Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಟ್ಟಿದ ಗೂಟವನ್ನು ತನ್ನಷ್ಟಕ್ಕೆ ತಾನೇ ಬಿಚ್ಚಿಕೊಂಡ ಹಸುವಿನ ವಿಡಿಯೋ ವೈರಲ್

Animals: ನೀವು ಪ್ರಾಣಿಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಎಷ್ಟೇ ಪಳಗಿಸಿದರೂ ಅವುಗಳು ಕೂಡ ತಮ್ಮಿಚ್ಛೆಯಂತೆ ಬದುಕುವ ಉಪಾಯವನ್ನು ಕಂಡುಕೊಂಡಿರುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆಕಳೊಂದು ತನ್ನಷ್ಟಕ್ಕೆ ತಾನೇ ತನ್ನನ್ನು ಮುಕ್ತಗೊಳಿಸಿಕೊಂಡಿದೆ. ಇದರ ಉಪಾಯ ಮತ್ತು ಕೌಶಲವನ್ನು ಕಂಡ ನೆಟ್ಟಿಗರು ಅಚ್ಚರಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ.

Viral Video: ಕಟ್ಟಿದ ಗೂಟವನ್ನು ತನ್ನಷ್ಟಕ್ಕೆ ತಾನೇ ಬಿಚ್ಚಿಕೊಂಡ ಹಸುವಿನ ವಿಡಿಯೋ ವೈರಲ್
ಕಟ್ಟಿದ ಗೂಟವನ್ನು ಬಿಚ್ಚಿಕೊಳ್ಳುವುದು ಹೀಗೆ...
Follow us
ಶ್ರೀದೇವಿ ಕಳಸದ
|

Updated on:Oct 26, 2023 | 2:13 PM

Cow: ಪ್ರಾಣಿಗಳು ಸ್ವತಂತ್ರ ಜೀವಿಗಳು. ಅವು ತಮ್ಮಿಚ್ಛೆಯಂತೆ ಬದುಕುವ ಹಕ್ಕು ಅವುಗಳಿಗಿದೆ. ಆದರೆ ನಾವು ಮನುಷ್ಯರು ನಮ್ಮ ಸ್ವಾರ್ಥಕ್ಕೆ ಅವುಗಳನ್ನು ಪಳಗಿಸಿ ನಮ್ಮಿಚ್ಛೆಯಂತೆ ನಮ್ಮ ಅನುಕೂಲಕ್ಕೆ ತಕ್ಕಂತೆ ಬದುಕಲು ಒತ್ತಾಯಿಸುತ್ತೇವೆ. ಹೀಗಾದಾಗಲೇ ಅವು ಸ್ವಾತಂತ್ರ್ಯಕ್ಕೆ ಹಾತೊರೆಯುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆಕಳೊಂದು ತನ್ನಷ್ಟಕ್ಕೆ ತಾನೇ ಮುಕ್ತಗೊಳ್ಳುವ ಉಪಾಯವನ್ನು ಕಂಡುಕೊಂಡಿದೆ. ಕಟ್ಟಿಹಾಕಿದ್ದ ಗೂಟವನ್ನೇ ಕಿತ್ತುಕೊಂಡು ಹೋದ ಈ ಬುದ್ಧಿವಂತ (Intelligent) ಆಕಳನ್ನು ನೋಡಿದ ನೆಟ್ಟಿಗರು ಭಲೇ ಎನ್ನುತ್ತಿದ್ದಾರೆ.

ಇದನ್ನೂ ಓದಿ : Viral Video: ವಿಚ್ಛೇದಿತ ಮಗಳನ್ನು ಬ್ಯಾಂಡ್​ ಬಾಜಾದೊಂದಿಗೆ ಸ್ವಾಗತಿಸಿದ ಪೋಷಕರು; ಭಾರತೀಯ ಪೋಷಕರು ಹೀಗೆ ಧೈರ್ಯವಂತರಾಗಲಿ ಎಂದ ನೆಟ್ಟಿಗರು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಆಕಳು ಎರಡು ಕೊಂಬುಗಳಿಗೆ ಕಟ್ಟಿದ ಹಗ್ಗವನ್ನು ಕೌಶಲದಿಂದ (Skills) ಸುತ್ತಿಕೊಳ್ಳುತ್ತ ಕೊನೆಯಲ್ಲಿ ಗೂಟವನ್ನೇ ಕಿತ್ತುಕೊಂಡು ಓಡುವ ದೃಶ್ಯ ನಿಜಕ್ಕೂ ಮತ್ತೆ ಮತ್ತೆ ನೋಡುವಂತಿದೆ. ಅಕ್ಟೋಬರ್ 23ರಂದು Xನಲ್ಲಿ ಪೋಸ್ಟ್​ ಮಾಡಲಾದ ಈ ವಿಡಿಯೋವನ್ನು ಈತನಕ 1 ಮಿಲಿಯನ್​ ಜನರು ನೋಡಿದ್ದಾರೆ. ಸುಮಾರು 200 ಜನರು ಪ್ರತಿಕ್ರಿಯಿಸಿದ್ದಾರೆ.

ಬುದ್ಧಿವಂತ ಆಕಳಿನ ವಿಡಿಯೋ ಇಲ್ಲಿದೆ

ನಿಜವಾಗಲೂ ಈ ಆಕಳು ಮುದ್ದಾಗಿದೆ ಮತ್ತು ಬುದ್ಧಿವಂತ ಕೂಡ ಎಂದಿದ್ದಾರೆ ಒಬ್ಬರು. ಈ ದಿನ ನಾನು ನೋಡಿದ ಚೆಂದದ ವಿಡಿಯೋದಲ್ಲಿ ಇದಕ್ಕೆ ಮೊದಲ ಸ್ಥಾನ ಎಂದಿದ್ದಾರೆ ಇನ್ನೊಬ್ಬರು. ವಾಹ್​ ಇದು ಅತ್ಯಂತ ಸುಂದರವಾಗಿದೆ ಎಂದಿದ್ದಾರೆ ಮತ್ತೊಬ್ಬರು. ಈ ಬುದ್ಧಿವಂತ ಆಕಳಿಗೆ ಸನ್ಮಾನ ಮಾಡಬೇಕು ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral: ಲಂಡನ್​; ಮಕ್ಕಳ ‘ಹ್ಯಾಪ್ಪಿ ಮೀಲ್’ನಲ್ಲಿ ಸಿಗರೇಟ್​ ತುಂಡು; ಮೆಕ್​ಡೊನಾಲ್ಡ್ಸ್​ ಪ್ರತಿಕ್ರಿಯೆ

ಎಷ್ಟು ಚಾಣಾಕ್ಷತನದಿಂದ ಕೂಡಿದೆ ಈ ಹಸು ಎಂದಿದ್ದಾರೆ ಒಬ್ಬರು. ಇದು ಸ್ಮಾರ್ಟ್ ಬುಲ್​ ಎಂದಿದ್ದಾರೆ ಇನ್ನೊಬ್ಬರು. ಈ ಬುದ್ಧಿವಂತಿಕೆ ಎಲ್ಲಾ ಹಸುಗಳಲ್ಲಿ ಇದ್ದಿದ್ದರೆ ಇಷ್ಟೊತ್ತಿಗೆ ರೈತರೆಲ್ಲ ಕಂಗಾಲಾಗುತ್ತಿದ್ದರೇನೋ ಎಂದಿದ್ದಾರೆ ಮತ್ತೊಬ್ಬರು. ಹೇಗೆ ಬಿಡಿಸಿಕೊಳ್ಳುವುದು ಗೊತ್ತೋ ಹಾಗೆ ವಾಪಾಸು ಬರುವುದೂ ಅವುಗಳಿಗೆ ಗೊತ್ತಿರುತ್ತದೆ ಎಂದಿದ್ದಾರೆ ಮಗದೊಬ್ಬರು. ಅಂತೂ ಈ ವಿಡಿಯೋ ನೋಡಿ ಮನಸ್ಸು ಪ್ರಫುಲ್ಲವಾಯಿತು ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:13 pm, Thu, 26 October 23

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!