AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜ್ಞಾನವನ್ನು ಹೀಗೆ ಕಲಿಸುವ ಇಂಥ ಯುವಶಿಕ್ಷಕರು ಬೇಕು ಎನ್ನುತ್ತಿರುವ ನೆಟ್ಟಿಗರು

Teacher : ವಿಜ್ಞಾನದಂಥ ವಿಷಯಗಳನ್ನು ಮಕ್ಕಳ ಕೈಗೆ ಸುಲಿದ ಬಾಳೆಹಣ್ಣಿನಂತೆ ಕೈಗಿಡುವ ಇಂಥ ಯುವ ಶಿಕ್ಷಕರು ನಮ್ಮ ಮಕ್ಕಳಿಗೆ ಬೇಕಿದೆ. ಇಂಗ್ಲಿಷ್​ ಗೊತ್ತಿದ್ದ ಮಾತ್ರಕ್ಕೆ ಪಟಪಟನೆ ಪಠ್ಯವನ್ನು ಓದಿ ಮುಂದಿನ ಕ್ಲಾಸಿಗೆ ಓಡಿಹೋಗುವ ಶಿಕ್ಷಕರಲ್ಲ.

ವಿಜ್ಞಾನವನ್ನು ಹೀಗೆ ಕಲಿಸುವ ಇಂಥ ಯುವಶಿಕ್ಷಕರು ಬೇಕು ಎನ್ನುತ್ತಿರುವ ನೆಟ್ಟಿಗರು
Physics teachers easy way of explaining refraction
TV9 Web
| Edited By: |

Updated on:Nov 10, 2022 | 2:41 PM

Share

Viral Video : ಶಿಕ್ಷಕ ವೃತ್ತಿಯೆನ್ನುವುದು ಎಲ್ಲಕ್ಕಿಂತ ಶ್ರೇಷ್ಠ. ಸಂಬಳಕ್ಕಾಗಿ ಮಾಡುವ ವೃತ್ತಿಗಳಂತೆ ಅದು ಅಲ್ಲವೇ ಅಲ್ಲ. ಮಕ್ಕಳ ಭವಿಷ್ಯಕ್ಕಾಗಿ ತಮ್ಮನ್ನೇ ತಾವು ಅಡವಿಟ್ಟುಕೊಂಡು ಮಾಡುವಂಥ ಪ್ರೀತಿಯ ವೃತ್ತಿಯದು. ಹೀಗೆ ಗ್ರಹಿಸಿ ತೊಡಗಿಕೊಳ್ಳುವ ಅನೇಕ ಶಿಕ್ಷಕರು ನಮ್ಮ ನಡುವೆ ಇನ್ನೂ ಇದ್ದಾರೆ ಎನ್ನುವುದೇ ಬದುಕಿನ ಬಗ್ಗೆ ಎಷ್ಟೋ ಭರವಸೆಯನ್ನು ಕೊಡುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.

ದೀಪಕ್ ಪ್ರಭು ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ವಿಜ್ಞಾನದಂಥ ಕಠಿಣ ವಿಷಯಗಳನ್ನು ಮಕ್ಕಳಿಗೆ ಹೇಗೆ ಆಸಕ್ತಿಕರವಾಗಿ ತಿಳಿಸಿಕೊಡಬೇಕು ಎನ್ನುವುದನ್ನು ಈ ಶಿಕ್ಷಕರನ್ನು ನೋಡಿ ಕಲಿಯಬೇಕು. ಈ ವಿಡಿಯೋದಲ್ಲಿ ಭೌತಶಾಸ್ತ್ರವನ್ನು ಪ್ರಯೋಗದ ಮೂಲಕ ಪಾಠ ಮಾಡುತ್ತಿರುವುದನ್ನು ಗಮನಿಸಿ. ವಕ್ರೀಭವನ ಪ್ರಕ್ರಿಯೆಯನ್ನು ಸರಳ ಪ್ರಯೋಗದ ಮೂಲಕ ವಿವರಿಸುತ್ತಿದ್ದಾರೆ.

ಇವರ ಶ್ರದ್ಧೆ, ಪ್ರೀತಿ, ಉತ್ಸಾಹ ಮತ್ತು ಗಂಭೀರತೆಯನ್ನು ನೋಡಿದ ನೆಟ್ಟಿಗರು ಇವರ ಆಸ್ಥೆಯನ್ನು ಶ್ಲಾಘಿಸುತ್ತಿದ್ದಾರೆ. ಹೀಗೆ ಪಾಠ ಮಾಡುವ ಶಿಕ್ಷಕರ ಸಂತತಿ ಹೆಚ್ಚಬೇಕು ಎಂದು ಆಶಿಸುತ್ತಿದ್ದಾರೆ. ಅದರಲ್ಲೂ ಯುವಜನತೆ ಈ ವೃತ್ತಿಗೆ ಬರಬೇಕು ಎಂದು ಹಾರೈಸುತ್ತಿದ್ದಾರೆ. 80,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಇಂಗ್ಲಿಷ್​ ಬರುತ್ತದೆ ಎಂದಮಾತ್ರಕ್ಕೆ ಬಡಬಡಿಸಿ ಹೋಗುವ ಅದೆಷ್ಟೋ ಶಿಕ್ಷಕರು ನಮ್ಮ ನಡುವೆ ಇದ್ದಾರೆ. ಆದರೆ ಇವರು ಮಾತ್ರ ಅಪರೂಪದಲ್ಲಿ ಅಪರೂಪ. ಇವರಿಗೆ ಒಳ್ಳೆಯದಾಗಲಿ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 2:38 pm, Thu, 10 November 22

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ