ಈ ಬೀದಿಯಲ್ಲಿ, ಕಡುಚಳಿಗಾಲದಲ್ಲಿ ನಿಮಗೂ ಒಂದು ಬೆಚ್ಚಗಿನ ಮನೆಯಿರಲಿ

Viral Video : ಈ ಮಹಿಳೆ ಡ್ರಮ್​ ಒಂದನ್ನು ಕಾರಿನಿಂದ ತೆಗೆದು ಬೀದಿಯಲ್ಲಿ ಇಡುತ್ತಾಳೆ. ಸುತ್ತಮುತ್ತಲಿನ ನಾಯಿಗಳಿಗೆ ಕರೆಯುತ್ತಿದ್ದಂತೆ ಅವು ಬಂದು ನಿಲ್ಲುತ್ತವೆ. ಎದುರಿಗಿದ್ದ ಬೆಚ್ಚಗಿನ ಮನೆಯನ್ನು ನೋಡಿ ಕ್ಷಣ ಸುಮ್ಮನೇ ದಿಟ್ಟಿಸುತ್ತವೆ.

ಈ ಬೀದಿಯಲ್ಲಿ, ಕಡುಚಳಿಗಾಲದಲ್ಲಿ ನಿಮಗೂ ಒಂದು ಬೆಚ್ಚಗಿನ ಮನೆಯಿರಲಿ
ನಿಮಗೂ ಬೆಚ್ಚಗೆ ಮಲಗಲು ಮನೆಯೊಂದಿರಲಿ ಅದರಲ್ಲಿ ಹಾಸಿಗೆಯೂ ಇರಲಿ
Follow us
| Updated By: ಶ್ರೀದೇವಿ ಕಳಸದ

Updated on:Dec 27, 2022 | 6:30 PM

Viral Video : ಎಲ್ಲೆಡೆ ಚಳಿ ಮೈಕೊರೆಯುತ್ತಿದೆ. ನಮಗಾದರೆ ಮನೆಗಳಿವೆ, ಹೊದಿಕೆಗಳಿವೆ. ಆದರೆ ಬೀದಿಯ ನಾಯಿಗಳಿಗೆ? ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ. ಮಹಿಳೆಯೊಬ್ಬರು ಡ್ರಮ್​ ನಂಥದ್ದನ್ನು ಕಾರಿನಿಂದ ಹೊರತೆಗೆದು ಬೀದಿ ಬಳೀ ಇಡುತ್ತಿದ್ದಾರೆ. ಅಲ್ಲಿದ್ದ ನಾಯಿಗಳನ್ನು ಕರೆದು ಇದೇ ನಿಮ್ಮ ಮನೆ ಎಂದು ಪ್ರೀತಿಯಿಂದ ಕೈತೋರುತ್ತಿದ್ದಾರೆ. ಎಂಥ ಆಪ್ತವಾದ ವಿಡಿಯೋ ಇದಲ್ಲವೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Maya Mohan Kamal (@mayamohankamal)

ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಈಗ ಚಳಿ ವಿಪರೀತಕ್ಕೇರಿದೆ. ಅಲ್ಲಿಯ ಬೀದಿನಾಯಿಗಳು ಕಡುಕಷ್ಟದಲ್ಲಿವೆ. ಹಾಗಾಗಿ ನಿರಾಶ್ರಿತ ನಾಯಿಗಳಿಗೆ ಸಹಾಯ ಮಾಡಲು ಪ್ರಾಣಿಪ್ರಿಯರು ಮುಂದಾಗುತ್ತಿದ್ದಾರೆ. ಸ್ಟ್ರೇ ಟಾಕ್​ ಇಂಡಿಯಾ, ಬೀದಿನಾಯಿಗಳಿಗೆ ಆಶ್ರಯ ಕೊಡುವ ಸಂಸ್ಥೆಯು ಹೀಗೆ ನಾಯಿಗಳಿಗೆ ತಾತ್ಕಾಲಿಕ ಮನೆಗಳ ವ್ಯವಸ್ಥೆ ಮಾಡುತ್ತಿದೆ. ಪ್ಲಾಸ್ಟಿಕ್ ಅಥವಾ ಮರದ ಡ್ರಮ್​ಗಳನ್ನು ಖರೀದಿಸಿ ಅದರೊಳಗೆ ಹಾಸಿಗೆಯನ್ನಿಟ್ಟು ಬೀದಿನಾಯಿಗಳು ಬೆಚ್ಚಗೆ ಮಲಗುವಂತೆ ಸಹಾಯ ಮಾಡುತ್ತಿದೆ.

ಇದನ್ನೂ ಓದಿ : ವಿಮಾನ ನಿಲ್ದಾಣದ ಸ್ಕ್ಯಾನಿಂಗ್​ ಮಶೀನಿನಲ್ಲಿ ಪತ್ತೆಯಾದ ನಾಯಿ; ನೆಟ್ಟಿಗರ ಆಕ್ರೋಶ

ಅನೇಕರು ಈ ವಿಡಿಯೋ ನೋಡಿ ಇವರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಎಂಥ ಆರ್ದ್ರವಾದ ವಿಡಿಯೋ ಇದು ಇದನ್ನು ನೋಡಲು ಬಹಳೇ ಖುಷಿ ಎನ್ನಿಸುತ್ತಿದೆ ಎನ್ನುತ್ತಿದ್ದಾರೆ ಹಲವಾರು ಜನ. ಈ ಐಡಿಯಾ ಬಹಳ ಚೆನ್ನಾಗಿದೆ, ನಾವೂ ಹೀಗೆಯೇ ಬೀದಿನಾಯಿಗಳಿಗೆ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 6:28 pm, Tue, 27 December 22

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ