‘ನಾ ಬರದಿದ್ದರೆ ಶಾಲೆಯೇನು ಮುಚ್ಚಿ ಹೋಗುವುದಿಲ್ಲ’ ಉತ್ತರ ಪ್ರದೇಶದ ಬಾಲಕನ ರಜಾಚೀಟಿ ವೈರಲ್

Uttar Pradesh : ‘ಜ್ವರ ನನ್ನನ್ನು ಸುಡುತ್ತಿದೆ, ಮೂಗು ಒಂದೇ ಸಮ ಇಳಿಯುತ್ತಿದೆ, ನಾಲ್ಕು ದಿನ ರಜೆ ಕೊಡಿ ಸಾರ್’ ಬುಂದೇಲುಖಂಡದ ಈ ಪೋರನ ನೇರವಂತಿಕೆಗೆ ನೆಟ್ಟಿಗರು ಭಲೇ ಎನ್ನುತ್ತಿದ್ದಾರೆ.

‘ನಾ ಬರದಿದ್ದರೆ ಶಾಲೆಯೇನು ಮುಚ್ಚಿ ಹೋಗುವುದಿಲ್ಲ’ ಉತ್ತರ ಪ್ರದೇಶದ ಬಾಲಕನ ರಜಾಚೀಟಿ ವೈರಲ್
UP school student’s hilarious leave application leaves
Follow us
| Updated By: ಶ್ರೀದೇವಿ ಕಳಸದ

Updated on:Nov 09, 2022 | 6:32 PM

Viral : ನಾವೆಲ್ಲರೂ ಚಿಕ್ಕಂದಿನಿಂದಲೂ ರಜಾಚೀಟಿಯನ್ನು ಬರೆಯುತ್ತ ಬಂದಿದ್ದೇವೆ. ನಮ್ಮ ನಮ್ಮ ತಿಳಿವಳಿಕೆಗೆ ತಕ್ಕಂತೆ ಬರೆಯುವ ಕ್ರಮ ಕೂಡ ಬದಲಾಗುತ್ತಾ ಬಂದಿದೆ. ಇದೀಗ ಉತ್ತರ ಪ್ರದೇಶದ ಶಾಲಾಬಾಲಕನೊಬ್ಬ ಬರೆದ ರಜಾಚೀಟಿ ವೈರಲ್ ಆಗುತ್ತಿದೆ. ಐಎಎಸ್ ಅಧಿಕಾರಿ ಅರ್ಪಿತ್ ವರ್ಮಾ ಈ ರಜಾ ಚೀಟಿಯನ್ನು ಟ್ವೀಟ್ ಮಾಡಿದ್ದಾರೆ. ಇದನ್ನು ಬರೆದ ವಿದ್ಯಾರ್ಥಿಯ ಹೆಸರು ಕಲುವಾ.

ತನಗೆ ಯಾಕೆ ರಜೆ ಬೇಕು ಮತ್ತು ತನ್ನ ಪರಿಸ್ಥಿತಿ ಏನು ಎಂಬುದನ್ನು ಈ ಚೀಟಿಯಲ್ಲಿ ಅವನು ವಿವರಿಸಿದ್ದಾನೆ. ಅವನು ಬರೆದ ರೀತಿ ಬಹಳ ಪ್ರಾಮಾಣಿಕ ಮತ್ತು ನೇರವಂತಿಕೆಯಿಂದ ಕೂಡಿದೆ. ‘ನಾನು ಜ್ವರ ಮತ್ತು ನೆಗಡಿಯಿಂದ ಬಳಲುತ್ತಿದ್ದೇನೆ. ಹಾಗಾಗಿ ನನಗೆ ನಾಲ್ಕು ದಿನಗಳ ರಜೆ ಬೇಕು. ನಾನು ಶಾಲೆಗೆ ಬರದಿದ್ದರೆ ಶಾಲೆ ಏನು ಮುಚ್ಚಿಹೋಗುವುದಿಲ್ಲ’ ಎನ್ನುವುದು ಈ ರಜಾಚೀಟಿಯ ಸಾರಾಂಶ.

10,000 ಜನರು ಈ ಪೋಸ್ಟ್​ ಅನ್ನು ಮೆಚ್ಚಿದ್ದಾರೆ. 1,200ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. ಕಲುವಾ ಹೇಳಿದ್ದು ಸರಿ ಇದೆ, ಯಾರು ಬರದಿದ್ದರೂ ಯಾವ ಶಾಲೆಯೂ ಮುಚ್ಚುವುದಿಲ್ಲ ಎಂದಿದ್ದಾರೆ ಒಬ್ಬರು. ನೀನೇ ಬುಂದೇಲಖಂಡದ ಮಗ ಎಂದರೆ! ಎಂದಿದ್ದಾರೆ ಮಗದೊಬ್ಬರು. ಉತ್ತರಪ್ರದೇಶವರು ಯಾವಾಗಲೂ ಹೀಗೇ ನೇರ ಎಂದಿದ್ದಾರೆ ಇನ್ನೊಬ್ಬರು.

ನೀವು ಎಂದಾದರೂ ಹೀಗೆ ರಜಾಚೀಟಿ ಬರೆದಿದ್ದ ನೆನಪಿದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:31 pm, Wed, 9 November 22

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ