Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಎಳನೀರು ಕುಡಿಯಲು ನಾಸಿಕ್​ಗೆ ಬಂದವಾ ಈ ಚಿರತೆಗಳು

Maharashtra : ಬೆಕ್ಕಿನಂತೆ ಸರಾಗವಾಗಿ ತೆಂಗಿನ ಮರವನ್ನು ಹತ್ತಿಳಿದ ಚಿರತೆಗಳನ್ನು ನೋಡಿ ನೆಟ್ಟಿಗರು ಚಕಿತಗೊಂಡಿದ್ದಾರೆ. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Viral Video : ಎಳನೀರು ಕುಡಿಯಲು ನಾಸಿಕ್​ಗೆ ಬಂದವಾ ಈ ಚಿರತೆಗಳು
ತೆಂಗಿನಮರ ಏರುತ್ತಿರುವ ಚಿರತೆಗಳು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 21, 2022 | 2:55 PM

Viral Video : ಸಾಕಷ್ಟು ಕಾಡುಪ್ರಾಣಿಗಳು ನಾಡಿಗೆ ಬಂದ ವಿಡಿಯೋಗಳು ಈಗಾಗಲೇ ವೈರಲ್ ಆಗಿರುವುದನ್ನು ನೋಡಿದ್ದೀರಿ. ಅವು ಬರುವುದೇನಿದ್ದರೂ ಆಹಾರ ಹುಡುಕಿಕೊಂಡೇ. ಹೀಗೆ ಬರುವಾಗ ದಾರಿ ತಪ್ಪಿ ಊರೊಳಗೆ ನುಗ್ಗಿರುತ್ತವೆ. ಇಲ್ಲಿರುವ ಈ ವಿಡಿಯೋದಲ್ಲಿಯೂ ಹಾಗೇ ಆಗಿದೆ. ಈ ಚಿರತೆಗಳು ನಾಸಿಕ್​ಗೆ ಬಂದಿವೆ. ಬಂದು ಸರಸರನೆ ಬೆಕ್ಕಿನಂತೆ ತೆಂಗಿನ ಮರ ಏರಿವೆ, ಎಳನೀರು ಕುಡಿಯಲು ಅಲ್ಲ, ಅಲ್ಲಿ ಮನುಷ್ಯರ ಸುಳಿವು ಸಿಕ್ಕಿದ್ದರಿಂದ ಪ್ರಾಣಭಯದಿಂದ ತಪ್ಪಿಸಿಕೊಳ್ಳಲು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

67,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿ ಅಚ್ಚರಿಪಟ್ಟಿದ್ದಾರೆ. ವಾಟ್ಸಪ್​ ಮೂಲಕ ಬಂದ ಈ ವಿಡಿಯೋ ಅನ್ನು  ಐಪಿಎಸ್ ಅಧಿಕಾರಿ ಪರ್ವೀನ್​ ಕಸ್ವಾನ್​ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ, ‘ಇವುಗಳ ಚುರುಕುತನವೇ ಇವುಗಳ ವೈಶಿಷ್ಟ್ಯ. ಎಲ್ಲ ರೀತಿಯ ಪ್ರದೇಶಗಳಲ್ಲಿಯೂ ಇವು ಹೊಂದಿಕೊಳ್ಳುತ್ತವೆ. ರಾಜಸ್ಥಾನ ಮತ್ತು ರಾಕಿ ಬೆಟ್ಟಗಳಿಂದ ಈಶಾನ್ಯದ ಅರಣ್ಯ, ಮುಂಬೈ ಮತ್ತು ಗುರಗಾಂವ್​ ನಗರಗಳಿಂದ ಹಿಮಾಲಯದ ಭೂಪ್ರದೇಶಗಳಲ್ಲಿಯೂ ಇವು ವಾಸಿಸುತ್ತವೆ. ಆಹಾರಬೇಟೆಯಲ್ಲಿ ಅತೀ ಚುರುಕಾದ ಪ್ರಾಣಿಗಳು ಇವು’ ಎಂದಿದ್ದಾರೆ.

ಈ ಪೋಸ್ಟ್​ನಿಂದ ಪ್ರೇರಿತರಾದ ಅವರು ಮತ್ತೊಂದು ಪೋಸ್ಟ್​ ಟ್ವೀಟ್ ಮಾಡಿದ್ಧಾರೆ.

‘ಚಹಾ ತೋಟಗಳು ಮತ್ತು ಕಬ್ಬಿನ ತೋಟಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಚಹಾ ತೋಟ ಇವುಗಳಿಗೆ ಬಹುನೆಚ್ಚಿನ ಜಾಗಗಳು. ಸುಲಭಕ್ಕೆ ಆಹಾರ ಅಲ್ಲಿ ದೊರಕುತ್ತದೆ. ವಿಶ್ರಾಂತಿಗಾಗಿ ನೆರಳು ಲಭ್ಯವಿರುತ್ತದೆ. ಮರಿಗಳನ್ನೂ ಆರಾಮವಾಗಿ ಸಾಕಬಹುದು’ ಎಂದು ತಾವು ತೆಗೆದ ಚಿರತೆಯ ಫೋಟೋ ಕೂಡ ಹಂಚಿಕೊಂಡಿದ್ದಾರೆ.

ವನ್ಯಲೋಕದ ವೈಶಿಷ್ಟ್ಯ ಅಪಾರ.

ಮತ್ತಷ್ಟು ವೈರಲ್​ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 2:53 pm, Wed, 21 September 22

ಸುತ್ತೂರು ಮಠದಲ್ಲಿ ಮಗುವಿಗೆ ನಾಮಕರಣ ಮಾಡಿದ ಸಿದ್ದರಾಮಯ್ಯ
ಸುತ್ತೂರು ಮಠದಲ್ಲಿ ಮಗುವಿಗೆ ನಾಮಕರಣ ಮಾಡಿದ ಸಿದ್ದರಾಮಯ್ಯ
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ