ಡ್ರೀಮ್ 11 ನಲ್ಲಿ 39 ರೂ ಹೂಡಿಕೆ,ಯುವಕನಿಗೆ ಬಂತು ನೋಡಿ ನಾಲ್ಕು ಕೋಟಿ
ಅದೃಷ್ಟ ಹೇಗೆ ಯಾವಾಗ ಬದಲಾಗುತ್ತದೆ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತರಾಗಿರುವ ವ್ಯಕ್ತಿಗಳ ಬಗೆಗಿನ ಸ್ಟೋರಿಗಳನ್ನು ನೀವು ಕೇಳಿರಬಹುದು. ಇದೀಗ ಇಲ್ಲೊಬ್ಬ ಬಡ ಹಾಗೂ ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಯುವಕನೊಬ್ಬನು ಡ್ರೀಮ್ 11 ನಲ್ಲಿ 39 ರೂಪಾಯಿ ಹೂಡಿಕೆ ಮಾಡಿ ನಾಲ್ಕು ಕೋಟಿ ರೂಪಾಯಿ ಗೆದ್ದಿದ್ದಾನೆ. ಹಾಗಾದ್ರೆ ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಉತ್ತರ ಪ್ರದೇಶ ಮೇ 5: ಬಡವ ಶ್ರೀಮಂತ (rich) ನಾಗಬಾರದು ಎಂದೇನಿಲ್ಲ. ಹೌದು ಅದೃಷ್ಟವು ಕೈ ಹಿಡಿದರೆ ರಾತ್ರಿ ಬೆಳೆಗಾಗುವುದರೊಳಗೆ ಎಲ್ಲವೂ ಬದಲಾಗಿಬಿಡಬಹುದು. ಇದಕ್ಕೆ ಉದಾಹರಣೆ ಎನ್ನುವಂತಿದೆ ಈ ಘಟನೆ. ಹೌದು, ಉತ್ತರ ಪ್ರದೇಶ (uttara pradesh)ದ ಕೌಶಾಂಬಿ ಜಿಲ್ಲೆ (kaushambi district) ಯ ಯುವಕ ಮಂಗಳ್ ಸರೋಜ್ (mangal saroj) ಡ್ರೀಮ್ 11 ನಲ್ಲಿ 39 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ 4 ಕೋಟಿ ಈತನ ಕೈ ಸೇರಿದೆ. ಹಾಗಾದ್ರೆ ಈ ಯುವಕನಿಗೆ ಅದೃಷ್ಟ ಒಲಿದದ್ದು ಹೇಗೆ? ಅಷ್ಟೊಂದು ಮೊತ್ತವು ಈತನ ಕೈಸೇರಿದ್ದು ಹೇಗೆ? ಎನ್ನುವ ಮಾಹಿತಿ ಇಲ್ಲಿದೆ.
ಹೌದು, ಮಂಗಳ್ ಸರೋಜ್ ಕಳೆದ ಮಾರ್ಚ್ ತಿಂಗಳಿನಿಂದ ಡ್ರೀಮ್ 11 ನಲ್ಲಿ ಆಟ ಆಡಲು ಪ್ರಾರಂಭಿಸಿದ್ದು, ಇದುವೇ ತನ್ನ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ತಿಳಿದಿರಲಿಲ್ಲ. 77 ಬಾರಿ ತಂಡ ರಚಿಸಿದ್ದರೂ ಪ್ರತಿ ಬಾರಿಯೂ ಸೋಲನ್ನು ಅನುಭವಿಸಿದ್ದರು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮರಳಿ ಯತ್ನ ಮಾಡು ಎನ್ನುವಂತೆ ತಂಡ ರಚಿಸುತ್ತಲೆ ಇದ್ದು, 78 ನೇ ಬಾರಿ ಈ ಯುವಕನಿಗೆ ಅದೃಷ್ಟ ಒಲಿದಿದೆ. ಅಂದಹಾಗೆ, ಕಳೆದ ಏಪ್ರಿಲ್ 29 ರಂದು ಚೆನ್ನೈ ಮತ್ತು ಪಂಜಾಬ್ ನಡುವಿನ ಐಪಿಎಲ್ ಪಂದ್ಯದಲ್ಲಿ ಸರಿಸುಮಾರು 39 ಖರ್ಚು ಮಾಡಿ ತಂಡ ರಚಿಸಿದ್ದು, ಇವರ ಬದುಕಿನ ದಿಕ್ಕೇ ಬದಲಾಗಲು ಇದುವೇ ಕಾರಣವಾಗಿದೆ. ಬೆಳ್ಳಂಬೆಳಗ್ಗೆ ಫಲಿತಾಂಶ ನೋಡಿದಾಗ ಡ್ರೀಮ್ 11 ನ 4 ಕೋಟಿ ಗೆದ್ದುಕೊಂಡು ಕೋಟಿ ಒಡೆಯನಾಗಿರುವುದು ತಿಳಿದಿದೆ. ರಾತ್ರಿ ಬೆಳಗಾಗುವುದರೊಳಗಾಗಿ ಇಡೀ ಗ್ರಾಮವೇ ಈ ಯುವಕನ ಸಾಧನೆಗೆ ಮೆಚ್ಚಿಕೊಳ್ಳವಂತಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Uttar Pradesh: Mangal Saroj of Kaushambi district invested Rs 39 and won Rs 4 crore on Dream 11. pic.twitter.com/l1eQn1j7UV
— Ghar Ke Kalesh (@gharkekalesh) May 5, 2025
ಮಂಗಳ್ ಸರೋಜ್ ಈ ಬಗ್ಗೆ ಮಾತನಾಡಿರುವ ವಿಡಿಯೋವನ್ನು Ghar Ke Kalesh ಹೆಸರಿನ ವಿಡಿಯೋದಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ತಾವು ಡ್ರೀಮ್ 11 ನಲ್ಲಿ ಹೂಡಿಕೆ ಮಾಡಿರುವುದರ ಬಗ್ಗೆ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಐಪಿಎಲ್ ಆರಂಭದಿಂದಲೂ ಡ್ರೀಮ್ 11 ನಲ್ಲಿ ಹಣಹಾಕಿದ್ದೆ. ಪ್ರಾರಂಭದಲ್ಲಿ ಒಂದೇ ಒಂದು ರೂಪಾಯಿ ಬಂದಿರಲಿಲ್ಲ. ಆದರೆ, ಪಂಜಾಬ್ ಹಾಗೂ ಚೆನ್ನೈ ನಡುವಿನ ಪಂದ್ಯದಲ್ಲಿ ಹಣ ಹೂಡಿಕೆ ಮಾಡಿದ್ದು ನಾಲ್ಕು ಕೋಟಿ ರೂಪಾಯಿ ಬಂದಿದೆ. ಈ ಹಣದಲ್ಲಿ ಉತ್ತಮ ವ್ಯಾಪಾರ ಮಾಡ್ತೀನಿ ಎಂದು ಹೇಳಿರುವುದನ್ನು ನೋಡಬಹುದು.
ಇದನ್ನೂ ಓದಿ : ಕುದುರೆ ಮೇಲೇರಿ ಮದುವೆ ಮಂಟಪಕ್ಕೆ ಬಂದ ವರನಿಗೆ ಮಳೆಯಿಂದ ಸ್ವಾಗತ, ವಿಡಿಯೋ ವೈರಲ್
ಈ ವಿಡಿಯೋವೊಂದು ಏಳು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೂ ರೈತ ಕುಟುಂಬದ ಯುವಕನಿಗೆ ಒಲಿದ ಅದೃಷ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು , ‘ಬದುಕು ಎಂದರೇನೇ ಹೀಗೆ, ಸಣ್ಣ ಆಟವು ಬದುಕಿನ ದಿಕ್ಕನ್ನು ದೊಡ್ಡ ರೀತಿಯಲ್ಲಿಯೇ ಬದಲಾಯಿಸುತ್ತದೆ’ ಎಂದಿದ್ದಾರೆ. ಇನ್ನೊಬ್ಬರು, ‘ನನಗೆ ಕ್ರಿಕೆಟ್ ಗೆ ಸಂಬಂಧ ಪಟ್ಟ ಆಪ್ ಗಳ ಬಳಕೆಯ ಬಗ್ಗೆ ಗೊತ್ತಿಲ್ಲ, ಆದರೆ ಈ ಆಪ್ ಗಳು ಅನೇಕರ ಬದುಕನ್ನೇ ಬದಲಾಯಿಸಿದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ‘ಇವನು ನಿಜಕ್ಕೂ ಅದೃಷ್ಟವಂತ ವ್ಯಕ್ತಿ’ ಎಂದಿದ್ದಾರೆ. ಕೆಲವರು ಈ ಯುವಕನ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ