Viral : ಹೆದ್ದಾರಿ ನಾಮ ಫಲಕಗಳು ಏಕೆ ಕೇವಲ ಹಸಿರು ಬಣ್ಣದಲ್ಲಿರುತ್ತದೆ? ಇದರ ಹಿಂದೆ ವೈಜ್ಞಾನಿಕ ಕಾರಣ ಇದೆ

The Green Boards On Roads: ನೀವು ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ಅಲ್ಲಲ್ಲಿ ಸ್ಥಳಗಳ ಹೆಸರು ಮತ್ತು ಅದರ ದೂರ ಎಷ್ಟಿದೆ ಎಂಬುದನ್ನು ಬರೆದಿರುವ ಹಸಿರು ಬಣ್ಣದ ನಾಮ ಫಲಕಗಳಿರುವುದನ್ನು ಗಮನಿಸಿರುತ್ತೀರಿ ಅಲ್ವಾ. ಆದ್ರೆ ಈ ನಾಮ ಫಲಕಗಳು ಏಕೆ ಕೇವಲ ಹಸಿರು ಬಣ್ಣದಲ್ಲಿರುತ್ತವೆ ಎಂಬುದನ್ನು ನೀವು ಎಂದಾದ್ರೂ ಯೋಚಿಸಿದ್ದೀರಾ. ಇದರ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆಯಂತೆ, ಬನ್ನಿ ಅದೇನೆಂಬುದನ್ನು ನೋಡೋಣ.

Viral : ಹೆದ್ದಾರಿ ನಾಮ ಫಲಕಗಳು ಏಕೆ ಕೇವಲ ಹಸಿರು ಬಣ್ಣದಲ್ಲಿರುತ್ತದೆ? ಇದರ ಹಿಂದೆ ವೈಜ್ಞಾನಿಕ ಕಾರಣ ಇದೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 28, 2024 | 10:00 AM

ಭಾರತವಾಗಿರಲಿ ಅಥವಾ ಯಾವುದೇ ದೇಶವಾಗಿರಲಿ ಎಲ್ಲಾ ದೇಶದ ರಸ್ತೆ ಬದಿಗಳಲ್ಲೂ ಸ್ಥಳಗಳ ಹೆಸರು ಮತ್ತು ಅದರ ದೂರ ಎಷ್ಟಿದೆ ಎಂಬುದನ್ನು ಬರೆದಿರುವ ಸೈನ್‌ ಬೋರ್ಡ್‌ಗಳು ಕೇವಲ ಹಸಿರು ಬಣ್ಣದಲ್ಲಿರುತ್ತವೆ. ಇವುಗಳನ್ನು ಗಮನಿಸಿದಾಗ ಅಲ್ಲಾ ಹೆದ್ದಾರಿಗಳಲ್ಲಿ ಏಕೆ ಕೇವಲ ಹಸಿರು ಬಣ್ಣದ ನಾಮಫಲಕಗಳನ್ನು ಮಾತ್ರ ಅಳವಡಿಸಿರುತ್ತಾರೆ, ಬೇರೆ ಬಣ್ಣದ ನಾಮ ಫಲಕಗಳನ್ನೂ ಅಳವಡಿಸಬಹುದಲ್ವಾ ಅನ್ನೋ ಯೋಚನೆ ನಿಮಗೂ ಬಂದಿದ್ಯಾ? ಹೆದ್ದಾರಿ ನಾಮ ಫಲಕಗಳು ಕೇವಲ ಹಸಿರು ಬಣ್ಣದಲ್ಲಿರುವ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.

ಹೆದ್ದಾರಿ ನಾಮ ಫಲಕಗಳು ಕೇವಲ ಹಸಿರು ಬಣ್ಣದಲ್ಲಿರಲು ಕಾರಣವೇನು?

ಅರಿಝೋನ ಸಾರಿಗೆ ಇಲಾಖೆ ಪ್ರಕಾರ ಹಸಿರು ಶಾಂತ ರೂಪದ‌ ಬಣ್ಣವಾಗಿದ್ದು, ಇದು ಅಪಾಯದ ವಿರುದ್ಧವಾಗಿದೆ. ಇದು ವಾಹನ ಚಲಾಯಿಸುವವರ ಗಮನವನ್ನು ಯಾವುದೇ ಕಾರಣಕ್ಕೂ ವಿಚಲಿತಗೊಳಿಸುವುದಿಲ್ಲ. ಈ ಸೂಚನಾ ಫಲಕಗಳು ಒಂದು ವೇಳೆ ಕೆಂಪು, ಹಳದಿಯಂತಹ ಗಾಢ ಬಣ್ಣದಲ್ಲಿದ್ದರೆ ನಾಮ ಫಲಕಗಳನ್ನು ನೋಡುತ್ತಾ, ನಾವು ಬೇರೆಡೆ ದೃಷ್ಟಿ ಹಾಯಿಸುವ ಸಾಧ್ಯತೆಯಿರುತ್ತದೆ. ಹೀಗೆ ವಾಹನ ಚಲಾಯಿಸುವಾಗ ನಮ್ಮ ಗಮನ ವಿಚಲಿತವಾದರೆ ಅದು ತುಂಬಾನೇ ಅಪಾಯಕಾರಿಯಾಗಿದೆ. ಇದೇ ಕಾರಣಕ್ಕಾಗಿ ಹಸಿರು ಬಣ್ಣದ ನಾಮ ಫಲಕಗಳನ್ನು ಅಳವಡಿಸಲಾಗುತ್ತದೆ.

ಇದನ್ನೂ ಓದಿ: ಸಾವು ಹೀಗೂ ಬರುತ್ತೇ.. ವರ್ಕೌಟ್‌ ಮಾಡುವ ವೇಳೆ ಆಯತಪ್ಪಿ 3ನೇ ಮಹಡಿಯಿಂದ ಕೆಳಗೆ ಬಿದ್ದು ಯುವತಿ ಸಾವು

ಇದರ ಹಿಂದಿರುವ ಮತ್ತೊಂದು ಕಾರಣವೆಂದರೆ ಹಸಿರು ಬಣ್ಣದ ಬೋರ್ಡ್‌ ಮೇಲೆ ಬಿಳಿ ಬಣ್ಣದಲ್ಲಿ ಬರೆದಿರುವ ಅಕ್ಷರಗಳನ್ನು, ಸೂಚನೆಗಳನ್ನು, ನಿಯಂತ್ರಕ ಮತ್ತು ಎಚ್ಚರಿಯ ಚಿಹ್ನೆಗಳನ್ನು ಸುಲಭವಾಗಿ ಯಾರು ಬೇಕಾದರೂ ಓದಬಹುದು. ಇದಲ್ಲದೆ ಈ ಬಣ್ಣವು ರಾತ್ರಿ ಹೊತ್ತಿನಲ್ಲೂ ಸುಲಭವಾಗಿ ಗೋಚರಿಸುತ್ತದೆ. . ಅದಕ್ಕಾಗಿಯೇ ಈ ಬಣ್ಣವನ್ನು ಬಳಸಲಾಗುತ್ತದೆ. ಹೀಗೆ ಹಸಿರು ನಾಮ ಫಲಕಗಳು ಪ್ರಾಯೋಗಿಕ ಉದ್ದೇಶವನ್ನು ಮಾತ್ರವಲ್ಲದೆ ಶಾಂತಿ, ಭದ್ರತೆ, ಅಭಿವೃದ್ಧಿ ಮತ್ತು ಪರಿಸರ ಪ್ರಜ್ಞೆಯ ಸಂಕೇತವಾಗಿ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ