AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಹುಗಾರಿಕೆ ನಡೆಸಲು ಜಲಾಂತರ್ಗಾಮಿ ಡ್ರೋಣ್​ ಬಳಸಿದ ಚೀನಾ

ಮೂರು ಸೆನ್ಸಾರ್​ಗಳನ್ನು ಹೊಂದಿರುವ ಡ್ರೋಣ್​ ಉಷ್ಣಾಂಶ, ನೀರಿನ ಏರಿಳಿತ, ಸಮುದ್ರದ ನೀರಿನಲ್ಲಿಯ ಉಪ್ಪಿನಂಶಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿತ್ತು ಎಂದು ಇಂಡೋನೇಷ್ಯಾದ ನೌಕಾದಳದ ತಜ್ಞರು ತಿಳಿಸಿದ್ದಾರೆ.

ಬೇಹುಗಾರಿಕೆ ನಡೆಸಲು ಜಲಾಂತರ್ಗಾಮಿ ಡ್ರೋಣ್​ ಬಳಸಿದ ಚೀನಾ
ಪತ್ತೆಯಾದ ಜಲಾಂತರ್ಗಾಮಿ ಡ್ರೋಣ್
guruganesh bhat
| Edited By: |

Updated on: Jan 11, 2021 | 3:33 PM

Share

ಜಕಾರ್ತಾ: ತನ್ನ ನೆರೆರಾಷ್ಟ್ರಗಳ ಸರಹದ್ದು ಅತಿಕ್ರಮಿಸುವ ಚೀನಾದ ಚಾಳಿ ಮುಂದುವರೆದಿದೆ. ಇಂಡೋನೇಷ್ಯಾದ ಮೀನುಗಾರರು ಸೆಲೆಯಾರ್ ದ್ವೀಪದ ಬಳಿ ಚೀನಾದ ಜಲಾಂತರ್ಗಾಮಿ ಡ್ರೋಣ್​ಗಳನ್ನು ಪತ್ತೆಹಚ್ಚಿದ್ದಾರೆ. ಚೀನಾದ ಬೀಜಿಂಗ್ ಹಡಗು ಮಾರ್ಗದಿಂದ ಅನತಿ ದೂರದಲ್ಲೇ ಈ ಡ್ರೋಣ್​ಗಳು ಪತ್ತೆಯಾಗಿದ್ದು, ಇಂಡೋನೇಷ್ಯಾದ ಮಾಧ್ಯಮಗಳು ಚೀನಾದ ಒಳನುಸುಳುವಿಕೆಯ ಧೋರಣೆಯನ್ನು ಟೀಕಿಸಿವೆ.

ಹಿಂದೂ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರವನ್ನು ಸಂಪರ್ಕಿಸುವ ಈ ಹಡಗು ಮಾರ್ಗದಲ್ಲಿ ಈ ಜಲಾಂತರ್ಗಾಮಿ ಡ್ರೋನ್​ಗಳು ಪತ್ತೆಯಾಗಿದ್ದು, ಭಾರತಕ್ಕೂ ಅಪಾಯದ ಮುನ್ಸೂಚನೆ ಎದುರಾಗಿದೆ. ಇಂಡೋನೇಷ್ಯಾ ಈ ಸಮುದ್ರ ಪ್ರದೇಶವನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಘೋಷಿಸಿದ್ದು, ಚೀನಾ ಈ ಮುನ್ನವೇ ಈ ಸಮುದ್ರ ಪ್ರದೇಶವು ತನಗೆ ಸೇರಿದ್ದೆಂದು ವಾದ ಮಂಡಿಸಿತ್ತು. ಈ ಜಲಮಾರ್ಗವು ಆಸ್ಟ್ರೇಲಿಯಾಕ್ಕೆ ಸರಕು ಸಾಗಾಣಿಕಾ ಹಡಗು ಸಂಚರಿಸುವಲ್ಲೂ ಪ್ರಮುಖ ಪಾತ್ರ ವಹಿಸಿದೆ.

ಚೀನಾದ ಡ್ರೋಣ್​ಗಳೇ ಎಂದ ತಜ್ಞರು ರೆಕ್ಕೆಯಂತಹ ರಚನೆಯನ್ನು ಹೊಂದಿರುವ ಈ ಜಲಾಂತರ್ಗಾಮಿ ಡ್ರೋಣ್​ಗಳು ಅಷ್ಟೇನೂ ಶಕ್ತಿಯುತವಾಗದಿದ್ದರೂ, ಸಮುದ್ರದಾಳದಿಂದಲೇ ಸುತ್ತಲಿನ ಆಗುಹೋಗುಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿವೆ. ಅವುಗಳು 225 ಸೆಂ.ಮೀಟರ್ ಉದ್ದ, 50 ಸೆಂ.ಮೀ ಅಗಲದ ರೆಕ್ಕೆ ಮತ್ತು 93 ಸೆಂ. ಮೀ ಉದ್ದದ ಆಂಟೆನಾಗಳನ್ನು ಹೊಂದಿವೆ ಎಂದು ಇಂಡೋನೇಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕಾ,ಫ್ರಾನ್ಸ್​ಗಳು ಸಹ ಇಂತಹ ಜಲಾಂತರ್ಗಾಮಿ ಡ್ರೋಣ್​ಗಳನ್ನು ಬಳಸುತ್ತವೆಯಾದರೂ, ಮೀನುಗಾರರಿಗೆ ದೊರೆತ ಡ್ರೋಣ್​ಗಳು ಚೀನಾ ತಯಾರಿಸಿದಂತಿವೆ ಎಂದು ವರದಿ ತಿಳಿಸಿದೆ. ಮೂರು ಸೆನ್ಸಾರ್​ಗಳನ್ನು ಹೊಂದಿರುವ ಡ್ರೋಣ್​ ಉಷ್ಣಾಂಶ, ನೀರಿನ ಏರಿಳಿತ, ಸಮುದ್ರದ ನೀರಿನಲ್ಲಿಯ ಉಪ್ಪಿನಂಶಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿತ್ತು ಎಂದು ಇಂಡೋನೇಷ್ಯಾದ ನೌಕಾದಳದ ತಜ್ಞರು ತಿಳಿಸಿದ್ದಾರೆ.

2019ರಲ್ಲೂ ಇಂಡೋನೇಷ್ಯಾ ಮತ್ತು ಸಿಂಗಾಪುರದ ನಡುವಿನ ಮಲಕ್ಕಾ ಜಲಸಂಧಿಯ ಬಳಿ ಪತ್ತೆಯಾಗಿದ್ದವು. 2020 ರ ಜನವರಿಯಲ್ಲಿ ದಕ್ಷಿಣ ಇಂಡೋನೇಷ್ಯಾದ ಸುಂಡಾ ದ್ವೀಪದ ಬಳಿಯೂ ಜಲಾಂತರ್ಗಾಮಿ ಡ್ರೋಣ್​ಗಳು ಪತ್ತೆಯಾಗಿದ್ದವು.

ನಾಪತ್ತೆಯಾಗಿದ್ದ ಬೋಯಿಂಗ್ 737-500 ವಿಮಾನ ಸಮುದ್ರದಲ್ಲಿ ಪತನ

Follow Us
guruganesh bhat
guruganesh bhat
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?