Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಾತನಾಡಲು ಅವಕಾಶ ಸಿಗಲಿಲ್ಲವೆಂದು ಟಿವಿ ಚಾನೆಲ್​ ಲೈವ್​ನಲ್ಲೇ ಎದ್ದು ಡ್ಯಾನ್ಸ್​ ಮಾಡಿದ ಪ್ಯಾನಲಿಸ್ಟ್​​

ರಿಪಬ್ಲಿಕ್​ ಬಾಂಗ್ಲಾ ಚಾನೆಲ್​ನಲ್ಲಿ ನಡೆಯುತ್ತಿದ್ದ ನೇರ ಪ್ರಸಾರದ ಕಾರ್ಯಕ್ರಮದ ಚರ್ಚೆಯಲ್ಲಿ ಪ್ಯಾನಲಿಸ್ಟ್​ ಒಬ್ಬರು ಮಾತನಾಡಲು ಅವಕಾಶ ಸಿಗಲಿಲ್ಲವೆಂದು ನೇರಪ್ರಸಾರದಲ್ಲೇ ಎದ್ದು ನಿಂತು ಡ್ಯಾನ್ಸ್​​ ಮಾಡಿದ್ದಾರೆ.

Viral Video: ಮಾತನಾಡಲು ಅವಕಾಶ ಸಿಗಲಿಲ್ಲವೆಂದು ಟಿವಿ ಚಾನೆಲ್​ ಲೈವ್​ನಲ್ಲೇ ಎದ್ದು ಡ್ಯಾನ್ಸ್​ ಮಾಡಿದ ಪ್ಯಾನಲಿಸ್ಟ್​​
ನೇರಪ್ರಸಾರದಲ್ಲಿ ಡ್ಯಾನ್ಸ್​ ಮಾಡಿದ ಪಾನಲಿಸ್ಟ್​
Follow us
TV9 Web
| Updated By: Digi Tech Desk

Updated on:Jan 19, 2022 | 6:00 PM

ಕೆಲವೊಮ್ಮೆ ಜನ ತಮ್ಮಡೆಗೆ ಇತರರು ಗಮನಹರಿಸಬೇಕೆಂದು ವಿಚಿತ್ರ ರೀತಿಯಲ್ಲಿ ವರ್ತಿಸುತ್ತಾರೆ. ಅಂತಹದ್ದೇ ಒಂದು ಘಟನೆ ಟಿವಿಯೊಂದರ ನೇರಪ್ರಸಾರ ಕಾರ್ಯಕ್ರಮದಲ್ಲಿ ನಡೆದಿದೆ. ರಿಪಬ್ಲಿಕ್​ ಬಾಂಗ್ಲಾ (Republic Bangla)  ಚಾನೆಲ್​ನಲ್ಲಿ ನಡೆಯುತ್ತಿದ್ದ ನೇರ ಪ್ರಸಾರದ ಕಾರ್ಯಕ್ರಮದ ಚರ್ಚೆಯಲ್ಲಿ ಪ್ಯಾನಲಿಸ್ಟ್ (Panelist)​ ಒಬ್ಬರು ಮಾತನಾಡಲು ಅವಕಾಶ ಸಿಗಲಿಲ್ಲವೆಂದು ನೇರಪ್ರಸಾರದಲ್ಲೇ ಎದ್ದು ನಿಂತು ಡ್ಯಾನ್ಸ್ (Dance) ಮಾಡಿದ್ದಾರೆ. ಇದು ಒಂದು ವರ್ಷದ ಹಳೆಯ ವಿಡಿಯೋ. ಆದರೆ ಈಗ ವೈರಲ್​ ಆಗಿದೆ. ಎದ್ದು ನಿಂತು ಡ್ಯಾನ್ಸ್​ ಮಾಡಿದ ಪ್ಯಾನಲಿಸ್ಟ್​ ಅನ್ನು ಪರಿಸರವಾದಿ ರೋಶನಿ ಅಲಿ (Roshni Ali) ಎಂದು ಗುರುತಿಸಲಾಗಿದೆ. ದೀಪಾವಳಿಯಲ್ಲಿ ಪಟಾಕಿ ನಿಷೇಧಿಸಬೇಕು ಎನ್ನುವ ಕುರಿತಾದ ಚರ್ಚೆಯ ವೇಳೆ ಮಾತನಾಡಲು ಅವಕಾಶ  ಸಿಗಲಿಲ್ಲವೆಂದು ಎದ್ದು ನಿಂತು ಡ್ಯಾನ್ಸ್​ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ರೋಶನಿ ಅಲಿ ಈ ಹಿಂದೆ ಕೋಲ್ಕತ್ತಾ ಹೈಕೋರ್ಟ್​ನಲ್ಲಿ ಸಲ್ಲಿಸಿದ್ದ ದೂರಿನಲ್ಲಿ ಪಟಾಕಿಯಿಂದ ವಾಯು ಮಾಲಿನ್ಯದಿಂದ ಕೊರೋನಾ ಸೋಂಕು ಹೆಚ್ಚುತ್ತದೆ ಎಂದು ಹೇಳಿದ್ದರು. ಇದೀಗ ವಿಡಿಯೋದಲ್ಲಿ ಡಿಬೇಟ್​ ವೇಳೆ ಪಟಾಕಿಯನ್ನು ನಿಷೇಧಿಸಬೇಕು. ಅದು ಪರಿಸರಕ್ಕೆ ಮಾರಕವಾಗಿದೆ. ಅಲ್ಲದೆ ಕೊರೋನಾ ಹರಡಲೂ ಕಾರಣವಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಬಯಸಿದ್ದರು. ಆದರೆ ಅವಕಾಶ ಸಿಗದೆ ಎದ್ದು ನಿಂತು ಡ್ಯಾನ್ಸ್​ ಮಾಡಿದ್ದಾರೆ. ರೋಶನಿ ಅವರು ಎದ್ದು ನಿಂತು ಡ್ಯಾನ್ಸ್​ ಮಾಡುತ್ತಿದ್ದಂತೆಯೆ ಉಳಿದ ಪ್ಯಾನಲಿಸ್ಟ್​ಗಳು ಗಾಬರಿಗೊಂಡಿದ್ದಾರೆ. ನಂತರ ಅವರ ವರ್ತನೆ ನೋಡಿ ಮಾತನಾಡಲು ಅವಕಾಶ ನೀಡಲಾಯಿತು. ಈ ಕುರಿತು ನ್ಯೂಸ್​ 18 ಸುದ್ದಿ ಸಂಸ್ಥೆ ವರದಿ ಮಾಡಿದೆ.

2021ರ ನವೆಂಬರ್​ನಲ್ಲಿ ಸುಪ್ರೀಮ್​ ಕೋರ್ಟ್​ ವಾಯು ಮಾಲಿನ್ಯ ಹೆಚ್ಚಿರುವ ಮತ್ತು ಕೊರೋನಾ ರೋಗಿಗಳು ಐಸೋಲೇಟ್​ ಆಗಿರುವ ಪ್ರದೇಶಗಳಲ್ಲಿ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಪಟಾಕಿಗಳನ್ನು ನಿಷೇಧಿಸಿತ್ತು. ಉಳಿದ ಪ್ರದೇಶಗಳಲ್ಲಿಯೂ ಹಸಿರು ಪಟಾಕಿಯನ್ನು ಮಾತ್ರ ಸಿಡಿಸಲು ಅವಕಾಶ ನೀಡಿತ್ತು. ಈ ಕುರಿತು ವಾದ ಮಂಡಿಸಿದ್ದ ರೋಶನಿ ಅವರ ವಿಡಯೋವನ್ನು ಎಲಿಜಬೇತ್​ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇದನ್ನೂ ಓದಿ:

Viral Video: ಮಸಾಲಾ ದೋಸೆ ಐಸ್​ಕ್ರೀಮ್​ ಕಂಡು ಮೂಗುಮುರಿದ ನೆಟ್ಟಿಗರು

Published On - 5:17 pm, Wed, 19 January 22

ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ