Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇ ಬೆಕ್ಕೇಶ್ವರಿ, ಮೊಬೈಲ್​ ಟವರ್​ ಏರುವಂಥ ಸೆಳೆತ ಅಲ್ಲೇನಿತ್ತು?

Cat Rescue : ಟವರ್​ನ ತುತ್ತತುದಿಯಲ್ಲಿ ಕುಳಿತ ಬೆಕ್ಕನ್ನು ರಕ್ಷಿಸುವುದು ಈ ತಂಡಕ್ಕೆ ಸುಲಭವಾಗಿರಲಿಲ್ಲ. ಈ ವಿಡಿಯೋ ನೋಡಿ ಕಾರಣ ಗೊತ್ತಾಗುತ್ತದೆ.

ಹೇ ಬೆಕ್ಕೇಶ್ವರಿ, ಮೊಬೈಲ್​ ಟವರ್​ ಏರುವಂಥ ಸೆಳೆತ ಅಲ್ಲೇನಿತ್ತು?
ಮೊಬೈಲ್​ ಟವರ್ ಏರಿ ಕುಳಿತ ಬೆಕ್ಕನ್ನು ರಕ್ಷಿಸಿದಾಗ...
Follow us
ಶ್ರೀದೇವಿ ಕಳಸದ
|

Updated on:May 10, 2023 | 11:51 AM

Viral Video : ಮನುಷ್ಯರು ಕಟ್ಟಡಗಳನ್ನು, ಕಂಬಗಳನ್ನು, ಗೋಪುರಗಳನ್ನು, ಮರಗಳನ್ನು ಏರಿ ಪ್ರತಿಭಟನೆಗೆ ತೊಡಗಿರುವುದನ್ನು ನೋಡಿದ್ದೇವೆ. ಆದರೆ ಬೆಂಗಳೂರಿನಲ್ಲಿ ಬೆಕ್ಕೊಂದು ಮೊಬೈಲ್​ ಗೋಪುರ ಏರಿ ಕುಳಿತಿದೆ. ಎಲ್ಲ ಬಿಟ್ಟು ಇದನ್ನು ಏರಿ ಕುಳಿತಿದ್ದು ಯಾಕೆ ಮತ್ತು ಹೇಗೆ? ಅದರಲ್ಲೂ ಇಷ್ಟೊಂದು ಯಂತ್ರ ಮತ್ತು ವಯರುಗಳ ಕೊಂಪೆಯೊಳಗೆ ನುಗ್ಗಿ ತುತ್ತತುದಿಗೆ ಕುಳಿತುಕೊಳ್ಳಬೇಕೆಂದರೆ! ಮುಂದೇನಾಯಿತು ಈ ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by CARE (@charliesanimalrescuecentre)

ಬೆಂಗಳೂರಿನ ಈ ಬೆಕ್ಕೊಂದು ಹೀಗೆ ಮೊಬೈಲ್​ ಟವರ್ ಏರಿ ಕುಳಿತಾಗ ಏನು ಮಾಡಬೇಕೆಂದು ತೋಚದೆ ಮನೆಯವರು ಕಂಗಾಲಾಗಿದ್ದಾರೆ. ಹಕ್ಕಿ ಹಿಡಿಯಲು ಅಲ್ಲಿಗೆ ಹೋಯಿತೋ, ಅಥವಾ ಇನ್ನೇನು ಅದನ್ನು ಆಕರ್ಷಿಸಿತೋ. ಅಂತೂ ಚಾರ್ಲೀಸ್​ ಅನಿಮಲ್​ ರೆಸ್ಕ್ಯೂ ಸೆಂಟರ್​ಗೆ ಕರೆ ಹೋಗುತ್ತಿದ್ದಂತೆ ಮೊಬೈಲ್​ ಟವರ್​ ಬಳಿ ಅವರ ತಂಡ ಬಂದಿಳಿದಿದೆ.

ಇದನ್ನೂ ಓದಿ : ಮೊಬೈಲ್​ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪ್ರೇ; ವಿಡಿಯೋ ವೈರಲ್

ಟವರ್​ನ ತುತ್ತತುದಿಯಲ್ಲಿ ಕುಳಿತ ಬೆಕ್ಕನ್ನು ರಕ್ಷಿಸುವುದು ಸುಲಭಸಾಧ್ಯವಾಗಿರಲಿಲ್ಲ. ಬೆಕ್ಕು ಗಾಬರಿಯಿಂದ ಕೆಳಕ್ಕೆ ನೆಗೆಯುವ ಸಾಧ್ಯತೆ ಇರುತ್ತದೆ. ತನ್ನೆಡೆ ಬರುತ್ತಿರುವ ಮನುಷ್ಯರು ತನ್ನನ್ನು ರಕ್ಷಿಸಲು ಬರುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವಷ್ಟು ವ್ಯವಧಾನ ಹೆಚ್ಚಿನ ಪಾಲು ಪ್ರಾಣಿಗಳಿಗೆ ಇರಲಾರದು. ಆದರೆ ಈ ಪ್ರಕರಣದಲ್ಲಿ ಹಾಗಾಗದಂತೆ ತಂಡ ಎಚ್ಚರವಹಿಸಿದೆ.

ಇದನ್ನೂ ಓದಿ : ಲಿಪ್​ಸ್ಟಿಕ್​ ಓಕೆ ಬ್ಯಾಂಡ್​ಏಡ್​ಗೆಲ್ಲ ಏಕೆ? ನೆಟ್ಟಿಗರಲ್ಲಿ ಭಾರೀ ಚರ್ಚೆ

ಅತೀ ಸವಾಲಿನಿಂದ ಕೂಡಿದ ಈ ರಕ್ಷಣೆಯನ್ನು ತಂಡ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿದೆ. ಜಾಳಿಗೆಯಲ್ಲಿ ಬೆಕ್ಕನ್ನು ಇಳಿಸಿಕೊಂಡ ನಂತರ ಬೆಕ್ಕನ್ನು ಮರಳಿ ಪೋಷಕರ ಮಡಿಲಿಗೆ ಸೇರಿಸಲಾಗಿದೆ. ಇನ್​ಸ್ಟಾನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ಅನೇಕರು ಮೆಚ್ಚಿದ್ದಾರೆ. ತಂಡದ ಶ್ರಮಕ್ಕೆ ಶಭಾಷ್​ ಎಂದಿದ್ದಾರೆ. ಬೆಕ್ಕಿನ ರಕ್ಷಣೆಯಷ್ಟೇ ನಿಮ್ಮ ರಕ್ಷಣೆಯೂ ಅಗತ್ಯ, ಸುರಕ್ಷಾ ಕವಚಗಳನ್ನು ಧರಿಸಿ ಎಂದು ಕೆಲವರು ಸಲಹೆ ನೀಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:50 am, Wed, 10 May 23

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ