Budget 2024: ಯುವಕರ ಬಾಳಿಗೆ ಭರವಸೆಯ ಬೆಳಕು ನೀಡಲು ಬಜೆಟ್​ನಲ್ಲಿ ನಿರೀಕ್ಷೆಗಳೇನು?

Youth expectations from Union Budget: ಜುಲೈ 23ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್​ನಲ್ಲಿ ಯುವಜನರ ಶಕ್ತಿ ಸಂಚಯಕ್ಕೆ ಪೂರಕವಾಗುವ ಯೋಜನೆಗಳ ನಿರೀಕ್ಷೆ ಇದೆ. ಯುವಶಕ್ತಿ ಪೂರ್ಣವಾಗಿ ಬಳಸಲು ಉದ್ಯೋಗಸೃಷ್ಟಿ ಸಾವಶ್ಯಕ ಇರಬೇಕು. ಬಜೆಟ್​ನಲ್ಲಿ ಉದ್ಯೋಗಸೃಷ್ಟಿಸಬಲ್ಲ ಕ್ಷೇತ್ರಗಳಿಗೆ ಒತ್ತು ಕೊಡಬಹುದಾ? ನವೋದ್ಯಮಗಳಿಗೆ ಉತ್ತೇಜನ ನೀಡುವ ಸ್ಟಾರ್ಟಪ್ ಸೀಡ್ ಫಂಡ್ ಸ್ಕೀಮ್​ಗಳಿಗೆ ಹೆಚ್ಚು ಹಣ ವಿನಿಯೋಗ ಸೇರಿದಂತೆ ಹಲವು ಕ್ರಮಗಳನ್ನು ನಿರೀಕ್ಷಿಸಲಾಗಿದೆ.

Budget 2024: ಯುವಕರ ಬಾಳಿಗೆ ಭರವಸೆಯ ಬೆಳಕು ನೀಡಲು ಬಜೆಟ್​ನಲ್ಲಿ ನಿರೀಕ್ಷೆಗಳೇನು?
ಯುವಜನರು
Follow us
|

Updated on: Jul 22, 2024 | 8:00 AM

ನವದೆಹಲಿ, ಜುಲೈ 22: ಕೇಂದ್ರ ಮುಂಗಡ ಪತ್ರ ಮಂಡನೆ ಮಾಡಲು ಎರಡೇ ದಿನ ಬಾಕಿ ಇದೆ. ಮೋದಿ 3.0 ಸರ್ಕಾರ ಚೊಚ್ಚಲ ಬಜೆಟ್ ಇದಾಗಿರುವುದರಿಂದ ಆತ್ಮವಿಶ್ವಾಸದ ಹೆಜ್ಜೆ ಮತ್ತು ಹೊಸ ಭರವಸೆಯ ಹಾದಿ ತುಳಿಯುವ ನಿರೀಕ್ಷೆ ಹೆಚ್ಚಿದೆ. ದೇಶದ ಆರ್ಥಿಕತೆ ಗರಿಷ್ಠವಾಗಿ ಬೆಳೆಯಬೇಕಾದರೆ ಉದ್ಯಮ ವಲಯ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಬೇಕು. ದೇಶದಲ್ಲಿ ನಿರುದ್ಯೋಗ ಇಲ್ಲದಂತೆ ಉದ್ದಿಮೆಗಳು ಬೆಳೆಯಬೇಕು. ಯುವಕರ ಶಕ್ತಿ ಗರಿಷ್ಠವಾಗಿ ಬಳಕೆಯಾಗಬೇಕು. ಆ ನಿಟ್ಟಿನಲ್ಲಿ ಬಜೆಟ್​ನಲ್ಲಿ ಯೋಜನೆಗಳು ಇರಬೇಕು ಎಂಬ ಆಶಯವನ್ನು ಉದ್ಯಮ ವಲಯ ಇಟ್ಟುಕೊಂಡಿದೆ. ಇದರಲ್ಲಿ ಪ್ರಮುಖವಾಗಿ ನವೋದ್ಯಮಗಳಿಗೆ ಆರಂಭಿಕ ಉತ್ತೇಜನ ನೀಡುವಂತಹ ಸ್ಟಾರ್ಟಪ್ ಇಂಡಿಯಾ ಸೀಡ್ ಫಂಡ್ ಯೋಜನೆಗೆ ಹೆಚ್ಚು ಹಣ ವಿನಿಯೋಗಿಸಬೇಕು ಎನ್ನುವ ಸಲಹೆ ಕೇಳಿಬಂದಿದೆ.

ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್ ಸಾಕಷ್ಟು ಬೆಳವಣಿಗೆ ಹೊಂದಿದೆ. ಆದರೆ, ಉದ್ಯೋಗಸೃಷ್ಟಿ ಮಾತ್ರ ನಿರೀಕ್ಷಿತ ರೀತಿಯಲ್ಲಿ ಇಲ್ಲ. ಈ ಬಜೆಟ್​ನಲ್ಲಿ ಸ್ಟಾರ್ಟಪ್ ಇಕೋಸಿಸ್ಟಂಗೆ ಪ್ರಾಧಾನ್ಯತೆ ಕೊಡಬಹುದು ಎಂದು ಭಾವಿಸಿರುವುದಾಗಿ ಕರ್ನಾಟಕದ ಎಂಜಿನಿಯರಿಂಗ್ ಪದವೀಧರೆಯೊಬ್ಬರ ಅಭಿಪ್ರಾಯವನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಎಕ್ಸ್​ಪ್ರೆಸ್ ವರದಿ ಮಾಡಿದೆ.

ESOP ಗಳಿಗೆ ಡಬಲ್ ತೆರಿಗೆ ಬೇಡ

ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನೀಡುವ ಇಸಾಪ್ (ESOP: ಎಂಪ್ಲಾಯೀ ಸ್ಟಾಕ್ ಓನರ್​ಶಿಪ್ ಪ್ಲಾನ್) ಮೇಲೆ ಡಬಲ್ ತೆರಿಗೆ ವಿಧಿಸುವುದನ್ನು ನಿಲ್ಲಿಸಬೇಕು. ಈ ರೀತಿಯಾಗಿ ವೃತ್ತಿಪರರಿಗೆ ಹೆಚ್ಚು ಉತ್ತೇಜನ ಸಿಕ್ಕಂತಾಗುತ್ತದೆ. ಹೆಚ್ಚು ಕ್ಷಮತೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಮಣಿಪಾಲ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಾರ್ಥಕ್ ಭಡ್ಕಂಕರ್ ಹೇಳುತ್ತಾರೆ.

ಇದನ್ನೂ ಓದಿ: ರೈಲ್ವೆ ಬಜೆಟ್: ಹತ್ತು ವರ್ಷದ ಹಿಂದಿನದಕ್ಕಿಂತ ನಾಲ್ಕು ಪಟ್ಟು ಹೆಚ್ಚಾದ ಬಜೆಟ್ ಗಾತ್ರ; ಈ ಬಾರಿಯ ನಿರೀಕ್ಷೆಗಳಿವು…

ಉನ್ನತ ತಂತ್ರಜ್ಞಾನ ಕ್ಷೇತ್ರಗಳಿಗೆ ಉತ್ತೇಜನ

ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್​ನಂತಹ ವಿಶೇಷ, ಪರಿಣಿತ ಮತ್ತು ಉನ್ನತ ತಂತ್ರಜ್ಞಾನ ವಲಯಗಳಲ್ಲಿ ಗ್ಲೋಬಲ್ ಸಪ್ಲೈ ಚೈನ್​ನ ಭಾಗವಾಗುವಂತಹ ಯೋಜನೆಗಳ ಮೇಲೆ ಬಜೆಟ್ ಗಮನ ಕೊಡಬೇಕು ಉನ್ನತ ಕೌಶಲ್ಯದ ಕೆಲಸಗಾರರನ್ನು ಸೃಷ್ಟಿಸುವಂತಹ ಕ್ಷೇತ್ರಗಳಲ್ಲಿ ನಾವೀನ್ಯತೆಗೆ ಉತ್ತೇಜಿಸಬೇಕು. ಈ ರೀತಿ ಪಾಲಿಸಿಗಳಿಗೆ ಬಜೆಟ್ ಆದ್ಯತೆ ಕೊಟ್ಟರೆ ಆಗ ಯುವಜನರು ಆರ್ಥಿಕತೆಯ ಬೆಳವಣಿಗೆಗೆ ಟೊಂಕ ಕಟ್ಟಿ ನಿಲ್ಲುತ್ತಾರೆ ಎಂದು ಬೆಂಗಳೂರಿನ ಎಸ್​ಎಪಿ ಲ್ಯಾಬ್ಸ್​ನ ಯುವ ಉದ್ಯೋಗಿ ಆಯುಷ್ ಕುಮಾರ್ ಅಭಿಪ್ರಾಯಪಡುತ್ತಾರೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ