AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾ ಬರದಿದ್ದರೆ ಶಾಲೆಯೇನು ಮುಚ್ಚಿ ಹೋಗುವುದಿಲ್ಲ’ ಉತ್ತರ ಪ್ರದೇಶದ ಬಾಲಕನ ರಜಾಚೀಟಿ ವೈರಲ್

Uttar Pradesh : ‘ಜ್ವರ ನನ್ನನ್ನು ಸುಡುತ್ತಿದೆ, ಮೂಗು ಒಂದೇ ಸಮ ಇಳಿಯುತ್ತಿದೆ, ನಾಲ್ಕು ದಿನ ರಜೆ ಕೊಡಿ ಸಾರ್’ ಬುಂದೇಲುಖಂಡದ ಈ ಪೋರನ ನೇರವಂತಿಕೆಗೆ ನೆಟ್ಟಿಗರು ಭಲೇ ಎನ್ನುತ್ತಿದ್ದಾರೆ.

‘ನಾ ಬರದಿದ್ದರೆ ಶಾಲೆಯೇನು ಮುಚ್ಚಿ ಹೋಗುವುದಿಲ್ಲ’ ಉತ್ತರ ಪ್ರದೇಶದ ಬಾಲಕನ ರಜಾಚೀಟಿ ವೈರಲ್
UP school student’s hilarious leave application leaves
TV9 Web
| Edited By: |

Updated on:Nov 09, 2022 | 6:32 PM

Share

Viral : ನಾವೆಲ್ಲರೂ ಚಿಕ್ಕಂದಿನಿಂದಲೂ ರಜಾಚೀಟಿಯನ್ನು ಬರೆಯುತ್ತ ಬಂದಿದ್ದೇವೆ. ನಮ್ಮ ನಮ್ಮ ತಿಳಿವಳಿಕೆಗೆ ತಕ್ಕಂತೆ ಬರೆಯುವ ಕ್ರಮ ಕೂಡ ಬದಲಾಗುತ್ತಾ ಬಂದಿದೆ. ಇದೀಗ ಉತ್ತರ ಪ್ರದೇಶದ ಶಾಲಾಬಾಲಕನೊಬ್ಬ ಬರೆದ ರಜಾಚೀಟಿ ವೈರಲ್ ಆಗುತ್ತಿದೆ. ಐಎಎಸ್ ಅಧಿಕಾರಿ ಅರ್ಪಿತ್ ವರ್ಮಾ ಈ ರಜಾ ಚೀಟಿಯನ್ನು ಟ್ವೀಟ್ ಮಾಡಿದ್ದಾರೆ. ಇದನ್ನು ಬರೆದ ವಿದ್ಯಾರ್ಥಿಯ ಹೆಸರು ಕಲುವಾ.

ತನಗೆ ಯಾಕೆ ರಜೆ ಬೇಕು ಮತ್ತು ತನ್ನ ಪರಿಸ್ಥಿತಿ ಏನು ಎಂಬುದನ್ನು ಈ ಚೀಟಿಯಲ್ಲಿ ಅವನು ವಿವರಿಸಿದ್ದಾನೆ. ಅವನು ಬರೆದ ರೀತಿ ಬಹಳ ಪ್ರಾಮಾಣಿಕ ಮತ್ತು ನೇರವಂತಿಕೆಯಿಂದ ಕೂಡಿದೆ. ‘ನಾನು ಜ್ವರ ಮತ್ತು ನೆಗಡಿಯಿಂದ ಬಳಲುತ್ತಿದ್ದೇನೆ. ಹಾಗಾಗಿ ನನಗೆ ನಾಲ್ಕು ದಿನಗಳ ರಜೆ ಬೇಕು. ನಾನು ಶಾಲೆಗೆ ಬರದಿದ್ದರೆ ಶಾಲೆ ಏನು ಮುಚ್ಚಿಹೋಗುವುದಿಲ್ಲ’ ಎನ್ನುವುದು ಈ ರಜಾಚೀಟಿಯ ಸಾರಾಂಶ.

10,000 ಜನರು ಈ ಪೋಸ್ಟ್​ ಅನ್ನು ಮೆಚ್ಚಿದ್ದಾರೆ. 1,200ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. ಕಲುವಾ ಹೇಳಿದ್ದು ಸರಿ ಇದೆ, ಯಾರು ಬರದಿದ್ದರೂ ಯಾವ ಶಾಲೆಯೂ ಮುಚ್ಚುವುದಿಲ್ಲ ಎಂದಿದ್ದಾರೆ ಒಬ್ಬರು. ನೀನೇ ಬುಂದೇಲಖಂಡದ ಮಗ ಎಂದರೆ! ಎಂದಿದ್ದಾರೆ ಮಗದೊಬ್ಬರು. ಉತ್ತರಪ್ರದೇಶವರು ಯಾವಾಗಲೂ ಹೀಗೇ ನೇರ ಎಂದಿದ್ದಾರೆ ಇನ್ನೊಬ್ಬರು.

ನೀವು ಎಂದಾದರೂ ಹೀಗೆ ರಜಾಚೀಟಿ ಬರೆದಿದ್ದ ನೆನಪಿದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:31 pm, Wed, 9 November 22

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ