RBI Withdraws 2000 Rupee Notes: ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಸಾಲು ಸಾಲು ಮೀಮ್​ಗಳು

Demonetization : ಇಂಥ ಐಡಿಯಾಗಳನ್ನು ಮೋದಿ ಅವರಿಗೆ ಯಾರು ಕೊಡುತ್ತಾರೆ, ಸ್ವತಃ ಅವರೇ ನಿರ್ಧರಿಸುತ್ತಾರಾ? ಎಂದು ಕೆಲವರು. ಮಧ್ಯಮ, ಕೆಳಮಧ್ಯಮ ವರ್ಗದ ಮನೆಗಳಲ್ಲಿ ರೂ. 2,000 ನೋಟುಗಳೇ ಇರುವುದಿಲ್ಲ ಎಂದು ಹಲವರು.

RBI Withdraws 2000 Rupee Notes: ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಸಾಲು ಸಾಲು ಮೀಮ್​ಗಳು
ರೂ. 2000 ನೋಟೇ ನಿನಗೆ ಶ್ರದ್ಧಾಂಜಲಿ.
Follow us
| Updated By: ಶ್ರೀದೇವಿ ಕಳಸದ

Updated on:May 20, 2023 | 2:53 PM

Viral: ಆರ್​ಬಿಐ ರೂ. 2000 ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಘೋಷಿಸುತ್ತಿರುವ ಬೆನ್ನಲ್ಲೇ ಟ್ವಿಟರ್​ನಲ್ಲಿ #Demonetisation ಹ್ಯಾಷ್​ ಟ್ಯಾಗ್​ನಡಿ ಟ್ರೆಂಡಿಂಗ್ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಸಾಕಷ್ಟು ಮೀಮ್​​ಗಳು ಸೃಷ್ಟಿಯಾಗುತ್ತಿವೆ. ನೆಟ್ಟಿಗರು ಬಲು ಉತ್ಸಾಹದಿಂದ ಈ ಮೀಮ್​​ಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವು ಸ್ಯಾಂಪಲ್​ ನಿಮಗಾಗಿ ಇಲ್ಲಿವೆ.

ದೇಶಾದ್ಯಂತ ರೂ. 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರಿಸಿದ ಹಿನ್ನೆಲೆಯಲ್ಲಿ 2023 ಸೆ. 30 ರೊಳಗೆ ಆ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಯಾರಾದರೂ ಈಗಾಗಲೇ ರೂ. 2,000 ನೋಟುಗಳನ್ನು ಹೊಂದಿದ್ದರೆ ಮೇ 23ರ ನಂತರ ಹತ್ತಿರದ ಬ್ಯಾಂಕ್​ಗೆ ತೆರಳಿ ನೋಟು ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಈ ಹಿನ್ನೆಲೆಯಲ್ಲಿ ಆರು ವರ್ಷದ ನಂತರ ನೋಟು ಅಮಾನ್ಯೀಕರಣವು (#Demonetisation) ಮತ್ತೆ ಟ್ರೆಂಡಿಂಗ್ ಆಗುತ್ತಿರುವುದಕ್ಕೆ ನೆಟ್ಟಿಗರಲ್ಲಿ ವಿದ್ಯುತ್​ಸಂಚಾರ ಆರಂಭವಾದಂತಿದೆ. ಕೆಲವರು ರೂ. 1,000 ನೋಟಿನ ಫೋಟೋ ಹಾಕಿ ಇದನ್ನು ಮರಳಿ ತನ್ನಿ ಎಂದಿದ್ದಾರೆ. ಒಬ್ಬರು ಹರಿದ ರೂ. 2,000 ನೋಟಿನ ಫೋಟೋ ಹಾಕಿ ಆರ್​.ಐ.ಪಿ ಎಂದಿದ್ಧಾರೆ. ಅಲ್ಲದೆ, ನೋಟು ಅಮಾನ್ಯೀಕರಣ ಬಂದಿತಲ್ಲ ಎಂದಿದ್ದಾರೆ.

ಇಂಥ ಐಡಿಯಾಗಳನ್ನು ಮೋದಿ ಅವರಿಗೆ ಯಾರು ಕೊಡುತ್ತಾರೆ? ಸ್ವತಃ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೋ ಏನೋ ಎಂದು ಅನೇಕರು ಕೇಳಿದ್ದಾರೆ. ರೂ. 2,000 ನೋಟು ಇಲ್ಲದವರೆಲ್ಲ ಹೀಗೆ ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಹಿಂದೀ ಸಿನೆಮಾದ ಹಾಡಿನ ವಿಡಿಯೋ ಕ್ಲಿಪ್ ಅಪ್​ಲೋಡ್ ಮಾಡಿದ್ದಾರೆ ಇನ್ನೊಬ್ಬರು.

ನಾನಂತೂ ಬಡವ, ಇದೆಲ್ಲದರಿಂದ ನನಗೇನು ಲಾಭವಾಗಲಿದೆ, ನನಗಿದು ಸಂಬಂಧವಿಲ್ಲ ಎಂದಿದ್ದಾರೆ ಮತ್ತೊಬ್ಬರು. ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಮನೆಗಳವರ ಬಳಿ ರೂ. 2,000 ನೋಟುಗಳು ಇರುವುದಿಲ್ಲ. ನಾನಂತೂ 2020 ರಿಂದ ಈ ನೋಟುಗಳನ್ನು ನೋಡಿಯೇ ಇಲ್ಲ ಎಂದಿದ್ದಾರೆ ಇನ್ನೂ ಒಬ್ಬರು. ಹೌದು ನಾ ಕೂಡ ಒಂದು ವರ್ಷದಿಂದ ಈ ನೋಟುಗಳನ್ನು ನೋಡಿಯೇ ಇಲ್ಲ ಎಂದಿದ್ದಾರೆ.

ಈ ವಿಷಯವಾಗಿ ನೀವೇನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 2:50 pm, Sat, 20 May 23

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು