AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇಲ್ಲಿ ಬಂದು ಯುವತಿಯರಿಂದ ಕೋಲಿನಿಂದ ಹೊಡೆಸಿಕೊಂಡ್ರೆ ಮದುವೆ ಆಗುತ್ತೆ, ಇಲ್ಲಿದೆ ವಿಶಿಷ್ಟ ಆಚರಣೆ

ಈಗಿನ ಕಾಲದಲ್ಲಿ ಮದುವೆಯಾಗಲು ಹೆಣ್ಣು ಸಿಗುವುದೇ ಕಷ್ಟ. ಹೆಣ್ಣು ಸಿಕ್ಕರೂ ಮುಗಿಯದ ಡಿಮ್ಯಾಂಡ್. ಆದರೆ ಮದುವೆಯಾಗಲು ಕಷ್ಟ ಪಡುತ್ತಿರುವ ಗಂಡ್ಮಕ್ಕಳು ಇಲ್ಲಿಗೆ ಬಂದ್ರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯಂತೆ. ಜೋಧಪುರದ ದಿಂಗಾ ಗವರ್ ಹಬ್ಬದಲ್ಲಿ ಪಾಲ್ಗೊಳ್ಳುವುದು ಈ ಸಮಸ್ಯೆಗೆ ಸುಲಭ ಹಾಗೂ ತ್ವರಿತ ಪರಿಹಾರವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದ್ದು, ಅದೇಗೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿದ್ರೆ ಅದಕ್ಕೆ ಇಲ್ಲಿ ಉತ್ತರವಿದೆ.

Video: ಇಲ್ಲಿ ಬಂದು ಯುವತಿಯರಿಂದ ಕೋಲಿನಿಂದ ಹೊಡೆಸಿಕೊಂಡ್ರೆ ಮದುವೆ ಆಗುತ್ತೆ, ಇಲ್ಲಿದೆ ವಿಶಿಷ್ಟ ಆಚರಣೆ
ದಿಂಗಾ ಗವರ್ ಹಬ್ಬದ ವಿಶಿಷ್ಟ ಆಚರಣೆImage Credit source: Twitter
ಸಾಯಿನಂದಾ
|

Updated on:Aug 20, 2025 | 4:10 PM

Share

ರಾಜಸ್ಥಾನ, ಆಗಸ್ಟ್ 20: ಈಗಿನ ಕಾಲದಲ್ಲಿ ಮದುವೆಯಾಗಲು ಹುಡುಗಿಯರೇ ಸಿಗುತ್ತಿಲ್ಲ ಅನ್ನೋದು ಹುಡುಗರ ಗೋಳು. ಒಂದು ವೇಳೆ ಹುಡುಗಿ ಸಿಕ್ಕಿದ್ದು ನಮ್ಮ ಪುಣ್ಯ ಅಂದುಕೊಂಡ್ರೆ ಹೆಣ್ಣು ಮಕ್ಕಳ ಡಿಮ್ಯಾಂಡ್ ಕೇಳಿದ್ರೆ ತಲೆ ಗಿರ್ರ್ ಅನ್ನೋದು ಗ್ಯಾರಂಟಿ. ಆದರೆ ಮದ್ವೆ ಆಗದ ಹುಡುಗರು ಈ ಹಬ್ಬದಲ್ಲಿ ಭಾಗಿಯಾದ್ರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆಯಂತೆ. ರಾಜಸ್ಥಾನದ ಜೋಧ್‌ಪುರದಲ್ಲಿ (Jodhpur of Rajasthan) ನಡೆಯುವ ಈ ದಿಂಗಾ ಗವರ್ ಹಬ್ಬವು (Dhinga Gawar Festival) ವಿಶೇಷತೆಯಿಂದ ಗಮನ ಸೆಳೆದಿದೆ. ಹಬ್ಬದ ಪ್ರಮುಖ ಆಕರ್ಷಣೆ ಎಂದರೆ ಹದಿನಾರನೇ ದಿನ ನಡೆಯುವ ಮೆರವಣಿಗೆ.ಈ ದಿನ ಮಹಿಳೆಯರು ಮದುವೆಯಾಗದ ಯುವಕರಿಗೆ ಕೋಲಿನಿಂದ ಹೊಡೆಯುತ್ತಾರೆ. ಇದುವೇ ಈ ಸಮಸ್ಯೆಗೆ ಪರಿಹಾರವಂತೆ. ಈ ವಿಶಿಷ್ಟ ಆಚರಣೆಯ ವಿಡಿಯೋ ವೈರಲ್ ಆಗುತ್ತಿದೆ.

@WorkPandemic ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದ ಶೀರ್ಷಿಕೆಯಲ್ಲಿ ಮದುವೆಯಾಗಲು ಕಷ್ಟಪಡುತ್ತಿರುವ ಪುರುಷರಿಗೆ ಇಲ್ಲಿದೆ ಒಂದು ಪರಿಹಾರ. ಜೋಧಪುರದ ದಿಂಗಾ ಗವರ್ ಮೇಳವು ಒಂದು ವಿಶಿಷ್ಟ ಸಾಂಸ್ಕೃತಿಕ ಹಬ್ಬವಾಗಿದ್ದು, ಇಲ್ಲಿ ಮಹಿಳೆಯರು ಗವರ್ ಮಾತೆಯನ್ನು ಪೂಜಿಸುತ್ತಾರೆ. ಈ ಹಬ್ಬದ ಕೊನೆಯ ದಿನ ಗವರ್ ಜಿ ಉಪವಾಸ ಆಚರಿಸುವ ಮಹಿಳೆಯರು ರಾತ್ರಿಯಲ್ಲಿ ಅವಿವಾಹಿತ ಪುರುಷರನ್ನು ಕೋಲಿನಿಂದ ಹೊಡೆಯುತ್ತಾರೆ. ಈ ಪದ್ಧತಿಯು ಅವಿವಾಹಿತ ಪುರುಷರ ತ್ವರಿತ ವಿವಾಹಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ ಎಂದು ಬರೆಯಲಾಗಿದೆ. ಮಹಿಳೆಯರು, ಯುವತಿಯರು ಸೇರಿದಂತೆ ಪುಟಾಣಿಗಳು ಅವಿವಾಹಿತ ಯುವಕರಿಗೆ ಕೋಲಿನಿಂದ ಹೊಡೆಯುವುದನ್ನು ನೋಡಬಹುದು.

ಇದನ್ನೂ ಓದಿ
Image
ಡ್ರೈವಿಂಗ್ ಅಂದ್ರೆ ಈಕೆಗೆ ಇಷ್ಟ, ಈ ಆಸಕ್ತಿಯನ್ನೇ ವೃತ್ತಿಯಾಗಿಸಿಕೊಂಡ ಯುವತಿ
Image
ಹೆತ್ತವರನ್ನು ಚಾಲಕ ರಹಿತ ಕಾರಿನಲ್ಲಿ ಸುತ್ತಾಡಿಸಿದ ಭಾರತೀಯ ಯುವತಿ
Image
ಭಾರತೀಯರಿಗೆ ಉದ್ಯೋಗ ದೊರಕಿಸಿಕೊಟ್ಟ ವ್ಯಕ್ತಿಗೆ ಭವ್ಯ ಸ್ವಾಗತ
Image
ರಸ್ತೆಯಲ್ಲಿ ನೀರು ತುಂಬಿದ್ರು ಪ್ರಯಾಣಿಕನನ್ನು ಪಿಕಪ್ ಮಾಡಿದ ಆಟೋ ಚಾಲಕ

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಏನಿದು ದಿಂಗಾ ಗವರ್ ಹಬ್ಬ?

ರಾಜಸ್ಥಾನದ ಜೋಧಪುರದ ದಿಂಗಾ ಗವರ್ ಹಬ್ಬವು ವಿಶಿಷ್ಟ ಹಬ್ಬವಾಗಿದ್ದು ಇದನ್ನು ಮೋಸದ ಹಬ್ಬವೆಂದು ಕರೆಯಲಾಗುತ್ತದೆ. ಈ ಸಾಂಸ್ಕೃತಿಕ ಹಬ್ಬದಲ್ಲಿ ಮಹಿಳೆಯರು ಗವರ್ ಮಾತೆಯನ್ನು ಪೂಜಿಸುತ್ತಾರೆ. ವಿವಿಧ ವೇಷಭೂಷಣಗಳನ್ನು ಧರಿಸಿ ಕೈಯಲ್ಲಿ ಕೋಲು ಹಿಡಿದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಮಹಿಳೆಯರು ರಸ್ತೆಯಲ್ಲಿ ನಡೆದಾಡಿಕೊಂಡು ಹೋಗುವ ಯುವಕರನ್ನು ತಮಾಷೆಯಾಗಿ ಕೋಲಿನಿಂದ ಹೊಡೆಯುತ್ತಾರೆ. ಇದು ಅವಿವಾಹಿತ ಪುರುಷರಿಗೆ ಶೀಘ್ರದಲ್ಲೇ ಮದುವೆಯಾಗುವ ಸೂಚನೆ ಎಂದು ನಂಬಲಾಗಿದೆ.

ಇದನ್ನೂ ಓದಿ:Video: ಅಬ್ಬಾ! ಏನ್​​​​ ಮಸ್ತ್​​​​​ ಸ್ಟೆಪ್ ನೋಡಿ; ದೋಣಿಯ ತುದಿಯಲ್ಲಿ ನಿಂತು ಬಾಲಕನ ಜಬರ್ದಸ್ತ್ ಡ್ಯಾನ್ಸ್

ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ಭಾರತದಲ್ಲಿನ ಸಂಪ್ರದಾಯಗಳು ಆಶೀರ್ವಾದದೊಂದಿಗೆ ಗಾಯವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ನಮ್ಮಲ್ಲಿ ಕೆಲವು ವಿಚಿತ್ರವಾದ ಆದರೆ ತಮಾಷೆದಾಯಕ ಸಂಪ್ರದಾಯಗಳಿವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಈ ದೇಶದಲ್ಲಿ ಪುರುಷರನ್ನು ಜಿರಳೆಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:09 pm, Wed, 20 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ