ಬೆಂಗಳೂರಿನ ಕೋರಮಂಗಲದಲ್ಲಿದೆ ಕುಬೇರರ ಏರಿಯಾ; ದಾಖಲೆ ಬೆಲೆಗೆ ಮಾರಾಟವಾಗಿದೆ ನಿವೇಶನ

Bengaluru Businessman Ajit Abraham Isaac buys property for Rs 70,300 per sq ft: ಬೆಂಗಳೂರಿನ ಕೋರಮಂಗಲ ಬಹಳ ಪ್ರತಿಷ್ಠಿತ ಪ್ರದೇಶ. ಇದೇ ಕೋರಮಂಗಲದ ಮೂರನೇ ಬ್ಲಾಕ್ ಅಂತೂ ಕುಬೇರರ ಏರಿಯಾ ಎಂದೇ ಖ್ಯಾತವಾಗಿದೆ. ಅಜಿತ್ ಅಬ್ರಹಾಂ ಐಸಾಕ್ ಎಂಬ ಉದ್ಯಮಿ ಇಲ್ಲಿ ಚದರಡಿಗೆ 70,300 ರೂನಂತೆ 10,000 ಚದರಡಿ ವಿಸ್ತೀರ್ಣದ ನಿವೇಶನವನ್ನು 67.5 ಕೋಟಿ ರೂ ತೆತ್ತು ಖರೀದಿ ಮಾಡಿದ್ದಾರೆ. ಅರವಿಂದ್ ಮತ್ತು ಗೀತಾ ರೆಡ್ಡಿ ಅವರಿಂದ ಮಾರಾಟವಾದ ಈ ನಿವೇಶನದ ಬೆಲೆ ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲೇ ಹೊಸ ದಾಖಲೆ ಮಾಡಿದೆ.

ಬೆಂಗಳೂರಿನ ಕೋರಮಂಗಲದಲ್ಲಿದೆ ಕುಬೇರರ ಏರಿಯಾ; ದಾಖಲೆ ಬೆಲೆಗೆ ಮಾರಾಟವಾಗಿದೆ ನಿವೇಶನ
ಬೆಂಗಳೂರು
Follow us
|

Updated on: Apr 19, 2024 | 11:27 AM

ಬೆಂಗಳೂರು, ಏಪ್ರಿಲ್ 19: ಭಾರತದ ಐಟಿ ರಾಜಧಾನಿ ಎನಿಸಿದ ಬೆಂಗಳೂರು ನಗರದಲ್ಲಿ ಭೂಮಿ ಬೆಲೆ ಯದ್ವಾತದ್ವ ಜಾಸ್ತಿ ಇದೆ. ಇಲ್ಲಿ ಸ್ವಂತ ಮನೆ ಪಡೆಯುವುದೆಂದರೆ ಜೀವಮಾನದ ಸಂಪಾದನೆ ವ್ಯಯಿಸಬೇಕಾಗುತ್ತದೆ. ಅದರಲ್ಲೂ ಕೆಲ ಪ್ರತಿಷ್ಠಿತ ಪ್ರದೇಶಗಳಲ್ಲಿ ಮಧ್ಯವವರ್ಗದವರು ಕಣ್ಣಿಂದ ನೋಡಿ ಖುಷಿ ಪಡಬೇಕು ಎನ್ನುವಷ್ಟರ ಮಟ್ಟಿಗೆ ದುಬಾರಿಯಾಗಿದೆ. ಬೆಂಗಳೂರಿನ ಅತ್ಯಂತ ದುಬಾರಿ ಏರಿಯಾಗಳಲ್ಲಿ ಕೋರಮಂಗಲದ ಮೂರನೇ ಬ್ಲಾಕ್ ಕೂಡ ಒಂದು. ಇದನ್ನು ಬಿಲಿಯನೇರ್ ಸ್ಟ್ರೀಟ್ ಎಂದೂ ಹೇಳುವುದುಂಟು. ಸಾವಿರಾರು ಕೋಟಿ ರೂ ಒಡೆಯರಿರುವ ಈ ಏರಿಯಾದಲ್ಲಿ ಇತ್ತೀಚೆಗೆ 10,000 ಚದರಡಿಯ ಒಂದು ನಿವೇಶನ ದಾಖಲೆ ಬೆಲೆಗೆ ಮಾರಾಟವಾಗಿದೆ. ಕ್ವೆಸ್ ಕಾರ್ಪ್ ಕಂಪನಿಯ ಸಂಸ್ಥಾಪಕ ಅಜಿತ್ ಅಬ್ರಹಾಂ ಐಸಾಕ್ ಎಂಬುವವರು 67.5 ಕೋಟಿ ರೂಗೆ ಈ ಪ್ರಾಪರ್ಟಿ ಖರೀದಿಸಿದ್ದಾರೆ.

ಅರವಿಂದ್ ಮತ್ತು ಗೀತಾ ರೆಡ್ಡಿ ಅವರಿಂದ ಐಸಾಕ್ ಈ ಆಸ್ತಿ ಖರೀದಿಸಿದ್ದಾರೆ. ಚದರಡಿಗೆ 70,300 ರೂನಂತೆ ಬೆಲೆಗೆ ಈ 10,000 ಚದರಡಿ ನಿವೇಶನ ಮಾರಾಟವಾಗಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಇದು ಅತ್ಯಂತ ದುಬಾರಿ ಆಸ್ತಿ ಎನಿಸಿದೆ. ಇದು ಕೋರಮಂಗಲದ ಮೂರನೇ ಬ್ಲಾಕ್​ನಲ್ಲಿರುವ ಪ್ರಾಪರ್ಟಿ. ಕುತೂಹಲ ಎಂದರೆ ಟಿವಿಎಸ್ ಮೋಟಾರ್ಸ್ ಸಂಸ್ಥೆ ಇದೇ ಏರಿಯಾದಲ್ಲಿ 65 ಕೋಟಿ ರುಪಾಯಿಗೆ ಒಂದು ನಿವೇಶನವನ್ನು ಖರೀದಿ ಮಾಡಿತ್ತು. ಆ ದಾಖಲೆಯನ್ನು ಅಜಿತ್ ಅಬ್ರಹಾಂ ಐಸಾಕ್ ಮುರಿದಿದ್ದಾರೆ.

ಟಿಇಎಸ್ ಮೋಟಾರ್ಸ್ 65 ಕೋಟಿ ರೂ ಕೊಟ್ಟು ಖರೀದಿಸಿದ ನಿವೇಶನ 9,488 ಚದರಡಿ ವಿಸ್ತೀರ್ಣದ್ದಾಗಿದೆ. ಚದರಡಿಗೆ 68,508 ರೂನಂತೆ ಇದು ಬೆಲೆ ಪಡೆದಿದೆ. ಈ ಏರಿಯಾದಲ್ಲಿ ಭೂಮಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ದೊಡ್ಡ ದೊಡ್ಡ ಉದ್ಯಮಿಗಳು ಇಲ್ಲಿ ಪ್ರಾಪರ್ಟಿ ಪಡೆಯಲು ಹಾತೊರೆಯುವುದಿದೆ.

ಇದನ್ನೂ ಓದಿ: ಬೆಂಗಳೂರಿನ ಟೈಲರ್ ಇವತ್ತು ಬಿಲಿಯನೇರ್; ಸಾವಿರಾರು ಕೋಟಿ ರೂ ಕುಬೇರನಾದರೂ ಮೂಲ ಕಸುಬು ಮರೆತಿಲ್ಲ ರಜಾಕ್

ಅಜಿತ್ ಅಬ್ರಹಾಂ ಐಸಾಕ್ ಅವರು ಮೂರು ವರ್ಷದ ಹಿಂದೆ ಇದೇ ಏರಿಯಾದಲ್ಲಿ ಮತ್ತೊಂದು ಪ್ರಾಪರ್ಟಿ ಖರೀದಿಸಿದ್ದರು. ಅದೂ 52 ಕೋಟಿ ರೂಗೆ. 9,507 ಚದರಡಿ ವಿಸ್ತೀರ್ಣದ ಬಂಗಲೆ ಅದು. ಸಿಂಗಾಪುರದಲ್ಲಿರುವ ಎನ್​ಆರ್​ಐ ಬ್ರಿಜೇಶ್ ಆರ್ ವಾಹಿ ಎಂಬುವವರಿಂದ ಅಜಿತ್ ಈ ಬಂಗಲೆ ಪಡೆದಿದ್ದರು. ಚದರಡಿಗೆ 58,000 ರೂ ಬೆಲೆಯಂತೆ ಇದರ ಸೇಲ್ ಆಗಿತ್ತು.

ಕೋರಮಂಗಲದ ಮೂರನೇ ಬ್ಲಾಕ್​ನಲ್ಲಿ ಭೂಮಿಗೆ ಯಾಕಿಷ್ಟು ಬೆಲೆ?

ಬೆಂಗಳೂರಿನಲ್ಲಿ ಯಾವುದೇ ಏರಿಯಾಗೆ ಹೋದರೆ ನಿವೇಶನದ ಅಳತೆ ಸಾಮಾನ್ಯವಾಗಿ 30X40ಯದ್ದಾಗಿರುತ್ತದೆ. ಕೆಲವೆಡೆ ಅದು 40X60 ಇರಬಹುದು. ಆದರೆ, ಕೋರಮಂಗಲದ ಮೂರನೇ ಬ್ಲಾಕ್​ನಲ್ಲಿ ವಿಶೇಷತೆ ಎಂದರೆ ಇಲ್ಲಿ ದೊಡ್ಡ ದೊಡ್ಡ ನಿವೇಶನಗಳು ಲಭ್ಯ ಇರುತ್ತವೆ. ದೊಡ್ಡದೊಡ್ಡ ಬಂಗಲೆ ಕಟ್ಟಿಸಬೇಕೆನ್ನುವವರಿಗೆ ಇದು ಅನುಕೂಲ.

ಇದನ್ನೂ ಓದಿ: ನಟಿ ಶಿಲ್ಪಾ ಶೆಟ್ಟಿ ಮನೆ ಸೀಜ್ ಮಾಡಲು ಕಾರಣವಾದ ಬಿಟ್​ಕಾಯಿನ್ ಹಗರಣ ಏನದು? ರಾಜ್ ಕುಂದ್ರಾ ಪಾತ್ರವೇನು, ಇಲ್ಲಿದೆ ಡೀಟೇಲ್ಸ್

ಇನ್ಫೋಸಿಸ್​ನ ಸಹ-ಸಂಸ್ಥಾಪಕರಾದ ನಂದನ್ ನಿಲೇಕಣಿ ಮತ್ತು ಕ್ರಿಸ್ ಗೋಪಾಲಕೃಷ್ಣನ್, ಫ್ಲಿಪ್​ಕಾರ್ಟ್​ನ ಸಹ-ಸಂಸ್ಥಾಪಕರಾದ ಬಿನ್ನಿ ಬನ್ಸಾಲ್, ನಾರಾಯಣ ಹೃದಯಾಲಯದ ದೇವಿ ಶೆಟ್ಟಿ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಮೊದಲಾದವರು ಈ ಏರಿಯಾದಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಹಲವರು ಇಲ್ಲಿಯೇ ಮನೆ ಕಟ್ಟಿಕೊಂಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ