AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಿಸ್ ಯು ಅಮ್ಮ ಎಂದು ಹೂವಿನ ಜತೆ ಬಂದ ಮಗನಿಗೆ ಚಪ್ಪಲಿಯಲ್ಲಿ ಹೊಡೆದ ಅಮ್ಮ; ಅಚ್ಚರಿಗೊಂಡ ನೆಟ್ಟಿಗರು!

ಈ ವಿಡಿಯೋ 130 ಮಿಲಿಯನ್ ವ್ಯೂವ್ಸ್ ಪಡೆದಿದ್ದು, 5.9 ಮಿಲಿಯನ್ ಲೈಕ್‌ಗಳೊಂದಿಗೆ ವೈರಲ್ ಆಗಿದೆ. ಸ್ಟಿಲ್ ಫಾಲಿಂಗ್ ಫಾರ್ ಯೂ ಹಾಡಿನೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಅನ್ವರ್ ಎಂಬ ವ್ಯಕ್ತಿ ವಿಮಾನ ನಿಲ್ದಾಣದ ಮುಖ್ಯದ್ವಾರದ ಗೇಟ್‌ನತ್ತ ನಡೆದುಕೊಂಡು ಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

Viral Video: ಮಿಸ್ ಯು ಅಮ್ಮ ಎಂದು ಹೂವಿನ ಜತೆ ಬಂದ ಮಗನಿಗೆ ಚಪ್ಪಲಿಯಲ್ಲಿ ಹೊಡೆದ ಅಮ್ಮ; ಅಚ್ಚರಿಗೊಂಡ ನೆಟ್ಟಿಗರು!
ಚಪ್ಪಲಿ ತೆಗೆದು ಮಗನಿಗೆ ಥಳಿಸಿದ ತಾಯಿ
TV9 Web
| Edited By: |

Updated on: Dec 03, 2021 | 3:43 PM

Share

ವಿಮಾನ ನಿಲ್ದಾಣದಲ್ಲಿ ತನ್ನ ತಾಯಿಯನ್ನು ಬರಮಾಡಿಕೊಳ್ಳಲು ಮಗ ಹೂವಿನ ಗುಚ್ಛ ಮತ್ತು ಮಿಸ್ ಯು ಅಮ್ಮ ಎಂದು ಬರೆದಿರುವ ಬೋರ್ಡ್ ಹಿಡಿದು ಕಾಯುತ್ತಿದ್ದ. ಆದರೆ ಇದನ್ನು ನೋಡಿದ ತಾಯಿ (Mother) ಮಗನನ್ನು ತಬ್ಬಿ ಮುದ್ದಾಡುವ ಬದಲು ಚಪ್ಪಲಿ ತೆಗೆದು ಅಲ್ಲಿಯೇ ಹೊಡೆದಿದ್ದಾರೆ. ಸದ್ಯ ಮಗನನ್ನು ತಾಯಿ ಚಪ್ಪಲಿಯಿಂದ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (video viral) ಆಗಿದೆ. ಅನ್ವರ್ ಜಿಬಾವಿ ಎಂಬ ವ್ಯಕ್ತಿ ನನ್ನ ತಾಯಿ ವಾಪಾಸ್ ಆಗಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ 130 ಮಿಲಿಯನ್ ವ್ಯೂವ್ಸ್ ಪಡೆದಿದ್ದು, 5.9 ಮಿಲಿಯನ್ ಲೈಕ್‌ಗಳೊಂದಿಗೆ ವೈರಲ್ ಆಗಿದೆ. ಸ್ಟಿಲ್ ಫಾಲಿಂಗ್ ಫಾರ್ ಯೂ ಹಾಡಿನೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಅನ್ವರ್ ಎಂಬ ವ್ಯಕ್ತಿ ವಿಮಾನ ನಿಲ್ದಾಣದ ಮುಖ್ಯದ್ವಾರದ ಗೇಟ್‌ನತ್ತ ನಡೆದುಕೊಂಡು ಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ಮಿಸ್ ಯು ಅಮ್ಮ ಎಂಬ ಬೋರ್ಡ್ ಮತ್ತು ಹೂವಿನ ಗುಚ್ಛವನ್ನು ಹಿಡಿದಿರುವುದನ್ನು ಸಹ ಈ ವಿಡಿಯೋದಲ್ಲಿ ಕಾಣಬಹುದು. ಆದರೆ ಅನ್ವರ್‌ನ ತಾಯಿ ವಿಮಾನ ನಿಲ್ದಾಣದ ನಿರ್ಗಮನದ ಬಾಗಿಲಿನಿಂದ ಬಂದ ತಕ್ಷಣ ಚಪ್ಪಲಿ ತೆಗೆದು ಮಗನಿಗೆ ಥಳಿಸಿದ್ದಾರೆ. ಅಮ್ಮ ಪ್ರೀತಿಯಿಂದ ಹೊಡೆಯುವಾಗ ಮಗ ಜೊರಾಗಿ ನಗುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.

View this post on Instagram

A post shared by Anwar Jibawi (@anwar)

ನೆಟ್ಟಿಗರು ಈ ವಿಡಿಯೋ ಕಂಡು ಉನ್ಮಾದಗೊಂಡಿದ್ದಾರೆ. ಅಲ್ಲದೇ ನಗುವ ಎಮೋಜಿಗಳೊಂದಿಗೆ ಕಾಮೆಂಟ್‌ ಮಾಡಿದ್ದಾರೆ. ಅಮ್ಮನ ಪ್ರೀತಿ ವ್ಯಕ್ತಪಡಿಸಲು ಪರಿಪೂರ್ಣವಾದ ಮಾರ್ಗ ಇದೇ ಎಂದು ಒಬ್ಬರು ಕಮೆಂಟ್ ಮಾಡಿದರೆ. ಮತ್ತೊಬ್ಬರು ಹೀಗೆ ನೋಡಲು ಖುಷಿಯಾಗುತ್ತದೆ ಮಗನೆ ಎಂದು ಕಮೆಂಟ್​ ಮಾಡಿದ್ದಾರೆ. ಒಟ್ಟಾರೆ ಕಮೆಂಟ್​ಗಳ ಮಹಾಪುರವೇ ಈ ವಿಡಿಯೋಗೆ ಹರಿದು ಬಂದಿದೆ.

ಇದನ್ನೂ ಓದಿ: Viral Video: ಹೇರ್ ಡ್ರೈಯರ್ ಬದಲು ಕುಕ್ಕರ್​ ಬಳಸಿದ ಯುವಕ; ಅಪರೂಪದ ವಿಡಿಯೋ ನೋಡಿ ಅಚ್ಚರಿಗೊಂಡ ನೆಟ್ಟಿಗರು!

Viral Video: ಕೆಟ್ಟು ನಿಂತ ವಿಮಾನವನ್ನು ರನ್​ವೇಯತ್ತ ತಳ್ಳಿದ ಪ್ರಯಾಣಿಕರು; ವಿಡಿಯೋ ನೋಡಿ

Follow Us
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್