AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಳಗೆ ಮೊಸಳೆಗಳ ಹಿಂಡು, ಮೇಲೆ ಹಿಡಿದುಕೊಂಡ ಮರವೂ ಗಟ್ಟಿಯಿಲ್ಲ, ಮುಂದೆ?

Crocodile : ಇಲ್ಲಿ ಏನು ನಡೀತಿದೆ ಅಂತಾನೇ ತಿಳೀತಿಲ್ಲ, ರೀಲ್​ ಮಾಡಲೆಂದೇ ಅವ ಇಲ್ಲಿಗೆ ಹೋಗಿದ್ದಾನೋ ಏನು ಎಂದು ಒಬ್ಬರು ಕೇಳಿದ್ದಾರೆ. ನನಗಂತೂ ಇದೊಂದು ದೃಶ್ಯಕಾವ್ಯದಂತೆ ಕಾಣುತ್ತಿದೆ ಎಂದು ಒಬ್ಬರು ತಮಾಷೆ ಮಾಡಿದ್ದಾರೆ.

ಕೆಳಗೆ ಮೊಸಳೆಗಳ ಹಿಂಡು, ಮೇಲೆ ಹಿಡಿದುಕೊಂಡ ಮರವೂ ಗಟ್ಟಿಯಿಲ್ಲ, ಮುಂದೆ?
ಹಿಡಿದ ಮರವೂ ಗಟ್ಟಿಯಿಲ್ಲ ಕೆಳಗೆ ನೋಡಿದರೆ ಇಷ್ಟೊಂದು ಮೊಸಳೆಗಳು
TV9 Web
| Edited By: ಶ್ರೀದೇವಿ ಕಳಸದ|

Updated on:Feb 09, 2023 | 2:56 PM

Share

Viral Video : ಈ ವಿಡಿಯೋ ಎಲ್ಲಿಯದು? ಫ್ಲೊರಿಡಾ, ಚೆನ್ನೈ ಅಂತೆಲ್ಲಾ ಕೇಳುತ್ತಿದ್ದಾರೆ ನೆಟ್ಟಿಗರು. ಇದೊಂದು ಮೊಸಳೆಗಳ ಪಾರ್ಕ್​ ಎಂದು ತೋರುತ್ತದೆ. ಇಲ್ಲಿ ಏಣಿ ಏರಿ ನೇತಾಡುತ್ತಿರುವವನು ಪ್ರಾಣಿಪಾಲಕನಿರಬೇಕು. ಅಲ್ಲೇನೋ ಕೆಲಸದಲ್ಲಿ ನಿರತನಾಗಿದ್ದಾನೆ. ಆಹಾರ ಕೊಡುವನೋ ಎಂದು ಇವೆಲ್ಲವೂ ಅವನಿಗೆ ಮುತ್ತಿಗೆ ಹಾಕಿರಬೇಕು. ಈ ವಿಡಿಯೋ ಟ್ವಿಟರ್​ನಲ್ಲಿ ಹರಿದಾಡುತ್ತಿದೆ. ಆದರೆ ಇದರ ಮೂಲದ ಬಗ್ಗೆ ಮಾಹಿತಿಯಂತೂ ಇಲ್ಲ.

ಈ ವಿಡಿಯೋ ಅನ್ನು 2 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 1,600ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 168 ಜನರು ರೀಟ್ವೀಟ್ ಮಾಡಿದ್ದಾರೆ. ಕೆಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ ಇನ್ನೂ ಕೆಲವರು ಗಾಬರಿಯಾಗಿದ್ದಾರೆ. ಮುಂದಿನ ಸಲ ಬಹಳ ಹುಷಾರಾಗಿರು ತಮ್ಮಾ ಎಂದಿದ್ದಾರೆ ಕೆಲವರು. ಆದರೆ ಇವನು ಹೀಗೆ ಏಣಿ ಬಿಟ್ಟು ಇಳಿಯೋದಕ್ಕೆ ಈ ಮೊಸಳೆಗಳು ಬಿಟ್ಟವಾ? ಮುಂದೇನಾಯಿತು ಎಂದು ಯಾರಿಗೆ ಗೊತ್ತು?

ಇದನ್ನೂ ಓದಿ : ಮಾನವ, ಬೇಗ ಬಾ ಕ್ಲಾಸಿಗೆ ಹೊತ್ತಾಯ್ತು; ಝೀಬ್ರಾ ಕ್ರಾಸಿಂಗ್ ಮಾಡಲು ಕಲಿಯಬೇಕೆ?

ಇಲ್ಲಿ ಏನು ನಡೀತಿದೆ ಅಂತಾನೇ ತಿಳೀತಿಲ್ಲ, ರೀಲ್​ ಮಾಡಲೆಂದೇ ಅವ ಇಲ್ಲಿಗೆ ಹೋಗಿದ್ದಾನೋ ಏನು ಎಂದು ಒಬ್ಬರು ಕೇಳಿದ್ದಾರೆ. ನನಗಂತೂ ಇದೊಂದು ದೃಶ್ಯಕಾವ್ಯದಂತೆ ಕಾಣುತ್ತಿದೆ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಯಾರಾದರೂ ಹೇಳಿ, ಕೊನೆಗೆ ಈ ಮನುಷ್ಯನಿಗೆ ಏನಾಯಿತೆಂದು? ಎಂದು ಹಲವರು ಕೇಳಿದ್ದಾರೆ. ಇದನ್ನು ಅಷ್ಟೊಂದೆಲ್ಲಾ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಇನ್ನೂ ಕೆಲವರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:55 pm, Thu, 9 February 23

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು