AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನ್ ಪಾಸ್​​ಪೋರ್ಟ್, ರಾಷ್ಟ್ರೀಯ ಗುರುತಿನ ಚೀಟಿ ಬದಲಾಯಿಸಲಿದೆ ತಾಲಿಬಾನ್: ವರದಿ

Taliban: ಅಫ್ಘಾನ್ ಪಾಸ್‌ಪೋರ್ಟ್‌ಗಳು ಮತ್ತು ಎನ್‌ಐಡಿಗಳು "ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ" ಎಂಬ ಹೆಸರನ್ನು ಹೊಂದಿರಬಹುದು ಎಂದು ತಾಲಿಬಾನ್ ಮಾಹಿತಿ ಮತ್ತು ಸಂಸ್ಕೃತಿಯ ಉಪ ಮಂತ್ರಿ ಮತ್ತು ವಕ್ತಾರ ಜಬೀವುಲ್ಲಾ ಮುಜಾಹಿದ್...

ಅಫ್ಘಾನ್ ಪಾಸ್​​ಪೋರ್ಟ್, ರಾಷ್ಟ್ರೀಯ ಗುರುತಿನ ಚೀಟಿ ಬದಲಾಯಿಸಲಿದೆ ತಾಲಿಬಾನ್: ವರದಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Sep 26, 2021 | 3:03 PM

Share

ಕಾಬೂಲ್: ತಾಲಿಬಾನ್ ಅಪ್ಘಾನ್ ಪಾಸ್‌ಪೋರ್ಟ್‌ಗಳನ್ನು ಮತ್ತು ಹಿಂದಿನ ಸರ್ಕಾರದಿಂದ ನೀಡಲಾದ ರಾಷ್ಟ್ರೀಯ ಗುರುತಿನ ಚೀಟಿಗಳನ್ನು ಬದಲಾಯಿಸುವುದಾಗಿ ಘೋಷಿಸಿದೆ ಮತ್ತು ದಾಖಲೆಗಳು ಸದ್ಯಕ್ಕೆ ಮಾನ್ಯವಾಗಿರುತ್ತವೆ ಎಂದು ಸ್ಥಳೀಯ ಮಾಧ್ಯಮ ವರದಿ ತಿಳಿಸಿದೆ. ಅಫ್ಘಾನ್ ಪಾಸ್‌ಪೋರ್ಟ್‌ಗಳು ಮತ್ತು ಎನ್‌ಐಡಿಗಳು “ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ” ಎಂಬ ಹೆಸರನ್ನು ಹೊಂದಿರಬಹುದು ಎಂದು ತಾಲಿಬಾನ್ ಮಾಹಿತಿ ಮತ್ತು ಸಂಸ್ಕೃತಿಯ ಉಪ ಮಂತ್ರಿ ಮತ್ತು ವಕ್ತಾರ ಜಬೀವುಲ್ಲಾ ಮುಜಾಹಿದ್ ಅವರನ್ನು ಉಲ್ಲೇಖಿಸಿ ಎಂದು ಖಾಮಾ ಪ್ರೆಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಹಿಂದಿನ ಸರ್ಕಾರ ನೀಡಿದ ದಾಖಲೆಗಳು ದೇಶದ ಕಾನೂನು ದಾಖಲೆಗಳಾಗಿ ಇಂದಿಗೂ ಮಾನ್ಯವಾಗಿವೆ ಎಂದು ಮುಜಾಹಿದ್ ಹೇಳಿದ್ದಾರೆ.

ಸುದ್ದಿಸಂಸ್ಥೆಯ ಪ್ರಕಾರ ಅಫ್ಘಾನಿಸ್ತಾನದಲ್ಲಿ ಪಾಸ್‌ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ವಿಭಾಗಗಳು ಇನ್ನೂ ತೆರೆದಿಲ್ಲ. ಅವರ ಬಯೋಮೆಟ್ರಿಕ್ ಮಾಡಿದವರು ಮಾತ್ರ ಈ ದಾಖಲೆಗಳನ್ನು ಪಡೆಯಬಹುದಾಗಿದೆ. ತಾಲಿಬಾನ್ ಈಗಾಗಲೇ ದೇಶದ ಬದಲಾವಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ಅಪ್ಘಾನಿಸ್ತಾನವನ್ನು ವಶವಡಿಸಿಕೊಂಡ ನಂತರ ಅವರು ಮಹಿಳಾ ಸಚಿವಾಲಯವನ್ನು “ಪ್ರಾರ್ಥನೆ ಮತ್ತು ಮಾರ್ಗದರ್ಶನ ಸಚಿವಾಲಯಗಳು ಮತ್ತು ಸದ್ಗುಣಗಳ ಅಭಿವೃದ್ಧಿ ಮತ್ತು ಅನೀತಿ ತಡೆಗಟ್ಟುವಿಕೆ” ಎಂದು ಬದಲಿಸಿದೆ. ಅದೇ ವೇಳೆ ಶಾಲೆಗಳಿಗೆ ಮರಳಲು ಅವಕಾಶ ನೀಡುವುದಿಲ್ಲ ಮತ್ತು ಅಪರಾಧಿಗಳನ್ನು ತಡೆಯಲು ಅಂಗಚ್ಛೇದನ ಮತ್ತು ಮರಣದಂಡನೆಯಂತಹ ಶಿಕ್ಷೆಗಳನ್ನು ಮರುಸ್ಥಾಪಿಸಲಾಗಿದೆ.

ಶನಿವಾರ ಪಶ್ಚಿಮ ಅಫ್ಘಾನಿಸ್ತಾನ ನಗರ ಹೆರಾತ್‌ನ ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು, ತಾಲಿಬಾನ್‌ಗಳು ಶಂಕಿತನಾಲ್ಕು ಅಪಹರಣಕಾರರನ್ನು ಕೊಂದಿದ್ದಾರೆ ಮತ್ತು ಇತರರನ್ನು ತಡೆಯಲು ಅವರ ದೇಹಗಳನ್ನು ಸಾರ್ವಜನಿಕವಾಗಿ ನೇತುಹಾಕಿದ್ದಾರೆ ಎಂದು ಹೇಳಿದರು.

ಸ್ಥಳೀಯ ಉದ್ಯಮಿ ಮತ್ತು ಆತನ ಮಗನನ್ನು ಅಪಹರಿಸಿದ್ದಾರೆ ಮತ್ತು ನಗರದ ಸುತ್ತ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ ಗಸ್ತು ಸಿಬ್ಬಂದಿಅವರನ್ನು ಕಂಡಾಗ ಅವರನ್ನು ನಗರದಿಂದ ಹೊರಗೆ ಕರೆದೊಯ್ಯಲು ಪ್ರಯತ್ನಿಸಿದರು ಎಂದು ಹೆರತ್‌ನ ಉಪ ಗವರ್ನರ್ ಶೇರ್ ಅಹ್ಮದ್ ಅಮ್ಮರ್ ಹೇಳಿದ್ದಾರೆ. ಗುಂಡಿನ ಚಕಮಕಿಯಲ್ಲಿ ನಾಲ್ವರು ಸಾವನ್ನಪ್ಪಿದರು ಮತ್ತು ಒಬ್ಬ ತಾಲಿಬಾನ್ ಯೋಧ ಗಾಯಗೊಂಡರು. “ಅವರ ದೇಹಗಳನ್ನು ಮುಖ್ಯ ಚೌಕಕ್ಕೆ ತರಲಾಯಿತು ಮತ್ತು ಇತರ ಅಪಹರಣಕಾರರಿಗೆ ಪಾಠವಾಗಿ ನಗರದಲ್ಲಿ ನೇತು ಹಾಕಲಾಗಿದೆ” ಎಂದು ಅವರು ಹೇಳಿದರು.

ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹಿರಿಯ ತಾಲಿಬಾನ್ ನಾಯಕ ಮುಲ್ಲಾ ನೂರುದ್ದೀನ್ ತುರಾಬಿ ಅವರು ಅಪರಾಧಿಗಳನ್ನು ತಡೆಯಲು ಅಂಗಚ್ಛೇದನ ಮತ್ತು ಮರಣದಂಡನೆಯಂತಹ ಶಿಕ್ಷೆಗಳನ್ನು ಪುನಃಸ್ಥಾಪಿಸುವುದಾಗಿ ಹೇಳಿದರು. ಶಿಕ್ಷೆಗಳು ಮತ್ತು ಇತರ ಕ್ರಮಗಳ ಕುರಿತು ಗುಂಪಿನ ಟೀಕೆಗಳನ್ನು ಖಂಡಿಸಿರುವ ಹಲವಾರು ದೇಶಗಳು, ಕಾಬೂಲ್‌ನಲ್ಲಿ ತಾಲಿಬಾನ್ ನೇತೃತ್ವದ ಸರ್ಕಾರಕ್ಕೆ ಯಾವುದೇ ಸಂಭಾವ್ಯ ಮಾನ್ಯತೆ ಮಾನವ ಹಕ್ಕುಗಳ ಗೌರವವನ್ನು ಅವಲಂಬಿಸಿರುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: Bhabanipur Bypoll ಮೋದಿ ಜೀ, ನಾವು ಭಾರತವನ್ನು ತಾಲಿಬಾನ್ ಮಾಡಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ

ಇದನ್ನೂ ಓದಿ: ಅಧಿಕಾರಕ್ಕಾಗಿ ಕಿತ್ತಾಟ; ತಾಲಿಬಾನ್ ನಾಯಕ ಮುಲ್ಲಾ ಬರದಾರ್ ಒತ್ತೆಯಾಳು, ಹೈಬತುಲ್ಲಾ ಅಖುಂಡಜಾದ ಸಾವು: ವರದಿ

(Taliban to change Afghan passports and national identity cards by the previous government says Report )

Published On - 3:02 pm, Sun, 26 September 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ