ಯುದ್ಧದಲ್ಲೂ ಮಾನವೀಯತೆ ತೋರಿದ ಬಿಎಪಿಎಸ್ ಹಿಂದೂ ಮಂದಿರ; ಕಂಫರ್ಟ್ ಇನ್ ಕುವೈತ್ ಸಾಕ್ಷ್ಯಚಿತ್ರ ಇಲ್ಲಿದೆ
'ಕಂಫರ್ಟ್ ಇನ್ ಕುವೈತ್' ಎಂಬುದು 12 ನಿಮಿಷಗಳ ಸಾಕ್ಷ್ಯಚಿತ್ರವಾಗಿದ್ದು, ಇರಾನ್-ಇಸ್ರೇಲ್, ಅಮೆರಿಕದ ಯುದ್ಧದಲ್ಲಿ ಸಿಲುಕಿಕೊಂಡಿದ್ದ ಕುಟುಂಬಗಳು ಭಯ, ಗೊಂದಲವನ್ನು ಎದುರಿಸಿ, ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರ ಮತ್ತು ಅದರ ಸ್ವಯಂಸೇವಕರ ನಿಸ್ವಾರ್ಥ ಬೆಂಬಲದ ಮೂಲಕ ಹೇಗೆ ಮನೆಗೆ ತಲುಪಿದರು ಎಂಬುದರ ನೈಜ ಕಥೆಯಾಗಿದೆ. ಯುದ್ಧದಲ್ಲಿ ಸಿಲುಕಿದ್ದವರಿಗೆ ಅವರು ಆಹಾರ, ಆಶ್ರಯ, ಮಾರ್ಗದರ್ಶನ ನೀಡಿದರು.

ಅಬುಧಾಬಿ, ಮಾರ್ಚ್ 17: ಇರಾನ್ ಹಾಗೂ ಇಸ್ರೇಲ್, ಅಮೆರಿಕದ ನಡುವೆ ನಡೆಯುತ್ತಿರುವ ಯುದ್ಧದ ಅನಿಶ್ಚಿತತೆಯ ನಡುವೆ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರು ಪರದಾಡುವಂತಾಗಿದೆ. ಅಲ್ಲಿ ಸಿಲುಕಿರುವ ಭಾರತೀಯರಿಗೆ ಅಬುಧಾಬಿಯಲ್ಲಿನ ಬಿಎಪಿಎಸ್ ಹಿಂದೂ ಮಂದಿರ (BAPS Hindu Mandir) ಸಹಾಯಹಸ್ತ ಚಾಚಿದೆ. ಈ ಕುರಿತು ತಯಾರಾಗಿರುವ ‘ಕಂಫರ್ಟ್ ಇನ್ ಕುವೈತ್’ ಸಾಕ್ಷ್ಯಚಿತ್ರ ಮನೆಯಿಂದ ದೂರದಲ್ಲಿರುವ, ಕುವೈತ್ನಲ್ಲಿ ಸಿಲುಕಿರುವ ಕುಟುಂಬಗಳು ಭಯ, ಗೊಂದಲ ಮತ್ತು ಅಜ್ಞಾತವನ್ನು ಎದುರಿಸುವ ನೈಜ ಕಥೆಯಾಗಿದೆ.
ಅಬುಧಾಬಿಯಲ್ಲಿರುವ BAPS ಹಿಂದೂ ಮಂದಿರ ಅವರಿಗೆ ಆಹಾರ, ಆಶ್ರಯ, ಮಾರ್ಗದರ್ಶನ ಮತ್ತು ಭಾವನಾತ್ಮಕ ಶಕ್ತಿಯನ್ನು ಒದಗಿಸಿದೆ. ಅಲ್ಲಿನ ಸ್ವಯಂಸೇವಕರ ನಿಸ್ವಾರ್ಥ ಬೆಂಬಲದ ಮೂಲಕ ಯುದ್ಧದಲ್ಲಿ ಸಿಲುಕಿದ ಪ್ರಯಾಣಿಕರು ಭರವಸೆ, ಸುರಕ್ಷತೆ ಮತ್ತು ಮನೆಗೆ ಹಿಂದಿರುಗುವ ಮಾರ್ಗವನ್ನು ಕಂಡುಕೊಂಡರು. ಬಿಕ್ಕಟ್ಟಿನ ಸಮಯದಲ್ಲೂ ಮಾನವೀಯತೆ, ನಂಬಿಕೆ ಮತ್ತು ಸೇವೆಯು ಭಯವನ್ನು ನಿವಾರಿಸಬಹುದು, ಕುಟುಂಬದಂತೆ ಜನರನ್ನು ಒಟ್ಟುಗೂಡಿಸಬಹುದು ಮತ್ತು ನಮ್ಮ ಭವಿಷ್ಯದ ಹಾದಿಯನ್ನು ಬೆಳಗಿಸಬಹುದು ಎಂಬುದನ್ನು ಈ ಸಾಕ್ಷ್ಯಚಿತ್ರ ನಿರೂಪಿಸುತ್ತದೆ.
ಇದನ್ನೂ ಓದಿ: ಜೀವನದ ಅದ್ಭುತ ಅನುಭವದಲ್ಲೊಂದು; ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಸಿಎಂ ಚಂದ್ರಬಾಬು ನಾಯ್ಡು ಭೇಟಿ
“ಕಂಫರ್ಟ್ ಇನ್ ಕುವೈತ್” ಸಾಕ್ಷ್ಯಚಿತ್ರವು ಯುದ್ಧ ವಲಯದ ಅವ್ಯವಸ್ಥೆಯಿಂದ ತಮ್ಮ ಮನೆಯತ್ತ ಸಾಗುವ ಭಾರತೀಯರ ಭಾವನಾತ್ಮಕ ಪ್ರಯಾಣವಾಗಿದೆ. ಕುವೈತ್ನಲ್ಲಿ ತಮ್ಮ ಕುಟುಂಬಗಳೊಂದಿಗೆ ಸಿಲುಕಿಕೊಂಡಿದ್ದ ಅನೇಕರು ಭಯ, ಗೊಂದಲ ಮತ್ತು ಮನೆಯಿಂದ ದೂರದಲ್ಲಿರುವ ಅಜ್ಞಾತವನ್ನು ಎದುರಿಸಿದರು. ಅವರಿಗೆ ಬಿಎಪಿಎಸ್ ಸಹಾಯ ಮಾಡಿತು. ಈ ಸಾಕ್ಷ್ಯಚಿತ್ರವು ಕಷ್ಟದ ಸಮಯದಲ್ಲಿ ಮಾನವೀಯತೆ, ನಂಬಿಕೆ ಮತ್ತು ಸೇವೆಯು ಯಾವುದೇ ಭಯವನ್ನು ನಿವಾರಿಸಬಲ್ಲದು ಎಂಬುದನ್ನು ತೋರಿಸುತ್ತದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:49 pm, Tue, 17 March 26
