AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಪ ತೋರುವ ಚೀನಾಕ್ಕೆ ಮತ್ತೊಮ್ಮೆ ಮುಖಭಂಗ -ಎಲ್ಲಿ? ಹೇಗೆ?

ಈ ಬಾರಿ ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗಕ್ಕೆ ನಡೆದ ಚುನಾವಣೆಯಲ್ಲಿ ಚೀನಾ ಆಯ್ಕೆ ಆಗಿದ್ದಕ್ಕೆ ಆ ದೇಶದಲ್ಲಿ ವಿಜಯೋತ್ಸವವೂ ನಡೆಯಲಿಲ್ಲ. ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳ ನಡುವೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಆಯ್ಕೆಯಾದ ಉಳಿದ 14 ರಾಷ್ಟ್ರಗಳಿಗಿಂತ ಕಡಿಮೆ ಮತ ಗಳಿಸಿ ಆಯ್ಕೆಯಾದ ಚೀನಾಕ್ಕೆ ಮುಖಭಂಗ ಅನುಭವಿಸಿದಂತೆ ಆಗಿದೆ. ಕಳೆದ ಬಾರಿ ಟಾಂ ಟಾಂ ಹೊಡೆದಿತ್ತು. ಆದರೆ, ಈ ಬಾರಿ ಹಾಗಾಗಿಲ್ಲ.. ಒಟ್ಟು 47-ಸದಸ್ಯ ರಾಷ್ಟ್ರಗಳ ಈ ಮಾನವ ಹಕ್ಕು ಆಯೋಗದ ಚುನಾವಣೆಯಲ್ಲಿ, ಚೀನಾ ಈ […]

ದರ್ಪ ತೋರುವ ಚೀನಾಕ್ಕೆ ಮತ್ತೊಮ್ಮೆ ಮುಖಭಂಗ -ಎಲ್ಲಿ? ಹೇಗೆ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Oct 21, 2020 | 5:11 PM

Share

ಈ ಬಾರಿ ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗಕ್ಕೆ ನಡೆದ ಚುನಾವಣೆಯಲ್ಲಿ ಚೀನಾ ಆಯ್ಕೆ ಆಗಿದ್ದಕ್ಕೆ ಆ ದೇಶದಲ್ಲಿ ವಿಜಯೋತ್ಸವವೂ ನಡೆಯಲಿಲ್ಲ. ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳ ನಡುವೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಆಯ್ಕೆಯಾದ ಉಳಿದ 14 ರಾಷ್ಟ್ರಗಳಿಗಿಂತ ಕಡಿಮೆ ಮತ ಗಳಿಸಿ ಆಯ್ಕೆಯಾದ ಚೀನಾಕ್ಕೆ ಮುಖಭಂಗ ಅನುಭವಿಸಿದಂತೆ ಆಗಿದೆ.

ಕಳೆದ ಬಾರಿ ಟಾಂ ಟಾಂ ಹೊಡೆದಿತ್ತು. ಆದರೆ, ಈ ಬಾರಿ ಹಾಗಾಗಿಲ್ಲ.. ಒಟ್ಟು 47-ಸದಸ್ಯ ರಾಷ್ಟ್ರಗಳ ಈ ಮಾನವ ಹಕ್ಕು ಆಯೋಗದ ಚುನಾವಣೆಯಲ್ಲಿ, ಚೀನಾ ಈ ಬಾರಿ 139 ಮತ ಗಳಿಸಿತು. ಈ ಹಿಂದೆ 2016 ರಲ್ಲಿ ಇದೇ ಆಯೋಗಕ್ಕೆ ಚೀನಾ ಆಯ್ಕೆ ಆದಾಗ, ಅದಕ್ಕೆ ಬಿದ್ದ ಮತ ಎಷ್ಟು ಗೊತ್ತಾ? ಬರೋಬ್ಬರಿ 180. ಈ ಹಿಂದೆ 2009 ಮತ್ತು 2013 ರಲ್ಲಿ ಈ ಆಯೋಗಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚೀನಾ ಗಳಿಸಿದ್ದ 167 ಮತಗಳಿಗಿಂತ ಜಾಸ್ತಿ ಆಗಿತ್ತು. ಮಾನವ ಹಕ್ಕಿಗೆ ಕೊಟ್ಟ ಮಹತ್ವ ಅರಿತು ಅಷ್ಟೆಲ್ಲಾ ಮತ ತನಗೆ ಬಂದಿತ್ತು ಎಂದು ಚೀನಾ ತನ್ನ ದೇಶದೊಳಗೆ ಟಾಂ ಟಾಂ ಮಾಡಿತ್ತು. ಆದರೆ, ಈ ಬಾರಿ ಹಾಗಾಗಲಿಲ್ಲ.

ಮಾನವ ಹಕ್ಕಿನ ವಿಷಯ ಇಟ್ಟುಕೊಂಡು ಅನೇಕ ದೇಶಗಳು ಚೀನಾವನ್ನು ಟೀಕಿಸಿವೆ. ವಿಶ್ವ ಸಂಸ್ಥೆ ಜನರಲ್ ಅಸೆಂಬ್ಲಿಯ ಮೂರನೇ ಸಮಿತಿಯಲ್ಲಿ ಆ ದೇಶದ ಮೇಲೆ ಹಲವಾರು ಆರೋಪ ಮಾಡಿತ್ತು. ಅದರಲ್ಲಿ ಮೊದಲ ಕಾರಣ: ಷಿನ್ ಜಿಯಾಂಗ್ ಪ್ರಾಂತದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಯ ಆರೋಪ. ಅದೇ ರೀತಿಯಲ್ಲಿ ಹಾಂಗ್ ಕಾಂಗ್ ಮತ್ತು ಟಿಬೆಟ್ ನಲ್ಲಿ ಸಹ ಮಾನವ ಹಕ್ಕು ಉಲ್ಲಂಘನೆ ಮಾಡಿರುವ ಗುರುತರ ಆರೋಪವನ್ನು ಚೀನಾ ಎದುರಿಸುತ್ತಿದೆ. ಕಳೆದ ವರ್ಷ 40 ಕ್ಕೂ ಹೆಚ್ಚು ರಾಷ್ಟ್ರಗಳು ಈ ಕುರಿತು ಕಳವಳ ವ್ಯಕ್ತಪಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ತೀರಾ ಇತ್ತೀಚೆಗೆ ಅಂದರೆ ಆಕ್ಟೋಬರ್ 14 ರಂದು, 39 ಸದಸ್ಯ ರಾಷ್ಟ್ರಗಳು ಈ ಕುರಿತು ಚೀನಾವನ್ನು ಟೀಕಿಸಿವೆ.

ಚೀನಾದ ಕುಸಿಯುತ್ತಿರುವ ಜನಪ್ರಿಯತೆಗೆ, ಆ ದೇಶ ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಹದಗೆಡಿಸಿಕೊಂಡಿರುವ ಸಂಬಂಧ ಕೂಡ ಕಾರಣ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಷಿಸಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ, ಚೀನಾ ತನ್ನ ನೆರೆಹೊರೆಯ 12 ರಾಷ್ಟ್ರಗಳೊಂದಿಗೆ ಒಂದಲ್ಲ ಒಂದು ರೀತಿಯ ಗಡಿ ತಂಟೆಗಿಳಿದಿದೆ. ಈ ಹಿನ್ನೆಲೆಯಲ್ಲಿ, ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯ ತಮ್ಮದೆ ಆದ ಹೊಸದೊಂದು ಗುಂಪು ಮಾಡಿಕೊಂಡು ಚೀನಾದ ಕ್ಯಾತೆ ಎದುರಿಸಲು ಸಜ್ಜಾಗಿವೆ. ಮತ್ತು ದಕ್ಷಿಣ ಚೀನಾ ಸಾಗರ (South China Sea) ಪ್ರದೇಶದಲ್ಲಿ ಚೀನಾವನ್ನು ಮಟ್ಟ ಹಾಕಿ ಆ ಜಲ ಸಾಗರವನ್ನು ಎಲ್ಲರ ಉಪಯೋಗಕ್ಕೂ ದೊರೆಯುವಂತೆ ಮಾಡಲು ಹೊರಟಿದೆ. ಈ ಹಿನ್ನೆಲೆಯಲ್ಲಿ, ಚೀನಾ ಈ ಬಾರಿ ಮಾನವ ಹಕ್ಕು ಆಯೋಗದ ಚುನಾವಣೆಯಲ್ಲಿ ತಾನು ಗೆದ್ದರೂ ಬೀಗದೇ ಸುಮ್ಮನೆ ಕುಳಿತಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?