ಭೂಮಿಯ ಹೊರಪದರದಲ್ಲಿ ಚೀನಾ 32,808 ಅಡಿ ಆಳದ ರಂಧ್ರವನ್ನು ಕೊರೆಯುತ್ತಿದೆ, ಇದರ ಹಿಂದಿರುವ ಉದ್ದೇಶ ಏನು?

ವರದಿಯ ಪ್ರಕಾರ ನೆಲದೊಳಗೆ ಕಿರಿದಾದ ಶಾಫ್ಟ್ 10 ಕ್ಕೂ ಹೆಚ್ಚು ಭೂಖಂಡದ ಸ್ತರಗಳನ್ನು ಅಥವಾ ಬಂಡೆಯ ಪದರಗಳನ್ನು ಭೇದಿಸಿ ಇದು ಭೂಮಿಯ ಹೊರಪದರದಲ್ಲಿನ ಕ್ರಿಟೇಶಿಯಸ್ ವ್ಯವಸ್ಥೆಯನ್ನು ತಲುಪುತ್ತದೆ. ಇಲ್ಲಿ ಸುಮಾರು 145 ಮಿಲಿಯನ್ ವರ್ಷಗಳ ಹಿಂದಿನ ಬಂಡೆ ಇದೆ.

ಭೂಮಿಯ ಹೊರಪದರದಲ್ಲಿ ಚೀನಾ 32,808 ಅಡಿ ಆಳದ ರಂಧ್ರವನ್ನು ಕೊರೆಯುತ್ತಿದೆ, ಇದರ ಹಿಂದಿರುವ ಉದ್ದೇಶ ಏನು?
ಭೂಮಿಯನ್ನು ಕೊರೆಯುತ್ತಿರುವ ಚೀನಾImage Credit source: Bloomberg
Follow us
|

Updated on: Jun 02, 2023 | 12:54 PM

ಚೀನಾದ (China) ವಿಜ್ಞಾನಿಗಳು ಭೂಮಿಯ ಹೊರಪದರದಲ್ಲಿ (Earth’s crust) 10,000-ಮೀಟರ್ (32,808 ಅಡಿ) ರಂಧ್ರವನ್ನು ಕೊರೆಯಲು ಪ್ರಾರಂಭಿಸಿದ್ದಾರೆ. ಭೂಮಿಯ ಮೇಲ್ಮೈ ಮೇಲೆ ಮತ್ತು ಕೆಳಗೆ ಹೊಸ ಗಡಿಗಳನ್ನು ಅನ್ವೇಷಿಸುವುದಕ್ಕಾಗಿ ಚೀನಾ ಈ ಸಾಹಸಕ್ಕೆ ಕೈ ಹಾಕಿದೆ. ಅಧಿಕೃತ ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ಪ್ರಕಾರ, ಚೀನಾದ ಅತ್ಯಂತ ಆಳವಾದ ಬೋರ್‌ಹೋಲ್‌ಗಾಗಿ ಮಂಗಳವಾರ ದೇಶದ ತೈಲ-ಸಮೃದ್ಧ ಕ್ಸಿನ್‌ಜಿಯಾಂಗ್ (Xinjiang) ಪ್ರದೇಶದಲ್ಲಿ ಕೊರೆಯುವಿಕೆ ಪ್ರಾರಂಭವಾಯಿತು. ಅಂದು ಬೆಳಿಗ್ಗೆ, ಚೀನಾ ತನ್ನ ಮೊದಲ ನಾಗರಿಕ ಗಗನಯಾತ್ರಿಯನ್ನು ಗೋಬಿ ಮರುಭೂಮಿಯಿಂದ ಬಾಹ್ಯಾಕಾಶಕ್ಕೆ ಕಳುಹಿಸಿತು.

ವರದಿಯ ಪ್ರಕಾರ ನೆಲದೊಳಗೆ ಕಿರಿದಾದ ಶಾಫ್ಟ್ 10 ಕ್ಕೂ ಹೆಚ್ಚು ಭೂಖಂಡದ ಸ್ತರಗಳನ್ನು ಅಥವಾ ಬಂಡೆಯ ಪದರಗಳನ್ನು ಭೇದಿಸಿ ಇದು ಭೂಮಿಯ ಹೊರಪದರದಲ್ಲಿನ ಕ್ರಿಟೇಶಿಯಸ್ ವ್ಯವಸ್ಥೆಯನ್ನು ತಲುಪುತ್ತದೆ. ಇಲ್ಲಿ ಸುಮಾರು 145 ಮಿಲಿಯನ್ ವರ್ಷಗಳ ಹಿಂದಿನ ಬಂಡೆ ಇದೆ. ಕೊರೆಯುವ ಯೋಜನೆಯ ನಿರ್ಮಾಣ ಎಷ್ಟು ಕಠಿಣವಾಗಿರುತ್ತದೆ ಎಂದರೆ ಇದನ್ನು ಎರಡು ತೆಳುವಾದ ಉಕ್ಕಿನ ಕೇಬಲ್‌ಗಳ ಮೇಲೆ ಚಾಲನೆ ಮಾಡುವ ದೊಡ್ಡ ಟ್ರಕ್‌ಗೆ ಹೋಲಿಸಬಹುದು ಎಂದು ಕ್ಸಿನ್ಹುವಾ ಜತೆ ಮಾತನಾಡಿದ ಚೀನೀ ಅಕಾಡೆಮಿ ಆಫ್ ಎಂಜಿನಿಯರಿಂಗ್‌ನ ವಿಜ್ಞಾನಿ ಸನ್ ಜಿನ್‌ಶೆಂಗ್ ಹೇಳಿದ್ದಾರೆ.

ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು 2021 ರಲ್ಲಿ ರಾಷ್ಟ್ರದ ಕೆಲವು ಪ್ರಮುಖ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಆಳವಾದ ಭೂಮಿಯ ಪರಿಶೋಧನೆಯಲ್ಲಿ ಹೆಚ್ಚಿನ ಪ್ರಗತಿಗೆ ಕರೆ ನೀಡಿದರು. ಅಂತಹ ಕೆಲಸವು ಖನಿಜ ಮತ್ತು ಶಕ್ತಿ ಸಂಪನ್ಮೂಲಗಳನ್ನು ಗುರುತಿಸುತ್ತದೆ ಮತ್ತು ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳಂತಹ ಪರಿಸರ ವಿಪತ್ತುಗಳ ಅಪಾಯಗಳನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮೆಕ್ಸಿಕೊದಲ್ಲಿ ಸೇನಾನೆಲೆ ಸ್ಥಾಪಿಸಿ ಕ್ಷಿಪಣಿ ನಿಲ್ಲಿಸಿದರೆ ಅಮೆರಿಕ ಸುಮ್ಮನಿರುತ್ತಾ: ಉಕ್ರೇನ್ ಮೇಲಿನ ದಾಳಿಗೆ ರಷ್ಯಾ ಕೊಡುವ ಸಮರ್ಥನೆ ಇದು

ಭೂಮಿಯ ಮೇಲಿನ ಅತ್ಯಂತ ಆಳವಾದ ಮಾನವ ನಿರ್ಮಿತ ರಂಧ್ರ ಅಂದರೆ ಅದು  ರಷ್ಯಾದ ಕೋಲಾ ಸೂಪರ್‌ಡೀಪ್ ಬೋರ್‌ಹೋಲ್. ಇದು 20 ವರ್ಷಗಳ ಕೊರೆಯುವಿಕೆಯ ನಂತರ 1989 ರಲ್ಲಿ 12,262 ಮೀಟರ್ (40,230 ಅಡಿ) ಆಳವನ್ನು ತಲುಪಿತ್ತು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು