AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೀ ವರ್ಕ್​ ಫ್ರಂ ಹೋಂ ಮಾಡುತ್ತಲೇ ಇದ್ದರೆ ಹೇಗೆ? ನನ್ನನ್ನೂ ನೋಡು ಸ್ವಲ್ಪ; 3 ಮಿಲಿಯನ್​ ಜನರನ್ನು ಸೆಳೆದಿದೆ ಈ ವಿಡಿಯೋ

Work From Home : ಮಕ್ಕಳನ್ನು ಎತ್ತಿಕೊಂಡೇ ಹೀಗೆ ವರ್ಕ್​ ಫ್ರಂ ಹೋಂ ಮಾಡಿದ ದಿನಗಳು ನೆನಪಿರಬಹುದು. ಹಾಗೆಯೇ ಸಾಕುಪ್ರಾಣಿಗಳನ್ನೂ. ಎತ್ತಿಕೊಂಡು ಕೆಲಸದಲ್ಲಿ ಕಳೆದುಹೋದಿರೋ ಅಷ್ಟೇ!

ಬರೀ ವರ್ಕ್​ ಫ್ರಂ ಹೋಂ ಮಾಡುತ್ತಲೇ ಇದ್ದರೆ ಹೇಗೆ? ನನ್ನನ್ನೂ ನೋಡು ಸ್ವಲ್ಪ; 3 ಮಿಲಿಯನ್​ ಜನರನ್ನು ಸೆಳೆದಿದೆ ಈ ವಿಡಿಯೋ
ಬರೀ ಕೆಲಸ ಮಾಡುತ್ತಲೇ ಇದ್ದರೆ ಹೇಗೆ? ನನ್ನನ್ನೂ ನೋಡು...
TV9 Web
| Edited By: ಶ್ರೀದೇವಿ ಕಳಸದ|

Updated on:Nov 29, 2022 | 10:53 AM

Share

Viral Video : ಮಕ್ಕಳೂ ಅಷ್ಟೇ ಪ್ರಾಣಿಗಳೂ ಅಷ್ಟೇ. ಅವುಗಳನ್ನು ಮುದ್ದಿಸದಿದ್ದರೆ ಹೀಗೆ ಅಟೆನ್ಷನ್ ಸೀಕಿಂಗ್​ ಶುರುಮಾಡಿಕೊಂಡುಬಿಡುತ್ತವೆ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಈ ವ್ಯಕ್ತಿ ಮಗುವಿನ ಹಾಗೆ ಅದನ್ನು ತೊಡೆಮೇಲೆ ಕೂರಿಸಿಕೊಂಡು ಕೆಲಸ ಮಾಡುತ್ತಿದ್ದರೂ ನಾಯಿಗೆ ಸಮಾಧಾನವಿಲ್ಲ. ನೀ ನನ್ನ ಕಡೆ ಗಮನ ಕೊಡುತ್ತಿಲ್ಲ ಬರೀ ಕೆಲಸದಲ್ಲಿಯೇ ಮುಳುಗಿದ್ದೀಯಾ ಎಂದು ಮುಖ ಎತ್ತಿ ಅವನನ್ನು ನೋಡುವ ದೃಶ್ಯ ಹೇಗಿದೆ ನೋಡಿ.

3.3 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಆ ನಾಯಿಯ ಕಣ್ಣಲ್ಲಿರುವ ಪ್ರೀತಿಯ ಯಾಚನೆಯ ಆಳ ನಿಮ್ಮನ್ನು ತಟ್ಟದೇ ಇರದು. ಈ ವ್ಯಕ್ತಿ ಅದರ ಕಡೆ ಗಮನ ಕೊಡುತ್ತಿದ್ದಂತೆ ಸಂತೃಪ್ತಭಾವದಿಂದ ಅವನಿಗೆ ಮತ್ತಷ್ಟು ಒರಗುತ್ತದೆ. ಈ 13 ಸೆಕೆಂಡುಗಳ ದೃಶ್ಯ ಎಂಥವರ ಮನಸ್ಸನ್ನೂ ಕರಗುವಂತೆ ಮಾಡುತ್ತದೆ. ಅನೇಕರು ಈ ವಿಡಿಯೋ ಪ್ರತಿಕ್ರಿಯಿಸಿದ್ದಾರೆ.

ನಾಯಿ ಜೊತೆಗಿಲ್ಲದಿದ್ದರೆ ನನಗೆ ಪ್ರಪಂಚವೇ ನನ್ನ ಜೊತೆಗಿಲ್ಲ ಎಂದೆನ್ನಿಸುತ್ತದೆ ಎಂದಿದ್ದಾರೆ ಒಬ್ಬರು. ನಾಯಿ ಮಾತ್ರ ನಿಮ್ಮನ್ನು ಸಂಪೂರ್ಣವಾಗಿ ಪ್ರೀತಿಸಲು ಸಾಧ್ಯ, ಅಷ್ಟೇ ವಿಶ್ವಾಸಮಯಿ ಜೀವ ಅದು ಎಂದಿದ್ದಾರೆ ಇನ್ನೂ ಒಬ್ಬರು. ಅನೇಕರು ತಮ್ಮ ತಮ್ಮ ನಾಯಿಗಳ ವಿಡಿಯೋಗಳನ್ನು ಈ ಥ್ರೆಡ್​ಗೆ ಟ್ವೀಟ್ ಮಾಡಿದ್ದಾರೆ. ನಾಯಿಪ್ರಿಯರೆಲ್ಲರೂ ಒಂದೆಡೆ ಸೇರಿದರೆ ಆ ಲೋಕ ಬಹಳ ಮುದದಿಂದ ಕೂಡಿರುವಲ್ಲಿ ಸಂಶಯವೇ ಇಲ್ಲ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:52 am, Tue, 29 November 22

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು