AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಬಾ ಕೂಸೇ ಮುದ್ದಿಸ್ತೀನಿ’ ವಾತ್ಸಲ್ಯಮಯೀ ಒರಾಂಗುಟಾನ್

Orangutan : ಮೂರು ತಿಂಗಳ ಹಸುಳೆಯನ್ನು ನೋಡಬೇಕೆನ್ನುವ, ಮುಟ್ಟಬೇಕೆನ್ನುವ ಮತ್ತು ಮುದ್ದಿಸಬೇಕೆನ್ನುವ ಬಯಕೆಯನ್ನು ವ್ಯಕ್ತಪಡಿಸುವ ಇದರ ರೀತಿ ನಮ್ಮ ಮನೆಯ ಹಿರಿಯಜ್ಜನೋ, ಹಿರಿಯಜ್ಜಿಯರನ್ನೋ ನೆನಪಿಸುವಂತಿಲ್ಲವೆ?

Viral Video: 'ಬಾ ಕೂಸೇ ಮುದ್ದಿಸ್ತೀನಿ' ವಾತ್ಸಲ್ಯಮಯೀ ಒರಾಂಗುಟಾನ್
ಕೆಂಟಕೀ ಝೂನಲ್ಲಿ ಮೂರು ತಿಂಗಳ ಹಸುಳೆಗೆ ಮುದ್ದು ಮಾಡುತ್ತಿರುವ ಒರಾಂಗುಟಾನ್
Follow us
ಶ್ರೀದೇವಿ ಕಳಸದ
|

Updated on:May 24, 2023 | 12:20 PM

Love : ಮನುಷ್ಯರಾದ ನಮಗಷ್ಟೇ ಪ್ರಾಣಿಗಳ ಒಡನಾಟ ಬೇಕೆನ್ನಿಸುವುದಿಲ್ಲ. ಪ್ರಾಣಿಗಳಿಗೂ ಮನುಷ್ಯರ ಒಡನಾಟ ಬೇಕೆನ್ನಿಸುತ್ತದೆ. ಇಲ್ಲೊಬ್ಬ ತಾಯಿ ಪ್ರಾಣಿಸಂಗ್ರಹಾಲಯಕ್ಕೆ ಮಗುವಿನೊಂದಿಗೆ ಹೋಗಿದ್ದಾರೆ. ಇಲ್ಲಿರುವ ಒರಾಂಗುಟಾನ್ ಕೈ ಮಾಡಿ ಈ ಮಗುವನ್ನು ತೋರಿಸಲು ಕೇಳಿಕೊಳ್ಳುತ್ತದೆ. ಮಗುವಿನ ತಾಯಿ ಅದರ ಬಳಿ ಮಗುವನ್ನು ಹಿಡಿಯುತ್ತಾರೆ. ಆಗದು ಅದರ ಕೆನ್ನೆಗೆ ಗಾಜಿನಗೋಡೆಯಿಂದಾಚೆಯೇ ಮುತ್ತು ಕೊಟ್ಟು ಮುದ್ದಿಸಲು ನೋಡುತ್ತದೆ. ಎಂಥ ಹೃದಯಸ್ಪರ್ಶಿಯಾಗಿದೆಯಲ್ಲ!

ಈ ಮೂರು ತಿಂಗಳ ಹಸುಳೆಯನ್ನು ಹತ್ತಿರದಿಂದ ನೋಡಬೇಕೆನ್ನುವ, ಮುಟ್ಟಬೇಕೆನ್ನುವ ಮತ್ತು ಮುದ್ದಿಸಬೇಕೆನ್ನುವ ಬಯಕೆಯನ್ನು ವ್ಯಕ್ತಪಡಿಸುವ ಇದರ ರೀತಿ ನಮ್ಮ ಮನೆಯ ಹಿರಿಯಜ್ಜನೋ, ಹಿರಿಯಜ್ಜಿಯರನ್ನು ನೆನಪಿಸುವಂತಿಲ್ಲವೆ? ಬಹುಶಃ ಗಾಜಿನಗೋಡೆ ಇಲ್ಲದಿದ್ದರೆ ಖಂಡಿತ ಅದು ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಿತ್ತು.

ಇದನ್ನೂ ಓದಿ : Viral Video: ಹೈದರಾಬಾದಿನ 76 ವರ್ಷದ ಈ ”ಯುವಕ”ನ ಲಗೇಜು ತಾಲೀಮು

ಕೆಂಟಕಿ ಝೂನಲ್ಲಿಯ ಈ ದೃಶ್ಯವನ್ನು ನೋಡಿ ಅನೇಕರು ಈ ವಿಡಿಯೋ ನೋಡಿ ಆನಂದತುಂದಿಲರಾಗಿದ್ದಾರೆ. ನಾಲ್ಕು ಕಾಲುಗಳು ಮತ್ತು ಮೈತುಂಬಾ ಕೂದಲು ಇವೆ ಎಂದ ಮಾತ್ರಕ್ಕೆ ಇವು ಪ್ರಾಣಿಗಳು. ಆದರೆ ಒರಾಂಗುಟಾನ್ ಥೇಟ್​​ ಮನುಷ್ಯರಂತೆಯೇ ಎಂದಿದ್ಧಾರೆ ಒಬ್ಬರು. ಇವುಗಳು​ ಮನುಷ್ಯರ ಸಹವಾಸದಲ್ಲಿರಲು ಮತ್ತು ಪ್ರೀತಿಸಲು ಹಾತೊರೆಯುತ್ತವೆ ಎಂದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಸವಾರ್ ಲೂ; ಅರೆ! ಈಕೆ ಥೇಟ್​ ಸೋನಾಕ್ಷಿಯೇ, ಎನ್ನುತ್ತಿರುವ ನೆಟ್ಟಿಗರು

ನಾನೊಮ್ಮೆ ಒರಾಂಗುಟಾನ್​ ನೋಡಲು ಹೋದಾಗ, ನನ್ನನ್ನು ಕರೆದು ಬ್ಯಾಗ್​ನಲ್ಲಿ ಏನಿದೆ ತೋರಿಸು ಎಂದು ಹೇಳಿದ್ದಳು. ಬ್ಯಾಗ್​ ಕೊಟ್ಟಾಗ ಅದರೊಳಗೆ ಏನೇನಿದೆ ಎಂದು ಕೈಹಾಕಿ ತಡಕಾಡಿ ನೋಡಿಕೊಟ್ಟಳು ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ಧಾರೆ. ಈ ವಿಡಿಯೋದಲ್ಲಿರುವ ಒರಾಂಗುಟಾನ್​ ನೋಡಿದರೆ ಇದು ಪ್ರಾಣಿಸಂಗ್ರಹಾಲಯದಲ್ಲಿರದೆ, ನಮ್ಮೊಂದಿಗೆ ಇರಬೇಕಿತ್ತು ಎನ್ನಿಸುತ್ತದೆ ಎಂದು ಮಗದೊಬ್ಬರು ಹೇಳಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:18 pm, Wed, 24 May 23

6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ