AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಸುದ್ದಿಗೋಷ್ಟಿ: ಸರ್ಕಾರದ ಭಾಗವಾಗಲು ಮಹಿಳೆಯರಿಗೆ ಆಹ್ವಾನ ನೀಡಿದ ತಾಲಿಬಾನ್ ನಾಯಕರು

ಅಫಘಾನಿಸ್ತಾನವನ್ನು ವಶಡಿಸಿಕೊಂಡ ಬಳಿಕ ತಾಲಿಬಾನ್ ಬಂಡುಕೋರ ಸಂಘಟನೆಯ ನಾಯಕರು ಮಂಗಳವಾರ ಮೊಟ್ಟ ಮೊದಲ ಸುದ್ದಿಗೋಷ್ಟಿಯೊಂದನ್ನು ದೇಶದ ರಾಜಧಾನಿ ಕಾಬೂಲ್ನಲ್ಲಿ ನಡೆಸಿದರು. ಆಪಘಾನಿಸ್ತಾನದಲ್ಲಿರುವ ಬೇರೆ ದೇಶದ ರಾಯಭಾರಿ ಕಚೇರಿಗಳು, ಡಿಪ್ಲೊಮ್ಯಾಟ್ಗಳು ಹೆದರುವ ಅವಶ್ಯಕತೆಯಿಲ್ಲ, ಎಲ್ಲ ರಾಯಭಾರಿ ಕಚೇರಿಗಳಿಗೆ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಸುದ್ದಿಗಾರರನ್ನು ಉದ್ದೇಶಿಸಿ ತಾಲಿಬಾನ್ ಬಾತ್ಮೀದಾರ ಜಬಿಯುಲ್ಲಾ ಮುಜಾಹಿದ್, ವಿದೇಶೀ ರಾಯಭಾರಿ ಕಚೇರಿಗಳಿಗೆ ಭದ್ರತೆ ಒದಗಿಸುವುದು ಆದ್ಯತೆಯಾಗಿದೆ ಮತ್ತು ಕಚೇರಿಗಳಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿ ವರ್ಗದ ಸಂಪೂರ್ಣ ಸುರಕ್ಷತೆ ತಮಗೆ […]

ಮೊದಲ ಸುದ್ದಿಗೋಷ್ಟಿ: ಸರ್ಕಾರದ ಭಾಗವಾಗಲು ಮಹಿಳೆಯರಿಗೆ ಆಹ್ವಾನ ನೀಡಿದ ತಾಲಿಬಾನ್ ನಾಯಕರು
ಮೊದಲ ಸುದ್ದಿಗೋಷ್ಟಿ ನಡೆಸಿದ ತಾಲಿಬಾನ್ ನಾಯಕರು
TV9 Web
| Edited By: |

Updated on:Aug 18, 2021 | 12:25 AM

Share

ಅಫಘಾನಿಸ್ತಾನವನ್ನು ವಶಡಿಸಿಕೊಂಡ ಬಳಿಕ ತಾಲಿಬಾನ್ ಬಂಡುಕೋರ ಸಂಘಟನೆಯ ನಾಯಕರು ಮಂಗಳವಾರ ಮೊಟ್ಟ ಮೊದಲ ಸುದ್ದಿಗೋಷ್ಟಿಯೊಂದನ್ನು ದೇಶದ ರಾಜಧಾನಿ ಕಾಬೂಲ್ನಲ್ಲಿ ನಡೆಸಿದರು. ಆಪಘಾನಿಸ್ತಾನದಲ್ಲಿರುವ ಬೇರೆ ದೇಶದ ರಾಯಭಾರಿ ಕಚೇರಿಗಳು, ಡಿಪ್ಲೊಮ್ಯಾಟ್ಗಳು ಹೆದರುವ ಅವಶ್ಯಕತೆಯಿಲ್ಲ, ಎಲ್ಲ ರಾಯಭಾರಿ ಕಚೇರಿಗಳಿಗೆ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಸುದ್ದಿಗಾರರನ್ನು ಉದ್ದೇಶಿಸಿ ತಾಲಿಬಾನ್ ಬಾತ್ಮೀದಾರ ಜಬಿಯುಲ್ಲಾ ಮುಜಾಹಿದ್, ವಿದೇಶೀ ರಾಯಭಾರಿ ಕಚೇರಿಗಳಿಗೆ ಭದ್ರತೆ ಒದಗಿಸುವುದು ಆದ್ಯತೆಯಾಗಿದೆ ಮತ್ತು ಕಚೇರಿಗಳಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿ ವರ್ಗದ ಸಂಪೂರ್ಣ ಸುರಕ್ಷತೆ ತಮಗೆ ಪ್ರಾಮುಖ್ಯತೆಯ ವಿಷಯವಾಗಿದೆ ಎಂದು ಹೇಳಿದರು, ಎಂದು ಅಫಘಾನಿಸ್ತಾನದ ಟೆಲಿವಿಷನ್ ನ್ಯೂಸ್ ಚ್ಯಾನೆಲ್ ಟೊಲೊ ನ್ಯೂಸ್ ವರದಿ ಮಾಡಿದೆ.

ಯಾವುದೇ ದೇಶದೊಂದಿಗೆ ತಮಗೆ ವೈರತ್ವ ಇಲ್ಲ ಮತ್ತು ಎಲ್ಲರನ್ನು ಕ್ಷಮಿಸಲಾಗಿದೆ ಅಂತ ಜಬಿಯುಲ್ಲಾ ಮುಜಾಹಿದ್ ಹೇಳರಿರುವರೆಂದು ವರದಿಯಾಗಿದೆ.

ಇದಕ್ಕೆ ಮೊದಲು, ಅಫಘಾನಿಸ್ತಾನದ ಜನರು ಹೆದರುವ ಕಾರಣವಿಲ್ಲ, ಎಲ್ಲರನ್ನೂ ಕ್ಷಮಿಸಲಾಗಿದೆ, ನಮಗೆ ವಿನಾಕಾರಣ ಹೆದರಿ ದೇಶ ಬಿಟ್ಟು ಹೋಗುವ ಕೆಲಸವನ್ನು ಯಾರೂ ಮಾಡಬಾರದು ಎಂದು ಘೋಷಣೆ ಮಾಡಿದ ತಾಲಿಬಾನ್ ನಾಯಕರು ಮಹಿಳೆಯರಿಗೆ ತಮ್ಮ ಸರ್ಕಾರವನ್ನು ಸೇರುವಂತೆ ಆಗ್ರಹಿಸಿದರು.

ಮಹಿಳೆಯರು ಸರ್ಕಾರವನ್ನು ಸೇರಿದ್ದೇಯಾದರೆ, ಜನರಲ್ಲಿ ಅದರಲ್ಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಮನೆ ಮಾಡಿರುವ ಭಯ ಹೊರಟು ಹೋಗುತ್ತದೆ, ಮತ್ತು ದೇಶ ಬಿಟ್ಟು ಪಲಾಯನಗೈಯುತ್ತಿರುವ ಸಹಸ್ರಾರು ಜನ ತಮ್ಮ ಮನಸ್ಸು ಬದಲಿಸಿ ದೇಶದಲ್ಲೇ ನೆಲೆಸುವ ನಿರ್ಧಾರಕ್ಕೆ ಬರುತ್ತಾರೆ ಎಂದರು.

ಇಸ್ಲಾಮಿಕ್ ಕಟ್ಟಳೆಗಳ ವ್ಯಾಪ್ತಿಯಲ್ಲೇ ತಾಲಿಬಾನ್ ಮಹಿಳೆಯರು ಮತ್ತು ಅವರ ಹಕ್ಕುಗಳನ್ನು ಗೌರವಿಸುತ್ತದೆ ಎಂದು ಮುಜಾಹಿದ್ ಹೇಳಿದರು. ತಾಲಿಬಾನ್ ಸಾಂಸ್ಕೃತಿಕ ಆಯೋಗದ ಸದಸ್ಯ ಇನಾಮುಲ್ಲಾ ಸಮಾನ್ಗನಿ ಅವರು ಮಂಗಳವಾರ ಬೆಳಗ್ಗೆ ಮಹಿಳೆಯರಿಗೆ ಸರ್ಕಾರದ ಭಾಗವಾಗುವಂತೆ ನೀಡಿದ ಆಹ್ವಾನವನ್ನು ಪುನರುಚ್ಛರಿಸಿದ ಮುಜಾಹಿದ್, ಮಹಿಳೆಯರು ನಿರ್ಭೀತಿಯಿಂದ ಸರ್ಕಾರ ಸೇರಲು ಮುಂದಾಗಬೇಕು ಎಂದರು.

ಅಫಘಾನಿಸ್ತಾನದಲ್ಲಿ ಒಂದು ಇಸ್ಲಾಮಿಕ್ ಸರ್ಕಾರ ಪ್ರತಿಷ್ಠಾಪನೆಗೊಳ್ಳುವುದು ಸಾಧ್ಯವಾಗುವ ಹಾಗೆ ಏರ್ಪಾಟುಗಳನ್ನು ಮಾಡಲಾಗುವುದು ಎಂದು ಮುಜಾಹಿದ್ ಹೇಳಿದರೆಂದು ಚ್ಯಾನೆಲ್ ವರದಿ ಮಾಡಿದೆ.

ಇದನ್ನೂ ಓದಿ:  ತಾಲಿಬಾನ್​ನಿಂದ ನಿರ್ವಹಿಸಲ್ಪಡುವ, ಉಗ್ರಸಂಘಟನೆಗೆ ಬೆಂಬಲ ಸೂಚಿಸುವ ಖಾತೆಗಳನ್ನು ನಿಷೇಧಿಸುವುದಾಗಿ ಫೇಸ್​ಬುಕ್​ ಘೋಷಣೆ

Published On - 12:17 am, Wed, 18 August 21

ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ
ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?