AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೀ ವರ್ಕ್​ ಫ್ರಂ ಹೋಂ ಮಾಡುತ್ತಲೇ ಇದ್ದರೆ ಹೇಗೆ? ನನ್ನನ್ನೂ ನೋಡು ಸ್ವಲ್ಪ; 3 ಮಿಲಿಯನ್​ ಜನರನ್ನು ಸೆಳೆದಿದೆ ಈ ವಿಡಿಯೋ

Work From Home : ಮಕ್ಕಳನ್ನು ಎತ್ತಿಕೊಂಡೇ ಹೀಗೆ ವರ್ಕ್​ ಫ್ರಂ ಹೋಂ ಮಾಡಿದ ದಿನಗಳು ನೆನಪಿರಬಹುದು. ಹಾಗೆಯೇ ಸಾಕುಪ್ರಾಣಿಗಳನ್ನೂ. ಎತ್ತಿಕೊಂಡು ಕೆಲಸದಲ್ಲಿ ಕಳೆದುಹೋದಿರೋ ಅಷ್ಟೇ!

ಬರೀ ವರ್ಕ್​ ಫ್ರಂ ಹೋಂ ಮಾಡುತ್ತಲೇ ಇದ್ದರೆ ಹೇಗೆ? ನನ್ನನ್ನೂ ನೋಡು ಸ್ವಲ್ಪ; 3 ಮಿಲಿಯನ್​ ಜನರನ್ನು ಸೆಳೆದಿದೆ ಈ ವಿಡಿಯೋ
ಬರೀ ಕೆಲಸ ಮಾಡುತ್ತಲೇ ಇದ್ದರೆ ಹೇಗೆ? ನನ್ನನ್ನೂ ನೋಡು...
TV9 Web
| Edited By: ಶ್ರೀದೇವಿ ಕಳಸದ|

Updated on:Nov 29, 2022 | 10:53 AM

Share

Viral Video : ಮಕ್ಕಳೂ ಅಷ್ಟೇ ಪ್ರಾಣಿಗಳೂ ಅಷ್ಟೇ. ಅವುಗಳನ್ನು ಮುದ್ದಿಸದಿದ್ದರೆ ಹೀಗೆ ಅಟೆನ್ಷನ್ ಸೀಕಿಂಗ್​ ಶುರುಮಾಡಿಕೊಂಡುಬಿಡುತ್ತವೆ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಈ ವ್ಯಕ್ತಿ ಮಗುವಿನ ಹಾಗೆ ಅದನ್ನು ತೊಡೆಮೇಲೆ ಕೂರಿಸಿಕೊಂಡು ಕೆಲಸ ಮಾಡುತ್ತಿದ್ದರೂ ನಾಯಿಗೆ ಸಮಾಧಾನವಿಲ್ಲ. ನೀ ನನ್ನ ಕಡೆ ಗಮನ ಕೊಡುತ್ತಿಲ್ಲ ಬರೀ ಕೆಲಸದಲ್ಲಿಯೇ ಮುಳುಗಿದ್ದೀಯಾ ಎಂದು ಮುಖ ಎತ್ತಿ ಅವನನ್ನು ನೋಡುವ ದೃಶ್ಯ ಹೇಗಿದೆ ನೋಡಿ.

3.3 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಆ ನಾಯಿಯ ಕಣ್ಣಲ್ಲಿರುವ ಪ್ರೀತಿಯ ಯಾಚನೆಯ ಆಳ ನಿಮ್ಮನ್ನು ತಟ್ಟದೇ ಇರದು. ಈ ವ್ಯಕ್ತಿ ಅದರ ಕಡೆ ಗಮನ ಕೊಡುತ್ತಿದ್ದಂತೆ ಸಂತೃಪ್ತಭಾವದಿಂದ ಅವನಿಗೆ ಮತ್ತಷ್ಟು ಒರಗುತ್ತದೆ. ಈ 13 ಸೆಕೆಂಡುಗಳ ದೃಶ್ಯ ಎಂಥವರ ಮನಸ್ಸನ್ನೂ ಕರಗುವಂತೆ ಮಾಡುತ್ತದೆ. ಅನೇಕರು ಈ ವಿಡಿಯೋ ಪ್ರತಿಕ್ರಿಯಿಸಿದ್ದಾರೆ.

ನಾಯಿ ಜೊತೆಗಿಲ್ಲದಿದ್ದರೆ ನನಗೆ ಪ್ರಪಂಚವೇ ನನ್ನ ಜೊತೆಗಿಲ್ಲ ಎಂದೆನ್ನಿಸುತ್ತದೆ ಎಂದಿದ್ದಾರೆ ಒಬ್ಬರು. ನಾಯಿ ಮಾತ್ರ ನಿಮ್ಮನ್ನು ಸಂಪೂರ್ಣವಾಗಿ ಪ್ರೀತಿಸಲು ಸಾಧ್ಯ, ಅಷ್ಟೇ ವಿಶ್ವಾಸಮಯಿ ಜೀವ ಅದು ಎಂದಿದ್ದಾರೆ ಇನ್ನೂ ಒಬ್ಬರು. ಅನೇಕರು ತಮ್ಮ ತಮ್ಮ ನಾಯಿಗಳ ವಿಡಿಯೋಗಳನ್ನು ಈ ಥ್ರೆಡ್​ಗೆ ಟ್ವೀಟ್ ಮಾಡಿದ್ದಾರೆ. ನಾಯಿಪ್ರಿಯರೆಲ್ಲರೂ ಒಂದೆಡೆ ಸೇರಿದರೆ ಆ ಲೋಕ ಬಹಳ ಮುದದಿಂದ ಕೂಡಿರುವಲ್ಲಿ ಸಂಶಯವೇ ಇಲ್ಲ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:52 am, Tue, 29 November 22

Follow Us
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ