AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಉತ್ತರ ಭಾರತದಲ್ಲಿ ಉಷ್ಣ ಅಲೆಯ ಅಬ್ಬರ; ಈಜುಕೊಳವಾದ ಕ್ಲಾಸ್​ ರೂಂ

ಈ ಬಾರಿಯ ಬೇಸಿಗೆ ಬಹಳ ಕಠೋರವಾಗಿದೆ. ಉರಿ ಬಿಸಿಲಿನ ತಾಪಕ್ಕೆ ಪ್ರಾಣಿಪಕ್ಷಿಗಳು ಕಂಗಾಲಾಗಿವೆ. ಜನರಿಗೂ ಹಲವೆಡೆ ಬಿಸಿಲ ಧಗೆ ನಿವಾರಿಸಿಕೊಳ್ಳಲು ಕುಡಿಯಲು ನೀರಿಲ್ಲದಂತಾಗಿದೆ. ಹಲವು ರಾಜ್ಯಗಳಲ್ಲಿ ಉಷ್ಣ ಅಲೆ ಅಥವಾ ಹೀಟ್ ವೇವ್ ಆರ್ಭಟ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಮಕ್ಕಳನ್ನು ಬಿಸಿಲಿನ ಶಾಖದಿಂದ ಪಾರು ಮಾಡಲು ಶಿಕ್ಷಕರು ಹೊಸ ಪ್ಲಾನ್ ಮಾಡಿದ್ದಾರೆ.

Viral Video: ಉತ್ತರ ಭಾರತದಲ್ಲಿ ಉಷ್ಣ ಅಲೆಯ ಅಬ್ಬರ; ಈಜುಕೊಳವಾದ ಕ್ಲಾಸ್​ ರೂಂ
ಈಜುಕೊಳವಾದ ಕ್ಲಾಸ್​ ರೂಂ
ಸುಷ್ಮಾ ಚಕ್ರೆ
|

Updated on: Apr 30, 2024 | 6:24 PM

Share

ನವದೆಹಲಿ: ಉತ್ತರ ಭಾರತದಲ್ಲಿ (North India) ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತಿದೆ. ಉಷ್ಣ ಅಲೆಯ (Heatwave) ಭೀತಿ ಎದುರಾಗಿದ್ದು, ಜನರಿಗೆ ಮನೆಯಿಂದ ಹೊರಗೆ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಶಾಲೆಯೊಂದು ತನ್ನ ವಿದ್ಯಾರ್ಥಿಗಳಿಗೆ ಬಿಸಿಲಿನ ಶಾಖದಿಂದ ಬಚಾವಾಗುವಂತೆ ಮಾಡಲು ತರಗತಿಯನ್ನೇ ಈಜುಕೊಳವನ್ನಾಗಿ ಮಾಡುವ ಮೂಲಕ ಉಷ್ಣ ಅಲೆಯನ್ನು ಎದುರಿಸಲು ವಿಭಿನ್ನವಾದ ವಿಧಾನವನ್ನು ಅಳವಡಿಸಿಕೊಂಡಿದೆ.

ಉತ್ತರ ಪ್ರದೇಶ ರಾಜ್ಯದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಮಕ್ಕಳು ಶಾಲೆಗಳಿಗೆ ಬರಲು ಭಯಪಡುತ್ತಿದ್ದಾರೆ. ಇದರಿಂದ ಶಾಲೆಯಲ್ಲಿ ಹಾಜರಾತಿ ಕಡಿಮೆಯಾಗುತ್ತಿದೆ. ಇಲ್ಲಿನ ಕನ್ನೌಜ್ ಜಿಲ್ಲೆಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರು ಇದಕ್ಕೆ ಪರಿಹಾರ ಕಂಡುಕೊಂಡಿದ್ದು, ಕ್ಲಾಸ್​ ರೂಂನಲ್ಲಿ ನೀರನ್ನು ತುಂಬಿದ್ದಾರೆ. ಕ್ಲಾಸ್​ ರೂಮನ್ನೇ ತಾತ್ಕಾಲಿಕ ಈಜುಕೊಳವನ್ನಾಗಿ ಮಾಡಿದ್ದಾರೆ. ಅಲ್ಲಿ ಮಕ್ಕಳು ನೀರಿನಲ್ಲಿ ಆಟವಾಡುತ್ತಲೇ ಪಾಠ ಕಲಿಯುತ್ತಾರೆ.

ಇದನ್ನೂ ಓದಿ: Karnataka Weather: ಉಷ್ಣ ಅಲೆಯ ನಡುವೆ ಕರ್ನಾಟಕದ 11ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ

ಮಕ್ಕಳು ಕ್ಲಾಸ್​ ರೂಂನ ನೀರಿನಲ್ಲಿ ಆಟವಾಡುತ್ತಾ. ದೇಹದ ಬಿಸಿಯನ್ನು ತಂಪಾಗಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2 ಅಡಿ ಆಳ ತುಂಬಿದ ನೀರಿನಲ್ಲಿ ವಿದ್ಯಾರ್ಥಿಗಳು ಖುಷಿಯಿಂದ ಆಟವಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಬಿಸಿಲು ಹೆಚ್ಚಾದ ನಂತರ ಶಾಲೆಗೆ ಮಕ್ಕಳು ಬರುವುದು ಕಡಿಮೆಯಾಗಿತ್ತು. ಆದರೆ ಶಾಲೆಯ 1 ತರಗತಿಯಲ್ಲಿ ನೀರನ್ನು ತುಂಬಿದ ನಂತರ ಮಕ್ಕಳು ಶಾಲೆಗೆ ಬರಲು ಪ್ರಾರಂಭಿಸಿದರು. ಇಲ್ಲಿನ ಕೆಲವು ಪ್ರದೇಶಗಳಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಭಾರತೀಯ ಹವಾಮಾನ ಇಲಾಖೆಯು ಉತ್ತರ ಪ್ರದೇಶದ ಕೆಲವೆಡೆ ರೆಡ್ ಮತ್ತು ಆರೆಂಜ್ ಅಲರ್ಟ್‌ಗಳನ್ನು ಘೋಷಿಸಿದ್ದಾರೆ. ಮುಂಬರುವ ದಿನಗಳಲ್ಲಿ ಹಲವಾರು ಪ್ರದೇಶಗಳಲ್ಲಿ ಮುಂದುವರೆಯುವ ನಿರೀಕ್ಷೆಯಿರುವ ಎಚ್ಚರಿಕೆಯನ್ನು ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ