Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಸರ್ಕಾರಿ ಕೆಲಸಕ್ಕಾಗಿ ಗಂಡನನ್ನೇ ಕೊಂದ ಹೆಂಡತಿ; ಪೊಲೀಸ್‌ ತನಿಖೆಯಲ್ಲಿ ಕೊಲೆ ರಹಸ್ಯ ಬಯಲು

ಕೊಲೆ, ಆತ್ಮಹತ್ಯೆಗೆ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಳು ಪ್ರತಿನಿತ್ಯ ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಅಂತಹದ್ದೇ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಸರ್ಕಾರಿ ಕೆಲಸಕ್ಕಾಗಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಿದ್ದಾಳೆ. ಕುಡಿತದ ಚಟವಿದ್ದ ಪತಿರಾಯನನ್ನು ತಾನೇ ಕೊಂದು ಸಹಜ ಸಾವೆಂದು ಬಿಂಬಿಸಿದ್ದು, ಪೊಲೀಸ್‌ ತನಿಖೆಯ ವೇಳೆ ಕೊಲೆ ರಹಸ್ಯ ಬಯಲಾಗಿದೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

Viral: ಸರ್ಕಾರಿ ಕೆಲಸಕ್ಕಾಗಿ ಗಂಡನನ್ನೇ ಕೊಂದ ಹೆಂಡತಿ; ಪೊಲೀಸ್‌ ತನಿಖೆಯಲ್ಲಿ ಕೊಲೆ ರಹಸ್ಯ ಬಯಲು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 13, 2025 | 4:27 PM

ತೆಲಂಗಾಣ, ಮಾ. 13: ಸತ್ಯ (truth) ಎನ್ನೋದು ಬೂದಿ ಮುಚ್ಚಿದ ಕೆಂಡದಂತೆ, ಗಾಳಿಗೆ ಬೂದಿ ಸರಿದಾಗ ಕೆಂಡ ಹೇಗೆ ಹೊರ ಬರುತ್ತದ್ದೋ ಅದೇ ರೀತಿ ಸುಳ್ಳಿನ ಪರದೆ ಸರಿದು ಒಂದಲ್ಲಾ ಒಂದು ದಿನ ಸತ್ಯ ಕೂಡಾ ಹೊರ ಬರುತ್ತದೆ ಎಂದು ಹೇಳುವ ಮಾತೊಂದಿದೆ. ಈ ಮಾತಿಗೆ ನಿದರ್ಶನದಂತಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಸರ್ಕಾರಿ ಕೆಲಸಕ್ಕಾಗಿ ಹೆಂಡತಿಯೇ (wife) ಗಂಡನನ್ನು (husband) ಕೊಲೆ (murder) ಮಾಡಿದ್ದಾಳೆ. ಕುಡಿತದ ಚಟವಿದ್ದ ಪತಿರಾಯನನ್ನು ತಾನೇ ಕೊಂದು ಸಹಜ ಸಾವೆಂದು ಬಿಂಬಿಸಿದ್ದು, ಪೊಲೀಸ್‌ (Police) ತನಿಖೆಯ ವೇಳೆ ಕೊಲೆ ರಹಸ್ಯ (mystery) ಬಯಲಾಗಿದೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಈ ಘಟನೆ ತೆಲಂಗಾಣದ ನಲ್ಗೊಂಡದ ಉಸ್ಮಾನಪುರದಲ್ಲಿ ನಡೆದಿದ್ದು, ಮಹಿಳೆಯೊಬ್ಬಳು ತನಗಲ್ಲದಿದ್ದರೆ ಮಕ್ಕಳಿಗಾದರೂ ಸರ್ಕಾರಿ ಉದ್ಯೋಗ ಸಿಗಬಹುದು ಎಂಬ ಆಸೆಗೆ ಬಿದ್ದು ಗಂಡನನ್ನೇ ಕೊಲೆ ಮಾಡಿದ್ದಾಳೆ. ಈ ಕೊಲೆಯನ್ನು ಸಹಜ ಸಾವೆಂದು ಆಕೆ ನಂಬಿಸಿದ್ದು, ಪೊಲೀಸ್‌ ತನಿಖೆಯಲ್ಲಿ ಸದ್ಯ ಇದೊಂದು ಸಹಜ ಸಾವಲ್ಲ ಬದಲಿಗೆ ಕೊಲೆ ಎಂಬ ಸತ್ಯ ಬಯಲಾಗಿದೆ.

ಉಸ್ಮಾನಪುರ ನಿವಾಸಿ ಖಲೀಲ್‌ ಹುಸೇನ್‌ (44) ಕಣಗಲ್‌ ಮಂಡಲದ ಚಾರ್ಲಗೌರರಂ ಸರ್ಕಾರಿ ಪ್ರೌಢಶಾಲೆಯಲ್ಲಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದ. ಸ್ವಲ್ಪ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಈತನಿಗೆ ಕುಡಿತದ ಚಟವೂ ಇತ್ತು. ಹೀಗೆ ಈತನ ಮದ್ಯದ ಚಟದಿಂದ ಬೇಸತ್ತಿದ್ದ ಪತ್ನಿ, ಈತನನ್ನು ಕೊಂದರೆ ಇವನ ಸರ್ಕಾರಿ ಕೆಲಸ ನನಗೆ ಅಥವಾ ಮಕ್ಕಳಿಗೆ ಸಿಗುತ್ತದೆ ಎಂದು ಸರ್ಕಾರಿ ಕೆಲಸದ ಆಸೆಗೆ ಗಂಡನನ್ನೇ ಕೊಲೆ ಮಾಡಿದ್ದಾಳೆ. ಹೌದು ಕಳೆದ ತಿಂಗಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಈಕೆ ತನ್ನ ಗಂಡನ ಕುನಾನ್‌ ಸ್ಟ್ಯಾಂಡ್‌ನಿಂದ ತೀವ್ರವಾಗಿ ಹೊಡೆದಿದ್ದಾಳೆ. ಕುಸಿದು ಬಿದ್ದು ಗಂಡನಿಗೆ ಹೀಗಾಯಿತು ಎಂದು ಆಕೆ ಎಲ್ಲರೆದುರಲ್ಲಿ ಬಿಂಬಿಸಿದ್ದಾಳೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಖಲೀಲ್‌ ಮೃತ ಪಟ್ಟಿದ್ದಾನೆ.

ಇದನ್ನೂ ಓದಿ
Image
ಕೃಷ್ಣ ಸುಂದರಿʼಯ ಮದುವೆಯ ಫೋಟೋ ಝಲಕ್‌ ನೋಡಿ
Image
ಐಸ್‌ಕ್ರೀಂ ತಿಂದ ತಾಯಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಗ
Image
ಪ್ರೀತಿಯಲ್ಲಿ ಮೋಸ, ಅಶಾಂತಿ ಎಲ್ಲಾ ಸಮಸ್ಯೆಗಳಿಗೂ ಚಹಾ ಒಂದೇ ಪರಿಹಾರ
Image
ಸ್ಲಿಮ್‌ ಆಗಿ ಕಾಣಲು ತೂಕ ಇಳಿಸಿಕೊಳ್ಳುವ ಭರದಲ್ಲಿ ಯುವತಿಯ ಪ್ರಾಣವೇ ಹೋಯ್ತು

ಇದನ್ನೂ ಓದಿ: ಮಟನ್‌ ಕರಿ ಮಾಡಲು ನಿರಾಕರಿಸಿದ ಪತ್ನಿಯನ್ನು ಹೊಡೆದು ಕೊಂದ ಪತಿರಾಯ

ಅನುಮಾನದ ಮೂಲಕ ಸತ್ಯ ಬಹಿರಂಗ:

ಮೃತ ವ್ಯಕ್ತಿಯ ತಾಯಿ ಮೊಹಮ್ಮದ್ ಬೇಗಂ ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಂತರ ಅದೇ ದಿನ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ತಿಂಗಳ 7 ನೇ ತಾರೀಕಿನಂದು ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಸಾವು ಸಂಭವಿಸಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ತಕ್ಷಣ ಪೊಲೀಸರು ಪತ್ನಿ ಅಕ್ಸರ್‌ ಜಹಾನ್‌ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ವಿಚಾರಣೆಯ ವೇಳೆ ಕುಡಿತಕ್ಕೆ ದಾಸನಾಗಿದ್ದ ನನ್ನ ಗಂಡ ನನಗೂ ಹಾಗೂ ನನ್ನ ಮೂವರು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ. ಇವನನ್ನು ಕೊಂದರೆ ಈತನ ಕಾಟವೂ ತಪ್ಪುತ್ತದೆ ಮತ್ತು ಇವನ ಸರ್ಕಾರಿ ಕೆಲಸ ನನಗಲ್ಲದಿದ್ದರೂ ನನ್ನ ಮಕ್ಕಳಿಗಾದರೂ ಸಿಗುತ್ತದೆ ಆಗ ಎಲ್ಲಾ ಸಮಸ್ಯೆಯೂ ಮುಗಿದು ಹೋಗುತ್ತದೆ ಎಂದು ಭಾವಿಸಿ ಗಂಡನನ್ನು ಹೊಡೆದು ಸಾಯಿಸಿದೆ ಎಂದು ಸತ್ಯ ಬಾಯಿ ಬಿಟ್ಟಿದ್ದಾಳೆ. ಈ ಕೊಲೆ ಪ್ರಕರಣ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು
‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು
ಬಿಜೆಪಿ ನಾಯಕರು ಹೇಳುವ ಸುಳ್ಳುಗಳನ್ನು ನಂಬಲು ಜನ ತಯಾರಿಲ್ಲ: ಸಿದ್ದರಾಮಯ್ಯ
ಬಿಜೆಪಿ ನಾಯಕರು ಹೇಳುವ ಸುಳ್ಳುಗಳನ್ನು ನಂಬಲು ಜನ ತಯಾರಿಲ್ಲ: ಸಿದ್ದರಾಮಯ್ಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಂದೆ ನಿಧನ, ಪ್ರಧಾನಿ ಮೋದಿ ಅಂತಿಮ ನಮನ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಂದೆ ನಿಧನ, ಪ್ರಧಾನಿ ಮೋದಿ ಅಂತಿಮ ನಮನ
ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ4 ರಷ್ಟು ಮೀಸಲಾತಿ ಅಸವಿಂಧಾನಿಕ: ಸೂರ್ಯ
ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ4 ರಷ್ಟು ಮೀಸಲಾತಿ ಅಸವಿಂಧಾನಿಕ: ಸೂರ್ಯ
ಕೇಂದ್ರ ನೀಡಿರೋದು ₹ 10,000 ಕೋಟಿ ಅಲ್ಲ, ₹1030 ಕೋಟಿ ಮಾತ್ರ: ಸಿದ್ದರಾಮಯ್ಯ
ಕೇಂದ್ರ ನೀಡಿರೋದು ₹ 10,000 ಕೋಟಿ ಅಲ್ಲ, ₹1030 ಕೋಟಿ ಮಾತ್ರ: ಸಿದ್ದರಾಮಯ್ಯ
ಕಾರಿಂದ ಇಳಿಯುವ ಮೊದಲು ಸುಮಾರು ಹೊತ್ತು ಫೋನಲ್ಲಿ ಸಿಎಂ ಮಾತು!
ಕಾರಿಂದ ಇಳಿಯುವ ಮೊದಲು ಸುಮಾರು ಹೊತ್ತು ಫೋನಲ್ಲಿ ಸಿಎಂ ಮಾತು!
ಮಕ್ಕಳ ಜೊತೆ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್
ಮಕ್ಕಳ ಜೊತೆ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್
ಪುನೀತ್ ತರಹೇವಾರಿ ಅಭಿಮಾನಿಗಳು, ಆದರೆ ಇಂಥ ಅಭಿಮಾನಿ ಪ್ರಾಯಶಃ ಕಾಣಸಿಗರು!
ಪುನೀತ್ ತರಹೇವಾರಿ ಅಭಿಮಾನಿಗಳು, ಆದರೆ ಇಂಥ ಅಭಿಮಾನಿ ಪ್ರಾಯಶಃ ಕಾಣಸಿಗರು!
ನಟನ ಹೆಸರಲ್ಲಿ ಅನ್ನದಾನ ಕಾರ್ಯಕ್ರಮ ಏರ್ಪಡಿಸಿರುವ ಬೀದಿಬದಿ ವ್ಯಾಪಾರಿಗಳು
ನಟನ ಹೆಸರಲ್ಲಿ ಅನ್ನದಾನ ಕಾರ್ಯಕ್ರಮ ಏರ್ಪಡಿಸಿರುವ ಬೀದಿಬದಿ ವ್ಯಾಪಾರಿಗಳು
ಮಂಡ್ಯ: ಕಂಕಣ ಭಾಗ್ಯಕ್ಕಾಗಿ ಮಹದೇಶ್ವರ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆ
ಮಂಡ್ಯ: ಕಂಕಣ ಭಾಗ್ಯಕ್ಕಾಗಿ ಮಹದೇಶ್ವರ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆ