Inflation Target: ಇನ್ನೂ ಕೆಲ ಕಾಲ ಹಣದುಬ್ಬರ ಇದ್ದರೆ ಚಿಂತೆ ಬೇಡ; ಅಭಿವೃದ್ದಿಗೋಸ್ಕರ ಹಣದುಬ್ಬರ ಇರಲಿಬಿಡಿ: ಎಂಪಿಸಿ ಸದಸ್ಯ ಜಯಂತ್ ವರ್ಮಾ

RBI MPC Member Jayant Varma: ಆರ್ಥಿಕ ಬೆಳವಣಿಗೆಗೋಸ್ಕರ ಒಂದಷ್ಟು ಕಾಲ ಹಣದುಬ್ಬರವನ್ನು ಸಹಿಸಿಕೊಳ್ಳಬೇಕು. ಹಣದುಬ್ಬರ ಶೇ. 4ಕ್ಕಿಂತ ಹೆಚ್ಚಿದ್ದರೂ ಹೆಚ್ಚು ಚಿಂತೆ ಪಡಬೇಕಿಲ್ಲ. ಹಣದುಬ್ಬರವನ್ನು ಮೇಲಿನ ಮಿತಿಗಿಂತ ಕೆಳಗೆ ತರಬೇಕೆಂಬ ಆತುರತೆ ಇದೆಯಾದರೂ ನಾವು ಇನ್ನಷ್ಟು ಸಂಯಮ ಹೊಂದಿರಬೇಕು. ಬಹಳ ವೇಗದಲ್ಲಿ ಹಣದುಬ್ಬರ ಇಳಿಕೆಯಾದಷ್ಟೂ ಆರ್ಥಿಕ ಬೆಳವಣಿಗೆಯನ್ನು ಬಲಿಕೊಡಬೇಕಾಗುತ್ತದೆ ಎಂದು ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ಸದಸ್ಯ ಜಯಂತ್ ವರ್ಮಾ ಹೇಳಿದ್ದಾರೆ.

Inflation Target: ಇನ್ನೂ ಕೆಲ ಕಾಲ ಹಣದುಬ್ಬರ ಇದ್ದರೆ ಚಿಂತೆ ಬೇಡ; ಅಭಿವೃದ್ದಿಗೋಸ್ಕರ ಹಣದುಬ್ಬರ ಇರಲಿಬಿಡಿ: ಎಂಪಿಸಿ ಸದಸ್ಯ ಜಯಂತ್ ವರ್ಮಾ
ಆರ್​ಬಿಐ
Follow us
|

Updated on: Oct 23, 2023 | 1:38 PM

ನವದೆಹಲಿ, ಅಕ್ಟೋಬರ್ 23: ಪ್ರತೀ ಬಾರಿ ಆರ್​ಬಿಐನ ದ್ವೈಮಾಸಿಕ ಎಂಪಿಸಿ ಸಭೆ (RBI MPC Meeting) ನಡೆದಾಗೆಲ್ಲ ಹೆಚ್ಚಿನವರ ಕಣ್ಣು ಹಣದುಬ್ಬರ ಮತ್ತು ರೆಪೋದರಗಳತ್ತಲೇ ನೆಟ್ಟಿರುತ್ತದೆ. ಆರ್​ಬಿಐ ಗುರಿ ಇಟ್ಟಿರುವ ಶೇ. 4ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹಣದುಬ್ಬರ (inflation) ಕಳೆದ 4 ವರ್ಷಗಳಿಂದಲೂ ಇದೆ. ಹಣದುಬ್ಬರ ಶೇ. 4ಕ್ಕೆ ಇಳಿಯುತ್ತಿಲ್ಲವಲ್ಲ ಎಂದು ಕೆಲವರು ವ್ಯಾಕುಲಗೊಂಡಿರುವುದು ಹೌದು. ಆರ್​ಬಿಐನ ಎಂಪಿಸಿ ಸಭೆ ಹಣದುಬ್ಬರ ನಿಯಂತ್ರಿಸಲು ರೆಪೋ ದರ ಏರಿಸುತ್ತಿಲ್ಲ ಎಂದೂ ಕೆಲವರು ಪ್ರಶ್ನಿಸಿರುವುದುಂಟು. ಆದರೆ, ಎಂಪಿಸಿ ಸದಸ್ಯರೊಬ್ಬರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ಹೊರಗಿನ ಸದಸ್ಯರಲ್ಲೊಬ್ಬರಾದ ಜಯಂತ್ ವರ್ಮಾ ಅವರು ಹಣದುಬ್ಬರವನ್ನು ಇಳಿಸುವುದಷ್ಟೇ ಗುರಿಯಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಬೆಳವಣಿಗೆಗೋಸ್ಕರ ಒಂದಷ್ಟು ಕಾಲ ಹಣದುಬ್ಬರವನ್ನು ಸಹಿಸಿಕೊಳ್ಳಬೇಕು. ಹಣದುಬ್ಬರ ಶೇ. 4ಕ್ಕಿಂತ ಹೆಚ್ಚಿದ್ದರೂ ಹೆಚ್ಚು ಚಿಂತೆ ಪಡಬೇಕಿಲ್ಲ ಎಂಬುದು ಜಯಂತ್ ವರ್ಮಾ ಅವರ ವಾದ.

ಇದನ್ನೂ ಓದಿ: ಪಿಎಂಜೆಡಿವೈ ಅಡಿಯ ಬ್ಯಾಂಕ್ ಖಾತೆಗಳು; ಯಾತಕ್ಕಾಗಿ ಈ ಯೋಜನೆ? ಪ್ರಯೋಜನಗಳೇನು?

‘ಹಣದುಬ್ಬರವನ್ನು ಮೇಲಿನ ಮಿತಿಗಿಂತ ಕೆಳಗೆ ತರಬೇಕೆಂಬ ಆತುರತೆ ಇದೆಯಾದರೂ ನಾವು ಇನ್ನಷ್ಟು ಸಂಯಮ ಹೊಂದಿರಬೇಕು. ಬಹಳ ವೇಗದಲ್ಲಿ ಹಣದುಬ್ಬರ ಇಳಿಕೆಯಾದಷ್ಟೂ ಆರ್ಥಿಕ ಬೆಳವಣಿಗೆಯನ್ನು ಬಲಿಕೊಡಬೇಕಾಗುತ್ತದೆ,’ ಎಂದು ಜಯಂತ್ ವರ್ಮಾ ಹೇಳಿದ್ದಾರೆ.

ಹಣದುಬ್ಬರವನ್ನು ಶೇ. 4ಕ್ಕೆ ಸೀಮಿತಗೊಳಿಸುವುದು ಆರ್​ಬಿಐ ಹಾಕಿರುವ ಗುರಿ. ಹಾಗೆಯೇ, ಗುರಿಯ ಆಚೆ ಮತ್ತು ಈಚೆ ಶೇ. 2ರಷ್ಟು ತಾಳಿಕೆ ಮಿತಿ ಹಾಕಿದೆ. ಅಂದರೆ, ಹಣದುಬ್ಬರವು ಶೇ. 2ರಿಂದ ಶೇ. 6ರೊಳಗೆ ಇರುವಂತೆ ನೋಡಿಕೊಳ್ಳುವುದು ಆರ್​ಬಿಐನ ಸಂಕಲ್ಪ. 2019ರಲ್ಲಿ ಹಣದುಬ್ಬರ ಶೇ. 4ಕ್ಕಿಂತಲೂ ಒಳಗೆ ಇತ್ತು. ಆದರೆ, ಕಳೆದ 4 ವರ್ಷಗಳಿಂದ ಸತತವಾಗಿ ಶೇ. 4ಕ್ಕಿಂತ ಹೊರಗೇ ಇದೆ. ಮುಂದಿನ 18 ತಿಂಗಳು, ಅಂದರೆ 2025ರ ಮಾರ್ಚ್​ವರೆಗೂ ಹೆಚ್ಚಿನ ಮಟ್ಟದಲ್ಲೇ ಹಣದುಬ್ಬರ ಇರಬಹುದು ಎಂಬುದು ಆರ್​ಬಿಐ ಅಂದಾಜು.

ಇದನ್ನೂ ಓದಿ: ಚೀನಾದಲ್ಲಿ ಫಾಕ್ಸ್​ಕಾನ್ ಕಚೇರಿಗಳಲ್ಲಿ ತೆರಿಗೆ ಅಧಿಕಾರಿಗಳು, ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳಿಂದ ಶೋಧ

ಹಣದುಬ್ಬರ ನಿಯಂತ್ರಣಕ್ಕೆ ಆರ್​ಬಿಐ ಬಳಿ ಇರುವ ಪ್ರಮುಖ ಅಸ್ತ್ರವೆಂದರೆ ಅದು ರೆಪೋ ದರ ಅಥವಾ ಬಡ್ಡಿದರ. ಬಡ್ಡಿದರ ಹೆಚ್ಚಿಸಿದರೆ ಹಣದುಬ್ಬರವನ್ನು ಬೇಗನೇ ಕಡಿಮೆ ಮಾಡಬಹುದು. ಆದರೆ, ಬಡ್ಡಿದರ ಹೆಚ್ಚಳದ ಸೈಡ್ ಎಫೆಕ್ಟ್ ಆಗಿ ಆರ್ಥಿಕತೆ ನಲುಗುತ್ತದೆ. ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳಬಹುದು. ಹೀಗಾಗಿ, ರಿಸರ್ವ್ ಬ್ಯಾಂಕ್ ಕಳೆದ ಕೆಲ ತಿಂಗಳುಗಳಿಂದ ಬಡ್ಡಿದರವನ್ನು ಹೆಚ್ಚಿಸುತ್ತಿಲ್ಲ. ಜಯಂತ್ ವರ್ಮಾ ಹೇಳಿಕೆ ಕೂಡ ಈ ಕ್ರಮವನ್ನು ಸಮರ್ಥಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ