AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಮಗನ ಪುನರ್ಜನ್ಮ; ಮನೆಗೆ ನುಗ್ಗಿದ ನಾಗರಹಾವನ್ನು ಮುದ್ದಾಡಿದ ಮಹಿಳೆ!

ವೃದ್ಧೆಯ ಚಿಕ್ಕ ಮಗ ಹಂಸರಾಜ್ ಸುಮಾರು 18 ವರ್ಷಗಳ ಹಿಂದೆ ಪಾರ್ವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ. ಆ ನಂತರ ಹಂಸರಾಜ್‌ನ ತಾಯಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಮಂಗಳವಾರ ಹಾವು ಮನೆಗೆ ಬಂದಾಗ ಅದನ್ನು ತನ್ನ ಮಗ ಎಂದು ಆಕೆ ಸಂಭ್ರಮಿಸಿದ್ದಾರೆ.

ನನ್ನ ಮಗನ ಪುನರ್ಜನ್ಮ; ಮನೆಗೆ ನುಗ್ಗಿದ ನಾಗರಹಾವನ್ನು ಮುದ್ದಾಡಿದ ಮಹಿಳೆ!
ಬಡಾಯಿ ಬಾಯಿ
ಸುಷ್ಮಾ ಚಕ್ರೆ
|

Updated on: Oct 18, 2023 | 5:22 PM

Share

ಜೈಪುರ: ಕೆಲವು ಹಳ್ಳಿಗಳಲ್ಲಿ, ಕೆಲವು ಜನರು ಈಗಲೂ ಮರುಜನ್ಮ ಅಥವಾ ಪುನರ್ಜನ್ಮದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಸತ್ತವರು ಮರುಜನ್ಮ ಪಡೆಯುತ್ತಾರೆ ಎಂಬ ನಂಬಿಕೆ ಅವರಲ್ಲಿದೆ. ಆದರೆ, ರಾಜಸ್ಥಾನದ ಕೋಟಾ ಜಿಲ್ಲೆಯ ಸಂಗೋಡ್ ಪ್ರದೇಶದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ವಯಸ್ಸಾದ ಮಹಿಳೆಯ ಮನೆಗೆ ಹಾವೊಂದು ನುಗ್ಗಿತ್ತು. ಈ ವಿಷಯ ತಿಳಿದ ಅಕ್ಕಪಕ್ಕದ ಜನರು ಹಾವನ್ನು ಕೊಲ್ಲಲು ಓಡಿಬಂದರು. ಆದರೆ, ಆ ಹಾವನ್ನು ಕೊಲ್ಲಲು ಮನೆಯೊಳಗಿದ್ದ ಆ ವಯಸ್ಸಾದ ಮಹಿಳೆ ಒಪ್ಪಲೇ ಇಲ್ಲ. ಈ ಹಾವೇ ನನ್ನ ಮಗ. ನನ್ನ ಮಗ ಹಾವಿನ ರೂಪದಲ್ಲಿ ಪುನರ್ಜನ್ಮ ತಳೆದಿದ್ದಾನೆ. ಆತ ನನ್ನನ್ನು ನೋಡಲು ಬಂದಿದ್ದಾನೆ. ನೀವ್ಯಾರೂ ಅವನಿಗೆ ತೊಂದರೆ ಕೊಡಬೇಡಿ ಎಂದು ಅಕ್ಕಪಕ್ಕದ ಮನೆಯವರನ್ನು ಮನೆಯೊಳಗೂ ಬರಲು ಬಿಡಲಿಲ್ಲ!

ನನ್ನ ಮಗ ಬಹಳ ದಿನಗಳ ನಂತರ ಮನೆಗೆ ಮರಳಿದ್ದಾನೆ. ಅವನಿಗೆ ನೀವು ತೊಂದರೆ ಕೊಡಬೇಡಿ ಎಂದು ಹೇಳಿದ ಆ ಮಹಿಳೆ ಹಾವನ್ನು ತಬ್ಬಿ ಮುದ್ದಾಡಿದ್ದಾಳೆ. ಮಹಿಳೆಯ ಈ ವರ್ತನೆಯನ್ನು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ. ವಿಚಿತ್ರವೆಂದರೆ, ಆ ಹಾವು ಕೂಡ ಮಹಿಳೆಗೆ ಯಾವುದೇ ಹಾನಿ ಮಾಡಿಲ್ಲ.

ಇದನ್ನೂ ಓದಿ: Viral Video: ನಾಗರಹಾವಿನ ತಲೆಗೆ ಚುಂಬಿಸಿದ ಯುವತಿ; ಧೈರ್ಯಶಾಲಿಗಳು ಮಾತ್ರ ನೋಡಿ

ಮಾಹಿತಿಯ ಪ್ರಕಾರ, ಸಂಗೋಡು ಪಟ್ಟಣದ ಸಮೀಪವಿರುವ ರಸ್ಕಪುರಿಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ವೃದ್ಧೆ ಬಡಾಯಿ ಬಾಯಿ ಅವರ ಮನೆಗೆ ಮಂಗಳವಾರ ನಾಗರಹಾವು ನುಗ್ಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ಅಲ್ಲಿಗೆ ಆಗಮಿಸಿ ಹಾವನ್ನು ಕೊಲ್ಲಲು ಸಿದ್ಧತೆ ನಡೆಸಿದ್ದಾರೆ. ಆದರೆ ಆ ವೃದ್ಧೆ ಅವರನ್ನು ತಡೆದಿದ್ದಾರೆ. ನಮ್ಮ ಮನೆಗೆ ಹಾವಿನ ರೂಪದಲ್ಲಿ ಮಗನೇ ಬಂದಿದ್ದಾನೆ ಎಂದು ಪಟ್ಟು ಹಿಡಿದಿದ್ದಾರೆ.

ಗ್ರಾಮಸ್ಥರ ಪ್ರಕಾರ, ಇದಾದ ನಂತರ ವೃದ್ಧೆ ಹಾವಿನ ಮುಂದೆ ನಿಂತು ನೀನು ದೇವರಾಗಿದ್ದರೆ ಅಥವಾ ನನ್ನ ಮಗನಾಗಿದ್ದರೆ ಮನೆಯಲ್ಲೇ ಇರು, ಇಲ್ಲವಾದರೆ ಹೊರಗೆ ಹೋಗು ಎಂದು ಹೇಳಿದ್ದಾರೆ. ಆದರೆ ಹಾವು ಅಲ್ಲಿಂದ ಕದಲಲಿಲ್ಲ. ಆ ನಂತರ ಮಹಿಳೆ ಮತ್ತೆ ಈ ಹಾವು ನನ್ನ ಮಗನಾಗಿದ್ದರೆ ನನ್ನ ಮಡಿಲ ಮೇಲೆ ಬರಬೇಕು ಎಂದಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಆ ಬಳಿಕ ಆ ಹಾವು ವೃದ್ಧೆಯ ಮಡಿಲಲ್ಲಿ ಹೋಗಿ ಕುಳಿತಿತ್ತು. ಈ ದೃಶ್ಯವನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ಇದನ್ನೂ ಓದಿ: ಮುತ್ತು ಕೊಡಲು ಬಂದ ಯುವಕನ ತುಟಿ ಕಚ್ಚಿದ ನಾಗರಹಾವು!

ಬಳಿಕ, ಖುಷಿಯಿಂದ ಹಾವನ್ನು ಹಿಡಿದುಕೊಂಡ ವೃದ್ಧೆ ಆ ಹಾವನ್ನು ಕುತ್ತಿಗೆಗೆ ಹಾಕಿಕೊಂಡು, ತಬ್ಬಿಕೊಂಡು ಸಂಭ್ರಮಿಸಿದ್ದಾರೆ. ಆದರೆ, ಆಗಲೂ ಹಾವು ಆಕೆಗೆ ಏನೂ ಮಾಡಿಲ್ಲ. ಆ ಮಹಿಳೆಯೊಂದಿಗೆ ಹಾವು ಕೂಡ ಚೇಷ್ಟೆ ಮಾಡಲು ಪ್ರಾರಂಭಿಸಿತು. ಈ ವಿಷಯ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆ ವೃದ್ಧೆಯ ಚಿಕ್ಕ ಮಗ ಹಂಸರಾಜ್ ಸುಮಾರು 18 ವರ್ಷಗಳ ಹಿಂದೆ ಪಾರ್ವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ. ಆ ನಂತರ ಹಂಸರಾಜ್‌ನ ತಾಯಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಮಂಗಳವಾರ ಹಾವು ಮನೆಗೆ ಬಂದಾಗ ಅದನ್ನು ತನ್ನ ಮಗ ಎಂದು ಆಕೆ ಸಂಭ್ರಮಿಸಿದ್ದಾರೆ. ಆ ಹಾವನ್ನು ಆ ವೃದ್ಧೆ ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್