AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್ ದೇಶದ ಝಪೋರಿಝಿಯಾ ನಗರದಲ್ಲಿ ತಡರಾತ್ರಿ ರಷ್ಯಾ ಕ್ಷಿಪಣಿ ದಾಳಿ: 17 ಮಂದಿ ಸಾವು

12 ರಷ್ಯಾದ ಕ್ಷಿಪಣಿಗಳು ಒಂಬತ್ತು ಅಂತಸ್ತಿನ ಕಟ್ಟಡವನ್ನು ಭಾಗಶಃ ನಾಶಪಡಿಸಿದ್ದು ಐದು ವಸತಿ ಕಟ್ಟಡಗಳನ್ನು ನೆಲಸಮಗೊಳಿಸಿದವು ಎಂದು ಝಪೋರಿಝಿಯಾದಲ್ಲಿನ ಉಕ್ರೇನಿಯನ್ ಪ್ರಾದೇಶಿಕ ಗವರ್ನರ್ ಓಲೆಕ್ಸಾಂಡರ್ ಸ್ಟಾರುಖ್ ಹೇಳಿದ್ದಾರೆ.

ಉಕ್ರೇನ್ ದೇಶದ ಝಪೋರಿಝಿಯಾ ನಗರದಲ್ಲಿ ತಡರಾತ್ರಿ ರಷ್ಯಾ ಕ್ಷಿಪಣಿ ದಾಳಿ: 17 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Oct 09, 2022 | 5:01 PM

Share

ಉಕ್ರೇನ್ ದೇಶದ ಆಗ್ನೇಯ ನಗರವಾದ ಝಪೋರಿಝಿಯಾ (Zaporizhzhia) ಮೇಲೆ ರಷ್ಯಾದ (Russia) ಕ್ಷಿಪಣಿ ದಾಳಿಯಿಂದ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ದಾಳಿಯಲ್ಲಿ ಹತ್ತಾರು ಜನರು ಗಾಯಗೊಂಡಿದ್ದು ಹಲವಾರು ವಸತಿ ಕಟ್ಟಡಗಳು ನಾಶವಾಗಿವೆ. ನಗರವು ಉಕ್ರೇನಿಯನ್ ನಿಯಂತ್ರಣದಲ್ಲಿದೆ. ಆದರೆ ಇದು ಕಳೆದ ತಿಂಗಳು ಅದನ್ನು ಸ್ವಾಧೀನಪಡಿಸಿಕೊಂಡಿತು ಎಂದು ರಷ್ಯಾ ಹೇಳಿಕೊಂಡ ಪ್ರದೇಶದ ಭಾಗವಾಗಿದೆ. ಉಕ್ರೇನ್‌ನ ದಕ್ಷಿಣ ಮತ್ತು ಈಶಾನ್ಯದಲ್ಲಿ ಸೋಲನ್ನು ಅನುಭವಿಸಿದ ನಂತರ ರಷ್ಯಾ ನಗರ ಪ್ರದೇಶಗಳಿಗೆ ಹಿಮ್ಮೆಟ್ಟಿಸಿದ ಕಾರಣ, ಇತ್ತೀಚಿನ ವಾರಗಳಲ್ಲಿ ಝಪೊರಿಝಿಯಾ ಮೇಲೆ ದಾಳಿ ನಡೆದಿದೆ. ನಗರದಿಂದ ಸುಮಾರು 30 ಮೈಲು (52km) ದೂರದಲ್ಲಿರುವ ಅದರ ಪರಮಾಣು ವಿದ್ಯುತ್ ಸ್ಥಾವರವನ್ನು ಒಳಗೊಂಡಂತೆ ಝಪೋರಿಝಿಯಾ ಪ್ರದೇಶದ ಭಾಗಗಳು ಆಕ್ರಮಣದ ಆರಂಭದಿಂದಲೂ ರಷ್ಯಾದ ನಿಯಂತ್ರಣದಲ್ಲಿದೆ.

12 ರಷ್ಯಾದ ಕ್ಷಿಪಣಿಗಳು ಒಂಬತ್ತು ಅಂತಸ್ತಿನ ಕಟ್ಟಡವನ್ನು ಭಾಗಶಃ ನಾಶಪಡಿಸಿದ್ದು ಐದು ವಸತಿ ಕಟ್ಟಡಗಳನ್ನು ನೆಲಸಮಗೊಳಿಸಿದವು ಎಂದು ಝಪೋರಿಝಿಯಾದಲ್ಲಿನ ಉಕ್ರೇನಿಯನ್ ಪ್ರಾದೇಶಿಕ ಗವರ್ನರ್ ಓಲೆಕ್ಸಾಂಡರ್ ಸ್ಟಾರುಖ್ ಹೇಳಿದ್ದಾರೆ.

ಅವಶೇಷಗಳಡಿಯಲ್ಲಿ ಇನ್ನೂ ಹೆಚ್ಚಿನ ಜನರು ಇರಬಹುದು. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಎಂಟು ಜನರನ್ನು ರಕ್ಷಿಸಲಾಗಿದೆ ಎಂದು ಅವರು ಟೆಲಿಗ್ರಾಂನಲ್ಲಿ ತಿಳಿಸಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಶೆಲ್ ದಾಳಿಯನ್ನು ಮತ್ತೆ ಶಾಂತಿಯುತ ಜನರ ಮೇಲೆ ದಯೆಯಿಲ್ಲದ ದಾಳಿ ಎಂದು ಕರೆದರು.

ಇದು ನೀಚ ಕೃತ್ಯ, ಅನಾಗರಿಕ ಮತ್ತು ಭಯೋತ್ಪಾದನೆ. ಈ ಆದೇಶವನ್ನು ನೀಡಿದವರಿಂದ ಹಿಡಿದು ಈ ಆದೇಶವನ್ನು ಪೂರೈಸಿದ ಎಲ್ಲರೂ ಕಾನೂನಿನ ಮುಂದೆ ಮತ್ತು ಜನರ ಮುಂದೆ ಜವಾಬ್ದಾರಿಯನ್ನು ಹೊರಬೇಕು ಎಂದಿದ್ದಾರೆ.

ದಾಳಿಯಿಂದಾದ ಹೆಚ್ಚಿನ ಹಾನಿಯಾಗುವುದನ್ನು ತಡೆಯಲು ಐಎಇಎ ರಕ್ಷಣಾ ವಲಯಕ್ಕೆ ಒತ್ತಾಯಿಸುತ್ತಿದೆ. ಶೆಲ್ ದಾಳಿಗೆ ರಷ್ಯಾ ಮತ್ತು ಉಕ್ರೇನ್ ಪರಸ್ಪರ ದೂಷಿಸಿಕೊಂಡಿವೆ.

ಏತನ್ಮಧ್ಯೆ, ರಷ್ಯಾದ ಡೈವರ್‌ಗಳು ಆಕ್ರಮಿತ ಕ್ರೈಮಿಯಾವನ್ನು ರಷ್ಯಾದೊಂದಿಗೆ ಸಂಪರ್ಕಿಸುವ ರಸ್ತೆ ಮತ್ತು ರೈಲು ಸೇತುವೆಯ ಮೇಲೆ ಶನಿವಾರದ ಸ್ಫೋಟದಿಂದ ಉಂಟಾದ ಹಾನಿಯ ಸಂಪೂರ್ಣ ಪರೀಕ್ಷೆಯನ್ನು ಪ್ರಾರಂಭಿಸಿದ್ದಾರೆ. ಒಂದು ಪಥದಲ್ಲಿ ಸೀಮಿತ ಸಂಚಾರವನ್ನು ಪುನರಾರಂಭಿಸಲಾಗಿದ್ದರೂ, ಸೇತುವೆಯ ಒಂದು ಭಾಗವು ಸ್ಫೋಟದಿಂದ ಕುಸಿದಿದೆ.

ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ.

Published On - 4:59 pm, Sun, 9 October 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್