AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಎಳನೀರು ಕುಡಿಯಲು ನಾಸಿಕ್​ಗೆ ಬಂದವಾ ಈ ಚಿರತೆಗಳು

Maharashtra : ಬೆಕ್ಕಿನಂತೆ ಸರಾಗವಾಗಿ ತೆಂಗಿನ ಮರವನ್ನು ಹತ್ತಿಳಿದ ಚಿರತೆಗಳನ್ನು ನೋಡಿ ನೆಟ್ಟಿಗರು ಚಕಿತಗೊಂಡಿದ್ದಾರೆ. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Viral Video : ಎಳನೀರು ಕುಡಿಯಲು ನಾಸಿಕ್​ಗೆ ಬಂದವಾ ಈ ಚಿರತೆಗಳು
ತೆಂಗಿನಮರ ಏರುತ್ತಿರುವ ಚಿರತೆಗಳು
TV9 Web
| Updated By: ಶ್ರೀದೇವಿ ಕಳಸದ|

Updated on:Sep 21, 2022 | 2:55 PM

Share

Viral Video : ಸಾಕಷ್ಟು ಕಾಡುಪ್ರಾಣಿಗಳು ನಾಡಿಗೆ ಬಂದ ವಿಡಿಯೋಗಳು ಈಗಾಗಲೇ ವೈರಲ್ ಆಗಿರುವುದನ್ನು ನೋಡಿದ್ದೀರಿ. ಅವು ಬರುವುದೇನಿದ್ದರೂ ಆಹಾರ ಹುಡುಕಿಕೊಂಡೇ. ಹೀಗೆ ಬರುವಾಗ ದಾರಿ ತಪ್ಪಿ ಊರೊಳಗೆ ನುಗ್ಗಿರುತ್ತವೆ. ಇಲ್ಲಿರುವ ಈ ವಿಡಿಯೋದಲ್ಲಿಯೂ ಹಾಗೇ ಆಗಿದೆ. ಈ ಚಿರತೆಗಳು ನಾಸಿಕ್​ಗೆ ಬಂದಿವೆ. ಬಂದು ಸರಸರನೆ ಬೆಕ್ಕಿನಂತೆ ತೆಂಗಿನ ಮರ ಏರಿವೆ, ಎಳನೀರು ಕುಡಿಯಲು ಅಲ್ಲ, ಅಲ್ಲಿ ಮನುಷ್ಯರ ಸುಳಿವು ಸಿಕ್ಕಿದ್ದರಿಂದ ಪ್ರಾಣಭಯದಿಂದ ತಪ್ಪಿಸಿಕೊಳ್ಳಲು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

67,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿ ಅಚ್ಚರಿಪಟ್ಟಿದ್ದಾರೆ. ವಾಟ್ಸಪ್​ ಮೂಲಕ ಬಂದ ಈ ವಿಡಿಯೋ ಅನ್ನು  ಐಪಿಎಸ್ ಅಧಿಕಾರಿ ಪರ್ವೀನ್​ ಕಸ್ವಾನ್​ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ, ‘ಇವುಗಳ ಚುರುಕುತನವೇ ಇವುಗಳ ವೈಶಿಷ್ಟ್ಯ. ಎಲ್ಲ ರೀತಿಯ ಪ್ರದೇಶಗಳಲ್ಲಿಯೂ ಇವು ಹೊಂದಿಕೊಳ್ಳುತ್ತವೆ. ರಾಜಸ್ಥಾನ ಮತ್ತು ರಾಕಿ ಬೆಟ್ಟಗಳಿಂದ ಈಶಾನ್ಯದ ಅರಣ್ಯ, ಮುಂಬೈ ಮತ್ತು ಗುರಗಾಂವ್​ ನಗರಗಳಿಂದ ಹಿಮಾಲಯದ ಭೂಪ್ರದೇಶಗಳಲ್ಲಿಯೂ ಇವು ವಾಸಿಸುತ್ತವೆ. ಆಹಾರಬೇಟೆಯಲ್ಲಿ ಅತೀ ಚುರುಕಾದ ಪ್ರಾಣಿಗಳು ಇವು’ ಎಂದಿದ್ದಾರೆ.

ಈ ಪೋಸ್ಟ್​ನಿಂದ ಪ್ರೇರಿತರಾದ ಅವರು ಮತ್ತೊಂದು ಪೋಸ್ಟ್​ ಟ್ವೀಟ್ ಮಾಡಿದ್ಧಾರೆ.

‘ಚಹಾ ತೋಟಗಳು ಮತ್ತು ಕಬ್ಬಿನ ತೋಟಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಚಹಾ ತೋಟ ಇವುಗಳಿಗೆ ಬಹುನೆಚ್ಚಿನ ಜಾಗಗಳು. ಸುಲಭಕ್ಕೆ ಆಹಾರ ಅಲ್ಲಿ ದೊರಕುತ್ತದೆ. ವಿಶ್ರಾಂತಿಗಾಗಿ ನೆರಳು ಲಭ್ಯವಿರುತ್ತದೆ. ಮರಿಗಳನ್ನೂ ಆರಾಮವಾಗಿ ಸಾಕಬಹುದು’ ಎಂದು ತಾವು ತೆಗೆದ ಚಿರತೆಯ ಫೋಟೋ ಕೂಡ ಹಂಚಿಕೊಂಡಿದ್ದಾರೆ.

ವನ್ಯಲೋಕದ ವೈಶಿಷ್ಟ್ಯ ಅಪಾರ.

ಮತ್ತಷ್ಟು ವೈರಲ್​ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ

Published On - 2:53 pm, Wed, 21 September 22

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!