AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು

ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು

ಹರೀಶ್ ಜಿ.ಆರ್​.
| Edited By: |

Updated on: Aug 22, 2026 | 6:51 PM

Share

ಕರ್ನಾಟಕದಲ್ಲಿ ಮಳೆ ಕೊರತೆಯಿಂದಾಗಿ ಬರ ಆವರಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಈ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಮಾತನಾಡಿದ್ದು, ರಾಜ್ಯದ ರೈತರ ಬೆಳೆ , ನೀರಿನ ಲಭ್ಯತೆ ವಿಚಾರವಾಗಿ ಸಭೆ ಆಗಿದೆ. ಯಾವ ಬೆಳೆ ಹಾಕಿದ್ರೆ ರೈತರಿಗೆ ಅನುಕೂಲ ಎನ್ನುವ ಚರ್ಚೆಯಾಗಿದೆ. ಸಂಕಷ್ಟ ಪರಿಸ್ಥಿತಿಯಲ್ಲಿ ಕೇಂದ್ರದಿಂದ ಏನು ಸಹಾಯ ಪಡೆಯಬಹುದು. ಬರದಲ್ಲಿ ರೈತರ ಬದುಕನ್ನು ಉಳಿಸಿಕೊಳ್ಳಬೇಕು. ರೈತರ ಬಿತ್ತನೆ ಎಷ್ಟಾಗಿದೆ, ಬೆಳೆ ಹಾನಿ‌ ಎಷ್ಟಾಗಿದೆ ಎಂದು ಕಂದಾಯ ಇಲಾಖೆ ಮುಖಾಂತರ ಕೇಂದ್ರಕ್ಕೆ ವರದಿ ಕಳುಹಿಸಲಾಗಿದೆ. ಈ ತಿಂಗಳ ಕೊನೆ ತನಕ ಏನು ಮಾಡಲು ಆಗುವುದಿಲ್ಲ. ಬಳಿಕ ಬರ ಘೋಷಣೆ ಮಾಡುವ ಬಗ್ಗೆ ತೀರ್ಮಾನವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು, (ಆಗಸ್ಟ್ 22): ಕರ್ನಾಟಕದಲ್ಲಿ ಮಳೆ ಕೊರತೆಯಿಂದಾಗಿ ಬರ ಆವರಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಈ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಮಾತನಾಡಿದ್ದು, ರಾಜ್ಯದ ರೈತರ ಬೆಳೆ , ನೀರಿನ ಲಭ್ಯತೆ ವಿಚಾರವಾಗಿ ಸಭೆ ಆಗಿದೆ. ಯಾವ ಬೆಳೆ ಹಾಕಿದ್ರೆ ರೈತರಿಗೆ ಅನುಕೂಲ ಎನ್ನುವ ಚರ್ಚೆಯಾಗಿದೆ. ಸಂಕಷ್ಟ ಪರಿಸ್ಥಿತಿಯಲ್ಲಿ ಕೇಂದ್ರದಿಂದ ಏನು ಸಹಾಯ ಪಡೆಯಬಹುದು. ಬರದಲ್ಲಿ ರೈತರ ಬದುಕನ್ನು ಉಳಿಸಿಕೊಳ್ಳಬೇಕು. ರೈತರ ಬಿತ್ತನೆ ಎಷ್ಟಾಗಿದೆ, ಬೆಳೆ ಹಾನಿ‌ ಎಷ್ಟಾಗಿದೆ ಎಂದು ಕಂದಾಯ ಇಲಾಖೆ ಮುಖಾಂತರ ಕೇಂದ್ರಕ್ಕೆ ವರದಿ ಕಳುಹಿಸಲಾಗಿದೆ. ಈ ತಿಂಗಳ ಕೊನೆ ತನಕ ಏನು ಮಾಡಲು ಆಗುವುದಿಲ್ಲ. ಬಳಿಕ ಬರ ಘೋಷಣೆ ಮಾಡುವ ಬಗ್ಗೆ ತೀರ್ಮಾನವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಕೃಷಿಕಾರ್ಮಿಕ‌, ಕೂಲಿ ಕಾರ್ಮಿಕರ ವಿಚಾರವಾಗ ಚರ್ಚೆಯಾಗಿದೆ. ಬರ ಘೋಷಣೆ ಮಾಡುವುದು ಕೇಂದ್ರ, ಪೂರಕ ದಾಖಲೆ ಒದಗಿಸುವುದು ರಾಜ್ಯ ಸರ್ಕಾರ ಎಂದಿದ್ದಾರೆ. ಇದೇ ವೇಳೆ ಬರ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡ್ತೀರಾ ಎನ್ನುವ ಪ್ರಶ್ನೆಗೆ ಸಚಿವರು ಏನು ಹೇಳಿದ್ದಾರೆ ಕೇಳಿ.

Follow Us