AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋದಲ್ಲಿ ಏರ್​ಪೋಡ್ಸ್​​ ಮರೆತ ಮಹಿಳೆ, ನೆಟ್ಟಿಗರ ಗಮನ ಸೆಳೆದ ಆಟೋ ಚಾಲಕ

Auto Driver : ಆಫೀಸಿಗೆ ಹೋಗುವಾಗ ಆಕೆ ತನ್ನ ಏರ್​ಪೋಡ್​ ಅನ್ನು ಆಟೋದಲ್ಲಿಯೇ ಮರೆತುಹೋಗಿದ್ದಾಳೆ. ಫೋನ್​ಪೇ ಮೂಲಕ ಆಕೆಯ ನಂಬರ್ ಪತ್ತೆ ಹಚ್ಚಿ ಅರ್ಧಗಂಟೆಯೊಳಗೆ ದುಬಾರಿ ಏರ್​​ಪೋಡ್ಸ್​ ಅನ್ನು ಚಾಲಕ ಆಕೆಗೆ ತಲುಪಿಸಿದ್ದಾನೆ.

ಆಟೋದಲ್ಲಿ ಏರ್​ಪೋಡ್ಸ್​​ ಮರೆತ ಮಹಿಳೆ, ನೆಟ್ಟಿಗರ ಗಮನ ಸೆಳೆದ ಆಟೋ ಚಾಲಕ
ಸಾಂದರ್ಭಿಕ ಚಿತ್ರ
TV9 Web
| Edited By: ಶ್ರೀದೇವಿ ಕಳಸದ|

Updated on:Nov 16, 2022 | 4:00 PM

Share

Viral Post : ಶಿದಿಕಾ ಎಂಬ ಟ್ವಿಟರ್ ಖಾತೆದಾರರು ಟ್ವೀಟ್ ಮಾಡಿದ ಪೋಸ್ಟ್​ ಇದು. ಬೆಂಗಳೂರಿನಲ್ಲಿ ಅವರು ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಆಟೋದಲ್ಲಿ ಏರ್​ಪೋಡ್ಸ್​​ ಮರೆತು ಇಳಿದಿದ್ದಾರೆ. ನಂತರ ಆಟೋ ಚಾಲಕ ಶಿದಿಕಾ ಅವರನ್ನು ಹುಡುಕಿ ಅವರಿಗೆ ಏರ್​ಪೋಡ್ಸ್​​ ತಲುಪಿಸುವ ವ್ಯವಸ್ಥೆ ಮಾಡಿದ್ದಾನೆ. ನೆಟ್ಟಿಗರು ಈ ಚಾಲಕನ ‘ತಂತ್ರ-ಜ್ಞಾನ’ದ ಬಗ್ಗೆ ಭಲೇ ಎನ್ನುತ್ತಿದ್ದಾರೆ.

ಶಿದಿಕಾ ಎಂದಿನಂತೆ ನೌಕರಿಗೆ ಹೋಗಲು ಆಟೋ ಏರಿದ್ದಾರೆ. ಗಡಿಬಿಡಿಯಲ್ಲಿ ತಮ್ಮ ಏರ್​ಪಾಡ್ಸ್​​ ಅನ್ನು ಆಟೋದಲ್ಲಿಯೇ ಬಿಟ್ಟು ಇಳಿದಿದ್ದಾರೆ. ಇದನ್ನು ಗಮನಿಸಿದ ಚಾಲಕ, ದುಬಾರಿ ಬೆಲೆಯ ಈ ಏರ್​ಪಾಡ್​ ಅನ್ನು ಶಿದಿಕಾ ಅವರಿಗೆ ಅರ್ಧಗಂಟೆಯೊಳಗೆ ತಲುಪಿಸಿದಾಗ ಆಕೆ ಅಚ್ಚರಿಗೆ ಒಳಗಾಗಿದ್ದಾಳೆ

ಬೆಂಗಳೂರಿನಲ್ಲಿ ತಂತ್ರಜ್ಞಾನ ಎನ್ನುವುದು ಎಲ್ಲರಿಗೂ ಕೈಗೆಟಕುವಷ್ಟು ಸರಳವಾಗಿದೆ ಎನ್ನುವುದು ಈ ಘಟನೆಯಿಂದ ತಿಳಿಯಲ್ಪಡುತ್ತದೆ. ಏರ್​ಪಾಡ್ಸ್​ ಲಭ್ಯವಾಗುತ್ತಿದ್ದಂತೆ ಆಟೋ ಚಾಲಕ ಫೋನ್​ಪೇ ಮೂಲಕ ಶಿದಿಕಾ ಅವರ ನಂಬರ್​ ಪತ್ತೆಹಚ್ಚಿ ಅವರ ಕಚೇರಿಯ ವಿಳಾಸವನ್ನು ಪಡೆದುಕೊಂಡಿದ್ದಾನೆ.

‘ಆಟೋದಲ್ಲಿ ನಾನು ನನ್ನ ಏರ್​​ಪಾಡ್ಸ್​​ ಕಳೆದುಕೊಂಡೆ. ಆದರೆ ಆಟೋ ಚಾಲಕ ಫೋನ್​ಪೇ ಮೂಲಕ ನನ್ನ ನಂಬರ್​ ಹುಡುಕಿ ಅರ್ಧ ಗಂಟೆಯಲ್ಲಿ ನನ್ನ ಕಚೇರಿಗೆ ಬಂದು ಸೆಕ್ಯೂರಿಟಿಯ ಬಳಿ ಏರ್​ಪಾಡ್​ ತಲುಪಿಸಿ ಹೋಗಿದ್ದಾನೆ.’ ಎಂದು ಶಿದಿಕಾ ಪೋಸ್ಟ್​ನಲ್ಲಿ ಬರೆದಿದ್ದಾರೆ.

9,000 ಜನರು ಈ ಪೋಸ್ಟ್​ ಮೆಚ್ಚಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂದು ಅನೇಕರು ಹೇಳಿದ್ದಾರೆ.

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:55 pm, Wed, 16 November 22

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ