AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಭಸದ ಮಳೆಯಲ್ಲಿಯೂ ಛತ್ರಿ ಹಿಡಿದು ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಬೆಂಬಲಕ್ಕೆ ನಿಂತ ಶ್ವಾನಗಳು; ಹೃದಯಸ್ಪರ್ಶಿ ಫೋಟೋವಿದು

Viral Photo: ಚಿತ್ರದಲ್ಲಿ ಗಮನಿಸುವಂತೆ ಕೊಲ್ಕತ್ತಾದಲ್ಲಿ ಜೋರಾದ ಮಳೆ ಸುರಿಯುತ್ತಿದೆ. ಆ ಮಳೆಯಲ್ಲಿ ಛತ್ರಿ ಹಿಡಿದ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅವರಿಗೆ ಬೆಂಬಲಿಗರಾಗಿ ಶ್ವಾನಗಳು ಅವರ ಬಳಿಯೇ ನಿಂತಿವೆ. ಮಳೆಯಲ್ಲಿ ನೆನೆಯುತ್ತಾ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಸಹಾಯ ಮಾಡುತ್ತಿವೆ.

ರಭಸದ ಮಳೆಯಲ್ಲಿಯೂ ಛತ್ರಿ ಹಿಡಿದು ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಬೆಂಬಲಕ್ಕೆ ನಿಂತ ಶ್ವಾನಗಳು; ಹೃದಯಸ್ಪರ್ಶಿ ಫೋಟೋವಿದು
TV9 Web
| Edited By: |

Updated on: Sep 22, 2021 | 12:33 PM

Share

ಜೋರಾಗಿ ಮಳೆ ಸುರಿಯಲು ಆರಂಭಿಸುತ್ತಿದೆ ಅಂತಾದ್ರೆ ಆಶ್ರಯ ಹುಡುಕಲು ಓಡುತ್ತೇವೆ. ಆದರೆ ಕೊಲ್ಕತ್ತಾ ಪೊಲೀಸ್ ಹಂಚಿಕೊಂಡ ಒಂದು ಚಿತ್ರ ಹೃದಯಸ್ಪರ್ಶಿಯಾಗಿದೆ. ಮಳೆಯನ್ನೂ ಲೆಕ್ಕಿಸದೇ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸುತ್ತಿರುವ ಟ್ರಾಫಿಕ್ ಪೊಲೀಸ್​ಗೆ ಸಹಾಯಕರಾಗಿ ಶ್ವಾನಗಳು ನಿಂತಿವೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಚಿತ್ರದಲ್ಲಿ ಗಮನಿಸುವಂತೆ ಕೊಲ್ಕತ್ತಾದಲ್ಲಿ ಜೋರಾದ ಮಳೆ ಸುರಿಯುತ್ತಿದೆ. ಆ ಮಳೆಯಲ್ಲಿ ಛತ್ರಿ ಹಿಡಿದ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅವರು ಟ್ರಾಫಿಕ್ ಪೊಲೀಸ್ ಕಾನ್​ಸ್ಟೇಬಲ್​ ತರುಣ್ ಕುಮಾರ್ ಮಂಡಲ್ ಎಂದು ಗುರುತಿಸಲಾಗಿದೆ. ವಾಹನಗಳಿಗೆ ನಿಲ್ಲುವಂತೆ ಕೈ ತೋರಿಸಿ ಸಿಗ್ನಲ್ ಮಾಡುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದು. ಅವರಿಗೆ ಬೆಂಬಲಿಗರಾಗಿ ಶ್ವಾನಗಳು ಅವರ ಬಳಿಯೇ ನಿಂತಿವೆ. ಮಳೆಯಲ್ಲಿ ನೆನೆಯುತ್ತಾ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಸಹಾಯ ಮಾಡುತ್ತಿವೆ.

ಕೊಲ್ಕತ್ತಾ ಪೊಲೀಸ್ ಈ ಹೃದಯಸ್ಪರ್ಶಿ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸಾಕು ಪ್ರಾಣಿಯಾದ ನಾಯಿ ನಿಷ್ಠೆಯಿಂದ ಕೆಲಸ ನಿರ್ವಹಿಸುವಲ್ಲಿ ಹೆಸರು ಗಿಟ್ಟಿಸಿಕೊಂಡ ಪ್ರಾಣಿ. ನಾವು ಎಷ್ಟು ಪ್ರೀತಿ ತೋರುತ್ತೇವೆಯೋ ಅಷ್ಟೇ ನಮ್ಮ ರಕ್ಷಕನಾಗಿ ನಿಲ್ಲುತ್ತದೆ. ಮನುಷ್ಯರ ಒಡನಾಡಿ ಜೀವಿಯಾದ ಶ್ವಾನಗಳ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ:

Viral Photo: ಒಂದು ಕೈಲಿ ಗನ್, ಮತ್ತೊಂದು ಕೈಲಿ ಐಸ್​ಕ್ರೀಮ್; ಕಾಬೂಲ್​ನಲ್ಲಿರುವ ತಾಲಿಬಾನ್ ಉಗ್ರರ ಫೋಟೋ ವೈರಲ್

Viral Photo: ಕಾರಿನ ಕಿಟಕಿಯಿಂದ ಎಕೆ-47 ತೋರಿಸಿದ ಯುವತಿ; ಆಮೇಲೆ ಆಗಿದ್ದೇನು?

(Viral Photo Dogs standing in support of Kolkata traffic police holding umbrellas in heavy rain heartwarming photo)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ