AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nirav Modi: ಲಂಡನ್ ಕೋರ್ಟ್‌ನಲ್ಲಿ ಬ್ಯಾಂಕ್ ಆಫ್ ಇಂಡಿಯಾಗೆ ಜಯ, ನೀರವ್ ಮೋದಿಗೆ 100 ಕೋಟಿ ರೂ. ಪಾವತಿಸಲು ಆದೇಶ

ಲಂಡನ್ ನ್ಯಾಯಾಲಯದಲ್ಲಿ ಬ್ಯಾಂಕ್ ಆಫ್ ಇಂಡಿಯಾಕ್ಕೆ ನೀರವ್ ಮೋದಿ ವಿರುದ್ಧ ಜಯ ಲಭಿಸಿದೆ. ಬ್ಯಾಂಕ್‌ಗೆ 100 ಕೋಟಿ ರೂ.ಗೂ ಹೆಚ್ಚು ಹಣವನ್ನು ಪಾವತಿಸುವಂತೆ ನೀರವ್ ಮೋದಿಗೆ ಆದೇಶ ನೀಡಲಾಗಿದೆ. ನೀರವ್ ಮೋದಿ ನೀಡಿದ್ದ ವೈಯಕ್ತಿಕ ಗ್ಯಾರಂಟಿ ಮತ್ತು ಅವರ ಇ-ಮೇಲ್ ಸಾಕ್ಷಿಯಾಗಿ ಪರಿಗಣಿತವಾಗಿವೆ. ಸಾಲ ವಸೂಲಾತಿ ಪ್ರಕರಣದಲ್ಲಿ ಬ್ಯಾಂಕಿನ ವಾದವನ್ನು ಕೋರ್ಟ್ ಎತ್ತಿಹಿಡಿದಿದೆ.

Nirav Modi: ಲಂಡನ್ ಕೋರ್ಟ್‌ನಲ್ಲಿ ಬ್ಯಾಂಕ್ ಆಫ್ ಇಂಡಿಯಾಗೆ ಜಯ, ನೀರವ್ ಮೋದಿಗೆ 100 ಕೋಟಿ ರೂ. ಪಾವತಿಸಲು ಆದೇಶ
ನೀರವ್ ಮೋದಿ
ನಯನಾ ರಾಜೀವ್
|

Updated on: Jun 24, 2026 | 10:44 AM

Share

ಲಂಡನ್, ಜೂನ್ 24: ಕೋಟ್ಯಂತರ ರೂಪಾಯಿ ಬ್ಯಾಂಕ್ ಹಗರಣ ನಡೆಸಿ ಭಾರತದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ(Nirav Modi)ಗೆ ಲಂಡನ್ ನ್ಯಾಯಾಲಯದಿಂದ ದೊಡ್ಡ ಆಘಾತ ಎದುರಾಗಿದೆ. ಬ್ಯಾಂಕ್ ಆಫ್ ಇಂಡಿಯಾ ದಾಖಲಿಸಿದ್ದ ಸಾಲ ವಸೂಲಾತಿ ಪ್ರಕರಣದಲ್ಲಿ ಬ್ಯಾಂಕ್ ಪರವಾಗಿ ತೀರ್ಪು ಬಂದಿದ್ದು, ನೀರವ್ ಮೋದಿ ಬ್ಯಾಂಕಿಗೆ ಬರೋಬ್ಬರಿ 10.7 ಮಿಲಿಯನ್ ಡಾಲರ್ (ಅಂದರೆ 100 ಕೋಟಿ ರೂಪಾಯಿಗೂ ಹೆಚ್ಚು) ಹಣವನ್ನು ಮರುಪಾವತಿಸಬೇಕು ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಸ್ವಂತ ಇ-ಮೇಲ್‌ನಿಂದಲೇ ಸಿಕ್ಕಿಬಿದ್ದ ಕುತಂತ್ರಿ

ಈ ಪ್ರಕರಣದಲ್ಲಿ ನೀರವ್ ಮೋದಿ ತಾನೇ ಬರೆದಿದ್ದ ಹಳೆಯ ಇ-ಮೇಲ್‌ನಿಂದಾಗಿ ಕಾನೂನು ಬಲೆಗೆ ಸಿಲುಕಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ನೀರವ್ ಮೋದಿ, ಬ್ಯಾಂಕ್ ಸಾಲ ವಸೂಲಾತಿ ಮಾಡುವ ಮುನ್ನ ನನಗೆ ಯಾವುದೇ ಸರಿಯಾದ ನೋಟಿಸ್ ಅಥವಾ ಮಾಹಿತಿ ನೀಡಿಲ್ಲ, ಹಾಗಾಗಿ ನನ್ನ ಪರ್ಸನಲ್ ಗ್ಯಾರಂಟಿ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ವಾದಿಸಿದ್ದರು.

ಆದರೆ ನ್ಯಾ. ಸೈಮನ್ ಟಿಂಕ್ಲರ್ ಅವರು ಫೆಬ್ರವರಿ 17, 2018 ರಂದು ನೀರವ್ ಮೋದಿ ಅವರೇ ಬ್ಯಾಂಕಿಗೆ ಬರೆದಿದ್ದ ಇ-ಮೇಲ್ ಒಂದನ್ನು ಕೋರ್ಟ್‌ನಲ್ಲಿ ಪ್ರದರ್ಶಿಸಿ ಅವರ ಸುಳ್ಳನ್ನು ಬಯಲು ಮಾಡಿದರು. ಆ ಇ-ಮೇಲ್‌ನಲ್ಲಿ ನೀರವ್ ಮೋದಿ, ಪಿಎನ್‌ಬಿ ಹಗರಣದ ನಂತರ ನನ್ನ ಇಡೀ ವ್ಯವಹಾರ ತೀವ್ರ ತೊಂದರೆಯಲ್ಲಿದೆ.

ಮಾಧ್ಯಮಗಳ ಒತ್ತಡ ಹಾಗೂ ತನಿಖಾ ಸಂಸ್ಥೆಗಳ ದಾಳಿಯಿಂದಾಗಿ ನನ್ನ ಫೈರ್‌ಸ್ಟಾರ್ ಕಂಪನಿಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಹೀಗಾಗಿ ನಾನು ಬ್ಯಾಂಕ್ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ವತಃ ಬರೆದುಕೊಂಡಿದ್ದರು. ಈ ಮೂಲಕ ತನಗೆ ಪರಿಸ್ಥಿತಿಯ ಸಂಪೂರ್ಣ ಅರಿವಿತ್ತು ಎಂಬುದನ್ನು ಅವರ ಇ-ಮೇಲ್ ಸಾಬೀತುಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ.

ಮತ್ತಷ್ಟು ಓದಿ: ವಾಲ್ಮೀಕಿ ನಿಗಮದ ಹಣದಲ್ಲಿ ಬೆಂಝ್​ ಕಾರು, ಲೋಕಸಭಾ ಚುನಾವಣೆಗೆ 21 ಕೋಟಿ ರೂ.ಬಳಕೆ: ಇಡಿ ತನಿಖೆಯಲ್ಲಿ ಬಹಿರಂಗ

ಜುಲೈ 2012 ರಲ್ಲಿ, ಬ್ಯಾಂಕ್ ಆಫ್ ಇಂಡಿಯಾ ನೀರವ್ ಮೋದಿಯ ಫೈರ್‌ಸ್ಟಾರ್ ಗ್ರೂಪ್‌ನ ದುಬೈ ಮೂಲದ ಕಂಪನಿಗೆ ಭಾರಿ ಮೊತ್ತದ ಸಾಲ ನೀಡಿತ್ತು. ಆಗಸ್ಟ್ 2013 ರಲ್ಲಿ ನೀರವ್ ಮೋದಿ, ಒಂದು ವೇಳೆ ಕಂಪನಿ ಸಾಲ ತೀರಿಸದಿದ್ದರೆ ತನ್ನ ವೈಯಕ್ತಿಕ ಆಸ್ತಿಯಿಂದ ಸಾಲ ಮರುಪಾವತಿಸುವುದಾಗಿ ವೈಯಕ್ತಿಕ ಗ್ಯಾರಂಟಿ ದಾಖಲೆಗೆ ಸಹಿ ಹಾಕಿದ್ದರು. 2018 ರಲ್ಲಿ ಹಗರಣ ಬಯಲಾದಾಗ ಬ್ಯಾಂಕ್ ತನ್ನ ಹಣವನ್ನು ವಾಪಸ್ ಕೇಳಿತ್ತು.

ಭಾರತಕ್ಕೆ ಹಸ್ತಾಂತರಿಸುವುದನ್ನು ತಪ್ಪಿಸಲು ಸದ್ಯ ಲಂಡನ್ ಜೈಲಿನಲ್ಲಿರುವ ನೀರವ್ ಮೋದಿ, ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೂಡಿದ ಮೂರು ತಂತ್ರಗಳನ್ನು ನ್ಯಾಯಮೂರ್ತಿಗಳು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ನಾನು ಭಾರತದಲ್ಲಿ ಇರಲಿಲ್ಲ, ಹಾಗಾಗಿ ಏಪ್ರಿಲ್ 2018 ಮತ್ತು ಅಕ್ಟೋಬರ್ 2025 ರಲ್ಲಿ ಕಳುಹಿಸಲಾದ ಡಿಮ್ಯಾಂಡ್ ನೋಟಿಸ್‌ಗಳು ನನಗೆ ತಲುಪಿಲ್ಲ ಎಂದಿದ್ದರು. ಬ್ಯಾಂಕ್ ನೇರವಾಗಿ ನೀರವ್ ಮೋದಿ ಇರುವ ಲಂಡನ್‌ನ ‘ಥೇಮ್‌ಸೈಡ್ ಜೈಲಿ’ಗೇ ನೋಟಿಸ್‌ಗಳನ್ನು ತಲುಪಿಸಿದೆ, ಹೀಗಾಗಿ ಈ ನೆಪ ನಡೆಯುವುದಿಲ್ಲ.

ಪಿಎನ್‌ಬಿ ಹಗರಣದ ಬಳಿಕ ನೀರವ್ ಮೋದಿಯ ಇಡೀ ಕಂಪನಿಯ ಮೌಲ್ಯ ಶೂನ್ಯವಾಗಿದೆ. ಆದ್ದರಿಂದ ತನ್ನ ಹಣವನ್ನು ಭದ್ರಪಡಿಸಿಕೊಳ್ಳಲು ಬ್ಯಾಂಕ್ ಸಾಲ ಮರುಪಾವತಿಗೆ ಒತ್ತಾಯಿಸಿದ್ದು ನೂರಕ್ಕೆ ನೂರು ಸರಿ ಇದೆ ಎಂದು ಕೋರ್ಟ್​ ಹೇಳಿದೆ.

ನೀರವ್ ಮೋದಿ ಅವರು ತಮ್ಮ ವೈಯಕ್ತಿಕ ಖಾತರಿಯಡಿಯಲ್ಲಿ ಬ್ಯಾಂಕಿಗೆ ಅಸಲು ಮೊತ್ತ 4.1 ಮಿಲಿಯನ್ ಡಾಲರ್ (ಸುಮಾರು 38.9 ಕೋಟಿ ರೂ.) ಮತ್ತು ಅದರ ಮೇಲಿನ ಎಲ್ಲಾ ಬಡ್ಡಿಯನ್ನು (ಒಟ್ಟು 100 ಕೋಟಿ ರೂ. ಹೆಚ್ಚು) ತಕ್ಷಣವೇ ಮರುಪಾವತಿಸಲು ನೇರ ಹೊಣೆಗಾರರಾಗಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸೈಮನ್ ಟಿಂಕ್ಲರ್ ಅಂತಿಮ ಆದೇಶ ಪ್ರಕಟಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ