AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೆರಳಿದ ಆನೆಯಿಂದ ಸಫಾರಿ ಜೀಪ್ ಮೇಲೆ ದಾಳಿ; ಕಂಗಾಲಾಗಿ ಓಡಿದ ಪ್ರವಾಸಿಗರು

ಆನೆಯ ದಾಳಿಯಿಂದ ಕಂಗಾಲಾದ ಪ್ರವಾಸಿಗರು ವಾಹನದಿಂದ ಜಿಗಿದು ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ.

Viral Video: ಕೆರಳಿದ ಆನೆಯಿಂದ ಸಫಾರಿ ಜೀಪ್ ಮೇಲೆ ದಾಳಿ; ಕಂಗಾಲಾಗಿ ಓಡಿದ ಪ್ರವಾಸಿಗರು
ಸಫಾರಿ ವಾಹನದ ಮೇಲೆ ಆನೆಯ ದಾಳಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 03, 2021 | 6:48 PM

ಸಫಾರಿಗೆ ಹೋಗಿ ಹುಲಿ, ಸಿಂಹ, ಆನೆಗಳನ್ನು ಎಂದಾದರೂ ಹತ್ತಿರದಿಂದ ನೋಡಿದ್ದೀರಾ? ಕಣ್ಣೆದುರು ಕ್ರೂರ ಪ್ರಾಣಿಗಳು ಕಾಡಿನಲ್ಲಿ ಓಡಾಡುತ್ತಿದ್ದಾಗಲೇ ಸಫಾರಿಗೆ ಹೋದ ಅರ್ಧಕ್ಕರ್ಧ ಜನರ ಹೃದಯಬಡಿತ ಹೆಚ್ಚಾಗಿರುತ್ತದೆ. ಇನ್ನೇನಾದರೂ ಆ ಪ್ರಾಣಿಗಳು ಕೈಗೆಟುಕುವಷ್ಟು ಹತ್ತಿರ ಬಂದು ನಮ್ಮ ಮೇಲೆ ದಾಳಿ ಮಾಡಿದರೆ ಆಗಿನ ಪರಿಸ್ಥಿತಿ ಹೇಗಿರಬಹುದು? ದಕ್ಷಿಣ ಆಫ್ರಿಕಾದ ಸೆಲಾಟಿ ಗೇಮ್ ರಿಸರ್ವ್‌ ಫಾರೆಸ್ಟ್​ನಲ್ಲಿ ಕೆರಳಿದ ಆನೆಯೊಂದು ಸಫಾರಿ ವಾಹನದ ಮೇಲೆ ದಾಳಿ ಮಾಡಿ ಅದರಲ್ಲಿದ್ದ ಪ್ರಯಾಣಿಕರನ್ನು ಓಡಿ ಹೋಗುವಂತೆ ಮಾಡಿರುವ ವಿಡಿಯೋ ಬೆಚ್ಚಿ ಬೀಳಿಸುವಂತಿದೆ.

ಆನೆಯ ದಾಳಿಯಿಂದ ಕಂಗಾಲಾದ ಪ್ರವಾಸಿಗರು ವಾಹನದಿಂದ ಜಿಗಿದು ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಪ್ರವಾಸಿಗರನ್ನು ಹೊತ್ತ ಸಫಾರಿ ವಾಹನದಲ್ಲಿ ಗೈಡ್ ಕೂಡ ಇದ್ದರು. ಎಲ್ಲರೂ ಸಫಾರಿಯನ್ನು ಎಂಜಾಯ್ ಮಾಡುತ್ತಾ, ಕೇಕೆ ಹಾಕುತ್ತಾ ಹೋಗುತ್ತಿದ್ದಾಗ ಮರಗಳ ಹಿಂದಿನಿಂದ ಓಡಿಬಂದ ಆನೆಯೊಂದು ಸಫಾರಿ ವಾಹನವನ್ನು ತನ್ನ ಸೊಂಡಿಲಿನಿಂದ ತಳ್ಳಿ ದಾಳಿ ಮಾಡಿದೆ. ಇದರಿಂದ ಕಂಗಾಲಾದ ಪ್ರವಾಸಿಗರು ದಿಕ್ಕೆಟ್ಟು ಓಡಿದ್ದಾರೆ.

ಆಕ್ರಮಣಕಾರಿ ಆನೆಯ ದಾಳಿಯಿಂದ ಹೆದರಿ ಟ್ರೈನಿ ಗೈಡ್‌ಗಳು ಕೂಡ ಓಡಿಹೋಗಿದ್ದಾರೆ. ಈ ವೇಳೆ ಪ್ರವಾಸಿಗರಲ್ಲೊಬ್ಬರು ಆ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಲಕ್ಷಾಂತರ ಜನರು ಫೇಸ್​ಬುಕ್ ಮತ್ತು ಟ್ವಿಟ್ಟರ್​ನಲ್ಲಿ ವೀಕ್ಷಿಸಿದ್ದಾರೆ.

ಸಾಮಾನ್ಯವಾಗಿ ಗಂಡಾನೆಗಳು ಸಂಭೋಗದ ಅವಧಿಯಲ್ಲಿ ಈ ರೀತಿ ಆಕ್ರಮಣಕಾರಿಯಾಗಿರುತ್ತವೆ. ಹೆಣ್ಣಾನೆಯೊಂದಿಗೆ ಲೈಂಗಿಕ ಆಕರ್ಷಣೆಯಲ್ಲಿರುವ ಗಂಡಾನೆಗಳು ಆ ಸಂದರ್ಭದಲ್ಲಿ ಮನುಷ್ಯರು ಮತ್ತು ಇತರ ಆನೆಗಳನ್ನು ಕಂಡರೆ ಅತ್ಯಂತ ಆಕ್ರಮಣಕಾರಿ ಮತ್ತು ಹಿಂಸಾತ್ಮಕವಾಗಿ ವರ್ತಿಸುತ್ತವೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ಸರ್ಕಾರಿ ಕಚೇರಿಗೆ ನುಗ್ಗಿದ ಮೇಕೆ ಫೈಲ್ ಕಚ್ಚಿಕೊಂಡು ಪರಾರಿ; ಬೆನ್ನತ್ತಿ ಓಡಿದ ಸಿಬ್ಬಂದಿಯ ವಿಡಿಯೋ ವೈರಲ್

ಕೈ ತುಂಬ ಸಂಬಳ ಕೊಟ್ಟರೂ ಲಂಚ ತಗೊಂಡು ನಾಯಿ ಹಾಗೆ ಬಿದ್ದಿರುತ್ತಾರೆ; ಪೊಲೀಸರ ವಿರುದ್ಧ ಕೂಗಾಡಿದ ಆರಗ ಜ್ಞಾನೇಂದ್ರ

KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ
ಸಮಾಜದಲ್ಲಿ ಈ ರಾಶಿಯವರ ಗೌರವ ಹೆಚ್ಚಾಗುತ್ತದೆ, ಸಹೋದ್ಯೋಗಿಗಳ ಬೆಂಬಲ
ಸಮಾಜದಲ್ಲಿ ಈ ರಾಶಿಯವರ ಗೌರವ ಹೆಚ್ಚಾಗುತ್ತದೆ, ಸಹೋದ್ಯೋಗಿಗಳ ಬೆಂಬಲ
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ