AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಬಾ ಕೂಸೇ ಮುದ್ದಿಸ್ತೀನಿ’ ವಾತ್ಸಲ್ಯಮಯೀ ಒರಾಂಗುಟಾನ್

Orangutan : ಮೂರು ತಿಂಗಳ ಹಸುಳೆಯನ್ನು ನೋಡಬೇಕೆನ್ನುವ, ಮುಟ್ಟಬೇಕೆನ್ನುವ ಮತ್ತು ಮುದ್ದಿಸಬೇಕೆನ್ನುವ ಬಯಕೆಯನ್ನು ವ್ಯಕ್ತಪಡಿಸುವ ಇದರ ರೀತಿ ನಮ್ಮ ಮನೆಯ ಹಿರಿಯಜ್ಜನೋ, ಹಿರಿಯಜ್ಜಿಯರನ್ನೋ ನೆನಪಿಸುವಂತಿಲ್ಲವೆ?

Viral Video: 'ಬಾ ಕೂಸೇ ಮುದ್ದಿಸ್ತೀನಿ' ವಾತ್ಸಲ್ಯಮಯೀ ಒರಾಂಗುಟಾನ್
ಕೆಂಟಕೀ ಝೂನಲ್ಲಿ ಮೂರು ತಿಂಗಳ ಹಸುಳೆಗೆ ಮುದ್ದು ಮಾಡುತ್ತಿರುವ ಒರಾಂಗುಟಾನ್
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:May 24, 2023 | 12:20 PM

Share

Love : ಮನುಷ್ಯರಾದ ನಮಗಷ್ಟೇ ಪ್ರಾಣಿಗಳ ಒಡನಾಟ ಬೇಕೆನ್ನಿಸುವುದಿಲ್ಲ. ಪ್ರಾಣಿಗಳಿಗೂ ಮನುಷ್ಯರ ಒಡನಾಟ ಬೇಕೆನ್ನಿಸುತ್ತದೆ. ಇಲ್ಲೊಬ್ಬ ತಾಯಿ ಪ್ರಾಣಿಸಂಗ್ರಹಾಲಯಕ್ಕೆ ಮಗುವಿನೊಂದಿಗೆ ಹೋಗಿದ್ದಾರೆ. ಇಲ್ಲಿರುವ ಒರಾಂಗುಟಾನ್ ಕೈ ಮಾಡಿ ಈ ಮಗುವನ್ನು ತೋರಿಸಲು ಕೇಳಿಕೊಳ್ಳುತ್ತದೆ. ಮಗುವಿನ ತಾಯಿ ಅದರ ಬಳಿ ಮಗುವನ್ನು ಹಿಡಿಯುತ್ತಾರೆ. ಆಗದು ಅದರ ಕೆನ್ನೆಗೆ ಗಾಜಿನಗೋಡೆಯಿಂದಾಚೆಯೇ ಮುತ್ತು ಕೊಟ್ಟು ಮುದ್ದಿಸಲು ನೋಡುತ್ತದೆ. ಎಂಥ ಹೃದಯಸ್ಪರ್ಶಿಯಾಗಿದೆಯಲ್ಲ!

ಈ ಮೂರು ತಿಂಗಳ ಹಸುಳೆಯನ್ನು ಹತ್ತಿರದಿಂದ ನೋಡಬೇಕೆನ್ನುವ, ಮುಟ್ಟಬೇಕೆನ್ನುವ ಮತ್ತು ಮುದ್ದಿಸಬೇಕೆನ್ನುವ ಬಯಕೆಯನ್ನು ವ್ಯಕ್ತಪಡಿಸುವ ಇದರ ರೀತಿ ನಮ್ಮ ಮನೆಯ ಹಿರಿಯಜ್ಜನೋ, ಹಿರಿಯಜ್ಜಿಯರನ್ನು ನೆನಪಿಸುವಂತಿಲ್ಲವೆ? ಬಹುಶಃ ಗಾಜಿನಗೋಡೆ ಇಲ್ಲದಿದ್ದರೆ ಖಂಡಿತ ಅದು ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಿತ್ತು.

ಇದನ್ನೂ ಓದಿ : Viral Video: ಹೈದರಾಬಾದಿನ 76 ವರ್ಷದ ಈ ”ಯುವಕ”ನ ಲಗೇಜು ತಾಲೀಮು

ಕೆಂಟಕಿ ಝೂನಲ್ಲಿಯ ಈ ದೃಶ್ಯವನ್ನು ನೋಡಿ ಅನೇಕರು ಈ ವಿಡಿಯೋ ನೋಡಿ ಆನಂದತುಂದಿಲರಾಗಿದ್ದಾರೆ. ನಾಲ್ಕು ಕಾಲುಗಳು ಮತ್ತು ಮೈತುಂಬಾ ಕೂದಲು ಇವೆ ಎಂದ ಮಾತ್ರಕ್ಕೆ ಇವು ಪ್ರಾಣಿಗಳು. ಆದರೆ ಒರಾಂಗುಟಾನ್ ಥೇಟ್​​ ಮನುಷ್ಯರಂತೆಯೇ ಎಂದಿದ್ಧಾರೆ ಒಬ್ಬರು. ಇವುಗಳು​ ಮನುಷ್ಯರ ಸಹವಾಸದಲ್ಲಿರಲು ಮತ್ತು ಪ್ರೀತಿಸಲು ಹಾತೊರೆಯುತ್ತವೆ ಎಂದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಸವಾರ್ ಲೂ; ಅರೆ! ಈಕೆ ಥೇಟ್​ ಸೋನಾಕ್ಷಿಯೇ, ಎನ್ನುತ್ತಿರುವ ನೆಟ್ಟಿಗರು

ನಾನೊಮ್ಮೆ ಒರಾಂಗುಟಾನ್​ ನೋಡಲು ಹೋದಾಗ, ನನ್ನನ್ನು ಕರೆದು ಬ್ಯಾಗ್​ನಲ್ಲಿ ಏನಿದೆ ತೋರಿಸು ಎಂದು ಹೇಳಿದ್ದಳು. ಬ್ಯಾಗ್​ ಕೊಟ್ಟಾಗ ಅದರೊಳಗೆ ಏನೇನಿದೆ ಎಂದು ಕೈಹಾಕಿ ತಡಕಾಡಿ ನೋಡಿಕೊಟ್ಟಳು ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ಧಾರೆ. ಈ ವಿಡಿಯೋದಲ್ಲಿರುವ ಒರಾಂಗುಟಾನ್​ ನೋಡಿದರೆ ಇದು ಪ್ರಾಣಿಸಂಗ್ರಹಾಲಯದಲ್ಲಿರದೆ, ನಮ್ಮೊಂದಿಗೆ ಇರಬೇಕಿತ್ತು ಎನ್ನಿಸುತ್ತದೆ ಎಂದು ಮಗದೊಬ್ಬರು ಹೇಳಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:18 pm, Wed, 24 May 23

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್