AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೀ ವರ್ಕ್​ ಫ್ರಂ ಹೋಂ ಮಾಡುತ್ತಲೇ ಇದ್ದರೆ ಹೇಗೆ? ನನ್ನನ್ನೂ ನೋಡು ಸ್ವಲ್ಪ; 3 ಮಿಲಿಯನ್​ ಜನರನ್ನು ಸೆಳೆದಿದೆ ಈ ವಿಡಿಯೋ

Work From Home : ಮಕ್ಕಳನ್ನು ಎತ್ತಿಕೊಂಡೇ ಹೀಗೆ ವರ್ಕ್​ ಫ್ರಂ ಹೋಂ ಮಾಡಿದ ದಿನಗಳು ನೆನಪಿರಬಹುದು. ಹಾಗೆಯೇ ಸಾಕುಪ್ರಾಣಿಗಳನ್ನೂ. ಎತ್ತಿಕೊಂಡು ಕೆಲಸದಲ್ಲಿ ಕಳೆದುಹೋದಿರೋ ಅಷ್ಟೇ!

ಬರೀ ವರ್ಕ್​ ಫ್ರಂ ಹೋಂ ಮಾಡುತ್ತಲೇ ಇದ್ದರೆ ಹೇಗೆ? ನನ್ನನ್ನೂ ನೋಡು ಸ್ವಲ್ಪ; 3 ಮಿಲಿಯನ್​ ಜನರನ್ನು ಸೆಳೆದಿದೆ ಈ ವಿಡಿಯೋ
ಬರೀ ಕೆಲಸ ಮಾಡುತ್ತಲೇ ಇದ್ದರೆ ಹೇಗೆ? ನನ್ನನ್ನೂ ನೋಡು...
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 29, 2022 | 10:53 AM

Viral Video : ಮಕ್ಕಳೂ ಅಷ್ಟೇ ಪ್ರಾಣಿಗಳೂ ಅಷ್ಟೇ. ಅವುಗಳನ್ನು ಮುದ್ದಿಸದಿದ್ದರೆ ಹೀಗೆ ಅಟೆನ್ಷನ್ ಸೀಕಿಂಗ್​ ಶುರುಮಾಡಿಕೊಂಡುಬಿಡುತ್ತವೆ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಈ ವ್ಯಕ್ತಿ ಮಗುವಿನ ಹಾಗೆ ಅದನ್ನು ತೊಡೆಮೇಲೆ ಕೂರಿಸಿಕೊಂಡು ಕೆಲಸ ಮಾಡುತ್ತಿದ್ದರೂ ನಾಯಿಗೆ ಸಮಾಧಾನವಿಲ್ಲ. ನೀ ನನ್ನ ಕಡೆ ಗಮನ ಕೊಡುತ್ತಿಲ್ಲ ಬರೀ ಕೆಲಸದಲ್ಲಿಯೇ ಮುಳುಗಿದ್ದೀಯಾ ಎಂದು ಮುಖ ಎತ್ತಿ ಅವನನ್ನು ನೋಡುವ ದೃಶ್ಯ ಹೇಗಿದೆ ನೋಡಿ.

3.3 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಆ ನಾಯಿಯ ಕಣ್ಣಲ್ಲಿರುವ ಪ್ರೀತಿಯ ಯಾಚನೆಯ ಆಳ ನಿಮ್ಮನ್ನು ತಟ್ಟದೇ ಇರದು. ಈ ವ್ಯಕ್ತಿ ಅದರ ಕಡೆ ಗಮನ ಕೊಡುತ್ತಿದ್ದಂತೆ ಸಂತೃಪ್ತಭಾವದಿಂದ ಅವನಿಗೆ ಮತ್ತಷ್ಟು ಒರಗುತ್ತದೆ. ಈ 13 ಸೆಕೆಂಡುಗಳ ದೃಶ್ಯ ಎಂಥವರ ಮನಸ್ಸನ್ನೂ ಕರಗುವಂತೆ ಮಾಡುತ್ತದೆ. ಅನೇಕರು ಈ ವಿಡಿಯೋ ಪ್ರತಿಕ್ರಿಯಿಸಿದ್ದಾರೆ.

ನಾಯಿ ಜೊತೆಗಿಲ್ಲದಿದ್ದರೆ ನನಗೆ ಪ್ರಪಂಚವೇ ನನ್ನ ಜೊತೆಗಿಲ್ಲ ಎಂದೆನ್ನಿಸುತ್ತದೆ ಎಂದಿದ್ದಾರೆ ಒಬ್ಬರು. ನಾಯಿ ಮಾತ್ರ ನಿಮ್ಮನ್ನು ಸಂಪೂರ್ಣವಾಗಿ ಪ್ರೀತಿಸಲು ಸಾಧ್ಯ, ಅಷ್ಟೇ ವಿಶ್ವಾಸಮಯಿ ಜೀವ ಅದು ಎಂದಿದ್ದಾರೆ ಇನ್ನೂ ಒಬ್ಬರು. ಅನೇಕರು ತಮ್ಮ ತಮ್ಮ ನಾಯಿಗಳ ವಿಡಿಯೋಗಳನ್ನು ಈ ಥ್ರೆಡ್​ಗೆ ಟ್ವೀಟ್ ಮಾಡಿದ್ದಾರೆ. ನಾಯಿಪ್ರಿಯರೆಲ್ಲರೂ ಒಂದೆಡೆ ಸೇರಿದರೆ ಆ ಲೋಕ ಬಹಳ ಮುದದಿಂದ ಕೂಡಿರುವಲ್ಲಿ ಸಂಶಯವೇ ಇಲ್ಲ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:52 am, Tue, 29 November 22

ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ