AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೆಂಗಾಳಿ ಆವೃತ್ತಿಯಲ್ಲಿ ಶ್ರೀವಲ್ಲಿ ಹಾಡು: ಉಷಾ ಉತ್ತಪ್​ ಕಂಠಕ್ಕೆ ಅಭಿಮಾನಿಗಳು ಫಿದಾ

ಖ್ಯಾತ ಗಾಯಕಿ ಉಶಾ ಉತ್ತಪ್​ ಶ್ರೀವಲ್ಲಿ ಹಾಡಿನ ಬೆಂಗಾಳಿ ಆವೃತ್ತಿಯನ್ನು ಹಾಡಿದ್ದಾರೆ. ಉಶಾ ಅವರ ಧ್ವನಿಯಲ್ಲಿ ಶ್ರೀವಲ್ಲಿ ಹಾಡನ್ನು ಕೇಳಿ ನೆಟ್ಟಿಗರು ಪುಳಕಗೊಂಡಿದ್ದಾರೆ. ಯುಟ್ಯೂಬ್​ನಲ್ಲಿ ಉಶಾ ಅವರು ಹಾಡಿದ ಹಾಡಿನ ವಿಡಿಯೋ ಸಖತ್​ ವೈರಲ್​ ಆಗಿದೆ. 

Viral Video: ಬೆಂಗಾಳಿ ಆವೃತ್ತಿಯಲ್ಲಿ ಶ್ರೀವಲ್ಲಿ ಹಾಡು: ಉಷಾ ಉತ್ತಪ್​ ಕಂಠಕ್ಕೆ ಅಭಿಮಾನಿಗಳು ಫಿದಾ
ಉಷಾ ಉತ್ತಪ್​
TV9 Web
| Edited By: |

Updated on: Mar 02, 2022 | 3:25 PM

Share

ಟಾಲಿವುಡ್​ನಲ್ಲಿ ಹೊಸ ಅಲೆ ಎಬ್ಬಿಸಿದ್ದ ಪುಷ್ಪ(Pushpa) ಬಿಡುಗಡೆಯಾಗಿ 3 ತಿಂಗಳು ಕಳೆದಿದೆ. ಆದರೂ ಹಾಡು, ಡೈಲಾಗ್​ನ ಕ್ರೇಜ್​ ಮಾತ್ರ ಕಡಿಮೆಯಾಗಿಲ್ಲ. ಈಗಾಗಲೇ ಹಲವು ತಾರೆಯರು ರೀಲ್ಸ್​ಗಳನ್ನು ಮಾಡಿ ಸಖತ್​ ವೈರಲ್​ ಆಗಿದೆ. ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಚಿತ್ರ ಹೊಸ ಟ್ರೆಂಡಿ ಸೃಷ್ಟಿಮಾಡಿದೆ.  ಚಿತ್ರದ ಶ್ರೀವಲ್ಲಿ(Srivalli) ಹಾಡು ರೀಲ್ಸ್​ ಪ್ರಿಯರ ನೆಚ್ಚಿನ ಗೀತೆಯಾಗಿದೆ. ಡೇವಿಡ್​ ವಾರ್ನರ್​ನಿಂದ ಹಿಡಿದು, ವಿದೇಶಿ ಪ್ರಜೆಗಳವರೆಗೂ ಶ್ರೀವಲ್ಲಿ ಹಾಡಿನ ಕ್ರೇಜ್​ ತಲುಪಿತ್ತು. ಇದೀಗ ಖ್ಯಾತ ಗಾಯಕಿ ಉಶಾ ಉತ್ತಪ್ (Usha Uthup)​ ಶ್ರೀವಲ್ಲಿ ಹಾಡಿನ ಬೆಂಗಾಳಿ ಆವೃತ್ತಿಯನ್ನು ಹಾಡಿದ್ದಾರೆ. ಉಶಾ ಅವರ ಧ್ವನಿಯಲ್ಲಿ ಶ್ರೀವಲ್ಲಿ ಹಾಡನ್ನು ಕೇಳಿ ನೆಟ್ಟಿಗರು ಪುಳಕಗೊಂಡಿದ್ದಾರೆ. ಯುಟ್ಯೂಬ್​ನಲ್ಲಿ ಉಶಾ ಅವರು ಹಾಡಿದ ಹಾಡಿನ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು ಸಖತ್​ ವೈರಲ್​ ಆಗಿದೆ.

ಉಶಾ ಉತ್ತಪ್​ ಅವರ ಕಂಠದಲ್ಲಿ ಶ್ರೀವಲ್ಲಿ ಹಾಡಿನ ಬೆಂಗಾಳಿ ಆವೃತ್ತಿ ಮೂಡಿಬಂದಿದ್ದು, ರಾಜೀವ್​ ದುತ್ತಾ ಅವರು ಶ್ರೀವಲ್ಲಿ ಹಾಡಿನ ಬೆಂಗಾಳಿ ಭಾಷೆಯ ಸಾಲುಗಳನ್ನು ಬರೆದಿದ್ದಾರೆ.  ಉಶಾ ಅವರ ಹಸ್ಕಿ ಧ್ವನಿಯಲ್ಲಿ ತಯಾರಾದ ಹಾಡು ಕೇಳುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಫೆ.28ರಂದು ವಿಡಿಯೋ ಹಂಚಿಕೊಳ್ಳಲಾಗಿದ್ದು, 3 ಲಕ್ಷಕೂ ಅಧಿಕ ವೀಕ್ಷಣೆ ಪಡೆದಿದೆ. ವಿಡಿಯೋ ಹಾಡನ್ನು ನೋಡಿದ ಬಳಕೆದಾರರು ತಮಿಳು ಸಾಲಿನಂತೆ ಬೆಂಗಾಳಿ ಸಾಲನ್ನು ಮ್ಯಾಚ್​ ಮಾಡಿ ಸಾಲುಗಳನ್ನು ಬರೆಯಲಾಗಿದೆ. ಇದಕ್ಕೆ ಉಶಾ ಅವರ ಧ್ವನಿ ಸೇರಿರುವುದು ಹಾಡಿಗೆ ಇನ್ನಷ್ಟು ಮೆರಗು ತರಿಸಿದೆ ಎಂದಿದ್ದಾರೆ.

ಮೂಲತಃ ಶ್ರೀವಲ್ಲಿ ಹಾಡನ್ನು ಚಂದ್ರಬೋಸ್​ ಅವರು ಬರೆದಿದ್ದು. ದೇವಿ ಶ್ರೀ ಪ್ರಸಾದ  ಅವರು ಕಂಪೋಸ್​ ಮಾಡಿದ್ದಾರೆ. ಶ್ರೀವಲ್ಲಿ ಹಾಡಿನ ಹಿಂದಿ ಆವೃತ್ತಿಯನ್ನು ಜಾವೆದ್​ ಅಲಿ ಅವರು ಹಾಡಿದ್ದಾರೆ. ಸದ್ಯ ಬೆಂಗಾಳಿ ಭಾಷೆಯ ಶ್ರೀವಲ್ಲಿ ಹಾಡು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇದನ್ನೂ ಓದಿ:

ಸಿಡ್ನಿ: ಭ್ರೂಣದ ರೀತಿಯ ಏಲಿಯನ್​ ಆಕೃತಿಯನ್ನು ಕಂಡು ಬೆರಗಾದ ವಿಜ್ಞಾನಿಗಳು

Follow Us
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್