AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೆಂಗಾಳಿ ಆವೃತ್ತಿಯಲ್ಲಿ ಶ್ರೀವಲ್ಲಿ ಹಾಡು: ಉಷಾ ಉತ್ತಪ್​ ಕಂಠಕ್ಕೆ ಅಭಿಮಾನಿಗಳು ಫಿದಾ

ಖ್ಯಾತ ಗಾಯಕಿ ಉಶಾ ಉತ್ತಪ್​ ಶ್ರೀವಲ್ಲಿ ಹಾಡಿನ ಬೆಂಗಾಳಿ ಆವೃತ್ತಿಯನ್ನು ಹಾಡಿದ್ದಾರೆ. ಉಶಾ ಅವರ ಧ್ವನಿಯಲ್ಲಿ ಶ್ರೀವಲ್ಲಿ ಹಾಡನ್ನು ಕೇಳಿ ನೆಟ್ಟಿಗರು ಪುಳಕಗೊಂಡಿದ್ದಾರೆ. ಯುಟ್ಯೂಬ್​ನಲ್ಲಿ ಉಶಾ ಅವರು ಹಾಡಿದ ಹಾಡಿನ ವಿಡಿಯೋ ಸಖತ್​ ವೈರಲ್​ ಆಗಿದೆ. 

Viral Video: ಬೆಂಗಾಳಿ ಆವೃತ್ತಿಯಲ್ಲಿ ಶ್ರೀವಲ್ಲಿ ಹಾಡು: ಉಷಾ ಉತ್ತಪ್​ ಕಂಠಕ್ಕೆ ಅಭಿಮಾನಿಗಳು ಫಿದಾ
ಉಷಾ ಉತ್ತಪ್​
TV9 Web
| Edited By: |

Updated on: Mar 02, 2022 | 3:25 PM

Share

ಟಾಲಿವುಡ್​ನಲ್ಲಿ ಹೊಸ ಅಲೆ ಎಬ್ಬಿಸಿದ್ದ ಪುಷ್ಪ(Pushpa) ಬಿಡುಗಡೆಯಾಗಿ 3 ತಿಂಗಳು ಕಳೆದಿದೆ. ಆದರೂ ಹಾಡು, ಡೈಲಾಗ್​ನ ಕ್ರೇಜ್​ ಮಾತ್ರ ಕಡಿಮೆಯಾಗಿಲ್ಲ. ಈಗಾಗಲೇ ಹಲವು ತಾರೆಯರು ರೀಲ್ಸ್​ಗಳನ್ನು ಮಾಡಿ ಸಖತ್​ ವೈರಲ್​ ಆಗಿದೆ. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಚಿತ್ರ ಹೊಸ ಟ್ರೆಂಡಿ ಸೃಷ್ಟಿಮಾಡಿದೆ.  ಚಿತ್ರದ ಶ್ರೀವಲ್ಲಿ(Srivalli) ಹಾಡು ರೀಲ್ಸ್​ ಪ್ರಿಯರ ನೆಚ್ಚಿನ ಗೀತೆಯಾಗಿದೆ. ಡೇವಿಡ್​ ವಾರ್ನರ್​ನಿಂದ ಹಿಡಿದು, ವಿದೇಶಿ ಪ್ರಜೆಗಳವರೆಗೂ ಶ್ರೀವಲ್ಲಿ ಹಾಡಿನ ಕ್ರೇಜ್​ ತಲುಪಿತ್ತು. ಇದೀಗ ಖ್ಯಾತ ಗಾಯಕಿ ಉಶಾ ಉತ್ತಪ್ (Usha Uthup)​ ಶ್ರೀವಲ್ಲಿ ಹಾಡಿನ ಬೆಂಗಾಳಿ ಆವೃತ್ತಿಯನ್ನು ಹಾಡಿದ್ದಾರೆ. ಉಶಾ ಅವರ ಧ್ವನಿಯಲ್ಲಿ ಶ್ರೀವಲ್ಲಿ ಹಾಡನ್ನು ಕೇಳಿ ನೆಟ್ಟಿಗರು ಪುಳಕಗೊಂಡಿದ್ದಾರೆ. ಯುಟ್ಯೂಬ್​ನಲ್ಲಿ ಉಶಾ ಅವರು ಹಾಡಿದ ಹಾಡಿನ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಸಖತ್​ ವೈರಲ್​ ಆಗಿದೆ.

ಉಶಾ ಉತ್ತಪ್​ ಅವರ ಕಂಠದಲ್ಲಿ ಶ್ರೀವಲ್ಲಿ ಹಾಡಿನ ಬೆಂಗಾಳಿ ಆವೃತ್ತಿ ಮೂಡಿಬಂದಿದ್ದು, ರಾಜೀವ್​ ದುತ್ತಾ ಅವರು ಶ್ರೀವಲ್ಲಿ ಹಾಡಿನ ಬೆಂಗಾಳಿ ಭಾಷೆಯ ಸಾಲುಗಳನ್ನು ಬರೆದಿದ್ದಾರೆ.  ಉಶಾ ಅವರ ಹಸ್ಕಿ ಧ್ವನಿಯಲ್ಲಿ ತಯಾರಾದ ಹಾಡು ಕೇಳುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಫೆ.28ರಂದು ವಿಡಿಯೋ ಹಂಚಿಕೊಳ್ಳಲಾಗಿದ್ದು, 3 ಲಕ್ಷಕೂ ಅಧಿಕ ವೀಕ್ಷಣೆ ಪಡೆದಿದೆ. ವಿಡಿಯೋ ಹಾಡನ್ನು ನೋಡಿದ ಬಳಕೆದಾರರು ತಮಿಳು ಸಾಲಿನಂತೆ ಬೆಂಗಾಳಿ ಸಾಲನ್ನು ಮ್ಯಾಚ್​ ಮಾಡಿ ಸಾಲುಗಳನ್ನು ಬರೆಯಲಾಗಿದೆ. ಇದಕ್ಕೆ ಉಶಾ ಅವರ ಧ್ವನಿ ಸೇರಿರುವುದು ಹಾಡಿಗೆ ಇನ್ನಷ್ಟು ಮೆರಗು ತರಿಸಿದೆ ಎಂದಿದ್ದಾರೆ.

ಮೂಲತಃ ಶ್ರೀವಲ್ಲಿ ಹಾಡನ್ನು ಚಂದ್ರಬೋಸ್​ ಅವರು ಬರೆದಿದ್ದು. ದೇವಿ ಶ್ರೀ ಪ್ರಸಾದ  ಅವರು ಕಂಪೋಸ್​ ಮಾಡಿದ್ದಾರೆ. ಶ್ರೀವಲ್ಲಿ ಹಾಡಿನ ಹಿಂದಿ ಆವೃತ್ತಿಯನ್ನು ಜಾವೆದ್​ ಅಲಿ ಅವರು ಹಾಡಿದ್ದಾರೆ. ಸದ್ಯ ಬೆಂಗಾಳಿ ಭಾಷೆಯ ಶ್ರೀವಲ್ಲಿ ಹಾಡು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇದನ್ನೂ ಓದಿ:

ಸಿಡ್ನಿ: ಭ್ರೂಣದ ರೀತಿಯ ಏಲಿಯನ್​ ಆಕೃತಿಯನ್ನು ಕಂಡು ಬೆರಗಾದ ವಿಜ್ಞಾನಿಗಳು

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ