AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು-ಜಾಫ್ನಾ ಸಂಪರ್ಕ ಯೋಜನೆಗೆ ಶ್ರೀಲಂಕಾ ಅಸ್ತು: ಶ್ರೀಘ್ರ ವಿಮಾನ, ಹಡಗು ಸಂಚಾರ ಆರಂಭ

ಶ್ರೀಲಂಕಾದಿಂದ ತಮಿಳುನಾಡು ಮತ್ತು ಪುದುಚೇರಿ ಸಂಪರ್ಕಿಸುವ ವಿವಿಧ ಯೋಜನೆಗಳಿಗೆ ಅಲ್ಲಿನ ಸರ್ಕಾರ ಅನುಮೋದನೆ ನೀಡಿದೆ

ತಮಿಳುನಾಡು-ಜಾಫ್ನಾ ಸಂಪರ್ಕ ಯೋಜನೆಗೆ ಶ್ರೀಲಂಕಾ ಅಸ್ತು: ಶ್ರೀಘ್ರ ವಿಮಾನ, ಹಡಗು ಸಂಚಾರ ಆರಂಭ
ಶ್ರೀಲಂಕಾದ ಜಾಫ್ನಾ ನಗರದ ಪ್ರವೇಶ ದ್ವಾರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jun 14, 2022 | 10:34 AM

Share

ಕೊಲೊಂಬೊ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ (Sri Lanka Economic Crisis) ಇದೀಗ ಪ್ರವಾಸೋದ್ಯಮದ ಮಹತ್ವವನ್ನು (Importace of Tourism) ಹಿಂದೆಂದಿಗಿಂತಲೂ ಚೆನ್ನಾಗಿ ಮನಗಂಡಿದೆ. ಶ್ರೀಲಂಕಾದಿಂದ ತಮಿಳುನಾಡು ಮತ್ತು ಪುದುಚೇರಿ ಸಂಪರ್ಕಿಸುವ ವಿವಿಧ ಯೋಜನೆಗಳಿಗೆ ಅಲ್ಲಿನ ಸರ್ಕಾರ ಅನುಮೋದನೆ ನೀಡಿದೆ. ಶ್ರೀಲಂಕಾದ ಉತ್ತರದಲ್ಲಿರುವ ಜಾಫ್ನಾದಿಂದ ತಮಿಳುನಾಡಿನ ತಿರುಚಿರಾಪಳ್ಳಿ ಹಾಗೂ ಜಾಫ್ನಾದ ಕಂಕೆಸಂತುರೈನಿಂದ ಪುದುಚೆರಿಯ ಕಾರೈಕಲ್​ಗೆ ಪ್ರಯಾಣಿಕರ ಹಡಗು ಸಂಚಾರ ಶೀಘ್ರ ಆರಂಭವಾಗಲಿದೆ. ಈ ಮೂಲಕ ಉತ್ತರ ತಮಿಳುನಾಡಿನಲ್ಲಿರುವ ದೇವಾಲಯಗಳಿಗೆ ಶ್ರೀಲಂಕಾದ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವುದು ಅಲ್ಲಿನ ಸರ್ಕಾರದ ಉದ್ದೇಶವಾಗಿದೆ.

ಎರಡೂ ದೇಶಗಳ ಜನರ ನಡುವೆ ಉತ್ತಮ ಸಂಬಂಧ ಇರಬೇಕು ಎಂದು ಭಾರತ ಸರ್ಕಾರವು ಹಲವು ವರ್ಷಗಳಿಂದ ಪ್ರತಿಪಾದಿಸುತ್ತಿದೆ. ತಮಿಳರು ಹೆಚ್ಚಾಗಿರುವ ಉತ್ತರ ಭಾಗದಲ್ಲಿ ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಬಲ್ಲದು ಎನ್ನುವುದು ಶ್ರೀಲಂಕಾ ಸರ್ಕಾರದ ಆಶಯವಾಗಿದೆ. ಎಲ್​ಟಿಟಿಇ ಉಗ್ರರು ಮತ್ತು ಶ್ರೀಲಂಕಾ ಸರ್ಕಾರಿ ಪಡೆಗಳ ನಡುವಣ ಸುದೀರ್ಘ ಸಂಘರ್ಷದ ಕಾರಣದಿಂದಾಗಿ ಶ್ರೀಲಂಕಾದ ಉತ್ತರ ಭಾಗ ಬಹುಕಾಲದಿಂದ ಅಭಿವೃದ್ಧಿ ಕಂಡಿಲ್ಲ. ವಿದೇಶಿ ವಿನಿಮಯ ಕೊರತೆಯಿಂದ ಕಂಗಾಲಾಗಿರುವ ಶ್ರೀಲಂಕಾಕ್ಕೆ ಭಾರತದ ಪ್ರವಾಸಿಗರ ಹರಿವು ಹೆಚ್ಚಾದರೆ ಅಲ್ಲಿನ ದೊಡ್ಡ ಸಮಸ್ಯೆ ಎನಿಸಿರುವ ವಿದೇಶಿ ಮೀಸಲು ಸಂಗ್ರಹದ ಸಮಸ್ಯೆಯು ಪರಿಹಾರವಾಗುತ್ತದೆ.

ತಮಿಳುನಾಡು ಮತ್ತು ಉತ್ತರ ಶ್ರೀಲಂಕಾ ನಡುವೆ 1970ರವರೆಗೆ ವಿಮಾನ ಮತ್ತು ಹಡಗು ಸಂಚಾರ ಇತ್ತು. ಆದರೆ ನಂತರದ ದಿನಗಳಲ್ಲಿ ಅಂತರ್ಯುದ್ಧದಿಂದ ಪರಿಸ್ಥಿತಿ ಬಿಗಡಾಯಿಸಿತು. 2009ರಲ್ಲಿ ಶ್ರೀಲಂಕಾದ ಅಂತರ್ಯುದ್ಧ ಅಂತ್ಯಗೊಂಡಿತು. ಸಾರಿಗೆ ಸಂಪರ್ಕ ಮರುಸ್ಥಾಪನೆಗೆ ಭಾರತ ಸರ್ಕಾರ ಉತ್ಸಾಹ ತೋರಿದರೂ, ಶ್ರೀಲಂಕಾ ಸರ್ಕಾರದಿಂದ ಪೂರಕ ಸ್ಪಂದನೆ ಸಿಕ್ಕಿರಲಿಲ್ಲ. ನವೆಂಬರ್ 2019ರಲ್ಲಿ ಮೊದಲ ಬಾರಿಗೆ ಜಾಫ್ನಾದ ಪಲಲಿ ವಿಮಾನ ನಿಲ್ದಾಣವನ್ನು ನಾಗರಿಕ ವಿಮಾನಗಳ ಹಾರಾಟಕ್ಕೆ ಮುಕ್ತಗೊಳಿಸಲಾಯಿತು. ಇಲ್ಲಿಂದ ವಾರಕ್ಕೆ ಮೂರು ಬಾರಿ ಜಾಫ್ನಾ-ಚೆನ್ನೈ ವಿಮಾನ ಹಾರಾಡುತ್ತಿದೆ. ಆದರೆ ಕೊರೊನಾ ಪಿಡುಗು ವ್ಯಾಪಿಸಿದ ನಂತರ ವಿಮಾನ ಸಂಚಾರ ಸ್ಥಗಿತಗೊಂಡಿತ್ತು.

ವಿಮಾನ ನಿಲ್ದಾಣದಲ್ಲಿ ಅಗತ್ಯ ನಿರ್ವಹಣೆ ಕೆಲಸಗಳು ಪೂರ್ಣಗೊಳ್ಳಬೇಕಿದೆ. ಇಮಿಗ್ರೇಷನ್ ಮತ್ತು ಕಸ್ಟಮ್ಸ್​ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ. ಇವು ಪೂರ್ಣಗೊಂಡ ನಂತರ ವಿಮಾನ ಸಂಚಾರ ಪುನರಾರಂಭಗೊಳ್ಳಲಿದೆ. ಮನ್ನಾರ್-ರಾಮೇಶ್ವರಂ ನಡುವೆ ಹಡಗುಗಳ ಸಂಚಾರಕ್ಕೆ ಶ್ರೀಲಂಕಾ ಸಚಿವ ಸಂಪುಟ ಇನ್ನೂ ಅನುಮೋದನೆ ನೀಡಿಲ್ಲ. ಆದರೆ ಕಂಕೆಸಂತುರೈ-ಕಾರೈಕಾಲ್ ಹಡಗು ಸಂಚಾರಕ್ಕೆ ಶ್ರೀಲಂಕಾ ಸಂಪುಟ ಒಪ್ಪಿಗೆ ಸೂಚಿಸಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:33 am, Tue, 14 June 22

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್
ಮಾಳುಗೆ ವಿಚಿತ್ರವಾಗಿ ಹೇರ್​​ಕಟ್ ಮಾಡಿದ ರಜತ್; ಎಲ್ಲರೂ ಶಾಕ್