AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani Group 5G Spectrum: 5G ಸ್ಪೆಕ್ಟ್ರಮ್​ ಮುಕ್ತ ಬಿಡ್ಡಿಂಗ್​ನಲ್ಲಿ ಅದಾನಿ ಸಮೂಹವೂ ಭಾಗಿ; ಆದರೆ ಉದ್ದೇಶ ಮಾತ್ರ ಒಟ್ಟಾರೆ ಬೇರೆ

ಅದಾನಿ ಸಮೂಹದಿಂದ 5G ಸ್ಪೆಕ್ಟ್ರಂಗಾಗಿ ಬಿಡ್ಡಿಂಗ್ ಮಾಡಲಾಗುತ್ತಿದೆ. ಆದರೆ ಅದರ ಬಳಕೆ ಉದ್ದೇಶ ಮಾತ್ರ ಬೇರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Adani Group 5G Spectrum: 5G ಸ್ಪೆಕ್ಟ್ರಮ್​ ಮುಕ್ತ ಬಿಡ್ಡಿಂಗ್​ನಲ್ಲಿ ಅದಾನಿ ಸಮೂಹವೂ ಭಾಗಿ; ಆದರೆ ಉದ್ದೇಶ ಮಾತ್ರ ಒಟ್ಟಾರೆ ಬೇರೆ
ಗೌತಮ್ ಅದಾನಿ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Jul 09, 2022 | 8:27 PM

Share

ನಾವು 5G ಸ್ಪೆಕ್ಟ್ರಮ್​ನಲ್ಲಿ ಆಸಕ್ತಿ ಹೊಂದಿದ್ದೇವೆಯೇ ಎಂಬ ಬಗ್ಗೆ ಸಾಕಷ್ಟು ಮಂದಿ ಕೇಳುತ್ತಿದ್ದಾರೆ. ನಮ್ಮ ಉದ್ದೇಶವು ಗ್ರಾಹಕ ಮೊಬಿಲಿಟಿ ವಲಯದ ಕಡೆಗಲ್ಲ ಎಂದು ಅದಾನಿ ಸಮೂಹದಿಂದ (Adani Group) ಸ್ಪಷ್ಟನೆ ನೀಡಲಾಗಿದೆ. ಈ ಹರಾಜಿನ ಮೂಲಕ ಭಾರತವು ಮುಂದಿನ ತಲೆಮಾರಿನ 5G ಸೇವೆಗಳನ್ನು ತರುವುದಕ್ಕೆ ಸಿದ್ಧತೆ ನಡೆದಿದೆ. ಈ ಮುಕ್ತ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರ ಪೈಕಿ ನಾವೂ ಒಬ್ಬರು. ನಾವು 5G ಸ್ಪೆಕ್ಟ್ರಮ್ ಹರಾಜಿನಲ್ಲಿ ಭಾಗವಹಿಸುತ್ತಿರುವ ಉದ್ದೇಶ ಏನೆಂದರೆ, ಖಾಸಗಿ ನೆಟ್​ವರ್ಕ್ ಸಲ್ಯೂಷನ್ಸ್ ಒದಗಿಸುವುದಕ್ಕೆ ಮತ್ತು ಅದರ ಜತೆಗೆ ವಿಸ್ತೃತ ಸೈಬರ್ ಸೆಕ್ಯೂರಿಟಿಯನ್ನು ವಿಮಾನ ನಿಲ್ದಾಣಗಳು, ಬಂದರು ಹಾಗೂ ಸರಕು ಸಾಗಣೆ, ವಿದ್ಯುತ್ ಉತ್ಪಾದನೆ, ಪ್ರಸರಣ, ವಿತರಣೆ ಮತ್ತು ವಿವಿಧ ಉತ್ಪಾದನೆ ಕಾರ್ಯಚಟುವಟಿಕೆಗಳಿಗಾಗಿ ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದರ ಜತೆಗೆ, ನಮಗೆ ಮುಕ್ತ ಬಿಡ್ಡಿಂಗ್​ನಲ್ಲಿ 5G ಸ್ಪೆಕ್ಟ್ರಮ್ ದೊರೆತಲ್ಲಿ ನಾವು ಈಚೆಗೆ ಘೋಷಣೆ ಮಾಡಿದ ಅದಾನಿ ಫೌಂಡೇಷನ್​ನ ಗ್ರಾಮೀಣ ಪ್ರದೇಶದಲ್ಲಿನ ಶಿಕ್ಷಣ, ಹೆಲ್ತ್​ಕೇರ್​ ಮತ್ತು ಕೌಶಲಾಭಿವೃದ್ಧಿ ಕ್ಷೇತ್ರಕ್ಕೆ ಸಹಾಯ ಆಗಲಿದೆ. ಈ ಎಲ್ಲವೂ 5G ತಂತ್ರಜ್ಞಾನದಿಂದ ಅನುಕೂಲ ಪಡೆದುಕೊಳ್ಳುತ್ತವೆ ಎಂದು ಹೇಳಲಾಗಿದೆ.

ಇದರ ಜತೆಜತೆಗೆ ನಮ್ಮದೇ ಆದ ಡಿಜಿಟಲ್ ಪ್ಲಾಟ್​ಫಾರ್ಮ್ ಮೂಲಕ ಸೂಪರ್ ಅಪ್ಲಿಕೇಷನ್​ಗಳು, ಎಡ್ಜ್ ಡೇಟಾ ಸೆಂಟರ್​ಗಳು, ಮತ್ತು ಇಂಡಸ್ಟ್ರಿ ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್​ಗಳನ್ನು ನಿರ್ಮಿಸುತ್ತೇವೆ. ನಮಗೆ ಅತ್ಯುತ್ತಮ ಗುಣಮಟ್ಟದ ಡೇಟಾ ಸ್ಟ್ರೀಮಿಂಗ್ ಸಾಮರ್ಥ್ಯದ ಅಗತ್ಯ ಇದೆ. ಅದು ಹೈ ಫ್ರೀಕ್ವೆನ್ಸಿ ಮತ್ತು ಕಡಿಮೆ ಲೆಟೆನ್ಸಿ 5G ನೆಟ್​ವರ್ಕ್ ನಮ್ಮ ಎಲ್ಲ ವ್ಯವಹಾರಗಳಿಗೆ ಅಗತ್ಯ ಇದೆ. ಮತ್ತು ಇವೆಲ್ಲವೂ ದೇಶ ನಿರ್ಮಾಣದ ಹಾಗೂ ಆತ್ಮನಿರ್ಭರ್ ಭಾರತದ ಸಿದ್ಧಾಂತಕ್ಕೆ ಪೂರಕವಾಗಿದೆ ಎಂದು ಅದಾನಿ ಸಮೂಹದ ವಕ್ತಾರರು ಹೇಳಿದ್ದಾರೆ.

ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಸಿಎಂ ತಾರತಮ್ಯ ಮಾಡಲ್ಲ, ಅನುದಾನ ಸಮಾನವಾಗಿ ಸಿಗುತ್ತದೆ: ಕೊತ್ತೂರು ಮಂಜನಾಥ್
ಸಿಎಂ ತಾರತಮ್ಯ ಮಾಡಲ್ಲ, ಅನುದಾನ ಸಮಾನವಾಗಿ ಸಿಗುತ್ತದೆ: ಕೊತ್ತೂರು ಮಂಜನಾಥ್
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಮೈಸೂರು ಜನ ಮತ್ತು ಪೌರಕಾರ್ಮಿಕರಿಗೆ ಶ್ರೇಯಸ್ಸು ಸಲ್ಲಬೇಕು: ಪಾಲಿಕೆ ಆಯುಕ್ತ
ಮೈಸೂರು ಜನ ಮತ್ತು ಪೌರಕಾರ್ಮಿಕರಿಗೆ ಶ್ರೇಯಸ್ಸು ಸಲ್ಲಬೇಕು: ಪಾಲಿಕೆ ಆಯುಕ್ತ
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು