AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲೋವೀನ್​! ಇಲ್ಲಿ ಏನೇ ಆದರೂ ಹೋದರೂ ಎಲ್ಲವೂ ಮಜಾನೇ

Halloween : ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಈ ಅವಸ್ಥೆ ಉಂಟಾಗಿದೆ. ನೀವೀಗ ಈ ಕುಂಬಳಕಾಯಿಗೆ ಹಣ ಪಾವತಿಸಲೇಬೇಕು ಮೇಡಮ್​ ಎಂದು ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.

ಹಾಲೋವೀನ್​! ಇಲ್ಲಿ ಏನೇ ಆದರೂ ಹೋದರೂ ಎಲ್ಲವೂ ಮಜಾನೇ
Woman Sits On Halloween Pumpkin For Photo But This Funny Thing Happens
TV9 Web
| Edited By: |

Updated on:Oct 31, 2022 | 2:23 PM

Share

Viral Video : ಸಾಮಾಜಿಕ ಜಾಲತಾಣಗಳ ತುಂಬಾ ಹಾಲೋವೀನ್​ ಹವಾ. ಚಿತ್ರವಿಚಿತ್ರ, ಭಯಾನಕ ವೇಷಭೂಷಣ ಧರಿಸಿ, ಅಲಂಕಾರ ಮಾಡಿಕೊಂಡು ವಿಡಿಯೋ, ಫೋಟೋ ಅಪ್​ಲೋಡ್​ ಮಾಡುವಲ್ಲಿ ಜನ ನಿರತರಾಗಿದ್ದಾರೆ. ಈಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ಯುವತಿ ದೊಡ್ಡದೊಂದು ಕುಂಬಳಕಾಯಿಯನ್ನು ಹಿಡಿದುಕೊಂಡು ಫೋಟೋ ತೆಗೆಸಿಕೊಳ್ಳುವುದರಲ್ಲಿದ್ದಳು. ಆದರೆ ಅಷ್ಟರಲ್ಲಿ ಆಕೆ ಕುಳಿತಿದ್ದ ಇನ್ನೂ ದೊಡ್ಡ ಕುಂಬಳಕಾಯಿ ಒಡೆದೇ ಹೋಗಿದೆ!

ಕುಂಬಳಕಾಯಿಯ ತಿರುಳನ್ನು ತೆಗೆದು ಅದಕ್ಕೆ ಕಣ್ಣು ಮೂಗು ಕೆತ್ತಿ ಅವುಗಳಲ್ಲಿ ದೀಪಗಳನ್ನು ಉರಿಸುವುದನ್ನು ಅನೇಕ ಫೋಟೋ ವಿಡಿಯೋಗಳಲ್ಲಿ ನೋಡಿದ್ದೀರಿ. ಕುಂಬಳಕಾಯಿ ಫಲವತ್ತತೆಯನ್ನು ಸಾಂಕೇತಿಸುತ್ತದೆ. ಹಾಗಾಗಿ ಹಬ್ಬದ ಮುನ್ನಾದಿನ ಹೊಲಗದ್ದೆಗಳಿಗೆ ತೆರಳಿ ಜನ ಕುಂಬಳಕಾಯಿಯನ್ನು ಖರೀದಿಸಲು ಬರುತ್ತಾರೆ. ಹಾಗೆಯೇ ಈ ಯುವತಿಯೂ ಇಲ್ಲಿ ಬಂದಿದ್ದಾಳೆ. ಆದರೆ ಅಚಾನಕ್​ ಆಗಿ ಹೀಗೆಲ್ಲ ಆಗಿಹೋಗಿದೆ.

ಈ ವಿಡಿಯೋ ಅನ್ನು ‘buitengebieden’ ಟ್ವೀಟ್​ ಮಾಡಿದೆ. ಇಲ್ಲಿ ಸಾಮಾನ್ಯವಾಗಿ ತಮಾಷೆಯ ವಿಡಿಯೋಗಳನ್ನು ಅಪ್​ಲೋಡ್ ಮಾಡಲಾಗುತ್ತದೆ. ಪ್ರಸ್ತುತ ಪುಟದಿಂದ ಹಂಚಿಕೊಳ್ಳಲಾದ ಈ ವಿಡಿಯೋ ಅನ್ನು 7 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 13,000 ಕಕ್ಊ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ನೆಟ್ಟಿಗರು ತಮಾಷೆಯಿಂದ ಪ್ರತಿಕ್ರಿಯಿಸಿದ್ಧಾರೆ. ಒಬ್ಬರು ಬಮ್​ಕಿನ್​ ಎಂದಿದ್ದಾರೆ. ನೀವದನ್ನು ಖರೀದಿಸದಿದ್ದರೂ ಹಣ ಪಾವತಿಸಲೇಬೇಕಾಗುತ್ತದೆ ಎಂದಿದ್ದಾರೆ ಮತ್ತೊಬ್ಬರು. ಅನೇಕರು ತಾವು ಅಲಂಕರಿಸಿ, ಆಯ್ಕೆ ಮಾಡಿಕೊಂಡ ಕುಂಬಳಕಾಯಿಗಳ ಫೋಟೋ ವಿಡಿಯೋ ಟ್ವೀಟ್​ ಮಾಡಿ ಹಬ್ಬದ ಶುಭಾಶಯ ಕೋರಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:22 pm, Mon, 31 October 22

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್