AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಿನ್ನದ ಸರ ಕದ್ದು ಓಡಿದ ಕಳ್ಳ, ಪರಾರಿಯಾಗುವಷ್ಟರಲ್ಲಿ ಬಾಗಿಲು ಲಾಕ್! ಕಳ್ಳನ ಪೀಕಲಾಟ ನೋಡಿ ನಕ್ಕ ನೆಟ್ಟಿಗರು

ಘಟನೆ ಥೈಲೆಂಟ್​ನಲ್ಲಿ ನಡೆದಿದೆ. ಚಿನ್ನದ ಸರವನ್ನು ಕದಿಯಲು ಪ್ರಯತ್ನಿಸಿದ ವ್ಯಕ್ತಿ ವಿಫಲರಾಗಿದ್ದಾರೆ. ಬಾಗಿಲು ಲಾಕ್ ಆಗಿದ್ದನ್ನು ನೋಡಿದ ವ್ಯಕ್ತಿ ಹಿಂತಿರುಗಿ ಬಂದು ಸರವನ್ನು ಮೊದಲಿದ್ದ ಜಾಗದಲ್ಲಿ ಇಡುತ್ತಾನೆ. ಆತನ ಮುಖ ಸಪ್ಪೆಮೋರೆಯಾಗಿದೆ.

Viral Video: ಚಿನ್ನದ ಸರ ಕದ್ದು ಓಡಿದ ಕಳ್ಳ, ಪರಾರಿಯಾಗುವಷ್ಟರಲ್ಲಿ ಬಾಗಿಲು ಲಾಕ್! ಕಳ್ಳನ ಪೀಕಲಾಟ ನೋಡಿ ನಕ್ಕ ನೆಟ್ಟಿಗರು
ಕಳ್ಳನ ಪೀಕಲಾಟ ನೋಡಿ ನಕ್ಕ ನೆಟ್ಟಿಗರು
TV9 Web
| Edited By: |

Updated on: Jul 08, 2021 | 1:21 PM

Share

ಚಿನ್ನಾಭರಣದ ಅಂಗಡಿಗಳು ಕಳ್ಳರಿಗೆ ಪ್ರಮುಖ ತಾಣವಾಗಿದೆ. ಸಭ್ಯರಂತೆ ಬಂದು ಚಿನ್ನವನ್ನು ನೋಡುತ್ತಿರುವಂತೆ ಆ್ಯಕ್ಟಿಂಗ್ ಮಾಡುತ್ತಾ ಸುಮ್ಮನೆ ಸರವನ್ನು ಕದ್ದು ಪರಾರಿಯಾಗಿ ಬಿಡುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಚಿನ್ನದ ಸರ ಕದಿಯಲು ಹೋಗಿ ಪೇಚಿಗೆ ಸಿಲುಕಿಕೊಂಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳನ ಎಕ್ಸ್​ಪ್ರೆಶನ್​ ನೋಡಿ ನೆಟ್ಟಿಗರು ಹಾಸ್ಯ ಮಾಡಿ ನಗುತ್ತಿದ್ದಾರೆ.

ಘಟನೆ ಥೈಲೆಂಟ್​ನಲ್ಲಿ ನಡೆದಿದೆ. ಚಿನ್ನದ ಸರವನ್ನು ಕದಿಯಲು ಪ್ರಯತ್ನಿಸಿದ ವ್ಯಕ್ತಿ ವಿಫಲರಾಗಿದ್ದಾರೆ. ಈ ವಿಡಿಯೋ 2018ರಲ್ಲಿ ವೈರಲ್​ ಆಗಿತ್ತು. ಆದರೆ ಪುನಃ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. 27 ವರ್ಷದ ವ್ಯಕ್ತಿಯೊಬ್ಬ ಚಿನ್ನದ ಮಳಿಗೆಗೆ ಬಂದು ಚಿನ್ನದ ಸರವನ್ನು ಖದೀಸುವಂತೆ ನಾಟಕವಾಡುತ್ತಾನೆ. ಸರವನ್ನು ಕುತ್ತಿಗೆಗೆ ಹಾಕಿಕೊಂಡು ಸುಂದರವಾಗಿ ಕಾಣಿಸುತ್ತಿದ್ದೀನಾ? ಎಂದು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾನೆ. ಸ್ವಲ್ಪ ದೂರದಲ್ಲೇ ಇದ್ದ ಬಾಗಿಲು ನೋಡುತ್ತಾ ಓಡಿ ಹೋಗಿ ಗಾಜಿನ ಬಾಗಿಲು ತೆಗೆಯಲು ಪ್ರಯತ್ನಿಸುತ್ತಾನೆ. ಆದರೆ ಬಾಗಿಲು ಲಾಕ್​ ಆಗಿರುತ್ತದೆ. ವ್ಯಕ್ತಿಯ ಪೀಕಲಾಟ ನೋಡಿದ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

ಬಾಗಿಲು ಲಾಕ್ ಆಗಿದ್ದನ್ನು ನೋಡಿದ ವ್ಯಕ್ತಿ ಹಿಂತಿರುಗಿ ಬಂದು ಸರವನ್ನು ಮೊದಲಿದ್ದ ಜಾಗದಲ್ಲಿ ಇಡುತ್ತಾನೆ. ಆತನ ಮುಖ ಸಪ್ಪೆಮೋರೆಯಾಗಿದೆ. ವಿಶೇಷವೆಂದರೆ, ಅನುಮಾನಾಸ್ಪದವಾದ ಆತನ ವರ್ತನೆಯಿಂದ ಅಂಗಡಿ ಮಾಲೀಕರು ಮೊದಲೇ ಬಾಗಿಲನ್ನು ಲಾಕ್​ ಮಾಡಿದ್ದಾರೆ. ನಂತರ ಪೋಲಿಸರಿಗೆ ವಿಷಯ ತಿಳಿಸಲಾಗಿದೆ.

ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾನು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಹಾಗಾಗಿ ಹಣವಿಲ್ಲದೇ ಕಳ್ಳತನ ಮಾಡಲು ಪ್ರಾರಂಭಿಸಿದೆ ಎಂದು ವ್ಯಕ್ತಿ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ:

ಪೊಲೀಸ್ ಮನೆಯಲ್ಲೇ ಕಳ್ಳತನ ಮಾಡಿ ಕ್ಷಮೆ ಪತ್ರ ಬರೆದಿಟ್ಟ ಖದೀಮ; ಮತ್ತೊಂದೆಡೆ ಕಳ್ಳನಿಗೆ ಮನೆ ಮಾಲೀಕನ ಜಾಣ ಪತ್ರ!

ದಾಬಸ್‌ಪೇಟೆಯ 3 ಅಂಗಡಿಗಳಲ್ಲಿ ಸರಣಿ ಕಳ್ಳತನ; ಅಂಗಡಿಗಳ ಶೆಟರ್ ಮುರಿದು ನಗದು ದೋಚಿರುವ ಕಳ್ಳರು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ