Viral Video: ‘ಬಾ ಕೂಸೇ ಮುದ್ದಿಸ್ತೀನಿ’ ವಾತ್ಸಲ್ಯಮಯೀ ಒರಾಂಗುಟಾನ್

Orangutan : ಮೂರು ತಿಂಗಳ ಹಸುಳೆಯನ್ನು ನೋಡಬೇಕೆನ್ನುವ, ಮುಟ್ಟಬೇಕೆನ್ನುವ ಮತ್ತು ಮುದ್ದಿಸಬೇಕೆನ್ನುವ ಬಯಕೆಯನ್ನು ವ್ಯಕ್ತಪಡಿಸುವ ಇದರ ರೀತಿ ನಮ್ಮ ಮನೆಯ ಹಿರಿಯಜ್ಜನೋ, ಹಿರಿಯಜ್ಜಿಯರನ್ನೋ ನೆನಪಿಸುವಂತಿಲ್ಲವೆ?

Viral Video: 'ಬಾ ಕೂಸೇ ಮುದ್ದಿಸ್ತೀನಿ' ವಾತ್ಸಲ್ಯಮಯೀ ಒರಾಂಗುಟಾನ್
ಕೆಂಟಕೀ ಝೂನಲ್ಲಿ ಮೂರು ತಿಂಗಳ ಹಸುಳೆಗೆ ಮುದ್ದು ಮಾಡುತ್ತಿರುವ ಒರಾಂಗುಟಾನ್
Follow us
|

Updated on:May 24, 2023 | 12:20 PM

Love : ಮನುಷ್ಯರಾದ ನಮಗಷ್ಟೇ ಪ್ರಾಣಿಗಳ ಒಡನಾಟ ಬೇಕೆನ್ನಿಸುವುದಿಲ್ಲ. ಪ್ರಾಣಿಗಳಿಗೂ ಮನುಷ್ಯರ ಒಡನಾಟ ಬೇಕೆನ್ನಿಸುತ್ತದೆ. ಇಲ್ಲೊಬ್ಬ ತಾಯಿ ಪ್ರಾಣಿಸಂಗ್ರಹಾಲಯಕ್ಕೆ ಮಗುವಿನೊಂದಿಗೆ ಹೋಗಿದ್ದಾರೆ. ಇಲ್ಲಿರುವ ಒರಾಂಗುಟಾನ್ ಕೈ ಮಾಡಿ ಈ ಮಗುವನ್ನು ತೋರಿಸಲು ಕೇಳಿಕೊಳ್ಳುತ್ತದೆ. ಮಗುವಿನ ತಾಯಿ ಅದರ ಬಳಿ ಮಗುವನ್ನು ಹಿಡಿಯುತ್ತಾರೆ. ಆಗದು ಅದರ ಕೆನ್ನೆಗೆ ಗಾಜಿನಗೋಡೆಯಿಂದಾಚೆಯೇ ಮುತ್ತು ಕೊಟ್ಟು ಮುದ್ದಿಸಲು ನೋಡುತ್ತದೆ. ಎಂಥ ಹೃದಯಸ್ಪರ್ಶಿಯಾಗಿದೆಯಲ್ಲ!

ಈ ಮೂರು ತಿಂಗಳ ಹಸುಳೆಯನ್ನು ಹತ್ತಿರದಿಂದ ನೋಡಬೇಕೆನ್ನುವ, ಮುಟ್ಟಬೇಕೆನ್ನುವ ಮತ್ತು ಮುದ್ದಿಸಬೇಕೆನ್ನುವ ಬಯಕೆಯನ್ನು ವ್ಯಕ್ತಪಡಿಸುವ ಇದರ ರೀತಿ ನಮ್ಮ ಮನೆಯ ಹಿರಿಯಜ್ಜನೋ, ಹಿರಿಯಜ್ಜಿಯರನ್ನು ನೆನಪಿಸುವಂತಿಲ್ಲವೆ? ಬಹುಶಃ ಗಾಜಿನಗೋಡೆ ಇಲ್ಲದಿದ್ದರೆ ಖಂಡಿತ ಅದು ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಿತ್ತು.

ಇದನ್ನೂ ಓದಿ : Viral Video: ಹೈದರಾಬಾದಿನ 76 ವರ್ಷದ ಈ ”ಯುವಕ”ನ ಲಗೇಜು ತಾಲೀಮು

ಕೆಂಟಕಿ ಝೂನಲ್ಲಿಯ ಈ ದೃಶ್ಯವನ್ನು ನೋಡಿ ಅನೇಕರು ಈ ವಿಡಿಯೋ ನೋಡಿ ಆನಂದತುಂದಿಲರಾಗಿದ್ದಾರೆ. ನಾಲ್ಕು ಕಾಲುಗಳು ಮತ್ತು ಮೈತುಂಬಾ ಕೂದಲು ಇವೆ ಎಂದ ಮಾತ್ರಕ್ಕೆ ಇವು ಪ್ರಾಣಿಗಳು. ಆದರೆ ಒರಾಂಗುಟಾನ್ ಥೇಟ್​​ ಮನುಷ್ಯರಂತೆಯೇ ಎಂದಿದ್ಧಾರೆ ಒಬ್ಬರು. ಇವುಗಳು​ ಮನುಷ್ಯರ ಸಹವಾಸದಲ್ಲಿರಲು ಮತ್ತು ಪ್ರೀತಿಸಲು ಹಾತೊರೆಯುತ್ತವೆ ಎಂದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಸವಾರ್ ಲೂ; ಅರೆ! ಈಕೆ ಥೇಟ್​ ಸೋನಾಕ್ಷಿಯೇ, ಎನ್ನುತ್ತಿರುವ ನೆಟ್ಟಿಗರು

ನಾನೊಮ್ಮೆ ಒರಾಂಗುಟಾನ್​ ನೋಡಲು ಹೋದಾಗ, ನನ್ನನ್ನು ಕರೆದು ಬ್ಯಾಗ್​ನಲ್ಲಿ ಏನಿದೆ ತೋರಿಸು ಎಂದು ಹೇಳಿದ್ದಳು. ಬ್ಯಾಗ್​ ಕೊಟ್ಟಾಗ ಅದರೊಳಗೆ ಏನೇನಿದೆ ಎಂದು ಕೈಹಾಕಿ ತಡಕಾಡಿ ನೋಡಿಕೊಟ್ಟಳು ಎಂದು ಮತ್ತೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ಧಾರೆ. ಈ ವಿಡಿಯೋದಲ್ಲಿರುವ ಒರಾಂಗುಟಾನ್​ ನೋಡಿದರೆ ಇದು ಪ್ರಾಣಿಸಂಗ್ರಹಾಲಯದಲ್ಲಿರದೆ, ನಮ್ಮೊಂದಿಗೆ ಇರಬೇಕಿತ್ತು ಎನ್ನಿಸುತ್ತದೆ ಎಂದು ಮಗದೊಬ್ಬರು ಹೇಳಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:18 pm, Wed, 24 May 23

Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ