AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸನಾತನ ಸಂಪ್ರದಾಯದಂತೆ ನಡೆದ ಶ್ರೀಕೃಷ್ಣನ ಭಕ್ತೆಯ ವಿವಾಹ ಮಹೋತ್ಸವ; ʼಕೃಷ್ಣ ಸುಂದರಿʼಯ ಮದುವೆಯ ಫೋಟೋ ಝಲಕ್‌ ನೋಡಿ

ವಿದೇಶಿಯರು ಭಾರತೀಯರನ್ನು ಮದುವೆಯಾದ ಹಾಗೂ ವಿದೇಶಿ ಜೋಡಿಗಳು ಹಿಂದೂ ಸಂಪ್ರದಾಯದಂತೆ ಮದುವೆಯಾದಂತಹ ಸಾಕಷ್ಟು ಕಥೆಗಳನ್ನು ನೋಡಿದ್ದೀರಿ ಅಲ್ವಾ. ಅದೇ ರೀತಿ ಇಲ್ಲೊಂದು ವಿವಾಹ ಸಮಾರಂಭದ ಫೋಟೋ ವೈರಲ್‌ ಆಗಿದ್ದು, ವಿದೇಶಿ ಮೂಲಕ ಕೃಷ್ಣ ಸುಂದರಿಯೊಬ್ಬರು ಸನಾತನ ಧರ್ಮದಂತೆ ಮದುವೆಯಾಗಿದ್ದಾರೆ. ಅಪ್ಪಟ ಕೃಷ್ಣ ಭಕ್ತೆಯಾದ ಇವರು ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಬಣ್ಣದ ಬನಾರಸಿ ಸೀರೆಯುಟ್ಟು ದೇವತೆಯಂತೆ ಕಂಗೊಳಿಸಿದ್ದಾರೆ.

ಸನಾತನ ಸಂಪ್ರದಾಯದಂತೆ ನಡೆದ ಶ್ರೀಕೃಷ್ಣನ ಭಕ್ತೆಯ ವಿವಾಹ ಮಹೋತ್ಸವ; ʼಕೃಷ್ಣ ಸುಂದರಿʼಯ ಮದುವೆಯ ಫೋಟೋ ಝಲಕ್‌ ನೋಡಿ
ವೈರಲ್​​ ಪೋಟೋ
ಮಾಲಾಶ್ರೀ ಅಂಚನ್​
| Edited By: |

Updated on: Mar 12, 2025 | 3:03 PM

Share

ಹಿಂದೂಗಳು (Hindu) ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯ ವಿದೇಶಿಗರು (Foreigners) ಕೂಡಾ ಶ್ರೀಕೃಷ್ಣ(Sri Krishna) ನನ್ನು ಪೂಜಿಸುತ್ತಾರೆ. ವಿದೇಶಿಗರಿಗೆ ಸನಾತನ ಧರ್ಮದ ಮೇಲಿರುವ ಪ್ರೀತಿ, ಗೌರವಕ್ಕೆ ಸಂಬಂಧಿಸಿದ ಸಾಕಷ್ಟು ಫೋಟೋ, ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಅದ್ಭುತ ಫೋಟೋ ವೈರಲ್‌ ಆಗಿದ್ದು, ವಿದೇಶಿ ಮೂಲದ ಕೃಷ್ಣ ಸುಂದರಿಯೊಬ್ಬರು ಶಾಸ್ತ್ರೋಕ್ತವಾಗಿ ಭಾರತೀಯ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಮಹಾನ್‌ ಕೃಷ್ಣ (Krishna) ಭಕ್ತೆಯಾದ ಇವರು ತಮ್ಮ ಮದುವೆ ಸಮಾರಂಭದಲ್ಲಿ ತಮ್ಮ ಮದುವೆ ಸಮಾರಂಭದಲ್ಲಿ ಹಣೆಗೆ ಕೃಷ್ಣ ತಿಲಕ ಹಾಗೂ ಕೆಂಪು ಬಣ್ಣದ ಬನಾರಸಿ ಸೀರೆಯುಟ್ಟು ದೇವತೆಯಂತೆ ಕಂಗೊಳಿಸಿದ್ದಾರೆ.

ದೇವತೆಯಂತೆ ಕಂಗೊಳಿಸಿದ ಕೃಷ್ಣ ಸುಂದರಿ:

ಇಸ್ಕಾನ್‌ ಅನುಯಾಯಿ ಹಾಗೂ ಅಪ್ಪಟ ಕೃಷ್ಣ ಭಕ್ತೆಯಾದ ಆಫ್ರಿಕಾ ಮೂಲದ ಶ್ಯಾಮ ಸನಾತನ ಸಂಸ್ಕೃತಿಯಂತೆ ಮದುವೆಯಾಗಿದ್ದಾರೆ. ಕೆಂಪು ಬಣ್ಣದ ಬನಾರಸಿ ಸೀರೆ, ಹಣೆಗೆ ಕೃಷ್ಣ ತಿಲಕ, ಚೋಕರ್‌, ಚಿನ್ನದ ಹಾರ, ಬಳೆಗಳು, ಮೂಗುತಿ ಹಾಕಿ ಶ್ಯಾಮ ತಮ್ಮ ಮದುವೆಯಲ್ಲಿ ದೇವತೆಯಂತೆ ಕಂಗೊಳಿಸಿದ್ದಾರೆ.

ಇದನ್ನೂ ಓದಿ
Image
ರಸ್ತೆಯಲ್ಲಿ ಹೋಗುವಾಗ ಅಡ್ಡ ಬಂದ ಬೆಕ್ಕನ್ನೇ ಜೀವಂತ ಸುಟ್ಟು ಹಾಕಿದ ಮಹಿಳೆ
Image
ವರನಿಗೆ ಮೆಸೇಜ್‌ ಮಾಡಿ ಮದುವೆ ಹಿಂದಿನ ದಿನ ನಾಪತ್ತೆಯಾದ ವಧು
Image
ಪ್ರವಾಸಿಗರೆದುರೇ ಮರಿಗೆ ಜನ್ಮ ನೀಡಿದ ಆನೆ
Image
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌

ಸೀರೆಯುಟ್ಟು, ಆಭರಣ ತೊಟ್ಟು ರಾಣಿಯಂತೆ ಸಿಂಗಾರಕೊಂಡ ಕೃಷ್ಣ ಸುಂದರಿ ಭಾರತೀಯ ವ್ಯಕ್ತಿಯೊಂದಿಗೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ಇವರ ವಿವಾಹ ಸಮಾರಂಭದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ವಧುವಿನ ಸೌಂದರ್ಯ ಮತ್ತು ಸನಾತನ ಸಂಸ್ಕೃತಿಯ ವೈಭವದ ದೃಶ್ಯವನ್ನು ಕಂಡು ಸ್ವರ್ಗವೇ ಧರೆಗಿಳಿದು ಬಂದಂತಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ವೈರಲ್​​ ಫೋಟೋ ಇಲ್ಲಿದೆ ನೋಡಿ:

ಕಾಸ್ಮೆಟಾಲಜಿಸ್ಟ್‌ ಆಗಿರುವ ಶ್ಯಾಮ (oh.no.not.syami/ Śyāma Premī Nair) ಇನ್‌ಸ್ಟಾಗ್ರಾಮ್‌ನಲ್ಲೂ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದು, ಸನಾತನ ಧರ್ಮದಂತೆ ಹಾಗೂ ಶಾಸ್ತ್ರೋಕ್ತವಾಗಿ ನಡೆದ ತಮ್ಮ ಮದುವೆ ಸಮಾರಂಭದ ಫೋಟೋ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮದುವೆ ಮಾತ್ರವಲ್ಲದೆ ಅರಶಿನ ಶಾಸ್ತ್ರ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಶ್ಯಾಮ ಹಳದಿ ಬಣ್ಣದ ಬಟ್ಟೆ ತೊಟ್ಟು ಭಾರತೀಯ ನಾರಿಯಂತೆ ಮಿಂಚಿದ್ದಾರೆ.

ಇದನ್ನೂ ಓದಿ: ಮಮ್ಮಿನಾ ಈಗ್ಲೇ ಕರ್ಕೊಂಡು ಹೋಗಿ; ಐಸ್‌ಕ್ರೀಂ ತಿಂದ ತಾಯಿಯನ್ನು ಬಂಧಿಸಲು ಪೊಲೀಸರನ್ನೇ ಮನೆಗೆ ಕರೆಸಿದ ಪುಟ್ಟ ಪೋರ

ಮದುವೆಯಲ್ಲಿ ಕೃಷ್ಣ ಸುಂದರಿ ಶ್ಯಾಮ ಕೆಂಪು ಹಾಗೂ ಗೋಲ್ಡನ್‌ ಮಿಶ್ರಿತ ಬಣ್ಣದ ಬನಾರಸಿ ಸೀರೆ, ಚಿನ್ನದ ಸರಗಳು, ಬಳೆಗಳು, ಸೊಂಟದ ಪಟ್ಟಿ ಧರಿಸಿ ಲಕ್ಷ್ಮೀ ದೇವಿಯಂತೆ ಕಂಗೊಳಿಸಿದ್ದಾರೆ. ಕೃಷ್ಣ ತಿಲಕ ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದು, ಕೃಷ್ಣ ಸುಂದರಿಯ ಸೌಂದರ್ಯಕ್ಕೆ ಎಲ್ಲರೂ ಮಾರು ಹೋಗಿದ್ದಾರೆ. ಮದುವೆಯಲ್ಲಿ ವಧು ಮಾತ್ರವಲ್ಲ, ವರನೂ ಸಹ ಸಂಪೂರ್ಣ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಶಾಸ್ತ್ರೋಕ್ತವಾಗಿ ನಡೆದ ಈ ವಿವಾಹ ಮಹೋತ್ಸವದ ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿದೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ