AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಮ್ರಾನ್ ಖಾನ್ ಚೀನಾಕ್ಕೆ ತೆರಳುವ ಮುನ್ನ 2 ಪಾಕ್ ಸೇನಾ ನೆಲೆಗಳ ಮೇಲೆ ಪ್ರತ್ಯೇಕತಾವಾದಿಗಳ ದಾಳಿ

ಬಲೂಚಿಸ್ತಾನದ ಶ್ರೀಮಂತ ಅನಿಲ ಮತ್ತು ಖನಿಜ ಸಂಪನ್ಮೂಲಗಳನ್ನು ಕೇಂದ್ರ ಸರ್ಕಾರ ಅನ್ಯಾಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಲೂಚ್ ಜನಾಂಗೀಯ ಗೆರಿಲ್ಲಾಗಳು ಪ್ರತ್ಯೇಕ ರಾಜ್ಯಕ್ಕಾಗಿ ದಶಕಗಳಿಂದ ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ.

ಇಮ್ರಾನ್ ಖಾನ್ ಚೀನಾಕ್ಕೆ ತೆರಳುವ ಮುನ್ನ 2 ಪಾಕ್ ಸೇನಾ ನೆಲೆಗಳ ಮೇಲೆ ಪ್ರತ್ಯೇಕತಾವಾದಿಗಳ ದಾಳಿ
ಇಮ್ರಾನ್ ಖಾನ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Feb 03, 2022 | 4:12 PM

Share

ಕ್ವೆಟ್ಟಾ: ಪಾಕಿಸ್ತಾನಿ ಪ್ರಾಂತ್ಯದ ಬಲೂಚಿಸ್ತಾನ್‌ನಲ್ಲಿ (Balochistan) ಪ್ರತ್ಯೇಕತಾವಾದಿ ದಂಗೆಕೋರರು ಎರಡು ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಒಬ್ಬ ಯೋಧ ಹತ್ಯೆಗೀಡಾಗಿದ್ದು, ಪ್ರತ್ಯೇಕತಾವಾದಿ ಗುಂಪಿನ ನಾಲ್ವರು ಹತರಾಗಿದ್ದಾರೆ ಎಂದು ಸೇನೆ ಹೇಳಿದೆ.ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನೆಗೆ ಪ್ರಧಾನಿ ಇಮ್ರಾನ್ ಖಾನ್ (Imran Khan) ಬೀಜಿಂಗ್‌ಗೆ ತೆರಳುವ ಕೆಲವೇ ಗಂಟೆಗಳ ಮೊದಲು ರಾತ್ರಿ ವೇಳೆ ಈ ದಾಳಿ ನಡೆದಿದೆ. “ಭಯೋತ್ಪಾದಕ ದಾಳಿಯನ್ನು ಹಿಮ್ಮೆಟ್ಟಿಸಿದ ನಮ್ಮ ಕೆಚ್ಚೆದೆಯ ಭದ್ರತಾ ಪಡೆಗಳಿಗೆ ನಾವು ನಮಸ್ಕರಿಸುತ್ತೇವೆ” ಎಂದು ಖಾನ್ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಲೂಚ್ ಲಿಬರೇಶನ್ ಆರ್ಮಿ (BLF) ದಂಗೆಕೋರ ಗುಂಪು ರಾಯಿಟರ್ಸ್ ವರದಿಗಾರರಿಗೆ ಕಳುಹಿಸಲಾದ ಹೇಳಿಕೆಯಲ್ಲಿ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಅದರ ಆತ್ಮಹತ್ಯಾ ಬಾಂಬರ್‌ಗಳು ಸ್ಫೋಟಕ ತುಂಬಿದ ವಾಹನಗಳನ್ನು ನೆಲೆಗಳ ಪ್ರವೇಶದ್ವಾರದಲ್ಲಿ ಸ್ಫೋಟಿಸಿ 50 ಕ್ಕೂ ಹೆಚ್ಚು ಸೈನಿಕರನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ. ಕಳೆದ ವಾರ ನುಸುಳುಕೋರರು ಅರಬ್ಬಿ ಸಮುದ್ರದ ಗ್ವಾದರ್ ಬಂದರಿನ ಬಳಿಯ ಪೋಸ್ಟ್‌ನಲ್ಲಿ ದಾಳಿಯಲ್ಲಿ 10 ಸೈನಿಕರನ್ನು ಕೊಂದಿದ್ದು ಈ ವರ್ಷ ಸೇನಾಪಡೆಗೆ ಉಂಟಾದ ಅತಿ ದೊಡ್ಡ ಹಾನಿ ಇದಾಗಿದೆ. ಬುಧವಾರ ರಾತ್ರಿ ಪಂಜ್ಗುರ್ ಜಿಲ್ಲೆಯಲ್ಲಿ ಮತ್ತು ಇನ್ನೊಂದು ನೌಷ್ಕಿ ಜಿಲ್ಲೆಯಲ್ಲಿ ನುಸುಳುಕೋರರನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಸೇನೆ ತಿಳಿಸಿದೆ.

ಬಲೂಚಿಸ್ತಾನದ ಶ್ರೀಮಂತ ಅನಿಲ ಮತ್ತು ಖನಿಜ ಸಂಪನ್ಮೂಲಗಳನ್ನು ಕೇಂದ್ರ ಸರ್ಕಾರ ಅನ್ಯಾಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಲೂಚ್ ಜನಾಂಗೀಯ ಗೆರಿಲ್ಲಾಗಳು ಪ್ರತ್ಯೇಕ ರಾಜ್ಯಕ್ಕಾಗಿ ದಶಕಗಳಿಂದ ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ.

ಅವರು ಸಾಮಾನ್ಯವಾಗಿ ಅನಿಲ ಯೋಜನೆಗಳು, ಮೂಲಸೌಕರ್ಯ ಮತ್ತು ಭದ್ರತಾ ಪಡೆಗಳ ಮೇಲೆ ದಾಳಿ ಮಾಡುತ್ತಾರೆ. ಅವರು ಚೀನೀ ಯೋಜನೆಗಳ ಮೇಲೆ ದಾಳಿ ಮಾಡುತ್ತಾರೆ. ಯೋಜನೆಗಳನ್ನು ರಕ್ಷಿಸಲು ತಾನು ಮಾಡಬಹುದಾದ ಎಲ್ಲವನ್ನೂ ಮಾಡುತ್ತಿದೆ ಎಂದು ಪಾಕಿಸ್ತಾನದ ಭರವಸೆಯ ಹೊರತಾಗಿಯೂ ಆಗಾಗ ಚೀನೀ ಕಾರ್ಮಿಕರನ್ನು ಕೊಲ್ಲುತ್ತಾರೆ.

ಬೀಜಿಂಗ್‌ನ ಬೆಲ್ಟ್ ಮತ್ತು ರೋಡ್ ಉಪಕ್ರಮದ ಭಾಗವಾಗಿರುವ 60 ಬಿಲಿಯನ್ ಡಾಲರ್ ಚೀನಾ-ಪಾಕಿಸ್ತಾನ್ ಆರ್ಥಿಕ ಕಾರಿಡಾರ್‌ನ ಭಾಗವಾಗಿ ಗ್ವಾದರ್ ಬಂದರು ಮತ್ತು ಪ್ರಾಂತ್ಯದಲ್ಲಿ ಇತರ ಯೋಜನೆಗಳ ಅಭಿವೃದ್ಧಿಯಲ್ಲಿ ಚೀನಾ ತೊಡಗಿಸಿಕೊಂಡಿದೆ. ಬಲೂಚಿಸ್ತಾನ ಬಂಡುಕೋರರನ್ನು ಭಾರತವು ರಹಸ್ಯವಾಗಿ ಬೆಂಬಲಿಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಭಾರತ ಅದನ್ನು ನಿರಾಕರಿಸಿದೆ.

ಇದನ್ನೂ ಓದಿ:ಗಾಲ್ವಾನ್ ಸಂಘರ್ಷದಲ್ಲಿ ಗಾಯಗೊಂಡ ಯೋಧನ ಕೈಗೆ ಒಲಿಂಪಿಕ್ಸ್ ಜ್ಯೋತಿ; ಚೀನಾದ ನಡೆ ನಾಚಿಕೆಗೇಡು ಎಂದ ಅಮೆರಿಕ

Follow Us
Web contact
Web contact

TV9 Kannada

Read More