ ಬಳಿ ಬಂದರೆ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಮಹಿಳೆಯೊಬ್ಬಳು ಸಮುದ್ರದಾಳಕ್ಕಿಳಿದಿದ್ದಾಳೆ. ಅಲ್ಲೊಂದು ಆಕ್ಟೋಪಸ್​ ಈಜಾಡುತ್ತ ಶಾಂತವಾಗಿ  (Calm) ಆಕೆಯ ಬಳಿ ಸಾಗಿದೆ. ಈ ಅಪರೂಪದ ದೃಶ್ಯವನ್ನು ನೋಡಿದ ನೆಟ್ಟಿಗರು ಬೆರಗಾಗಿದ್ದಾರೆ.

ಇದನ್ನೂ ಓದಿ : Viral Brain Teaser: ಕಿರೀಟ ಇಲ್ಲೇ ಎಲ್ಲೋ ಕಳೆದುಹೋಗಿದೆ, ಹುಡುಕುವಿರಾ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

Instagram ನ zanzibar_mermaid ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. “ಆಕ್ಟೋಪಸ್‌ಗಳು 3 ಹೃದಯಗಳನ್ನು, 9 ಮೆದುಳುಗಳನ್ನು ಮತ್ತು ನೀಲಿ ರಕ್ತವನ್ನು ಹೊಂದಿರುತ್ತವೆ ಎಂಬ ವಿಷಯ ನಿಮಗೆ ತಿಳಿದಿದೆಯೇ?” ಎಂದು ಆಕೆ ಒಕ್ಕಣೆಯನ್ನು ಈ ವಿಡಿಯೋಗೆ ಬರೆದಿದ್ದಾಳೆ.

ಆಕ್ಟೋಪಸ್​ ಅನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವ ಮಹಿಳೆ

ಈ ವಿಡಿಯೋವನ್ನು ಈತನಕ ಸುಮಾರು 2.7 ಲಕ್ಷ ಜನರು ನೋಡಿದ್ದಾರೆ. 15,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಆಕ್ಟೋಪಸ್​ ಯಾವಾಗಲೂ ನೀರಿನಲ್ಲಿ ಅಡಗಿರುವುದಿಲ್ಲ, ಅವು ಈಜಾಡಿಕೊಂಡಿರುತ್ತವೆ ಎಂದಿದ್ದಾರೆ ಒಬ್ಬರು. ನಾನು ಕೊರೊನಾ ಸಂದರ್ಭದಲ್ಲಿ ಮರಳಿನಿಂದ ಸ್ವಲ್ಪ ದೂರದಲ್ಲಿ ನೀರಿನಲ್ಲಿ ಶಾಂತವಾಗಿ ತೇಲಾಡಿಕೊಂಡಿರುವುದನ್ನು ನೋಡಿದ್ದೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Brain Teaser: ಅರ್ಧ ತೆಂಗಿನಕಾಯಿ, ಒಂದು ಸೇಬು ಮತ್ತು ಒಂದು ಬಾಳೆಯ ಮೌಲ್ಯ ಎಷ್ಟು?

ಇದು ಬುದ್ಧಿವಂತ ಜೀವಿ ಎಂದಿದ್ದಾರೆ ಮತ್ತೊಬ್ಬರು. ಇದು ಅತ್ಯದ್ಭುತವಾಗಿದೆ ಎಂದಿದ್ದಾರೆ ಮಗದೊಬ್ಬರು. ನಿಜಕ್ಕೂ ಇದು ತುಂಬಾ ಸುಂದರವಾದ ದೃಶ್ಯ ಮತ್ತು ಅನುಭವ ಎಂದಿದ್ದಾರೆ ಇನ್ನೂ ಒಬ್ಬರು. ಇದು ನಿಮ್ಮನ್ನು ಸ್ವೀಕರಿಸಿದ ರೀತಿ ಅನನ್ಯ ಎಂದಿದ್ದಾರೆ ಹಲವಾರು ಜನರು. ಈ ಜೀವಿ ಅತ್ಯಂತ ಸುಂದರವಾಗಿದೆ, ಅದರ ಬಳಕು ನನಗಿಷ್ಟ ಎಂದಿದ್ದಾರೆ ಒಂದಿಷ್ಟು ಜನ. ಇದರ ಶಾಂತತೆಯಿಂದಾಗಿ ಮತ್ತೆ ಮತ್ತೆ ಈ ವಿಡಿಯೋ ನೋಡಬೇಕೆನ್ನಿಸುತ್ತಿದೆ ಎಂದಿದ್ದಾರೆ ಮತ್ತೊಂದಿಷ್ಟು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:44 pm, Sat, 18 November 23

ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು