AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nipah virus: ನಿಫಾ ವೈರಸ್​ ವಿರುದ್ಧ ಕೊವಿಶೀಲ್ಡ್​ ಲಸಿಕೆ ಬಳಕೆ; ಅಧ್ಯಯನ ಹೇಳಿದ್ದೇನು?

ಈ ಅಧ್ಯಯನವನ್ನು ಪ್ರಕಟಣಾ ಪೂರ್ವವಾಗಿ bioRxiv ಸರ್ವರ್​ನಲ್ಲಿ ಪ್ರಕಟಿಸಲಾಗಿದ್ದು, ಅದು ಇನ್ನೂ ಪರಿಶೀಲನೆ ಹಂತದಲ್ಲಿದೆ. ChAdOx1 ಬಹು ಉಪಯೋಗಿ ಲಸಿಕೆ ಸಮ್ಮಿಶ್ರಣವಾಗಿದ್ದು, ಪ್ಯಾಥೋಗಾನ್​ಗಳ ವಿವಿಧ ಡಿಎನ್​ಎಗಳ ಜತೆ ಸಂಯೋಜಿಸಿ ಉಪಯೋಗಿಸಬಹುದೆಂದು ತಜ್ಞರು ತಿಳಿಸಿದ್ದಾರೆ.

Nipah virus: ನಿಫಾ ವೈರಸ್​ ವಿರುದ್ಧ ಕೊವಿಶೀಲ್ಡ್​ ಲಸಿಕೆ ಬಳಕೆ; ಅಧ್ಯಯನ ಹೇಳಿದ್ದೇನು?
ನಿಫಾ ವೈರಾಣುವಿಗೆ ಲಸಿಕೆ?
TV9 Web
| Edited By: |

Updated on: Sep 07, 2021 | 3:10 PM

Share

ಕೊರೊನಾ ಆತಂಕದ ಜತೆಜತೆಗೆ ನಿಫಾ ವೈರಸ್​ ಭೀತಿಯೂ ಉಲ್ಬಣಿಸಿರುವುದು ಕೇರಳ ಸೇರಿದಂತೆ ಭಾರತದ ವಿವಿಧ ರಾಜ್ಯಗಳನ್ನು ಚಿಂತೆಗೀಡುಮಾಡಿದೆ. ಆದರೆ, ನಿಫಾ ವೈರಾಣು ನಿಯಂತ್ರಣದ ಕುರಿತು ನಡೆದ ಪ್ರಾಥಮಿಕ ಅಧ್ಯಯನದ ವರದಿಯೊಂದು ಕೊಂಚ ಸಮಾಧಾನಕಾರಿಯಾಗಿ ಕಾಣಿಸುತ್ತಿದ್ದು, ಕೊರೊನಾ ಲಸಿಕೆ ಕೊವಿಶೀಲ್ಡ್​ ನಿಫಾ ವೈರಾಣುವಿನ ಮೇಲೂ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯವನ್ನು ಮಂಡಿಸಿದೆ. ಜೆನ್ನರ್​ ಇನ್​ಸ್ಟಿಟ್ಯೂಟ್, ಆಕ್ಸ್​ಫರ್ಡ್​ ಯುನಿವರ್ಸಿಟಿ ಹಾಗೂ ಯುಎಸ್​ನ ನ್ಯಾಶನಲ್​ ಇನ್​ಸ್ಟಿಟ್ಯೂಟ್ ಆಫ್​ ಹೆಲ್ತ್​ ಸಹಯೋಗದಲ್ಲಿ ಜುಲೈ ತಿಂಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ChadOx1 ಸಮ್ಮಿಶ್ರಣದ ಲಸಿಕೆಯನ್ನು ನಿಫಾ ವೈರಸ್​ಗೆ ಸಂಯೋಜಿಸಿ ಆಫ್ರಿಕನ್​ ಗ್ರೀನ್​ ಮಂಕಿ ಮೇಲೆ ಪ್ರಯೋಗಿಸಿದಾಗ ಅದು ಸಂಪೂರ್ಣ ಸುರಕ್ಷಿತವೆಂದು ಸಾಬೀತಾಗಿದೆ. ಹೀಗಾಗಿ ನಿಫಾ ವೈರಾಣುವನ್ನು ಹತ್ತಿಕ್ಕಲು ಕೊವಿಶೀಲ್ಡ್​ ಹೊಸ ಭರವಸೆಯಂತೆ ಕಾಣಿಸುತ್ತಿದೆ.

ಸದ್ಯ ಕೇರಳದಲ್ಲಿ 12 ವರ್ಷದ ಬಾಲಕನ ಸಾವಿಗೆ ಕಾರಣವಾದ ಲೆಥಾಲ್ ನಿಫಾ ವೈರಸ್​ ವಿರುದ್ಧ ಹೋರಾಡಲು ಈವರೆಗೆ ಯಾವುದೇ ಅಂಗೀಕೃತ ಲಸಿಕೆಗಳು ಅಸ್ತಿತ್ವದಲ್ಲಿಲ್ಲ. ಈ ಹಿಂದೆ 2018ರಲ್ಲೂ ಒಮ್ಮೆ ಕೇರಳದಲ್ಲಿ ತಲ್ಲಣ ಮೂಡಿಸಿದ್ದ ವೈರಾಣು 18 ಸೋಂಕಿತರಲ್ಲಿ 17 ಜನರ ಸಾವಿಗೆ ಕಾರಣವಾಗಿತ್ತಾದರೂ ಅದಕ್ಕೆಂದೇ ಮೀಸಲಾದ ಲಸಿಕೆ ಲಭ್ಯವಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ಈ ಅಧ್ಯಯನವನ್ನು ಪ್ರಕಟಣಾ ಪೂರ್ವವಾಗಿ bioRxiv ಸರ್ವರ್​ನಲ್ಲಿ ಪ್ರಕಟಿಸಲಾಗಿದ್ದು, ಅದು ಇನ್ನೂ ಪರಿಶೀಲನೆ ಹಂತದಲ್ಲಿದೆ. ChAdOx1 ಬಹು ಉಪಯೋಗಿ ಲಸಿಕೆ ಸಮ್ಮಿಶ್ರಣವಾಗಿದ್ದು, ಪ್ಯಾಥೋಗಾನ್​ಗಳ ವಿವಿಧ ಡಿಎನ್​ಎಗಳ ಜತೆ ಸಂಯೋಜಿಸಿ ಉಪಯೋಗಿಸಬಹುದೆಂದು ತಜ್ಞರು ತಿಳಿಸಿದ್ದಾರೆ. ಆಸ್ಟ್ರಾಜೆನೆಕಾ ಅಥವಾ ಕೊವಿಶೀಲ್ಡ್​ ಹೆಸರಲ್ಲಿ ಮನುಷ್ಯರ ದೇಹ ಸೇರುತ್ತಿರುವ ChAdOx1 ಕೊರೊನಾ (Sarscov2) ಸ್ಪೈಕ್ ಪ್ರೋಟೀನ್​ ಹೊಂದಿರುವುದರಿಂದ ಅದು ಕೊವಿಡ್​ 19 ವಿರುದ್ಧ ಹೋರಾಡುತ್ತದೆ. ಅದೇ ರೀತಿ ಸದರಿ ಲಸಿಕೆಯನ್ನು ಅಗತ್ಯಕ್ಕನುಗುಣವಾಗಿ ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ನಿಫಾಗೆ ಸಂಬಂಧಿಸಿದ ಅಧ್ಯಯನಕ್ಕಾಗಿ ಬಾಂಗ್ಲಾದೇಶದಲ್ಲಿ ಸಿಕ್ಕಿದ ನಿಫಾ ವೈರಾಣುವಿನಿಂದ ಗ್ಲೈಕೋಪ್ರೋಟೀನ್​ ತೆಗೆದು ಬಳಸಿಕೊಳ್ಳಲಾಗಿದೆ. ಅದನ್ನು ChadOx1 NiV ಎಂದು ಹೆಸರಿಸಲಾಗಿದ್ದು, ಆಯ್ದ 8 ಮಂಗಗಳ ಮೇಲೆ ಪ್ರಯೋಗ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ನಾಲ್ಕು ಮಂಗಗಳ ಎರಡು ಗುಂಪು ಮಾಡಿಕೊಂಡು ಒಂದು ಗುಂಪಿಗೆ ChadOx1NiV ಸಮ್ಮಿಶ್ರಣದ ಒಂದು ಅಥವಾ ಎರಡು ಡೋಸ್​ ಹಾಗೂ ಇನ್ನೊಂದು ಗುಂಪಿಗೆ ಡಮ್ಮಿ ಪ್ರೋಟೀನ್ (ChAdOx1 GFP) ನೀಡಲಾಗಿತ್ತು. ಬಳಿಕ ಎಲ್ಲಾ ಮಂಗಗಳಿಗೂ ಕೃತಕವಾಗಿ ಮೂಗು ಅಥವಾ ಗಂಟಲಿನ ಮೂಲಕ ನಿಫಾ ಸೋಂಕು ತಗುಲಿಸಲಾಗಿತ್ತು. ಅದಾಗಿ ಮೂರೇ ಮೂರು ದಿನದ ಒಳಗಾಗಿ ಡಮ್ಮಿ ಪ್ರೋಟೀನ್​ ಸ್ವೀಕರಿಸಿದ್ದ ಮಂಗಗಳಲ್ಲಿ ನಿಫಾ ಸೋಂಕಿನ ಲಕ್ಷಣಗಳು ಕಂಡು ಬರಲು ಆರಂಭವಾಗಿ 5 ರಿಂದ 7 ದಿನಗಳಲ್ಲಿ ತೀವ್ರ ಜ್ವರ ಬಾಧಿಸಲು ಆರಂಭಿಸಿದಾಗ ಅವುಗಳಿಗೆ ದಯಾಮರಣ ನೀಡಲಾಯಿತು. ಆದರೆ, ಇತ್ತ ಒಂದು ಅಥವಾ ಎರಡು ಡೋಸ್ ಲಸಿಕೆ ಸ್ವೀಕರಿಸಿದ್ದ ಮಂಗಗಳು ಯಾವುದೇ ಲಕ್ಷಣಗಳನ್ನು ತೋರಿಸದೇ, ಸೋಂಕಿಗೂ ತುತ್ತಾಗದೇ ಆರೋಗ್ಯವಾಗಿದ್ದವು ಎಂದು ಅಧ್ಯಯನಕಾರರು ಹೇಳಿದ್ದಾರೆ.

ಈ ಅಧ್ಯಯನದಿಂದಾಗಿ ನಿಫಾ ವೈರಾಣುವಿನ ವಿರುದ್ಧ ಕೊವಿಶೀಲ್ಡ್​ ಲಸಿಕೆಯ ಮಾದರಿಯನ್ನು ಬಳಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ತಜ್ಞರಲ್ಲಿ ಮೂಡಿದ್ದು, ಒಂದೊಮ್ಮೆ ನಿಫಾ ಆತಂಕ ಬಿಗಡಾಯಿಸಿದಲ್ಲಿ ಇದನ್ನೇ ಪ್ರಯೋಗಿಸುವ ಸಾಧ್ಯತೆ ಇದೆ. ಹೀಗಾಗಿ ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ಅಧ್ಯಯನಗಳೂ ಮುಂದುವರೆದಿವೆ.

ಇದನ್ನೂ ಓದಿ: ನಿಫಾ ಭೀತಿ: ಕೇರಳದಿಂದ ಬರುವವರಿಗೆ ಕಡ್ಡಾಯ ತಪಾಸಣೆ; ಇನ್ನೊಂದೆಡೆ, ಹಣ್ಣುಗಳಿಂದ ವೈರಸ್​ ಹಬ್ಬುವ ಭಯ 

Nipah virus ಕೇರಳದ ಮೂರು ಜಿಲ್ಲೆಗಳಲ್ಲಿ ನಿಫಾ ವೈರಸ್ ಎಚ್ಚರಿಕೆ; ನಿಫಾಗೆ ಬಲಿಯಾದ ಬಾಲಕನ ನಿಕಟ ಸಂಪರ್ಕದಲ್ಲಿದ್ದ 8 ಮಂದಿಗೆ ಸೋಂಕು ಇಲ್ಲ

(Covishield Vaccine against Nipah virus is it true what the study says here is what you need to know)

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು