AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದು ವರ್ಷದೊಳಗೆ ದಾಳಿ ಸಾಮರ್ಥ್ಯ: ಚೀನಾಕ್ಕೆ ಆತಂಕ ಮೂಡಿಸಿದ ಜಪಾನ್ ಪ್ರತಿಜ್ಞೆ

2ನೇ ಮಹಾಯುದ್ಧದಲ್ಲಿ ಸೋತ ನಂತರ ಹತ್ತಾರು ನಿಬಂಧನೆಗಳ ಬಂಧನದಿಂದ ತನ್ನನ್ನು ತಾನು ಕಟ್ಟಿಹಾಕಿಸಿಕೊಂಡಿರುವ ಜಪಾನ್, ಇದೀಗ ಅದರಿಂದ ಬಿಡಿಸಿಕೊಳ್ಳುವ ಮಾತುಗಳನ್ನು ಆಡುತ್ತಿದೆ

ಐದು ವರ್ಷದೊಳಗೆ ದಾಳಿ ಸಾಮರ್ಥ್ಯ: ಚೀನಾಕ್ಕೆ ಆತಂಕ ಮೂಡಿಸಿದ ಜಪಾನ್ ಪ್ರತಿಜ್ಞೆ
ಜಪಾನ್ ನೌಕಾದಳ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jun 13, 2022 | 12:33 PM

Share

ಟೊಕಿಯೊ: ತೈವಾನ್ ದ್ವೀಪವನ್ನು (Taiwan) ಬಲಪ್ರಯೋಗದಿಂದ ತನ್ನೊಳಗೆ ವಿಲೀನ ಮಾಡಿಕೊಳ್ಳುವ ಚೀನಾದ ಪ್ರಯತ್ನಗಳನ್ನು ವಿರೋಧಿಸುತ್ತಿರುವ ಅಮೆರಿಕ ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳು ಮತ್ತು ಚೀನಾ ಆಡುತ್ತಿರುವ ರೋಷಾವೇಷದ ಮಾತುಗಳು ವಿಶ್ವದ ಗಮನ ಸೆಳೆಯುತ್ತಿವೆ. ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣದ (Russia Attacks Ukraine) ಮಾದರಿಯಲ್ಲಿಯೇ, ಚೀನಾ (China) ಸಹ ತೈವಾನ್ ದ್ವೀಪದ ಮೇಲೆ ಎರಗಬಹುದು ಎಂಬ ಲೆಕ್ಕಾಚಾರಗಳು ಚಾಲ್ತಿಯಲ್ಲಿವೆ. ಈ ನಡುವೆ ಜಪಾನ್​ನ ರಕ್ಷಣಾ ಸಚಿವರು ನೀಡಿರುವ ಹೇಳಿಕೆಯೊಂದು ಚೀನಾ ಸರ್ಕಾರವನ್ನು ಬೆಚ್ಚಿ ಬೀಳುವಂತೆ ಮಾಡಿದೆ. 2ನೇ ಮಹಾಯುದ್ಧದಲ್ಲಿ ಸೋತ ನಂತರ ಹತ್ತಾರು ನಿಬಂಧನೆಗಳ ಬಂಧನದಿಂದ ತನ್ನನ್ನು ತಾನು ಕಟ್ಟಿಹಾಕಿಸಿಕೊಂಡಿರುವ ಜಪಾನ್, ಇದೀಗ ಅದರಿಂದ ಬಿಡಿಸಿಕೊಳ್ಳುವ ಮಾತುಗಳನ್ನು ಆಡುತ್ತಿದೆ. 2ನೇ ಮಹಾಯುದ್ಧದಲ್ಲಿ ಜಪಾನ್​ ಎದುರು ಸೋತಿದ್ದ ಚೀನಾ ಇಂದಿಗೂ ಅಂದಿನ ಕಹಿ ನೆನಪುಗಳನ್ನು ಮರೆತಿಲ್ಲ. ಇದೀಗ ಜಪಾನ್ ‘ಇನ್ನು ಐದು ವರ್ಷಗಳಲ್ಲಿ ನಮ್ಮ ಸೇನೆ ಸಶಕ್ತವಾಗುತ್ತದೆ. ರಕ್ಷಣೆ ಮಾತ್ರವಲ್ಲ, ಪ್ರತಿದಾಳಿಯ ಸಾಮರ್ಥ್ಯವನ್ನೂ ಪಡೆದುಕೊಳ್ಳುತ್ತದೆ’ ಎಂದು ಘೋಷಿಸಿರುವುದು ಚೀನಾಕ್ಕೆ ಆತಂಕ ತಂದೊಡ್ಡಿದೆ.

ಪ್ರತಿದಾಳಿಯ ಸಾಮರ್ಥ್ಯ ಎಂದು ಹೇಳುವಾಗ ಜಪಾನ್​ನ ಪ್ರಧಾನಿ ಫುಮಿಯೊ ಕಿಸಿದಾ ಮತ್ತು ರಕ್ಷಣಾ ಸಚಿವ ನೊಬುವೊ ಕಿಶಿ ನಿರ್ದಿಷ್ಟವಾಗಿ ‘ಕೌಂಟರ್​ಸ್ಟ್ರೈಕ್’ (Counterstrike) ಎನ್ನುವ ಪದ ಬಳಸಿದ್ದಾರೆ. ಅಣ್ವಸ್ತ್ರ ದಾಳಿ-ಪ್ರತಿದಾಳಿಗೆ ಸಂಬಂಧಿಸಿದಂತೆ ಹೆಚ್ಚಾಗಿ ಬಳಕೆಯಾಗಿವ ಈ ಪದವನ್ನು ಅವರು ಒತ್ತಿ ಹೇಳಿರುವುದು ಚೀನಾದ ಲೆಕ್ಕಾಚಾರಗಳು ಏರುಪೇರಾಗುವಂತೆ ಮಾಡಿವೆ. ಚೀನಾ ಸಹ ಅಣ್ವಸ್ತ್ರ ಸಜ್ಜಿತ ದೇಶವಾಗುವ ಪ್ರಯತ್ನ ಮಾಡುತ್ತಿರಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ.

ಕ್ವಾಡ್ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ, ಅಂದರೆ ಮೇ 24ರಂದು ಜಪಾನ್​ ಸಾಗರ ತೀರದ ಸಮೀಪ, ಪೂರ್ವ ಚೀನಾ ಸಮುದ್ರದಲ್ಲಿ ಚೀನಾ ಮತ್ತು ರಷ್ಯಾದ ಯುದ್ಧವಿಮಾನಗಳು ಹಾರಾಡಿದ್ದವು. ಇದನ್ನು ಸಮರಾಭ್ಯಾಸ ಎಂದು ಚೀನಾ ವಿವರಿಸಿತ್ತು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಜಪಾನ್, ಇದೀಗ ‘ಪ್ರತಿದಾಳಿ ಸಾಮರ್ಥ್ಯ’ದ ಬಗ್ಗೆ ಮಾತನಾಡಲು ಆರಂಭಿಸಿದೆ. ‘ನೆರೆಯಲ್ಲಿರುವ ಅಣ್ವಸ್ತ್ರ ಸಜ್ಜಿತ ದೇಶಗಳಿಂದ ಭದ್ರತೆಗೆ ಆತಂಕ ಎದುರಾಗಿದೆ’ ಎಂದು ಜಪಾನ್​ನ ಉನ್ನತ ನಾಯಕತ್ವ ಹೇಳಿದೆ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್​ ಆಸ್ಟಿನ್ ಮತ್ತು ಚೀನಾದ ರಕ್ಷಣಾ ಸಚಿವ ವೇ ಫೆಂಘೆ ನಡುವೆ ನಡೆದ ಸಭೆಯನ್ನು ವಿಶ್ವ ಸಮುದಾಯ ಗಮನಿಸಿದೆ. ಸಿಂಗಪುರದಲ್ಲಿ ನಡೆಯುತ್ತಿರುವ ಶಾಂಗ್ರಿ ಲಾ ಸಮಾವೇಶದಲ್ಲಿ ಆಸ್ಟ್ರೇಲಿಯಾದ ರಕ್ಷಣಾ ಸಚಿವರನ್ನೂ ವೇ ಫೆಂಘೆ ಭೇಟಿಯಾಗಿದ್ದರು. ತೈವಾನ್ ವಿದ್ಯಮಾನಗಳಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ಚೀನಾ ತೀವ್ರವಾಗಿ ಆಕ್ಷೇಪಿಸಿತ್ತು. ಆದರೆ ಈ ಎಲ್ಲದರ ಹೊರತಾಗಿ ಜಪಾನ್ ರಕ್ಷಣಾ ಸಚಿವರು ಆಡಿದ ಮಾತು ಎಲ್ಲರ ಗಮನ ಸೆಳೆದಿತ್ತು. ಜಪಾನ್​ಗೆ ಇತರ ದೇಶಗಳಿಂದ ಆತಂಕ ಇದೆ. ಅದನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಏಂದು ಘೋಷಿಸಿದ್ದರು.

ಸಿಂಗಪುರ ಸಮಾವೇಶದಲ್ಲಿ ಉಕ್ರೇನ್ ಮೇಲಿನ ರಷ್ಯಾ ದಾಳಿಯ ಬಗ್ಗೆ ಚರ್ಚೆಗಳೇನೋ ನಡೆದವು. ಆದರೆ ಚೀನಾ ಮತ್ತು ರಷ್ಯಾದ ಸಂಭಾವ್ಯ ಮೈತ್ರಿ ಮತ್ತು ಈ ಎರಡೂ ದೇಶಗಳು ಇರಿಸಬಹುದಾದ ಮುಂದಿನ ನಡೆಯಿಂದ ಏಷ್ಯಾ ಪೆಸಿಫಿಕ್ ವಲಯದಲ್ಲಿ ಆಗಬಹುದಾದ ಅನಾಹುತಗಳ ಬಗ್ಗೆ ಹೆಚ್ಚು ಆತಂಕ ವ್ಯಕ್ತವಾಯಿತು. ಕಾಂಬೋಡಿಯಾ, ಓಷೆನಿಯಾದಲ್ಲಿ ಹೊಸ ನೌಕಾನೆಲೆ ಸ್ಥಾಪಿಸಲು ಚೀನಾ ಮುಂದಾಗಿದೆ. ತೈವಾನ್​ ದ್ವೀಪಕ್ಕೆ ಮುತ್ತಿಗೆ ಹಾಕಬಲ್ಲ ಚೀನಾದ ಸಾಮರ್ಥ್ಯ ಇದರಿಂದ ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್​ಗಳಿಗೂ ಹಲವು ಆತಂಕ ತಂದೊಡ್ಡಿದೆ ಎಂದು ಹಲವರು ಪ್ರತಿಪಾದಿಸಿದರು.

ಉಕ್ರೇನ್ ಯುದ್ಧ ಮತ್ತು ಚೀನಾದ ಸಾಮರ್ಥ್ಯ ವೃದ್ಧಿಯ ಹಿನ್ನೆಲೆಯಲ್ಲಿ ಜಾಗತಿಕ ಭದ್ರತೆಗೆ ಒದಗಿರುವ ಸಮಸ್ಯೆಗಳ ಬಗ್ಗೆ 22 ದೇಶಗಳ ಗುಪ್ತಚರ ಇಲಾಖೆಗಳ ಮುಖ್ಯಸ್ಥರ ನಡುವೆ ವಿಚಾರ ವಿನಿಮಯ ನಡೆಯಿತು. ಚೀನಾದ ಸಾಲದ ಬಲೆಗೆ ಸಿಲುಕಿರುವ ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಮಂಗೋಲಿಯಾ ದೇಶಗಳ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯಿತು. ಹಣದುಬ್ಬರ ಮತ್ತು ಡಾಲರ್ ಎದುರು ವಿವಿಧ ದೇಶಗಳ ಕರೆನ್ಸಿ ಮೌಲ್ಯ ಕುಸಿತದ ಬಗ್ಗೆಯೂ ಆತಂಕ ವ್ಯಕ್ತವಾಯಿತು. ಏಷ್ಯಾ-ಪೆಸಿಫಿಕ್ ವಲಯದಲ್ಲಿ ಆರ್ಥಿಕ ಸುಸ್ಥಿತಿ ಕಾಪಾಡುವ ಬಗ್ಗೆ ಗಮನ ಹರಿಸದಿದ್ದರೆ ಈ ಪ್ರದೇಶದಲ್ಲಿ ಅಸ್ಥಿರತೆ ಹೆಚ್ಚಾಗಬಹುದು ಎಂದು ಹಲವರು ಹೇಳಿದರು. ಸಿಂಗಪುರ ಸಮಾವೇಶಕ್ಕೆ ಭಾರತ ಸರ್ಕಾರವು ತನ್ನ ರಕ್ಷಣಾ ಸಚಿವರನ್ನು ಕಳಿಸಿರಲಿಲ್ಲ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:32 pm, Mon, 13 June 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್