ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ಎಲ್ಲಿದ್ದಾನೆ ಎಂದು ಭಾರತಕ್ಕೆ ತಿಳಿಸಿದ್ದು ನವಾಜ್ ಷರೀಫ್: ಪಾಕ್ ಸಚಿವ

"ಅಜ್ಮಲ್ ಕಸಬ್ ಇರುವಿಕೆಯ ವಿವರಗಳನ್ನು ಭಾರತಕ್ಕೆ ಸೋರಿಕೆ ಮಾಡಿದವರು ನವಾಜ್ ಷರೀಫ್" ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶೇಖ್ ರಶೀದ್ ಹೇಳಿದರು.

ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ ಎಲ್ಲಿದ್ದಾನೆ ಎಂದು ಭಾರತಕ್ಕೆ ತಿಳಿಸಿದ್ದು ನವಾಜ್ ಷರೀಫ್: ಪಾಕ್ ಸಚಿವ
ಶೇಖ್ ರಶೀದ್
Edited By:

Updated on: Mar 30, 2022 | 10:18 PM

ಅಜ್ಮಲ್ ಕಸಬ್ (Ajmal Kasab) ಇರುವ ಸ್ಥಳದ ವಿವರವಾದ ಮಾಹಿತಿಯನ್ನು ಭಾರತಕ್ಕೆ ನೀಡಿದ್ದು ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif) ಎಂದು ಪಾಕಿಸ್ತಾನದ ಗೃಹ ಸಚಿವ ಶೇಖ್ ರಶೀದ್ (Sheikh Rasheed) ಹೇಳಿದ್ದಾರೆ. “ಅಜ್ಮಲ್ ಕಸಬ್ ಇರುವಿಕೆಯ ವಿವರಗಳನ್ನು ಭಾರತಕ್ಕೆ ಸೋರಿಕೆ ಮಾಡಿದವರು ನವಾಜ್ ಷರೀಫ್” ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶೇಖ್ ರಶೀದ್ ಹೇಳಿದರು.  ಜನರಲ್ ಹೆಡ್‌ಕ್ವಾರ್ಟರ್ಸ್ ಗೇಟ್ ಸಂಖ್ಯೆ 4 ರ ನವಾಜ್ ಷರೀಫ್ ಅವರು ಸದ್ದಾಂ ಹುಸೇನ್, ಮುಅಮ್ಮರ್ ಗಡಾಫಿ ಮತ್ತು ಒಸಾಮಾ ಬಿನ್ ಲಾಡೆನ್‌ರಿಂದ ಹಣವನ್ನು ಪಡೆದರು. ಹಣಕ್ಕಾಗಿ ಆತ್ಮಸಾಕ್ಷಿಯನ್ನು ಮಾರಿಕೊಂಡವರು ಪಾಕಿಸ್ತಾನದ ಘನತೆಗೆ ಕುಂದು ತಂದವರು ಎಂದು ವಿಪಕ್ಷಗಳ ವಿರುದ್ಧ ಶೇಖ್ ರಶೀದ್ ವಾಗ್ದಾಳಿ ನಡೆಸಿದರು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಒಟ್ಟು 161 ಮತಗಳನ್ನು ಮಂಡಿಸಿದ ನಂತರ ಅವಿಶ್ವಾಸ ನಿರ್ಣಯವನ್ನು ಮಾರ್ಚ್ 31 ರವರೆಗೆ ಮುಂದೂಡಲಾಯಿತು.  ಮಾರ್ಚ್ 8 ರಂದು, ವಿರೋಧ ಪಕ್ಷಗಳು ಸರ್ಕಾರದ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಿದವು.


ಹಲವಾರು ಪಿಟಿಐ ಶಾಸಕರು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಬಹಿರಂಗವಾಗಿ ಬಂದಿರುವುದರಿಂದ, ವಿರೋಧ ಪಕ್ಷವು ಅದರ ಪ್ರಸ್ತಾಪವನ್ನು ಅಂಗೀಕರಿಸುವುದು ಖಚಿತವಾಗಿದೆ.

ಇದನ್ನೂ ಓದಿ: Shahbaz Sharif ಇಮ್ರಾನ್ ಖಾನ್ ರಾಜೀನಾಮೆ ನೀಡಿದ ನಂತರ ಪಾಕ್ ಪ್ರಧಾನಿಯಾಗಲಿರುವ ಶಹಬಾಜ್ ಷರೀಫ್ ಯಾರು? ಇಲ್ಲಿದೆ ಪರಿಚಯ