AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಹುಗಾರಿಕೆ ನಡೆಸಲು ಜಲಾಂತರ್ಗಾಮಿ ಡ್ರೋಣ್​ ಬಳಸಿದ ಚೀನಾ

ಮೂರು ಸೆನ್ಸಾರ್​ಗಳನ್ನು ಹೊಂದಿರುವ ಡ್ರೋಣ್​ ಉಷ್ಣಾಂಶ, ನೀರಿನ ಏರಿಳಿತ, ಸಮುದ್ರದ ನೀರಿನಲ್ಲಿಯ ಉಪ್ಪಿನಂಶಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿತ್ತು ಎಂದು ಇಂಡೋನೇಷ್ಯಾದ ನೌಕಾದಳದ ತಜ್ಞರು ತಿಳಿಸಿದ್ದಾರೆ.

ಬೇಹುಗಾರಿಕೆ ನಡೆಸಲು ಜಲಾಂತರ್ಗಾಮಿ ಡ್ರೋಣ್​ ಬಳಸಿದ ಚೀನಾ
ಪತ್ತೆಯಾದ ಜಲಾಂತರ್ಗಾಮಿ ಡ್ರೋಣ್
guruganesh bhat
| Edited By: |

Updated on: Jan 11, 2021 | 3:33 PM

Share

ಜಕಾರ್ತಾ: ತನ್ನ ನೆರೆರಾಷ್ಟ್ರಗಳ ಸರಹದ್ದು ಅತಿಕ್ರಮಿಸುವ ಚೀನಾದ ಚಾಳಿ ಮುಂದುವರೆದಿದೆ. ಇಂಡೋನೇಷ್ಯಾದ ಮೀನುಗಾರರು ಸೆಲೆಯಾರ್ ದ್ವೀಪದ ಬಳಿ ಚೀನಾದ ಜಲಾಂತರ್ಗಾಮಿ ಡ್ರೋಣ್​ಗಳನ್ನು ಪತ್ತೆಹಚ್ಚಿದ್ದಾರೆ. ಚೀನಾದ ಬೀಜಿಂಗ್ ಹಡಗು ಮಾರ್ಗದಿಂದ ಅನತಿ ದೂರದಲ್ಲೇ ಈ ಡ್ರೋಣ್​ಗಳು ಪತ್ತೆಯಾಗಿದ್ದು, ಇಂಡೋನೇಷ್ಯಾದ ಮಾಧ್ಯಮಗಳು ಚೀನಾದ ಒಳನುಸುಳುವಿಕೆಯ ಧೋರಣೆಯನ್ನು ಟೀಕಿಸಿವೆ.

ಹಿಂದೂ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರವನ್ನು ಸಂಪರ್ಕಿಸುವ ಈ ಹಡಗು ಮಾರ್ಗದಲ್ಲಿ ಈ ಜಲಾಂತರ್ಗಾಮಿ ಡ್ರೋನ್​ಗಳು ಪತ್ತೆಯಾಗಿದ್ದು, ಭಾರತಕ್ಕೂ ಅಪಾಯದ ಮುನ್ಸೂಚನೆ ಎದುರಾಗಿದೆ. ಇಂಡೋನೇಷ್ಯಾ ಈ ಸಮುದ್ರ ಪ್ರದೇಶವನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಘೋಷಿಸಿದ್ದು, ಚೀನಾ ಈ ಮುನ್ನವೇ ಈ ಸಮುದ್ರ ಪ್ರದೇಶವು ತನಗೆ ಸೇರಿದ್ದೆಂದು ವಾದ ಮಂಡಿಸಿತ್ತು. ಈ ಜಲಮಾರ್ಗವು ಆಸ್ಟ್ರೇಲಿಯಾಕ್ಕೆ ಸರಕು ಸಾಗಾಣಿಕಾ ಹಡಗು ಸಂಚರಿಸುವಲ್ಲೂ ಪ್ರಮುಖ ಪಾತ್ರ ವಹಿಸಿದೆ.

ಚೀನಾದ ಡ್ರೋಣ್​ಗಳೇ ಎಂದ ತಜ್ಞರು ರೆಕ್ಕೆಯಂತಹ ರಚನೆಯನ್ನು ಹೊಂದಿರುವ ಈ ಜಲಾಂತರ್ಗಾಮಿ ಡ್ರೋಣ್​ಗಳು ಅಷ್ಟೇನೂ ಶಕ್ತಿಯುತವಾಗದಿದ್ದರೂ, ಸಮುದ್ರದಾಳದಿಂದಲೇ ಸುತ್ತಲಿನ ಆಗುಹೋಗುಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿವೆ. ಅವುಗಳು 225 ಸೆಂ.ಮೀಟರ್ ಉದ್ದ, 50 ಸೆಂ.ಮೀ ಅಗಲದ ರೆಕ್ಕೆ ಮತ್ತು 93 ಸೆಂ. ಮೀ ಉದ್ದದ ಆಂಟೆನಾಗಳನ್ನು ಹೊಂದಿವೆ ಎಂದು ಇಂಡೋನೇಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕಾ,ಫ್ರಾನ್ಸ್​ಗಳು ಸಹ ಇಂತಹ ಜಲಾಂತರ್ಗಾಮಿ ಡ್ರೋಣ್​ಗಳನ್ನು ಬಳಸುತ್ತವೆಯಾದರೂ, ಮೀನುಗಾರರಿಗೆ ದೊರೆತ ಡ್ರೋಣ್​ಗಳು ಚೀನಾ ತಯಾರಿಸಿದಂತಿವೆ ಎಂದು ವರದಿ ತಿಳಿಸಿದೆ. ಮೂರು ಸೆನ್ಸಾರ್​ಗಳನ್ನು ಹೊಂದಿರುವ ಡ್ರೋಣ್​ ಉಷ್ಣಾಂಶ, ನೀರಿನ ಏರಿಳಿತ, ಸಮುದ್ರದ ನೀರಿನಲ್ಲಿಯ ಉಪ್ಪಿನಂಶಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿತ್ತು ಎಂದು ಇಂಡೋನೇಷ್ಯಾದ ನೌಕಾದಳದ ತಜ್ಞರು ತಿಳಿಸಿದ್ದಾರೆ.

2019ರಲ್ಲೂ ಇಂಡೋನೇಷ್ಯಾ ಮತ್ತು ಸಿಂಗಾಪುರದ ನಡುವಿನ ಮಲಕ್ಕಾ ಜಲಸಂಧಿಯ ಬಳಿ ಪತ್ತೆಯಾಗಿದ್ದವು. 2020 ರ ಜನವರಿಯಲ್ಲಿ ದಕ್ಷಿಣ ಇಂಡೋನೇಷ್ಯಾದ ಸುಂಡಾ ದ್ವೀಪದ ಬಳಿಯೂ ಜಲಾಂತರ್ಗಾಮಿ ಡ್ರೋಣ್​ಗಳು ಪತ್ತೆಯಾಗಿದ್ದವು.

ನಾಪತ್ತೆಯಾಗಿದ್ದ ಬೋಯಿಂಗ್ 737-500 ವಿಮಾನ ಸಮುದ್ರದಲ್ಲಿ ಪತನ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ